ಉದಯಗಿರಿಯು ಭಾರತದಲ್ಲಿನ ಅದ್ಭುತ ವಾಸ್ತುಶಿಲ್ಪಕಲೆಗೆ ಅತ್ಯುತ್ತಮ ಉದಾಹರಣೆ. ಈ ಊರನ್ನು ‘ಪ್ರಾಕೃತಿಕ ಸೌಂದರ್ಯ ಮತ್ತು ಮನುಷ್ಯ ಕಲೆಯ ಅಪರೂಪದ ಸಮ್ಮಿಲನ’ ಎಂದೇ ಕರೆಯಬಹುದು. ಈ ಸ್ಥಳವು ವಾಸ್ತುಶಿಲ್ಪ ಮತ್ತು ಐತಿಹಾಸಿಕ ದೃಷ್ಟಿಯಿಂದ ಮಹತ್ವದ್ದು. ಇಲ್ಲಿ ಬೌದ್ಧ ಮಠಗಳೂ, ಸ್ತೂಪಗಳು ಮತ್ತು ಜೈನ ವಾಸ್ತುಶಿಲ್ಪದ ಅವಶೇಷಗಳನ್ನು ಇಲ್ಲಿ ಅಗೆದು ಸಂಗ್ರಹಿಸಲಾಗಿದೆ. ಉದಯಗಿರಿಯು ‘ಸೂರ್ಯೋದಯದ ಬೆಟ್ಟಗಳಿಗೆ’ ಹೆಸರುವಾಸಿಯಾಗಿದೆ. ಇದು ಭುವನೇಶ್ವರದಿಂದ 85 ಕಿಮೀ ದೂರದಲ್ಲಿದೆ.ಇಲ್ಲಿ 18 ಗುಹೆಗಳಲ್ಲಿ ಕೆತ್ತಲಾಗಿರುವ ಶಿಲ್ಪಗಳು ಮತ್ತು ಶಾಸನಗಳು ಪ್ರವಾಸಿಗರನ್ನು ಸೆಳೆಯುತ್ತವೆ. ಇಲ್ಲಿನ ಶಾಸನಗಳು ತಿಳಿಸುವಂತೆ ಈ ಗುಹೆಗಳನ್ನು ಕಲ್ಲುಗಳನ್ನು ಕೊರೆಯುವ ಮೂಲಕ ನಿರ್ಮಿಸಲಾಗಿದೆ. ಖರವೇಲರ ಕಾಲದಲ್ಲಿ ಜೈನ ಸಂನ್ಯಾಸಿಗಳ ವಸತಿಗಾಗಿ ಈ ಗುಹೆಗಳು ನಿರ್ಮಾಣವಾದವು.
ಸುತ್ತಮುತ್ತಲ ಪ್ರವಾಸಿ ಆಕರ್ಷಣೆಗಳು
ಉದಯಗಿರಿಯಲ್ಲಿ 18 ಗುಹೆಗಳಿದ್ದು ಇವು ಉದಯಗಿರಿ ಗುಹೆಗಳು ಎಂದೇ ಹೆಸರುವಾಸಿಯಾಗಿದೆ. ಉದಯಗಿರಿಯ ಸಮೀಪದಲ್ಲೇ ಇರುವ ಖಂದಗಿರಿಯಲ್ಲಿ 15 ಗುಹೆಗಳಿವೆ. ಇವೆರಡೂ ಸ್ಥಳಗಳು ಉದಯಗಿರಿ ಪ್ರವಾಸೋದ್ಯಮದ ಪ್ರಮುಖ ಸ್ಥಳಗಳು. ಈ ಬೆಟ್ಟಗಳಲ್ಲದೆ, ಲಂಗುಡಿ ಬೆಟ್ಟ, ಲಲಿತಗಿರಿ ಮತ್ತು ರತ್ನಗಿರಿ ಬೆಟ್ಟಗಳು ಬೌದ್ಧ ಪ್ರದೇಶಗಳಾಗಿ ಗುರುತಿಸಲ್ಪಟ್ಟಿವೆ. ಇವುಗಳಲ್ಲಿ ಲಲಿತಗಿರಿಯಲ್ಲಿ ಗೌತಮ ಬುದ್ಧನಿಗೆ ಸಂಬಂಧಿಸಿದ ಸ್ಮಾರಕಗಳಿವೆ. ಈ ಸ್ಥಳಗಳ ಆಕರ್ಷಣೆಯು ಉದಯಗಿರಿ ಪ್ರವಾಸೋದ್ಯಮಕ್ಕೆ ಲಾಭದಾಯಕವಾಗಿದೆ.
ಹವಾಮಾನ
ಉದಯಗಿರಿಯಲ್ಲಿ ಬೇಸಿಗೆ, ಮಳೆಗಾಲ ಮತ್ತು ಚಳಿಗಾಲಗಳನ್ನು ಕಾಣಬಹುದು. ಬೇಸಿಗೆ ಧಗೆ ಮತ್ತು ಉಷ್ಣಾಂಶ ಹೆಚ್ಚಿರುತ್ತದೆ. ಚಳಿಗಾಲಗಳು ಹೆಚ್ಚು ತಣ್ಣಗಿರುತ್ತವೆ.
ತಲುಪುವುದು ಹೇಗೆ?
ಉದಯಗಿರಿಯು ಒಡಿಸ್ಸಾಗೆ ಮಾತ್ರವಲ್ಲ ದೇಶಕ್ಕೆ ಕೂಡ ಬಹಳ ಮುಖ್ಯವಾದ ಸಾಂಸ್ಕೃತಿಕ ಪ್ರದೇಶ. ಹಾಗಾಗಿ ಇಲ್ಲಿಗೆ ತಲುಪುವುದು ತ್ರಾಸದಾಯಕವಲ್ಲ. ಇದು ಭುವನೇಶ್ವರಕ್ಕೆ ಸಮೀಪದಲ್ಲಿರುವುದರಿಂದ ಪ್ರವಾಸಿಗರು ವಿಮಾನ, ರೈಲು ಅಥವ ರಸ್ತೆ ಮೂಲಕ ಇಲ್ಲಿಗೆ ತಲುಪಬಹುದು. ಕಟಕ್ ಇಲ್ಲಿಗೆ ಸಮೀಪದ ರೈಲು ನಿಲ್ದಾಣ. ಅಕ್ಟೋಬರ್ – ಮಾರ್ಚ್ ಅವಧಿಯಲ್ಲಿ ಹವಾಮಾನವು ತಂಪಾಗಿ ಆಹ್ಲಾದಕರವಾಗಿರುವುದರಿಂದ ಪ್ರವಾಸಿಗರು ಈ ಸಮಯದಲ್ಲಿ ಹೆಚ್ಚಾಗಿ ಭೇಟಿ ನೀಡುತ್ತಾರೆ.