ಕ್ರಿ.ಶ.1604 ರಲ್ಲಿ ಜೈನ ರಾಜನಾದ ತಿಮ್ಮಣ್ಣ ಅಜಿಲನಿಂದ ಪ್ರತಿಷ್ಠಾಪಿಸಲಾದ ಗೊಮ್ಮಟೇಶ್ವರ ಪ್ರತಿಮೆಯು ಪಟ್ಟಣದ ಪ್ರಮುಖ ಆಕರ್ಷಣೆಯಾಗಿದ್ದು, ಪ್ರವಾಸಕ್ಕೆಂದು ವೇಣೂರಿಗೆ ಹೋದಾಗ ಭೇಟಿ ನೀಡಲೇ ಬೇಕಾದ ತಾಣವಾಗಿದೆ. ಈ ಏಕಶಿಲಾ ಪ್ರತಿಮೆಯು ಅಮರಶಿಲ್ಪಿ ಜಕಣಾಚಾರಿಯ ಕೈಗಳಿಂದ ರೂಪಗೊಂಡಿದೆ ಎಂದು ನಂಬಲಾಗಿದೆ. ಫಾಲ್ಗುಣಿ ಅಥವಾ...
ಸಮಯಾವಕಾಶವಿದ್ದರೆ, ಬಾಹುಬಲಿ ಪ್ರತಿಮೆಯ ಪಶ್ಚಿಮ ಭಾಗದಲ್ಲಿರುವ ಈ ಬಸದಿಗೂ ಕೂಡ ಪ್ರವಾಸಿಗರು ಭೇಟಿ ನೀಡಬಹುದು. ಎಡ ಬಸದಿ ಎಂದೂ ಕರೆಯಲ್ಪಡುವ ಈ ಬಸದಿಯು ಮಲ್ಲಿ ದೇವಿ ಮತ್ತು ಪಾಂಡ್ಯಕ್ಕ ದೇವಿ (ತಿಮ್ಮಣ್ಣಜಿಲನ ಪತ್ನಿಯರು) ಅವರಿಂದ 1604 ರಲ್ಲಿ ನಿರ್ಮಾಣಗೊಂಡಿದೆ. ಚಾರುಕೀರ್ಥಿ ಸ್ವಾಮಿಯ ಆಶೀರ್ವಾದವನ್ನು ಪಡೆದ ನಂತರ...
ಕಲ್ಲು ಬಸದಿ (ದೊಡ್ಡ ಬಸದಿ)ಯ ಎಡ ಭಾಗದಲ್ಲಿರುವ ಆದಿನಾಥ ಬಸದಿಯು ಕೂಡ ಒಂದು ಪ್ರೇಕ್ಷಣೀಯ ಸ್ಥಳವಾಗಿದೆ. ಈ ಬಸದಿಯ ಪ್ರಮುಖ ಆಕರ್ಷಣೆ ಎಂದರೆ ಆದಿನಾಥ ದೇವರು ಪದ್ಮಾಸನ ಭಂಗಿಯಲ್ಲಿ ಕುಳಿತಿರುವುದು.
ವೇಣೂರಿನ ಮತ್ತೊಂದು ಜನಪ್ರಿಯ ಸ್ಥಳವಾದ ಕಲ್ಲು ಬಸದಿಯನ್ನು ದೊಡ್ಡ ಬಸದಿ ಎಂದೂ ಕರೆಯಲಾಗುತ್ತದೆ. ಕಲ್ಲುಗಳಿಂದ ನಿರ್ಮಾಣವಾಗಿರುವುದರಿಂದ ಇದನ್ನು ಕಲ್ಲು ಬಸದಿ ಎಂದು ಕರೆಯಲಾಗುತ್ತದೆ. ಈ ಬಸದಿಯು ಬೃಹತ್ತಾದ ಆವರಣ ಹೊಂದಿರುವುದರಿಂದ ದೊಡ್ಡ ಬಸದಿ ಎಂಬ ಹೆಸರನ್ನೂ ಪಡೆದಿದೆ. 5 ಅಡಿ ಎತ್ತರವಿರುವ ಶಾಂತಿನಾಥರ ವಿಗ್ರಹವನ್ನು...
ಬಿನ್ನಣಿ ಬಸದಿಯು ನೋಡಬಹುದಾದ ಮತ್ತೊಂದು ಸ್ಥಳವಾಗಿದೆ. 16ನೇ ಶತಮಾನದ ತೀರ್ಥಂಕರರಾದ ಶಾಂತಿನಾಥರ ಕಂಚಿನ ವಿಗ್ರಹದಿಂದ ಈ ಬಸದಿಯು ಹೆಸರುವಾಸಿಯಾಗಿದೆ. ಬಲ ಬಸದಿ ಎಂದೂ ಕರೆಯಲ್ಪಡುವ ಈ ಬಸದಿಯು ಅಕ್ಕಂಗಳ ಬಸದಿಯ ಎದುರಿನಲ್ಲೆ ಇದ್ದು ಬಿನ್ನಣಿ ದೇವಿ (ತಿಮ್ಮರಾಜನ ಕಿರಿಯ ರಾಣಿ) ಅವರಿಂದ ನಿರ್ಮಿತವಾಗಿದೆ. ಈ ಬಸದಿಯ ಒಳಗೆ...
ವೇಣೂರಿನ ಪೂರ್ವ ದಿಕ್ಕಿನಲ್ಲಿ ಕಾಣಸಿಗುವ ಪಾರ್ಶ್ವನಾಥ ಸ್ವಾಮಿ ಬಸದಿಯು ಪ್ರವಾಸಿಗರು ಅನ್ವೇಷಿಸಬಯಸುವ ಮತ್ತೊಂದು ತಾಣವಾಗಿದೆ. ಹೊಳೆಯುತ್ತಿರುವ ಕಂಚಿನ ಪಾರ್ಶ್ವನಾಥ ಸ್ವಾಮಿಯ ವಿಗ್ರಹವು ನೋಡಲು ಸೊಗಸಾಗಿದ್ದು, ಈ ಬಸದಿಯ ಪ್ರಮುಖ ಆಕರ್ಷಣೆಯಾಗಿದೆ. ಏಕಶಿಲಾ ಗೊಮ್ಮಟೇಶ್ವರ ಪ್ರತಿಮೆಯ ಹಿಂಬಾಗದಲ್ಲೆ ಈ ಬಸದಿಯನ್ನು ಕಾಣಬಹುದು....
ಭಗವಾನ್ ವರ್ಧಮಾನ ಮಹಾವೀರನ ಪ್ರತಿಮೆಯುಳ್ಳ ಈ ಬಸದಿಯು ಕೂಡ ಅನ್ವೇಷಿಸಲು ಯೋಗ್ಯವಾಗಿದ್ದು, ಪ್ರವಾಸಿಗರಿಗೇನಾದರು ಸ್ವಲ್ಪ ಸಮಯವಿದ್ದರೆ ಇದಕ್ಕು ಭೇಟಿ ನೀಡಬಹುದು.