Search
  • Follow NativePlanet
Share
ಮುಖಪುಟ » ಸ್ಥಳಗಳು » ತ್ರಿಪುರಾ » ಆಕರ್ಷಣೆಗಳು
  • 01ಉಜ್ಜಯಂತ ಅರಮನೆ,ಅಗರ್ತಲಾ

    ಪ್ರಸ್ತುತ ರಾಜ್ಯ ವಿಧಾನಸಭೆ, ಉಜ್ಜಯಂತ ಅರಮನೆ ಅಗರ್ತಲಾದ ಅತ್ಯಂತ ವಿಸ್ಮಯ ಹುಟ್ಟಿಸುವ ವಾಸ್ತುಶಿಲ್ಪದ ಪ್ರತಿಭೆಯಲ್ಲಿ ಒಂದಾಗಿದೆ. ಇಂಡೋ-ಗ್ರೀಕ್ ಶೈಲಿಯಲ್ಲಿ ನಿರ್ಮಿಸಲಾಗಿದ್ದು, ಇದನ್ನು ಮಹಾರಾಜ ರಾಧಾ ಕಿಶೋರ ಮಾಣಿಕ್ಯ ಕಟ್ಟಿಸಿದ್ದಾರೆ. ಇದನ್ನು 1899-1901 ಅವಧಿಯಲ್ಲಿ ನಿರ್ಮಿಸಲಾಯಿತು ಮತ್ತು ಸರ್ ಅಲೆಕ್ಸಾಂಡರ್...

    + ಹೆಚ್ಚಿಗೆ ಓದಿ
  • 02ಕಮಲೇಶ್ವರಿ ಮಂದಿರ,ಧಲೈ

    ಕಮಲೇಶ್ವರಿ ಮಂದಿರ

    ಕಾಳಿ ದೇವಿಯ ಕಮಲೇಶ್ವರಿ ಮಂದಿರವು ತ್ರಿಪುರದ ಬಹುದೊಡ್ಡ ಪಟ್ಟಣವಾದ ಕಮಲಪುರದಲ್ಲಿದೆ. ಇದು ಧಲೈನ ಮುಖ್ಯ ಜಿಲ್ಲಾ ಕೇಂದ್ರವಾದ ಅಂಬಾಸ್ಸಾದಿಂದ 35 ಕಿಮೀ ದೂರದಲ್ಲಿದೆ. ಅಗರತಲದಿಂದ 122 ಕಿಮೀ ದೂರದಲ್ಲಿದೆ.

    ಕಮಲೇಶ್ವರಿ ಎನ್ನುವುದು ಕಾಳಿ ದೇವಿಯ ಮತ್ತೊಂದು ಹೆಸರು. ಈ ದೇವಾಲಯದಿಂದ ಈ ಪಟ್ಟಣಕ್ಕೆ ಕಮಲಪುರವೆಂದು ಹೆಸರು....

    + ಹೆಚ್ಚಿಗೆ ಓದಿ
  • 03ತ್ರಿಪುರ ಸುಂದರಿ ದೇವಸ್ಥಾನ,ಉದಯಪುರ್-ತ್ರಿಪುರಾ

    ತ್ರಿಪುರ ಸುಂದರಿ ದೇವಸ್ಥಾನ

    ತ್ರಿಪುರ ಸುಂದರಿ ದೇವಸ್ಥಾನವು  ತ್ರಿಪುರಾದ ಜನಪ್ರಿಯ ದೇವಸ್ಥಾನಗಳಲ್ಲಿ ಒಂದು. ಹಿಂದೂ ಪುರಾಣದ ಪ್ರಕಾರ ಕಾಳಿ ದೇವಿಯ 51 ಶಕ್ತಿ ಪೀಠದಲ್ಲಿ ಒಂದಾಗಿದೆ. ಕಾಳಿ ದೇವಿಯ 'ಸೋರೋಷಿ' ಆಕಾರವನ್ನು ಇಲ್ಲಿ ಪೂಜಿಸಲಾಗುತ್ತದೆ. ಈ ದೇವಸ್ಥಾನವು  ಆಮೆಯ ಅಥವಾ ಕೂರ್ಮ ದ ಆಕಾರದಲ್ಲಿದ್ದ, 'ಕೂರ್ಮ ಪೀಠ' ಎಂದೂ...

    + ಹೆಚ್ಚಿಗೆ ಓದಿ
  • 04ಲಖಿ ನಾರಾಯಣ ಬಾರಿ,ಕೈಲಾಶಹಾರ್

    ಲಖಿ ನಾರಾಯಣ ಬಾರಿ

    ಉತ್ತರ ತ್ರಿಪುರಾದ ನರಗ ಕೇಂದ್ರ ಕೈಲಾಶಹಾರ ನಲ್ಲಿ ಲಖಿ ನಾರಾಯಣ ಬಾರಿ ಇದೆ. ಇಲ್ಲಿರುವ ಶ್ರೀ ಕೃಷ್ಣ ದೇವರ ಮೂರ್ತಿಗೆ ಇದು ಪ್ರಸಿದ್ಧವಾಗಿದೆ. ಇದನು ಕೃಷ್ಣಾನಂದ ಸೇವಾಯೆತ್ ಪ್ರತಿಷ್ಟಾಪಿಸಿದರು ಎಂದು ಹೇಳಲಾಗುತ್ತದೆ. ಇಂದು ಇದನ್ನು ಭಾರತದ ಪುರಾತನ ಸ್ಮಾರಕ ಎಂದು ಪರಿಗಣಿಸಲಾಗುತ್ತದೆ.

    ಲಖಿ ನಾರಾಯಣ ಬಾರಿ ಕೈಲಾಶಹಾರ್...

    + ಹೆಚ್ಚಿಗೆ ಓದಿ
  • 0514 ದೇವತೆಗಳ ದೇವಾಲಯ ಅಥವಾ ಚೌದೋ ದೇವೋತಾರ್ ಮಂದಿರ,ಕೈಲಾಶಹಾರ್

    ಚೌದೋ ದೇವೋತಾರ್ ಮಂದಿರ್ ಅಥವಾ 14 ದೇವತೆಗಳ ದೇವಾಲಯ ರಂಗೌತಿಯಲ್ಲಿ ತ್ರಿಪುರದ ರಾಜಧಾನಿ ಅಗರ್ತಲಾದಿಂದ 14 ಕಿಲೋಮೀಟರ್ ದೂರದಲ್ಲಿದೆ. ಇದು ರಂಗೌತಿಯಲ್ಲಿ ಕೈಲಾಶಹಾರ್ ಮೇಲೆ ನೆಲೆಸಿದೆ. ಚೌದೋ ದೇವೋತಾರ್ ಮಂದಿರವನ್ನು ತ್ರಿಪುರದಲ್ಲಿ ಅತ್ಯಂತ ಗೌರವಿಸಲಾಗುತ್ತದೆ.  ಮತ್ತು 14 ದೇವ ಮತ್ತು ದೇವತೆಗಳನ್ನು ಈ ದೇವಾಲಯದಲ್ಲಿ...

    + ಹೆಚ್ಚಿಗೆ ಓದಿ
  • 06ಭುವನೇಶ್ವರಿ ದೇವಸ್ಥಾನ,ಉದಯಪುರ್-ತ್ರಿಪುರಾ

    ಭುವನೇಶ್ವರಿ ದೇವಸ್ಥಾನ

    ನೊಬೆಲ್ ಪ್ರಶಸ್ತಿ ವಿಜೇತ ಟಾಗೋರರು ತಮ್ಮ ಕಾದಂಬರಿಯಾದ  'ರಾಜರ್ಷಿ' ಮತ್ತು ನಾಟಕ 'ಬಿಶರ್ಜನ್' ನ ಮೂಲಕ ಭುವನೇಶ್ವರಿ ದೇವಸ್ಥಾನವನ್ನು ಚಿರಸ್ಮರಣೀಯವಾಗಿಸಿದ್ದರು. ಈ ದೇವಸ್ಥಾನ ಗೋಮತಿ ನದಿಯ ತೀರದಲ್ಲಿದೆ  ಹಾಗೂ ಹಿಂದಿನ ಅರಮನೆಯ ಹತ್ತಿರದಲ್ಲಿದೆ.  

    ಭುವನೇಶ್ವರಿ ದೇವಿಯ ದೇವಸ್ಥಾನವಾದ ಭುವನೇಶ್ವರಿ...

    + ಹೆಚ್ಚಿಗೆ ಓದಿ
  • 07ಲೊಂಗಥರೈ ಮಂದಿರ,ಧಲೈ

    ಲೊಂಗಥರೈ ಮಂದಿರ

    ಧಲೈ ಜಿಲ್ಲೆಯ ಪ್ರಸಿದ್ಧ ದೇವಾಲಯಗಳಲ್ಲಿ ಒಂದು. ಲೊಂಗಥರೈ ಎನ್ನುವುದು ಕೊಕ್ಬೊರೊಕ್ನಲ್ಲಿ ಶಿವನ ಹೆಸರು. ಅಗರತಲದಿಂದ ಇದು 102 ಕಿಮೀ ದೂರದಲ್ಲಿದೆ. ಶಿವನು ತನ್ನ ವಾಸಸ್ಥಾನವಾದ ಕೈಲಾಶ ಪರ್ವತದಿಂದ ಪ್ರಯಾಣ ಮಾಡುತ್ತಿದ್ದಾಗ ಇಲ್ಲಿ ವಿರಮಿಸಿದ್ದನಂತೆ. ಇಲ್ಲಿ ಅವನು ಕಾಲೂರಿದ್ದರಿಂದಲೇ ಈ ಪ್ರದೇಶ ಜನಪ್ರಿಯವಾಗಿದೆ ಎಂದು...

    + ಹೆಚ್ಚಿಗೆ ಓದಿ
  • 08ಜಗನ್ನಾಥ ದೇವಾಲಯ,ಅಗರ್ತಲಾ

    ಜಗನ್ನಾಥ ದೇವಾಲಯ

    ಅಗರ್ತಲಾವನ್ನು ಮಾಣಿಕ್ಯ ರಾಜರು ರಾಜಧಾನಿಯಾಗಿ ಆಯ್ಕೆ ಮಾಡಿದ ನಂತರ, ಅವರು ಸಮರ್ಪಕವಾಗಿ ನಗರವನ್ನು ನಿರ್ಮಿಸಿದರು. ಅಂತಹ ಒಂದು ಪ್ರಯತ್ನದಲ್ಲಿ ಯಶಸ್ವಿಯಾದ ದಿಗ್ಹಿ ಸರೋವರದ ದಡದಲ್ಲಿ ನಿರ್ಮಿಸಿದ ಜಗನ್ನಾಥ ದೇವಸ್ಥಾನವನ್ನು ಕಾಣಬಹುದು. ಇಲ್ಲಿನ ಜಗನ್ನಾಥ ವಿಗ್ರಹ ಅಥವಾ ನೀಲಮಾಧವ ವಿಗ್ರಹವನ್ನು ಪ್ರಸಿದ್ಧವಾದ ಪುರಿ ಜಗನ್ನಾಥ...

    + ಹೆಚ್ಚಿಗೆ ಓದಿ
  • 09ನಜ್ರುಲ್ ಗ್ರಂಥಾಗರ್,ಉದಯಪುರ್-ತ್ರಿಪುರಾ

    ನಜ್ರುಲ್ ಗ್ರಂಥಾಗರ್

    ನಜ್ರುಲ್ ಗ್ರಂಥಾಗರ್  ಉದಯಪುರ್ ನಲ್ಲಿನ ಪ್ರಮುಖ ರಾಷ್ಟ್ರೀಯ ವಾಚನಾಲಯವಾಗಿದೆ. ಇದನ್ನು ಖ್ಯಾತ ಬೆಂಗಾಲಿ ಕವಿ, ಕಝಿ ನಜ್ರುಲ್ ಇಸ್ಲಾಂ ಅವರ ನೆನಪಿಗೋಸ್ಕರ ನಿರ್ಮಿಸಲಾಗಿದೆ. ಇಲ್ಲಿ ಕಾದಂಬರಿಗಳಿಂದ ಹಿಡಿದು ನೈಜ ಕೃತಿಗಳ ವರೆಗಿನ ಪುಸ್ತಕಗಳ ದೊಡ್ಡ ಭಂಡಾರವೇ ಇದೆ.

    ನಜ್ರುಲ್ ಗ್ರಂಥಾಗರ್, ಮಾಣಿಕ್ಯ ವಂಶದ...

    + ಹೆಚ್ಚಿಗೆ ಓದಿ
  • 10ಮಣಿಪುರಿ ಸಮುದಾಯದ ರಾಸ ಮೇಳ,ಧಲೈ

    ಮಣಿಪುರಿ ಸಮುದಾಯದ ರಾಸ ಮೇಳ

    ರಾಸಲೀಲೆ ಎನ್ನುವುದು ಕೃಷ್ಣ-ರಾಧೆ ಮತ್ತು ಅವಳ ಸಖಿಯರ ಪ್ರಸಿದ್ಧ ನೃತ್ಯ. ಕೃಷ್ಣನ ಅನುಯಾಯಿಗಳಾದ ಮಣಿಪುರಿಗಳು ಪ್ರತಿವರ್ಷ ಕೃಷ್ಣನಿಗೆ ಗೌರವ ಸೂಚಿಸಲು ರಾಸ ಲೀಲಾ ನೃತ್ಯವನ್ನು ಮಾಡುತ್ತಾರೆ. ಈ ಸಂದರ್ಭದಲ್ಲಿ ಧಲೈಜಿಲ್ಲೆಯಲ್ಲಿ ಮಣಿಪುರಿ ಸಮುದಾಯದವರು ರಾಸ ಮೇಳವನ್ನು ಆಯೋಜಿಸುತ್ತಾರೆ.

    ಇದರ ಅತಿ ದೊಡ್ಡ ಮೇಳ...

    + ಹೆಚ್ಚಿಗೆ ಓದಿ
  • 11ಉಮಾಮಹೇಶ್ವರ ದೇವಾಲಯ,ಅಗರ್ತಲಾ

    ಉಮಾಮಹೇಶ್ವರ ದೇವಾಲಯ

    ದೊಡ್ಡ ಉಜ್ಜಯಂತ ಅರಮನೆ ಸಂಕೀರ್ಣ ಒಳಗೆ ನೆಲೆಯಾಗಿರುವ ಕಾಣಬಹುದಾದ ಅನೇಕ ದೇವಾಲಯಗಳಲ್ಲಿ ಉಮಾಮಹೇಶ್ವರ ದೇವಾಲಯವೂ ಒಂದಾಗಿದೆ. ಇದು ಶೈವ ಮತ್ತು ಶಕ್ತಿ ಸಂಪ್ರದಾಯದ ಒಂದು ಹಿಂದೂ ದೇವಾಲಯ. ಉಮಾಮಹೇಶ್ವರ/ರಿ ದುರ್ಗಾ ದೇವತೆಯ ಇನ್ನೊಂದು ಹೆಸರು.

    ತ್ರಿಪುರ ದೇವಸ್ಥಾನಗಳನ್ನು ಬಹುತೇಕ ಹೋಲುವ ಉಮಾಮಹೇಶ್ವರ ದೇವಾಲಯ ಬಂಗಾಳ...

    + ಹೆಚ್ಚಿಗೆ ಓದಿ
  • 12ಚಹಾ ತೋಟಗಳು,ಕೈಲಾಶಹಾರ್

    ಚಹಾ ತೋಟಗಳು

    ಕೈಲಾಶಹಾರ್ ಮತ್ತು ಅದರ ಪಕ್ಕದ ಪ್ರದೇಶಗಳಲ್ಲಿ  16 ಕ್ಕೂ ಹೆಚ್ಚು ಚಹಾ ತೋಟಗಳಿವೆ. ಈ ಸಮೃದ್ಧ ಹಸಿರು ತೋಟಕ್ಕೆ ಭೇಟಿ ನೀಡಲು ಎಲ್ಲರೂ ಇಷ್ಟಪಡುತ್ತಾರೆ!  ಈ ಚಹಾ ತೋಟಗಳು ತಮ್ಮ ಮೋಡಿಮಾಡುವ ಸೌಂದರ್ಯ ಮಾತ್ರವಲ್ಲದೇ ಚಹಾ ಎಲೆಗಳ ಭವ್ಯವಾದ ಗುಣಮಟ್ಟಕ್ಕೂ ಹೆಸರುವಾಸಿಯಾಗಿವೆ.

    ಈ ಪ್ರದೇಶದಲ್ಲಿರುವ ಚಹಾ...

    + ಹೆಚ್ಚಿಗೆ ಓದಿ
  • 13ಕಲ್ಯಾಣ್ ಸಾಗರ್,ಉದಯಪುರ್-ತ್ರಿಪುರಾ

    ಕಲ್ಯಾಣ್ ಸಾಗರ್

    ಕಲ್ಯಾಣ್ ಸಾಗರ್  ತ್ರಿಪುರ  ಸುಂದರಿ ದೇವಸ್ಥಾನದ ಹತ್ತಿರದಲ್ಲಿರುವ ದೊಡ್ಡ ಸರೋವರವಾಗಿದೆ. ಈ ಸರೋವರವು ಐದು ಎಕರೆಗಳಷ್ಟು ವಿಸ್ತಾರ ಹೊಂದಿದ್ದು, ಇದರ ಉದ್ದ 224 ಗಜ ಹಾಗೂ ಅಗಲ 160 ಗಜಗಳಾಗಿವೆ. 1501 ರಲ್ಲಿ ಮಹಾರಾಜ ಕಲಿಯನ್ ಮನಿಕ್ಯರ ಕಾಲದಲ್ಲಿ ನಿರ್ಮಿಸಿದ್ದ ಈ ಸರೋವರವನ್ನು, ತ್ರಿಪುರ ಸುಂದರಿ ದೇವಸ್ಥಾನ...

    + ಹೆಚ್ಚಿಗೆ ಓದಿ
  • 14ವೇಣುಬಾನ್ ಬುದ್ಧ ವಿಹಾರ,ಅಗರ್ತಲಾ

    ವೇಣುಬಾನ್ ಬುದ್ಧ ವಿಹಾರ

    ವೇಣುಬಾನ್/ಬನ್ ಬುದ್ಧ ವಿಹಾರ,  ಬುದ್ಧ ದೇವಾಲಯವಾಗಿದ್ದು ಅಗರ್ತಲಾ ನಗರ ಕೇಂದ್ರದಿಂದ 2 ಕಿಲೋಮೀಟರ್ ದೂರದಲ್ಲಿದೆ. ಇದು ಈ ಪ್ರದೇಶದಲ್ಲಿರುವ ಪ್ರಸಿದ್ಧ ಬುದ್ಧ ದೇವಾಲಯ ಮತ್ತು ಸಂಪೂರ್ಣವಾಗಿ ಲೋಹದಿಂದ ಮಾಡಲ್ಪಟ್ಟ ಒಂದು ಬುದ್ಧನ ವಿಗ್ರಹಕ್ಕೆ ಹೆಸರುವಾಸಿಯಾಗಿದೆ. ಇಲ್ಲಿನ ಪ್ರಸಿದ್ಧ ಆರಾಧ್ಯ ವಿಗ್ರಹವನ್ನು ಮಯನ್ಮಾರ್...

    + ಹೆಚ್ಚಿಗೆ ಓದಿ
  • 15ಸಿಪಹಿಜಾಲ ವನ್ಯಮೃಗ ಅಭಯಾರಣ್ಯ,ಅಗರ್ತಲಾ

    ಸಿಪಹಿಜಾಲ ವನ್ಯಮೃಗ ಅಭಯಾರಣ್ಯ

    ಅಗರ್ತಲಾ ನಗರ ಕೇಂದ್ರದಿಂದ 35 ಕಿಲೋಮೀಟರ್ ದೂರದಲ್ಲಿರುವ  ಸಿಪಿಹಿಜಾಲ ವನ್ಯಮೃಗ ಅಭಯಾರಣ್ಯ, ತನ್ನ ಹಸಿರು ಮತ್ತು ಹೇರಳವಾದ ಭೂದೃಶ್ಯಕ್ಕೆ ಹೆಸರುವಾಸಿಯಾಗಿದೆ. ಇದು 18.5 ಚದರ ಕಿ.ಮೀ ಪ್ರದೇಶವನ್ನು ವ್ಯಾಪಿಸಿದೆ. ಮತ್ತು ವಲಸೆ ಹಕ್ಕಿಗಳು ಮತ್ತು ಪ್ರಾಣಿಗಳ ನೆಲೆಯಾಗಿದೆ.

    ವನ್ಯಮೃಗ ಅಭಯಾರಣ್ಯವನ್ನು 1972 ರಲ್ಲಿ...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun