ಬನಾರಸ್ ಹಿಂದೂ ವಿಶ್ವವಿದ್ಯಾನಿಲಯವನ್ನು ಸ್ಥಾಪಿಸಿದ ಪಂಡಿತ್ ಮದನ್ ಮೋಹನ್ ಮಾಲವಿಯಾ ಶಿವನಿಗಾಗಿ ನವೀನ ವಿಶ್ವನಾಥ ಮಂದಿರವನ್ನು ನಿರ್ಮಿಸಿದರು. 252 ಅಡಿ ಎತ್ತರದ ಮಂದಿರಕ್ಕೆ 1931ರ ಮಾರ್ಚ್ ನಲ್ಲಿ ಶಿಲಾನ್ಯಾಸ ಮಾಡಲಾಗಿತ್ತು ಮತ್ತು ಮಂದಿರ ನಿರ್ಮಾಣ ಪೂರ್ಣಗೊಳ್ಳಲು ಸುಮಾರು ಮೂರು ವರ್ಷ ಬೇಕಾಯಿತು.
ಈ...
ಐದು ನದಿಗಳಾದ ಗಂಗಾ, ಸರಸ್ವತಿ, ಧುಪಾಪ, ಯಮುನಾ ಮತ್ತು ಕಿರ್ನಾ ಸಂಗಮವಾಗುವ ಪ್ರದೇಶವೇ ಪಂಚಗಂಗಾ ಘಾಟ್. ಈ ಐದು ನದಿಗಳಲ್ಲಿ ಗಂಗಾ ನದಿ ಮಾತ್ರ ಕಾಣಸಿಗುತ್ತದೆ. ಉಳಿದ ನಾಲ್ಕು ನದಿಗಳು ಭೂಮಿಯಲ್ಲಿ ಲೀನವಾಗಿದೆ ಎಂದು ನಂಬಲಾಗುತ್ತಿದೆ. ಇದರಿಂದಾಗಿ ಪಂಚಗಂಗಾ ಫಾಟ್ ನ ಪ್ರದೇಶ ವಾರಣಾಸಿಯಲ್ಲಿ ಅತ್ಯಂತ ಪವಿತ್ರ...
ವಾರಣಾಸಿಯ ಅತ್ಯಂತ ಪ್ರಾಚೀನ ಘಾಟ್ ಆಗಿರುವ ಮಣಿಕಾರ್ಣಿಕ ಘಾಟ್ ಬಗ್ಗೆ ಹಲವಾರು ಪೌರಾಣಿಕ ದಂತಕಥೆಗಳಿವೆ. ಒಂದು ದಂತಕಥೆಯ ಪ್ರಕಾರ ಶಿವ ತನ್ನ ಪತ್ನಿ ಪಾರ್ವತಿಯನ್ನು ಬಿಟ್ಟು ಹೆಚ್ಚಿನ ಸಮಯ ತನ್ನ ಭಕ್ತರನ್ನು ಭೇಟಿಯಾಗಲು ಇಲ್ಲಿಗೆ ಬರುತ್ತಿದ್ದನಂತೆ. ಗಂಗಾ ನದಿಯ ದಂಡೆಯಲ್ಲಿ ತನ್ನ ಆಭರಣ ಕಳೆದುಹೋಗಿದೆ ಅದನ್ನು ಹುಡುಕಿಕೊಡಿ...
ವಾರಣಾಸಿಯ ಗಂಗಾ ನದಿ ದಂಡೆಯಲ್ಲಿರುವ ಘಾಟ್ ಗಳಲ್ಲಿ ದಶಅಶ್ವಮೇಧ ಘಾಟ್ ಅತ್ಯಂತ ಪ್ರಾಚೀನ ಮತ್ತು ಅತ್ಯಾಕರ್ಷಕ ಘಾಟ್ ಆಗಿದೆ. ಇದಕ್ಕೆ ಸಾವಿರ ವರ್ಷಗಳ ಇತಿಹಾಸವಿದೆ. ದಶಅಶ್ವಮೇಧ ಎಂದರೆ ಹತ್ತು ಕುದುರೆಗಳೆಂದರ್ಥ. ಕೋಪದಿಂದ ತೆರಳಿದ್ದ ಶಿವನನ್ನು ಮರಳಿ ಕರೆಸಲು ಬ್ರಹ್ಮ ಇಲ್ಲಿ ಯಜ್ಞ ಮಾಡಿದನೆಂಬುವುದು ಪುರಾಣಗಳಲ್ಲಿವೆ. ಯಜ್ಞದ...
ಬನಾರಸ್ ಹಿಂದೂ ವಿಶ್ವವಿದ್ಯಾನಿಲಯ ಬಿಎಚ್ ಯು ಎಂದೇ ಜನಪ್ರಿಯ. ಪ್ರಮುಖ ದೇಶಭಕ್ತ, ಸಾಮಾಜಿಕ ಸುಧಾರಕ, ಶಿಕ್ಷಣ ಮತ್ತು ರಾಜಕೀಯ ಕಾರ್ಯಕರ್ತ ಪಂಡಿತ್ ಮದನ್ ಮೋಹನ್ ಮಾಲ್ವಿಯಾ ಅವರ ಪ್ರಯತ್ನದ ಫಲವಾಗಿ ಈ ವಿಶ್ವವಿದ್ಯಾನಿಲಯ ನೆಲೆನಿಂತಿದೆ.
1916ರ ಫೆಬ್ರವರಿ 4ರಂದು ವಿಶ್ವವಿದ್ಯಾನಿಲಯಕ್ಕೆ ಭಾರತದ ಆಗಿನ ವೈಸರಾಯ್...
ಗಂಗಾ ನದಿಯ ಬಲ ದಂಡದಲ್ಲಿರುವ ರಾಮನಗರ ಕೋಟೆ ಮತ್ತು ಮ್ಯೂಸಿಯಂ, 17ನೇ ಶತಮಾನದಲ್ಲಿ ಈ ಕೋಟೆಯನ್ನು ಕಟ್ಟಿದ ರಾಜ ಬಲ್ವಂತ್ ಸಿಂಗ್ ರ ಮನೆಯಾಗಿತ್ತು. ರಾಮನಗರದಲ್ಲಿ ಮಹಾಭಾರತದ ಋಷಿ ವೇದವ್ಯಾಸರು ಧ್ಯಾನ ಮಾಡಿದ ಸ್ಥಳ ಇದಾಗಿದೆ. ಈ ಸ್ಥಳವನ್ನು ಅವರ ಹೆಸರಿನಿಂದಲೇ ವ್ಯಾಸ ಕಾಶಿ ಎಂದು ಕರೆಯಲಾಗುತ್ತಿತ್ತು. ರಾಮನಗರವು ಸಪ್ಟೆಂಬರ್...
ಗಂಗಾ ನದಿಯ ದಕ್ಷಿಣದ ಭಾಗದಲ್ಲಿ ಅಸ್ಸಿ ಘಾಟ್ ಗೆ ವಿದೇಶಿ ಪ್ರವಾಸಿಗಳಿಗೆ ಮತ್ತು ಸಂಶೋಧಕರಿಗೆ ಅತೀ ನೆಚ್ಚಿನ ತಾಣವಾಗಿದೆ. ಅದರಲ್ಲೂ ಇಸ್ರೇಲ್ ನವರು ಮಿಲಿಟರಿ ಸೇವೆಯಿಂದ ನಿವೃತ್ತರಾದ ಬಳಿಕ ಇಲ್ಲಿಗೆ ಹೆಚ್ಚಾಗಿ ಭೇಟಿ ನೀಡುತ್ತಾರೆ.
ಗಂಗಾ ಮತ್ತು ಅಸ್ಸಿ ನದಿಯ ಸಂಗಮದಲ್ಲೇ ಅಸ್ಸಿ ಘಾಟ್ ಇದೆ. ಶುಂಭ-ನಿಶುಂಭರನ್ನು ಕೊಂದ...
ದಶಅಶ್ವಮೇಧ ಘಾಟ್ ಮತ್ತು ರಾಣಾ ಮಹಲ್ ಘಾಟ್ ನ ಮಧ್ಯೆ ಇರುವ ದರ್ಭಂಗಾ ಘಾಟ್ ಗೆ ದರ್ಭಂಗ್ ನ ರಾಜಮನೆತನದ ಹೆಸರನ್ನಿಡಲಾಗಿದೆ. ಘಾಟ್ ನ್ನು ಹೊರತುಪಡಿಸಿ ನದಿ ದಂಡೆಯಲ್ಲಿ 1900ರಲ್ಲಿ ರಾಜಮನೆತನದವರು ನಿರ್ಮಿಸಿದ ಅತ್ಯಾಕರ್ಷಕ ಅರಮನೆ ಕೂಡ ಇದೆ. ಇಲ್ಲಿ ನಿಂತು ಧಾರ್ಮಿಕ ವಿಧಿ ಮತ್ತು ಇತರ ಚಟುವಟಿಕೆಗಳನ್ನು ರಾಜಮನೆತನದವರು...
ಘಾಟ್ ಗಳು ತುಂಬಾ ಉದ್ದವಾಗಿದ್ದು, ಗಂಗಾ ನದಿಯ ನೀರಿಗೆ ಇಳಿಯಲು ಕಲ್ಲುಗಳಿಂದ ನಿರ್ಮಿಸಲಾಗಿರುವ ಮೆಟ್ಟಿಲುಗಳಾಗಿವೆ. ಈ ಘಾಟ್ ಹಲವಾರು ದೇವಾಲಯಗಳು ಮತ್ತು ತೀರ್ಥಯಾತ್ರ ಚಟುವಟಿಕೆಗಳ ಕೇಂದ್ರ.ವಾರಣಾಸಿ ಹಿಂದೂಗಳಿಗೆ ಅತ್ಯಂತ ಪವಿತ್ರ ಕ್ಷೇತ್ರ. ಹಿಂದೂ ಪುರಾಣಗಳಲ್ಲಿ ಹೇಳುವಂತೆ ಮತ್ತು ನಂಬಿಕೆಯಂತೆ ಗಂಗಾ ನದಿಯ ನೀರಿನಲ್ಲಿ...
ಜುನಾ ಅಖಾಡ್ ನಲ್ಲಿ ನೆಲೆನಿಂತಿರುವ ಹನುಮಾನ್ ಘಾಟ್ ವಾರಣಾಸಿಯ ಜನಪ್ರಿಯ ಧಾರ್ಮಿಕ ತಾಣ. ಇದನ್ನು ಮೊದಲು ರಾಮೇಶ್ವರಂ ಘಾಟ್ ಎಂದು ಕರೆಯಲಾಗುತ್ತಿತ್ತು. ತನ್ನ ಭಕ್ತ ಹಾಗೂ ಬಂಟ ಹನುಮಂತನಿಗಾಗಿ ಶ್ರೀರಾಮ ಈ ಘಾಟ್ ನ್ನು ನಿರ್ಮಿಸಿದನೆಂಬ ನಂಬಿಕೆಯಿದೆ.
ಹನುಮಂತ ಒಳ್ಳೆಯ ದೇಹದಾರ್ಢ್ಯವನ್ನು ಹೊಂದಿದ್ದ ಕಾರಣಕ್ಕಾಗಿ ಈ ಘಾಟ್...
ಅಂಬೆರ್ ಅಂದರೆ ಈಗಿನ ಅಜ್ಮೇರ್ ನ ಸವಾಯಿ ರಾಜ ಮಾನ್ ಸಿಂಗ್ 1585ರಲ್ಲಿ ಈ ಘಾಟ್ ನ್ನು ನಿರ್ಮಿಸಿದ್ದ. ಮನ್ ಮಂದಿರ್ ಘಾಟ್ ನ್ನು ಮೊದಲು ಸೋಮೇಶ್ವರ ಘಾಟ್ ಎಂದು ಕರೆಯಲಾಗುತ್ತಿತ್ತು. 1730ರಲ್ಲಿ ಮಹಾರಾಜ ಜೈ ಸಿಂಗ್ ಇಲ್ಲೊಂದು ವೀಕ್ಷಣಾಲಯವನ್ನು ನಿರ್ಮಿಸಿದ್ದ. ಮಹಾರಾಜ ಜೈಸಿಂಗ್ ದೆಹಲಿ ಮತ್ತು ಜೈಪುರದಲ್ಲಿ ಪ್ರಸಿದ್ಧ ಜಂತರ್...
ರಾಣಾ ಮಹಲ್ ಘಾಟ್ ಹೆಸರೇ ಸೂಚಿಸುವಂತೆ ರಾಜಪುತ ವಂಶಸ್ಥ ಉದಯಪುರದ ಮಹಾರಾಣ 1670ರಲ್ಲಿ ನಿರ್ಮಿಸಿದ್ದ. ಇದು ದರ್ಭಂಗ್ ಘಾಟ್ ಮತ್ತು ಚೌಸೈತಿ ಘಾಟ್ ಮಧ್ಯೆ ಮತ್ತು ದಶಅಶ್ವಮೇಧದ ಘಾಟ್ ನ ದಕ್ಷಿಣದಲ್ಲಿದೆ. ಈ ಘಾಟ್ ನಲ್ಲಿ ಭವ್ಯವಾದ ಅರಮನೆಯಿದ್ದು, ಇದು ರಾಜಪುತ ವಾಸ್ತುಶಿಲ್ಪ ಕಲೆಗೆ ಸಾಕ್ಷಿ. ಇದನ್ನು ಉದಯಪುರದ ರಾಣಾ...
ಬ್ರಿಟಿಷರ ವಿರುದ್ಧ ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಾತ್ಮ ಗಾಂಧಿ ಅವರ ಹೆಸರನ್ನು 1995ರಲ್ಲಿ ಕಾಶಿ ವಿದ್ಯಾಪೀಠಕ್ಕೆ ಇಡಲಾಗಿತ್ತು.ರಾಷ್ಟ್ರವಾದಿ ಮತ್ತು ಶಿಕ್ಷಣತಜ್ಞ ಬಾಬು ಶಿವಪ್ರಸಾದ್ ಗುಪ್ತಾ ಅವರು ಮಹಾತ್ಮ ಗಾಂಧಿ ಮತ್ತು ಸಮಾಜ ಸೇವಕ ಡಾ. ಭಗ್ವಾನ್ ದಾಸ್ ನೆರವಿನಿಂದ ಇದನ್ನು ನಿರ್ಮಿಸಿದ್ದರು. ಡಾ. ಭಗ್ವಾನ್...
ದುರ್ಗಾ ಮಂದಿರವು ದುರ್ಗಾ ದೇವಿಯದ್ದಾಗಿದ್ದು, ವಾರಣಾಸಿಯ ರಾಮನಗರದಲ್ಲಿದೆ. 18ನೇ ಶತಮಾನದಲ್ಲಿ ಬೆಂಗಾಳಿ ಮಹಾರಾಣಿ ಇದನ್ನು ನಿರ್ಮಿಸಿದರೆಂದು ನಂಬಲಾಗಿದೆ. ಬನಾರಸ್ ನ ರಾಜ ಮನೆತನದವರು ಈಗ ಮಂದಿರದ ಆಡಳಿತ ನೋಡಿಕೊಳ್ಳುತ್ತಿದ್ದಾರೆ.
ಉತ್ತರ ಭಾರತದ ವಾಸ್ತುಶಿಲ್ಪ ಶೈಲಿ ನಾಗರ ಶೈಲಿಯಲ್ಲಿ ಈ ಮಂದಿರವನ್ನು...
ಅಂದಿನ ಪ್ರಧಾನಿ ಜವಾಹರ್ ಲಾಲ್ ನೆಹರೂ ಅವರು ಯೋಜನೆ ಹಾಕಿಕೊಂಡು ದಲಾಯಿ ಲಾಮಾ ಅವರೊಂದಿಗೆ ಚರ್ಚಿಸಿದ ಬಳಿಕ 1967ರಲ್ಲಿ ಸೆಂಟ್ರಲ್ ಇನ್ಸ್ಟಿಟ್ಯೂಟ್ ಆಫ್ ಹೈಯರ್ ಟಿಬೆಟಿಯನ್ ಸ್ಟಡೀಸ್(ಸಿಐಎಚ್ ಟಿಎಸ್) ನ್ನು ನಿರ್ಮಿಸಲಾಯಿತು.
ಗಡಿಪಾರಾಗಿ ಭಾರತದಲ್ಲಿ ವಾಸಿಸುತ್ತಿರುವ ಮತ್ತು ಹಿಮಾಲಯದ ಗಡಿಪ್ರದೇಶದ ಸಮೀಪವಿರುವ...