ರಂಗ್ಜಿ ದೇವಾಲಯವು ವೃಂದಾವನದಲ್ಲಿರುವ ಕೆಲವೇ ಕೆಲವು ದ್ರಾವಿಡ ಶೈಲಿಯ ದೇವಾಲಯಗಳಲ್ಲಿ ಒಂದಾಗಿದೆ. ಈ ದೇವಾಲಯವನ್ನು 1851ರಲ್ಲಿ ನಿರ್ಮಿಸಲಾಯಿತು. ಈ ದೇವಾಲಯದ ಮೂಲ ದೇವರು ಶ್ರೀ ರಂಗನಾಥ ಸ್ವಾಮಿ ಅಥವಾ ರಂಗಜಿ. ಈ ದೇವಾಲಯವು ಎತ್ತರವಾದ ಗೋಡೆಗಳು, ಐವತ್ತು ಅಡಿಗಳ ಧ್ವಜ ಸ್ತಂಭ ಮತ್ತು ಹೊರಗೋಡೆಯನ್ನು ಹೊಂದಿದೆ. ಇಲ್ಲಿನ...
ರಾಧಾ ರಮಣ್ ದೇವಾಲಯವು ವೃಂದಾವನದಲ್ಲಿರುವ ಅತ್ಯಂತ ಪ್ರಸಿದ್ಧ ಪ್ರಾಚೀನ ದೇವಾಲಯವಾಗಿದೆ. 1542ರಲ್ಲಿ ನಿರ್ಮಾಣಗೊಂಡ ಈ ದೇವಾಲಯವು ವೃಂದಾವನದ ಅತ್ಯಂತ ಪವಿತ್ರ ಮತ್ತು ಜನಪ್ರಿಯ ದೇವಾಲಯವೆಂದು ಪರಿಗಣಿಸಲಾಗಿದೆ. ಸುಂದರವಾಗಿ ಕೆತ್ತಲಾಗಿರುವ ಈ ದೇವಾಲಯವನ್ನು ಪೂರ್ವದ ಕಲೆ, ಸಂಸ್ಕೃತಿ ಮತ್ತು ಧಾರ್ಮಿಕತೆಗೆ ಗೌರವ ಸಲ್ಲಿಸುವ...
ಬಂಕೆ ಬಿಹಾರಿ ದೇವಾಲಯವು ಸ್ವಾಮಿ ಹರಿದಾಸರಿಂದ ನಿರ್ಮಾಣಗೊಂಡ ಒಂದು ಹಿಂದೂ ದೇವಾಲಯವಾಗಿದೆ. ಇವರು ಪ್ರಖ್ಯಾತ ಗಾಯಕ ತಾನ್ಸೇನ್ರವರ ಗುರುವಾಗಿದ್ದರು. ಶ್ರೀ ಕೃಷ್ಣನಿಗಾಗಿ ನಿರ್ಮಾಣಗೊಂಡಿರುವ ಮನಮೋಹಕವಾದ ಈ ದೇವಾಲಯವು ರಾಜಸ್ಥಾನಿ ಶೈಲಿಯಲ್ಲಿ ನಿರ್ಮಾಣಗೊಂಡಿದೆ. ಬಂಕೆ ಎಂದರೆ "ಮೂರು ಭಾಗಗಳಲ್ಲಿ...
ವೃಂದಾವನದಲ್ಲಿರುವ ಇಸ್ಕಾನ್ ದೇವಾಲಯವನ್ನು ಶ್ರೀ ಕೃಷ್ಣ ಬಲರಾಮ ದೇವಾಲಯವೆಂದು ಸಹ ಕರೆಯುತ್ತಾರೆ. ಇದನ್ನು 1975ರಲ್ಲಿ ನಿರ್ಮಿಸಿದರು. ಈ ದೇವಾಲಯವನ್ನು ಶ್ರೀ ಕೃಷ್ಣ ತನ್ನ ಸ್ನೇಹಿತರ ಜೊತೆಗೆ 5000 ವರ್ಷಗಳ ಹಿಂದೆ ಆಟವಾಡಿದ ಅದೇ ನಿರ್ದಿಷ್ಟ ಸ್ಥಳದಲ್ಲಿ ನಿರ್ಮಿಸಲಾಗಿದೆ.
ಈ ದೇವಾಲಯದಲ್ಲಿ ಶ್ರೀಕೃಷ್ಣನ...
ವೃಂದಾವನದಲ್ಲಿ ಶ್ರೀ ಕೃಷ್ಣನು ತನ್ನ ಬಾಲ್ಯದ ಬಹುತೇಕ ಅವಧಿಯನ್ನು ಕಳೆದನೆಂದು ನಂಬಲಾಗಿದೆ. ನಂಬಿಕೆಗಳ ಪ್ರಕಾರ ಕೃಷ್ಣನು ಕೇಸಿ ಘಾಟಿನಲ್ಲಿ ಕೇಸಿ ಎಂಬ ರಾಕ್ಷಸನನ್ನು ಕೊಂದು ತನ್ನ ಸ್ನೇಹಿತರು ಹಾಗು ಬಳಗವನ್ನು ಕಾಪಾಡಿದನಂತೆ. ಆಗ ನಡೆದ ಕಾಳಗವನ್ನು ನೋಡಿದ ದೇವಾಂಶ ಸಂಭೂತರು ಮತ್ತು ಸ್ಥಳೀಯರು ಶ್ರೀ ಕೃಷ್ಣನ ಅಪರಿಮಿತ ಶಕ್ತಿ...
ಸೇವ ಕುಂಜ್ ಮತ್ತು ನಿಧಿವನ್ಗಳು ಶ್ರೀ ಕೃಷ್ಣನ ಕಾಲದಿಂದಲು ಅತ್ಯಂತ ಸುಂದರವಾದ ಉದ್ಯಾನವನಗಳಾಗಿವೆ. ನಂಬಿಕೆಗಳ ಪ್ರಕಾರ ಸೇವಾ ಕುಂಜ್ನಲ್ಲಿ ಶ್ರೀ ಕೃಷ್ಣನು ರಾಧಾ ಮತ್ತು ಇತರ ಗೋಪಿಯರ ಜೊತೆಗೆ ರಾಸ ಲೀಲೆಯನ್ನು ಆಡಿದನೆಂದು ಹೇಳಲಾಗುತ್ತದೆ. ಈ ಉದ್ಯಾನವನದ ಒಳಗೆ ಸೂಕ್ಷ್ಮ ಕೆತ್ತನೆಗಳಿಂದ ಕೂಡಿದ ರಾಧ ಕೃಷ್ಣರ...
ಬಹುತೇಕ ದೇವಾಲಯಗಳು ಸಂಪೂರ್ಣವಾಗಿ ಪೂಜೆ- ಪುನಸ್ಕಾರಗಳಿಗೆ ಮೀಸಲಾಗಿರುತ್ತವೆ. ಆದರೆ ವೃಂದಾವನದ ಶಹಜಿ ದೇವಾಲಯವು ಇದಕ್ಕೆ ಅಪವಾದ. ಏಕೆಂದರೆ ಈ ದೇವಾಲಯವು ತನ್ನ ಸೌಂದರ್ಯ ಮತ್ತು ವಾಸ್ತುಶಿಲ್ಪಕ್ಕೆ ಹೆಸರುವಾಸಿಯಾಗಿದೆ. 19ನೆಯ ಶತಮಾನದಲ್ಲಿ ನಿರ್ಮಿಸಲಾಗಿರುವ ಅನುಪಮವಾದ ಅರಮನೆ ಮಾದರಿಯ ಈ ದೇವಾಲಯವು ತನ್ನ ವಿನ್ಯಾಸ ಹಾಗು...
ವೃಂದಾವನದಲ್ಲಿರುವ ಕಾಲಿ ಘಾಟ್ನಲ್ಲಿರುವ ಮದನ್ ಮೋಹನ್ ದೇವಾಲಯವು ಈ ಪ್ರಾಂತ್ಯದಲ್ಲಿರುವ ಅತ್ಯಂತ ಹಳೆಯ ದೇವಾಲಯಗಳಲ್ಲಿ ಒಂದಾಗಿದೆ. ಹಿಂದೆ ಈ ದೇವಾಲಯವು ಇದ್ದ ಪ್ರದೇಶ ದಟ್ಟ ಕಾಡಾಗಿತ್ತು.
ಈ ದೇವಾಲಯದಲ್ಲಿರುವ ಮೂಲ ವಿಗ್ರಹವಾದ ಮದನ ಗೋಪಾಲಸ್ವಾಮಿ ವಿಗ್ರಹ ಇಲ್ಲಿಲ್ಲ. ಮೊಘಲರ ದೊರೆ ಔರಂಗಜೇಬನ ಆಳ್ವಿಕೆಯಲ್ಲಿ...
ಕೃಷ್ಣ ಜನ್ಮ ಭೂಮಿ ದೇವಾಲಯ ಮೈದಾನದಲ್ಲಿರುವ ಶ್ರೀ ರಾಧಾ ರಾಸ್ ಬಿಹಾರಿ ಅಷ್ಟ ಸಖಿ ದೇವಾಲಯವು ಭಾರತದ ಅತ್ಯಂತ ಹಳೆಯ ದೇವಾಲಯದಲ್ಲಿ ಒಂದಾಗಿದೆ. ಇದನ್ನು ಹೆಸರೇ ಸೂಚಿಸುವಂತೆ ಇದು ರಾಧಾ ಕೃಷ್ಣ ಮತ್ತು ಆತನ ಎಂಟು ಜನ ಸಖಿಯರಿಗಾಗಿ ನಿರ್ಮಿಸಲಾಗಿದೆ. ಈ ಎಂಟು ಜನ ಸಖಿಯರು ಮತ್ತು ರಾಧೆಯ ಜೊತೆಗೆ ಶ್ರೀ ಕೃಷ್ಣನು ರಾಸಲೀಲೆಯನ್ನು...
ಗೋವಿಂದ್ ದೇವ್ ದೇವಾಲಯವು ಶ್ರೀ ಕೃಷ್ಣನಿಗಾಗಿ ನಿರ್ಮಿಸಲಾಗಿರುವ ದೇವಾಲಯಗಳಲ್ಲಿ ಎದ್ದು ಕಾಣುವಂತಹ ದೇವಾಲಯವಾಗಿದೆ. ಇಲ್ಲಿ ಕೃಷ್ಣನನ್ನು ಗೋವಿಂದ್ ದೇವ್ ಎಂದು ಕರೆಯುತ್ತಾರೆ. ವೃಂದಾವನದಲ್ಲಿ ಕೃಷ್ಣನು ತನ್ನ ಬಾಲ್ಯವನ್ನು ಕಳೆದಿದ್ದನು. ಹಾಗಾಗಿ ಆತನಿಗಾಗಿ ಮತ್ತು ಆತನ ಜೀವನವನ್ನು ಬಿಂಬಿಸುವ ಹಲವಾರು ದೇವಾಲಯಗಳನ್ನು ಇಲ್ಲಿ...
ಜೈಪುರ್ ದೇವಾಲಯವು ವೃಂದಾವನದಲ್ಲಿರುವ ಪ್ರಮುಖ ದೇವಾಲಯಗಳಲ್ಲಿ ಒಂದಾಗಿದೆ. ಇದನ್ನು ಜೈಪುರದ ಮಹಾರಾಜನು 1917ರಲ್ಲಿ ನಿರ್ಮಿಸಿದನು. ಸಾವಿರಕ್ಕೂ ಅಧಿಕ ಸಂಖ್ಯೆಯ ಜನರು ಸುಮಾರು 30ಕ್ಕೂ ಅಧಿಕ ವರ್ಷಗಳ ಪರಿಶ್ರಮದಿಂದ ಈ ದೇವಾಲಯವನ್ನು ನಿರ್ಮಿಸಿದರು. ಸ್ವತಃ ಮಹಾರಾಜನೇ ಇದರ ವಿನ್ಯಾಸ ಮತ್ತು ನಿರ್ಮಾಣದ ಉಸ್ತುವಾರಿ...
ರಾಧಾ ಗೋಕುಲಾನಂದ ದೇವಾಲಯವನ್ನು ಕೇಸಿ ಘಾಟ್ ಮತ್ತು ರಾಧಾ- ರಮಣ್ ದೇವಾಲಯವೆಂಬ ಪ್ರಾಚೀನ ದೇವಾಲಯದ ನಡುವೆ ನಿರ್ಮಿಸಲಾಗಿದೆ. ಈ ದೇವಾಲಯವನ್ನು ರಾಧಾ, ವಿಜಯ ಗೋವಿಂದ ಮುಂತಾದ ಅನುಯಾಯಿಗಳಿಗಾಗಿ ನಿರ್ಮಿಸಲಾಗಿದೆ. ಹಿಂದಿನ ಕಾಲದಲ್ಲಿ ಈ ಎಲ್ಲಾ ದೇವರುಗಳನ್ನು ಒಟ್ಟಿಗೆ ಪೂಜಿಸಲಾಗುತ್ತಿತ್ತು. ಆದರೆ ವಿಶ್ವನಾಥ್ ಚಕ್ರವರ್ತಿಯವರು ಈ...
ಗೋಪೇಶ್ವರ್ ಮಹಾದೇವ್ ದೇವಾಲಯವು ವೃಂದಾವನದಲ್ಲಿರುವ ಅತ್ಯಂತ ಪ್ರಮುಖ ದೇವಾಲಯವಾಗಿದೆ. ಈ ದೇವಾಲಯವು ಶ್ರೀ ಕೃಷ್ಣನ ಜೊತೆಗೆ ಅವಿನಾಭಾವ ಸಂಬಂಧವನ್ನು ಹೊಂದಿರುವ ಈ ಊರಿನಲ್ಲಿರುವ ಶಿವನ ದೇವಾಲಯಗಳಲ್ಲಿ ಒಂದಾಗಿದೆ. ದಂತ ಕತೆಗಳ ಪ್ರಕಾರ ಶಿವನು ಶ್ರೀ ಕೃಷ್ಣ ಮತ್ತು ಗೋಪಿಯರ ನಡುವೆ ನಡೆಯುವ ರಾಸಲೀಲೆಯನ್ನು ನೋಡಲು ಬಯಸಿದನಂತೆ....
ಯಮುನಾ ನದಿಯು ಉತ್ತರ್ ಖಂಡ್ನಲ್ಲಿರುವ ಯಮುನೋತ್ರಿ ಎಂಬ ಹಿಮನದಿಯಲ್ಲಿ ಸಮುದ್ರ ಮಟ್ಟದಿಂದ 6.387 ಮೀಟರ್ ಎತ್ತರದಲ್ಲಿ ಉಗಮಗೊಳ್ಳುತ್ತದೆ. ಅಲ್ಲಿಂದ ಈ ನದಿಯು ಬಂಡೆರ್ ಪೂಚ್ ಕಣಿವೆಗಳ ಮೂಲಕ ಹರಿಯುತ್ತದೆ. ದಕ್ಷಿಣದತ್ತ ಸಾಗುವ ಈ ನದಿಯು ದೆಹಲಿ, ವೃಂದಾವನ ಮತ್ತು ಮಥುರಾದ ಮೂಲಕ ಹಾದು ಹೋಗುತ್ತದೆ....