Tap to Read ➤

ಮೈಸೂರಿನಲ್ಲಿ ಭೇಟಿ ನೀಡಲೇಬೇಕಾದ ಪ್ರಸಿದ್ಧ ಸ್ಥಳಗಳು

ವೀಕೆಂಡ್ ನಲ್ಲಿ ಮೈಸೂರಿನ ಈ ಪ್ರಸಿದ್ಧ ಜಾಗಗಳಿಗೆ ಭೇಟಿ ನೀಡಿ.
ಮುಖ್ಯ ಅರಮನೆಯ ಪೂರ್ವ ಭಾಗದಲ್ಲಿ ಜಗನ್ಮೋಹನ ಅರಮನೆಯನ್ನು ರಾಜಕುಮಾರಿ ಮದುವೆಗಾಗಿ ಮೂರನೇ ಕೃಷ್ಣರಾಜ ಒಡೆಯರ್‌ ಆಡಳಿತಾವಧಿಯಲ್ಲಿ 1861ರಲ್ಲಿ ಕಟ್ಟಲಾಯಿತು.
ಜಗನ್ಮೋಹನ ಅರಮನೆ :
ಕಬಿನಿ ಮತ್ತು ಕಪಿಲಾ ಎಂದೂ ಕರೆಯಲ್ಪಡುವ ಕಬಿನಿ ನದಿಯು ದಕ್ಷಿಣ ಭಾರತದ ನದಿಗಳಲ್ಲೊಂದು.
ಕಬಿನಿ ಮತ್ತು ಕಪಿಲಾ ನದಿ :
1804 ರಲ್ಲಿ ಗಾಥಿಕ್ ಶೈಲಿಯಲ್ಲಿ ಕಟ್ಟಲಾದ ಈ ಚರ್ಚು ದೇಶದ ಅತ್ಯಂತ ಪುರಾತನ ಮತ್ತು ಅತ್ಯಂತ ಆಕರ್ಷಕ ಚರ್ಚುಗಳಲ್ಲಿ ಒಂದಾಗಿದೆ.
ಸೆಂಟ್ ಫಿಲೋಮಿನಾಸ್ ಚರ್ಚ್ :
ಬೆಟ್ಟದ ಮೇಲ್ಭಾಗವನ್ನು ಹತ್ತನೆಯ ಶತಮಾನದ ಹೊತ್ತಿಗಾಗಲೇ ಪುಣ್ಯ ಕ್ಶೇತ್ರವೆಂದು ಪರಿಗಣಿಸಲಾಗಿತ್ತು. ಇಲ್ಲಿರುವ ಆ ಕಾಲದ ಶಾಸನಗಳಲ್ಲಿ ಇದನ್ನು ಮಬ್ಬೆಲದ ತೀರ್ಥ ಅಥವಾ ಮರ್ಬ್ಬಳದ ತೀರ್ಥ ಎಂದು ಕರೆದಿದೆ.
ಚಾಮುಂಡಿ ಬೆಟ್ಟ :
ತಲಾ ಮತ್ತು ಕಾಡ ಎಂಬ ಇಬ್ಬರು ಕಿರಾತ ಸೋದರರಿಂದ ಈ ಊರಿಗೆ ತಲಕಾಡು ಎಂದು ಹೆಸರು ಬಂದಿದೆ ಎಂಬುದು ಸ್ಥಳ ಪುರಾಣ. ತಲಕಾಡಿನ ಶಿವನಿಗೆ ಗಜಾರಣ್ಯನಾಥ ಎಂದೂ ಕರೆಯುತ್ತಾರೆ.
ತಲಕಾಡು ಪುಣ್ಯಕ್ಷೇತ್ರ :
ನಂಜನಗೂಡು ಪ್ರಸಿದ್ಧವಾಗಿರುವುದು ಇಲ್ಲಿಯ ಶ್ರೀಕಂಠೇಶ್ವರ (ನಂಜುಂಡೇಶ್ವರ) ದೇವಾಲಯದಿಂದ. ಕರ್ನಾಟಕದ ಶ್ರೀಮಂತ ದೇವಾಲಯಗಳಲ್ಲಿ ಒಂದಾಗಿರುವ ಇದು ಊರಿನ ಪೂರ್ವದ ಅಂಚಿನಲ್ಲಿ ಕಪಿಲಾ ಮತ್ತು ಗುಂಡ್ಲುಹೊಳೆಯ (ಕೌಂಡಿನ್ಯ ನದಿ) ಸಂಗಮದ ಬಳಿ ಪೂರ್ವಾಭಿಮುಖವಾಗಿದೆ.
ಶ್ರೀಕಂಠೇಶ್ವರಸ್ವಾಮಿ ದೇವಸ್ಥಾನ :
1897ರಲ್ಲಿ ಕಟ್ಟಲಾರಂಭಿಸಿ 1912ರಲ್ಲಿ ಮುಕ್ತಾಯಗೊಳಿಸಲಾದ ಈ ಅರಮನೆಗೆ ಅಂಬಾವಿಲಾಸ ಅರಮನೆ ಎಂದೂ ಹೆಸರು.
ಅಂಬಾವಿಲಾಸ ಅರಮನೆ :
ಇದು ದಕ್ಷಿಣ ಭಾರತದಲ್ಲೇ ಹಳೆಯ ಹಾಗೂ ಪ್ರಸಿದ್ದಿ ಪಡೆದಿರುವ ಮೃಗಾಲಯಗಳಲ್ಲಿ ಒಂದು. 1892 ನಲ್ಲಿ ಉದ್ಘಾಟನೆಯಾದ ಈ ಮೃಗಾಲಯ 245 ಎಕರೆ ಇದ್ದು ಸಾವಿರಕ್ಕೂ ಹೆಚ್ಚು ಪ್ರಾಣಿಗಳನ್ನು ಹೊಂದಿದೆ.
ಶ್ರೀ ಚಾಮರಾಜೇಂದ್ರ ಮೃಗಾಲಯ :
1979 ರಲ್ಲಿ ಪಿ.ಎಂ. ಜೋಸೆಫ್ ಅವರ ಶ್ರಮದಿಂದ ಈ ಮೈಸೂರಿನ ರೈಲು ಮ್ಯೂಸಿಯಂ ಪ್ರಾರಂಭವಾಯಿತು. ಇಲ್ಲಿ ಗ್ರಾಫಿಕ್ಸ್ ಉಪಯೋಗಿಸಿಕೊಂಡು ಭಾರತೀಯ ರೈಲಿನ ಬೆಳವಣಿಗೆ ಮತ್ತು ಹಲವಾರು ಫೋಟೋ ಮತ್ತು ಚಿತ್ರಕಲೆಗಳನ್ನು ಪ್ರದರ್ಶನಕ್ಕಿಡಲಾಗಿದೆ.
ರೈಲ್ವೆ ಮ್ಯೂಸಿಯಂ :
ಲಲಿತಮಹಲ್‌ ಅರಮನೆ ಎಂತಹವರನ್ನೂ ಅಯಸ್ಕಾಂತದಂತೆ ಸೆಳೆವ ಚೆಲುವಿನ ಗಣಿ.
ಲಲಿತ ಮಹಲ್ :
Travel Without Google Map