ಭಾರತದ ಈಶಾನ್ಯ ಭಾಗದಲ್ಲಿರುವ ಸಣ್ಣ ರಾಜ್ಯವಾದ ತ್ರಿಪುರಾದ ದಕ್ಷಿಣದಲ್ಲಿರುವ ಪುಟ್ಟ ಆದರೂ ಖ್ಯಾತ ಪಟ್ಟಣ ಉದಯಪುರ್. ಇದು ದಕ್ಷಿಣ ತ್ರಿಪುರಾದ ಜಿಲ್ಲಾಕೇಂದ್ರವಾಗಿದೆ. ಇದು ರಾಜಸ್ಥಾನದ ಪ್ರಸಿದ್ಧ ಸ್ಥಳವಾದ ಉದಯಪುರ್ ನ ಹೆಸರನ್ನು ಹೊಂದಿದ್ದರೂ, ಪಶ್ಚಿಮದ ಮರಳು ನಾಡಿಗಿಂತ ತುಂಬಾ ಭಿನ್ನವಾಗಿದೆ.
ಉದಯಪುರ್ ಸುತ್ತಲಿನ ಯಾತ್ರಾಸ್ಥಳಗಳು
ಉದಯಪುರ್ ಇಲ್ಲಿನ ದೇವಸ್ಥಾನಗಳಿಗೆ ಪ್ರಖ್ಯಾತವಾಗಿದೆ. ಇಲ್ಲಿನ ದೇವಿಯಾದ ತ್ರಿಪುರ ಸುಂದರಿ ಹಾಗೂ ಇತರ ದೇವರ ದರ್ಶನಕ್ಕಾಗಿ ಜನಸ್ತೋಮ ನೆರೆದಿರುತ್ತದೆ. ಈ ಜಾಗದ ಸೌಂದರ್ಯವನ್ನು ಹೆಚ್ಚಿಸಲು ಇಲ್ಲಿ ಕೃತಕ ಸರೋವರಗಳ ನಿರ್ಮಾಣ ಮಾಡಲಾಗಿದ್ದು, ಇದರಿಂದಲೇ ಉದಯಪುರ್ ಗೆ ಸರೋವರಗಳ ನಗರ ಎಂಬ ಪ್ರಖ್ಯಾತಿ ದೊರೆತಿದೆ. ಧನಿ ಸಾಗರ್, ಮಹಾದೇವ್ ದಿಘಿ, ಜಗನ್ನಾಥ್ ದಿಘಿ ಹಾಗೂ ಅಮರ್ ಸಾಗರ್ ಇಲ್ಲಿನ ಕೆಲವು ಸರೋವರಗಳು.
ಉದಯಪುರ್, ತ್ರಿಪುರಾದಲ್ಲಿನ ಅಗರ್ತಲದ ನಂತರದ ದೊಡ್ಡ ನಗರವಾಗಿದೆ. ಈ ನಗರದ ಮೂಲಕ ಗೋಮತಿ ನದಿಯು ಹರಿಯುತ್ತಿದ್ದು, ಇದು ಇಲ್ಲಿನ ಮಣ್ಣನ್ನು ಫಲಪ್ರದವಾಗಿಸಿ ಕೃಷಿಯೋಗ್ಯವಾಗಿಸುತ್ತದೆ. ಉದಯಪುರ್ ಅಗರ್ತಲದಿಂದ 55 ಕಿಲೋಮೀಟರು ದೂರದಲ್ಲಿದ್ದು, ಇಲ್ಲಿಗೆ ಖಾಸಗಿ ವಾಹನ ಹಾಗೂ ರಾಜ್ಯ ಸಾರಿಗೆ ಬಸ್ ಮೂಲಕ ತಲುಪಬಹುದಾಗಿದೆ.
ಉದಯಪುರ್ ನಲ್ಲಿ ಹಲವಾರು ದೇವಸ್ಥಾನಗಳಿದ್ದು, 1501 ರಲ್ಲಿ ನಿರ್ಮಿಸಿದ್ದ ತ್ರಿಪುರ ಸುಂದರಿ ದೇವಸ್ಥಾನ ಪ್ರಖಾತ ಹಾಗೂ ಅತಿ ಹೆಚ್ಚು ಯಾತ್ರಿಗಳು ಭೇಟಿ ಕೊಡುವ ದೇವಸ್ಥಾನವಾಗಿದೆ. ಹಿಂದೂ ಪುರಾಣದ ಪ್ರಕಾರ ಇದು 51 ಶಕ್ತಿ ಪೀಠದಲ್ಲಿ ಒಂದಾಗಿದ್ದು, ಮಾತಬರಿ ಎಂದೂ ಕರೆಯಲ್ಪಡುತ್ತದೆ. ಕಲ್ಯಾಣ್ ಸಾಗರ್ ಇಲ್ಲಿ ಹತ್ತಿರದಲ್ಲಿರುವ ದೊಡ್ಡ ಸರೋವರವಾಗಿದೆ. ಉದಯಪುರ್ ನ ಇನ್ನೊಂದು ದೇವಸ್ಥಾನವಾದ ಭುವನೇಶ್ವರಿ ದೇವಿಯ ಭುಬನೇಶ್ವರಿ ದೇವಸ್ಥಾನವು ಇಲ್ಲಿನ ಇನ್ನೊಂದು ಜನಪ್ರಿಯ ದೇವಸ್ಥಾನವಾಗಿದೆ.
ಪ್ರಸಿದ್ಧ ಬಂಗಾಳಿ ಕವಿಯಾದ ಕಜ್ಹಿ ನಜ್ರುಲ್ ಇಸ್ಲಾಂ ಅವರ ನೆನಪಿಗಾಗಿ ಇರುವ ನಜ್ರುಲ್ ಗ್ರಂಥಗಾರ್ ಎಂಬ ವಾಚನಾಲಯ ಇಲ್ಲಿನ ಇನ್ನೊಂದು ಪ್ರೇಕ್ಷಣೀಯ ಸ್ಥಳ.
ಹವಾಮಾನ
ತ್ರಿಪುರಾದ ಹೆಚ್ಚಿನ ಭಾಗದಂತೆ, ವರ್ಷದ ಹೆಚ್ಚಿನ ಸಮಯದಲ್ಲಿ ಉದಯಪುರ್ ನಲ್ಲಿ ಬಿಸಿ ಹಾಗೂ ಶೈತ್ಯ ವಾತಾವರಣವಿರುತ್ತದೆ.