ತಿರುವಲ್ಲಾ ಪಟ್ಟಣವನ್ನು ತಲುಪಲು ಕೇರಳಾದ ಮೂಲೆ ಮೂಲೆಗಳಿಂದ ಬಸ್ ಸಂಪರ್ಕ ವ್ಯವಸ್ಥೆಯಿದ್ದು, ದಿನದ ಯಾವುದೆ ಸಮಯದಲ್ಲಾಗಲಿ ಸುಲಭವಾಗಿ ಬಸ್ ಸೇವೆ ಪ್ರಯಾಣಿಕರಿಗಾಗಿ ಲಭ್ಯವಿದೆ. ಬಸ್ಸಿನ ಮೂಲಕ ಪ್ರಯಾಣಮಾಡುವುದರಿಂದ ಗಣನೀಯ ಪ್ರಮಾಣದಲ್ಲಿ ನೀವು ನಿಮ್ಮ ಖರ್ಚನ್ನು ಕಡಿಮಗೊಳಿಸಬಹುದು. ತಿರುವನಂತಪುರಂ, ಕೊಲ್ಲಂ ಕಣ್ಣೂರು, ಕೊಚ್ಚಿ, ಕೊಯಿಮತ್ತೂರು, ಚೆನೈ, ಮಧುರೈ, ಬೆಂಗಳೂರು ಮತ್ತು ಮಂಗಳೂರು ಈ ಎಲ್ಲ ನಗರಗಳಿಗೆ ತಿರುವಲ್ಲಂನಿಂದ ರಸ್ತೆ ಮಾರ್ಗದಲ್ಲಿ ಪ್ರಯಾಣಿಸಬಹುದಾಗಿದೆ.