ಪ್ರವಾಸಿಗರು ಒಡಿಸ್ಸಾದ ಯಾವುದೇ ಭಾಗದಿಂದ ಬೇಕಾದರೂ ಬಸ್ ಹತ್ತಿ ಕೃಷ್ಣದಾಸ್ಪುರದಲ್ಲಿ ಇಳಿಯಬಹುದು. ಇದು ಉದಯಗಿರಿ ಮತ್ತು ರತ್ನಗಿರಿಗಳಿಗೆ ಹೋಗುವವರು ಇಳಿಯಬೇಕಾದ ಸ್ಥಳ(ಬಸ್ ಸ್ಟಾಪ್). ಇಲ್ಲಿಗೆ ಡೀಲಕ್ಸ್ ಮತ್ತು ಸೆಮಿ ಡೀಲಕ್ಸ್ ಬಸ್ಗಳು ಲಭ್ಯವಿವೆ. ಪ್ರವಾಸಿಗರು ತಮ್ಮ ಅನುಕೂಲಕ್ಕೆ ತಕ್ಕಂತೆ ಬಸ್ ಹತ್ತಿ ಇಲ್ಲಿ ಇಳಿದು ಇಲ್ಲಿಂದ ಟ್ಯಾಕ್ಸಿ, ಆಟೋರಿಕ್ಷಾ ಅಥವ ಸೈಕಲ್ ರಿಕ್ಷಾ ಹತ್ತಿ ತಾವು ನೋಡಬೇಕಾದ ಸ್ಥಳ ತಲುಪಬಹುದು.