ನಿರ್ವಾಣ ಸ್ತೂಪ ಅಥವಾ ನಿರ್ವಾಣ ಚೈತ್ಯ ಎಂದು ಕರೆಯಲ್ಪಡುವ ಸ್ತೂಪ ಮಹಾಪರಿನಿರ್ವಾಣ ದೇವಸ್ಥಾನದ ಹಿಂಭಾಗದಲ್ಲಿ ಬರುತ್ತದೆ. ಈ ದೇವಸ್ಥಾನ ಮತ್ತು 2.74 ಮೀಟರ ಅಡಿ ಉದ್ದದ ಸ್ತೂಪ ಮತ್ತು 15.81 ಮೀಟರ್ ಎತ್ತರದ ಗುಮ್ಮಟವನ್ನು ಒಂದೇ ವೇದಿಕೆ ಮೇಲೆ ವೃತ್ತಾಕಾರದಲ್ಲಿ ನಿರ್ಮಿಸಲಾಗಿದೆ.
ಸ್ತೂಪವು ಇಟ್ಟಿಗೆಗಳಿಂದ ಮಾಡಲ್ಪಟ್ಟಿದೆ ಮತ್ತು 1876 ರಲ್ಲಿ, ಜನರಲ್ ಎ. ಕನ್ನಿಂಘ್ಯಾಮ್, ಭಾರತದ ಮೊದಲ ಪುರಾತತ್ವಜ್ಞ ಸರ್ವೆ ನಡೆಸಿ ಉತ್ಖನನದ ಪಠ್ಯಕ್ಕೆ ದೇವಾಲಯವನ್ನು ಸೇರಿಸಿದ. ಅದೇ ವರ್ಷದಲ್ಲಿ ಕಾರ್ಲೆ ಎಂಬುವವನಿಂದ ಇದನ್ನು ನವೀಕರಿಸಲಾಯಿತು ಎನ್ನಲಾಗಿದೆ. ಈ ಸ್ಮಾರಕವನ್ನು ಮಲ್ಲರು ಕಟ್ಟಿದರು ನಂತರ ಚಕ್ರವರ್ತಿ ಅಶೋಕನು ಇದನ್ನು ಅಭಿವೃಧ್ಧಿ ಪಡಿಸಿದ ಎನ್ನಲಾಗಿದೆ.
ಗುಪ್ತ ಸಾಮ್ರಾಜ್ಯದ ಕಾಲದಲ್ಲಿ ಕುಮಾರ ಗುಪ್ತನ ಆಳ್ವಿಕೆಯಲ್ಲಿ ಬುದ್ಧನ ಅನುಯಾಯಿಯಾದ ಹರಿಬಾಲ ಎಂಬುವವನು ಈ ಸ್ತೂಪವನ್ನು ಮಥುರಾ ನಗರದಿಂದ ಕುಶಿ ನಗರಕ್ಕೆ ತಂದನು ಎಂದು ಹೇಳಲಾಗುತ್ತದೆ. ಭಾರತೀಯ ಪುರಾತತ್ವ ಶಾಸ್ತ್ರದ ಸಮೀಕ್ಷೆ ಪ್ರಕಾರ ತಾಮ್ರದ ಪಾತ್ರೆಯಲ್ಲಿ ಬುದ್ದನ ಚಿತಾಭಸ್ಮವಿದೆ ಮತ್ತು ಈ ಪಾತ್ರೆಯಲ್ಲಿ ಬರೆದ ಲೇಖವು ಇದನ್ನು ಪುಷ್ಟಿಕರಿಸುತ್ತದೆ.