ಈ ಪ್ರಸಿದ್ಧ ಮಹಾಗಣೇಶ ದೇಗುಲವು ತಿಟ್ವಾಲಾ ಎಂಬ ಹಳ್ಳಿಯಲ್ಲಿದೆ. ಠಾಣೆ ಜಿಲ್ಲೆಯ ಪ್ರಮುಖ ಹಳ್ಳಿಗಳಲ್ಲಿ ಇದೂ ಒಂದೆನಿಸಿದೆ. ಸಿದ್ದಿವಿನಾಯಕನ ರೂಪದಲ್ಲಿ ಗಣೇಶನ ವಿಗ್ರಹ ಇಲ್ಲಿದೆ. ಇದರಿಂದ ಇದನ್ನು ಸಿದ್ದಿವಿನಾಯಕ ಮಹಾಗಣಪತಿ ದೇವಾಲಯ ಅಂತಲೂ ಕರೆಯಲಾಗುತ್ತದೆ. ಯಾರೇ ಆಗಲಿ ಭಕ್ತಿಯಿಂದ ಈ ಗಣೇಶ ವಿಗ್ರಹದ ಎದುರು ನಿಂತು ಬೇಡಿಕೊಂಡರೆ, ಅವರು ಬೇಡಿಕೊಂಡ ವ್ಯಕ್ತಿಯ ಜತೆ ವಿವಾಹವಾಗುತ್ತದೆ ಎಂದು ನಂಬಲಾಗಿದೆ. ಇದುವರೆಗೂ ಅದು ಸತ್ಯವಾಗುತ್ತಾ ಬಂದಿದೆ.
ಈ ದೇವಾಲಯದ ಆವರಣದಲ್ಲಿಯೆ, ದೇವ ಶಿವಶಂಕರನ ವಿಗ್ರಹ ಉಳ್ಳ ಚಿಕ್ಕ ದೇಗುಲವಿದೆ. ಅಲ್ಲದೆ, ಇಲ್ಲಿಯೆ ವಿಠ್ಠಲ-ರುಕ್ಮಿಣಿ ದೇವಾಲಯವೂ ಇದೆ.ಅಪಾರ ಜನಾಕರ್ಷಣೆಯಿಂದ ತುಂಬಿರುವ ಈ ಧಾರ್ಮಿಕ ಕೇಂದ್ರವು ಗಣೇಶ ಚತುರ್ಥಿ, ಅಂಗಾರಕ ಚತುರ್ಥಿ ಸಂದರ್ಭದಲ್ಲಿ ಭಕ್ತರಿಂದ ತುಂಬಿ ತುಳುಕುತ್ತದೆ. ಈ ಸಂದರ್ಭದಲ್ಲಿ ಜನ ಸಾಗರವೆ ಸೇರಿರುತ್ತದೆ. ಇಲ್ಲಿ ಈ ಸಮಯದಲ್ಲಿ, ಭಗವಂತನ ದರ್ಶನಕ್ಕಾಗಿ ಭಕ್ತರ ಉದ್ದನೆಯ ಸರದಿ ಸಾಲು ಕಂಡು ಬರುವುದು ತೀರಾ ಸಾಮಾನ್ಯ.
ದೇವಾಲಯದ ಆವರಣದ ಆಚೆ ಒಂದು ಕೃತಕ ಕೊಳವನ್ನು ನಿರ್ಮಿಸಲಾಗಿದೆ. ಇದರ ಸುತ್ತ ಆಕರ್ಷಕ ಉದ್ಯಾನ ನಿರ್ಮಾಣವಾಗಿದೆ. ಇಲ್ಲಿಯೆ ದೋಣಿ ವಿಹಾರ ಸೌಲಭ್ಯವನ್ನೂ ಕಲ್ಪಿಸಲಾಗಿದೆ.


Click it and Unblock the Notifications