ಭಾರತದ ಪ್ರತಿಯೊಂದು ರಾಜ್ಯದಲ್ಲಿ ಸಾವಿರಾರು ದೇವಸ್ಥಾನಗಳಿವೆ. ಭಾರತದಲ್ಲಿ ಇತಿಹಾಸಕಾಲದಿಂದ ಹಿಡಿದು ಈಗಿನವರೆಗೆ ಅನೇಕ ದೇವಸ್ಥಾನಗಳನ್ನು ಕಾಣಬಹುದಾಗಿದೆ. ಕೆಲವು ಶಿವನಿಗೆ ಸಮರ್ಪಿತವಾದರೆ ಇನ್ನೂ ಕೆಲವು ವಿಷ್ಣು, ಕೆಲವು ಬ್ರಹ್ಮ ಹಾಗೂ ಅನೇಕ ದೇವಿ ದೇವತೆಗಳಿಗೆ ಸಮರ್ಪಿತವಾದವುಗಳಾಗಿದೆ.
ಸತಿಯ ಮೊಣಕೈ ಬಿದ್ದ ಈ ಜಾಗದಲ್ಲಿ ಕಾಲಸರ್ಪ ದೋಷವೂ ನಿವಾರಣೆಯಾಗುತ್ತಂತೆ!
ಅವುಗಳಲ್ಲಿ ಇನ್ನೂ ಅನೇಕ ದೇವಸ್ಥಾನಗಳಿವೆ ಅವು ದೇವಿ, ದೇವತೆಗಳಿಗೆ ಸಮರ್ಪಿತವಾಗಿಲ್ಲ. ಅಂತಹದ್ದೇ ಒಂದು ದೇವಸ್ಥಾನ ಬೆಂಗಳೂರಿನಲ್ಲಿದೆ. ಅದುವೇ ಧರ್ಮರಾಯಸ್ವಾಮಿ ದೇವಸ್ಥಾನ ಬೆಂಗಳೂರು. ಇಲ್ಲಿಗೆ ಪ್ರತಿದಿನ ಸಾವಿರಾರು ಭಕ್ತರು ಆಗಮಿಸುತ್ತಾರೆ. ಹಾಗಾದರೆ ಬನ್ನಿ ಈ ಅಸಾಮಾನ್ಯ ದೇವಸ್ಥಾನದ ಬಗ್ಗೆ ತಿಳಿಯೋಣ.
ಹಿಂದೂ ಶಿಲ್ಪಕಲಾಶೈಲಿ
PC: Thigala4u alias Shri
ಮಹಾಭಾರತದ ಪಾಂಡವರಲ್ಲಿ ಒಬ್ಬರಾದ ಧರ್ಮರಾಯನಿಗೆ ಸಮರ್ಪಿತವಾದ ಈ ದೇವಸ್ಥಾನವು ಪಾಂಡವರಿಗೆ ಸಮರ್ಪಿತವಾಗಿರುವ ದೇಶದಲ್ಲೇ ಏಕೈಕ ದೇವಸ್ಥಾನವಾಗಿದೆ. ಈ ಮಂದಿರವನ್ನು ಹಿಂದೂ ಶಿಲ್ಪಕಲಾಶೈಲಿಯಲ್ಲಿ ಮಾಡಲಾಗಿದೆ. ನೀವು ಪುರಾಣಕ್ಕೆ ಸಂಬಂಧಿಸಿದ ಸ್ಥಳಗಳನ್ನು ಭೇಟಿ ನೀಡಲು ಬಯಸಿದ್ದಲ್ಲಿ ಈ ಮಂದಿರವನ್ನು ಮಿಸ್ ಮಾಡುವಂತಿಲ್ಲ.
ಧರ್ಮರಾಯ ಸ್ವಾಮಿ ದೇವಸ್ಥಾನದ ಇತಿಹಾಸ
ಕೆಂಪೇಗೌಡರು ಬೆಂಗಳೂರನ್ನು 16ನೇ ಶತಮಾನದಲ್ಲಿ ನಿರ್ಮಿಸುವ ಮೊದಲೇ ಈ ದೇವಸ್ಥಾನವನ್ನು ನಿರ್ಮಿಸಲಾಗಿದೆಯಂತೆ. ಇದನ್ನು 11 ನೇ ಶತಮಾನದಲ್ಲಿ ನಿರ್ಮಿಸಲಾಗಿದೆ ಎನ್ನಲಾಗುತ್ತದೆ. ಈ ದೇವಾಲಯವನ್ನು ಮಧ್ಯವಾಗಿಟ್ಟು ಇಡೀ ಬೆಂಗಳೂರನ್ನು ನಿರ್ಮಿಸಲಾಗಿದೆ ಎನ್ನಲಾಗುತ್ತದೆ.
ಇಲ್ಲಿ ಆಚರಿಸಲಾಗುವ ಪ್ರಮುಖ ಉತ್ಸವಗಳೆಂದರೆ ಬೆಂಗಳೂರು ಕರಗ, ಬಹಳ ಹಳೆಯ ಉತ್ಸವವಾಗಿರುವ ಇದನ್ನು ದ್ರೌಪದಿಗೆ ಗೌರವವನ್ನು ನೀಡುವ ಸಲುವಾಗಿ ಆಯೋಜಿಸಲಾಗುವುದು.
ಇಲ್ಲಿಗೆ ಭೇಟಿ ನೀಡಲು ಸೂಕ್ತ ಸಮಯ
PC: Kiran Jonnalagadda
ಬೆಂಗಳೂರಿನಲ್ಲಿ ಯಾವಾಗಲೂ ತಂಪಾದ ವಾತಾವರಣ ಇರುತ್ತದೆ. ಹಾಗಾಗಿ ಈ ಧರ್ಮರಾಯ ಸ್ವಾಮಿ ದೇವಸ್ಥಾನಕ್ಕೆ ಯಾವಾಗ ಬೇಕಾದರೂ ಭೇಟಿ ನೀಡಬಹುದು. ನೀವು ಹಿಂದೂ ಭಕ್ತರು ತುಂಬಿರುವುದನ್ನು ನೋಡಬೇಕಾದರೆ ಮಾರ್ಚ್, ಎಪ್ರಿಲ್ನಲ್ಲಿ ಬೆಂಗಳೂರು ಕರಗದ ಸಂದರ್ಭ ಇಲ್ಲಿಗೆ ಭೇಟಿ ನೀಡಬೇಕು.
ತಲುಪುವುದು ಹೇಗೆ?
PC: Thigala4u alias Shri
ಬೆಂಗಳೂರಿಗೆ ದೇಶದ ಎಲ್ಲಾ ದೊಡ್ಡ ನಗರದಗಳಿಂದ ವಿಮಾನದ ವ್ಯವಸ್ಥೆ ಇದೆ. ಹಾಗಾಗಿ ಬೆಂಗಳೂರು ಏರ್ಪೋರ್ಟ್ಗೆ ನೇರ ವಿಮಾನವನ್ನು ಹಿಡಿಯಬಹುದು. ಏರ್ಪೋರ್ಟ್ನಿಂದ ಧರ್ಮರಾಯ ಸ್ವಾಮಿ ದೇವಸ್ಥಾನಕ್ಕೆ ಕ್ಯಾಬ್ ಮೂಲಕ ಹೋಗಬಹುದು. ವಿಮಾನ ನಿಲ್ದಾನದಿಂದ ಈ ದೇವಸ್ಥಾನವು ಸುಮಾರು 36 ಕಿ.ಮೀ ದೂರದಲ್ಲಿದೆ.
ರೈಲು ಮೂಲಕ ಹೋಗುವುದಾದರೆ ಬೆಂಗಳೂರು ರೈಲು ನಿಲ್ದಾಣಕ್ಕೆ ಬೇಕಾದಷ್ಟು ರೈಲುಗಳಿವೆ. ಅಲ್ಲಿಂದ ಟ್ಯಾಕ್ಸಿ ಮೂಲಕ ತಿಗಲಾರ್ಪೇಟೆಗೆ ಬರಬಹುದು. ಇನ್ನು ಬಸ್ ಮೂಲಕವೂ ಇಲ್ಲಿಗೆ ಬರಬಹುದು.