ಅಸಾಧಾರಣ ಬಂಡೆಗಳಿಂದ ರಚನೆಗೊಂಡಿರುವ ಈ ಪ್ರದೇಶ, ಭಕ್ತಾದಿಗಳನ್ನು, ಪರಿಸರ ಪ್ರೇಮಿಗಳನ್ನು ಆಕರ್ಷಿಸುತ್ತದೆ. ಬಂಡೆಗಳ ಪಶ್ಚಿಮ ಘಟ್ಟದ, ಸಹ್ಯಾದ್ರಿ ಬೆಟ್ಟಗಳ ಸಾಲಿನಲ್ಲಿರುವ ಈ ಪುಟ್ಟ ಹಳ್ಳಿಯ ಮೆರುಗು ಅಲ್ಲಿನ ಬಂಡೆಗಲ್ಲುಗಳು. ಈ ಹಳ್ಳಿಯು ಉತ್ತರ ಕನ್ನಡ ಜಿಲ್ಲೆಯಲ್ಲಿದೆ ಹಾಗು ಕುಮಟ (20 ಕಿ.ಮೀ.ಗಳು ) ಹಾಗು ಶಿರಸಿ (40 ಕಿ.ಮೀ.ಗಳು ) ಇದಕ್ಕೆ ಹತ್ತಿರದ ಪಟ್ಟಣಗಳು.
ಈ ಸ್ಥಳದ ಸುತ್ತಲಿನ ದಂತಕಥೆಗಳು
ಪುರಾತತ್ವಶಾಸ್ತ್ರದಲ್ಲಿ ಆಸಕ್ತಿ ಇರುವವರಿಗೆ ಯಾಣ ವಿಶೇಷವಾದ ಪ್ರಾಮುಖ್ಯತೆಯನ್ನು ಹೊಂದಿದೆ . ಈ ಬಂಡೆಗಲ್ಲುಗಳ ರಚನೆಯ ಮೇಲೆ ಹಲವು ದಂತಕಥೆಗಳಿವೆ. ಇದರಲ್ಲಿ ಪ್ರಖ್ಯಾತವಾದುದೆಂದರೆ, ರಾಕ್ಷಸರ ರಾಜನಾಗಿದ್ದ ಭಸ್ಮಾಸುರನು ಶಿವನ ಬೆನ್ನು ಹತ್ತಿದಾಗ , ಬಂಡೆಗಲ್ಲುಗಳಿಂದ ನಿರ್ಮಿತ ಭೈರವೇಶ್ವರ ಶಿಖರದಲ್ಲಿ ಶಿವನು ಆಶ್ರಯ ಪಡೆದಿದ್ದನು.ಹಾಗೆಯೇ ಜಗನ್ಮೋಹಿನಿ ಎಂದು ಕರೆಯಲ್ಪಡುವ ಮತ್ತೊಂದು ಬಂಡೆಗಲ್ಲು ಇಲ್ಲಿದ್ದು ವಿಷ್ಣುದೇವ ಶಿವನನ್ನು ರಕ್ಷಿಸಲು ಮೋಹಿನಿಯ ಅವತರವನ್ನು ತಾಳಿರುವ ಫಲವಾಗಿ ಆದುವೆ ವಿಷ್ಣು ದೇವನ ಮೂಲವಾಗಿದೆ.
ಈ ದಂತಕಥೆಗಳಿಗೆ ಗ ಸಾಕ್ಷಿಯಾಗಿರುವ ಯಾಣದಲ್ಲಿ ಮಹಾಶಿವರಾತ್ರಿಯನ್ನುಅದ್ಧೂರಿಯಿಂದ ಆಚರಿಸುತ್ತಾರೆ. 10 ದಿನಗಳ ಈ ಉತ್ಸವದಲ್ಲಿ ಶಾಸ್ತ್ರೀಯ ನೃತ್ಯ ಮತ್ತು ಹಾಡುಗಳ ಪ್ರದರ್ಶನ ಅಲ್ಲದೆ ಯಕ್ಷಗಾನ ಪ್ರದರ್ಶನವೂ ಇರುತ್ತದೆ. ಗುಹೆದೇವಾಲಯ ಹಾಗು ಜಲಪಾತಗಳು ಕೂಡ ಯಾಣ ಪ್ರದೇಶದ ಸಮೀಪದಲ್ಲಿವೆ.
ಗೋವಾ ವಿಮಾನ ನಿಲ್ದಾಣ ಹತ್ತಿರದ ವಿಮಾನ ನಿಲ್ದಾಣವಾಗಿದ್ದು, ೧೩೭ ಕಿ ಮೀ ಗಳಷ್ಟು ದೂರದಲ್ಲಿದೆ . ಹುಬ್ಬಳ್ಳಿ ರೈಲ್ವೆ ನಿಲ್ದಾಣ ಯಾಣಗೆ ಹತ್ತಿರವಿದೆ. ಕುಮ್ಮಟ ಹಾಗು ಶಿರಸಿಯಿಂದ ರಾಜ್ಯ ಸಾರಿಗೆ ಬಸ್ಸುಗಳ ವ್ಯವಸ್ಥೆ ಇದೆ.