2022 ರ ವರಮಹಾಲಕ್ಷ್ಮಿ ಹಬ್ಬದ ಸಲುವಾಗಿ ಭಾರತದ ಅತ್ಯಂತ ಹೆಸರುವಾಸಿಯಾದ ಲಕ್ಷ್ಮಿ ದೇವಾಲಯಗಳಿಗೆ ಭೇಟಿ ಕೊಡಿ
ಲಕ್ಷ್ಮಿ ದೇವಿಯು ಭಾರತದಲ್ಲಿ ಹಿಂದುಗಳಿಗೆ ಅತ್ಯಂತ ಪ್ರಮುಖ ಹಾಗೂ ಪೂಜ್ಯನೀಯ ದೇವಿ ಸ್ವರೂಪವಾಗಿದ್ದು ಈ ದೇವಿಗೆ ಅರ್ಪಿತವಾದ ಹಲವಾರು ದೇವಾಲಯಗಳನ್ನು ಭಾರತದಲ್ಲಿ ಕಾಣಬಹುದಾಗಿದೆ. ಕರ್ನಾಟಕದಲ್ಲಿ ಆಚರಿಸಲಾಗುವ ಪ್ರಮುಖ ಹಬ್ಬಗಳಲ್ಲಿ ವರ ಮಹಾಲಕ್ಷ್ಮಿಯೂ ಒಂದು. ಮಹಾಲಕ್ಷ್ಮಿ ಸಂಪತ್ತು, ಐಶ್ವರ್ಯ ಮತ್ತು ಸಮೃದ್ಧಿಯ ಅಧಿದೇವತೆ. ಅವಳನ್ನು ದೇಶದಾದ್ಯಂತ ವಿವಿಧ ರೂಪಗಳಲ್ಲಿ ಮತ್ತು ಅವತಾರಗಳಲ್ಲಿ ಪೂಜಿಸಲಾಗುತ್ತದೆ.
ವಿಶೇಷವಾಗಿ ಉತ್ತರ ಮತ್ತು ಪಶ್ಚಿಮ ಭಾರತದಲ್ಲಿ, 2022 ರ ಈ ವರ್ಷ, ಲಕ್ಷ್ಮಿ ದೇವಿಯು ಆಗಸ್ಟ್, 05 ರಂದು ರಂದು ಭಕ್ತರ ಮನೆಗಳಿಗೆ ಭೇಟಿ ನೀಡುತ್ತಾಳೆ ಎಂದು ನಂಬಲಾಗಿದೆ. ಅದಕ್ಕಾಗಿ ಜನರು ಮನೆಗಳನ್ನು ಸ್ವಚ್ಛಗೊಳಿಸಿ ಅವಳನ್ನು ಆಹ್ವಾನಿಸಲು ಮನೆಗಳ ಮುಂದೆ ದೀಪಗಳನ್ನು ಬೆಳಗಿಸಲಾಗುತ್ತದೆ. ಆದ್ದರಿಂದ, ನಾವು ಸಹ ಭಾರತದಲ್ಲಿನ ಕೆಲವು ಪ್ರಸಿದ್ಧ ಲಕ್ಷ್ಮಿ ದೇವಾಲಯಗಳ ಸುತ್ತಲೂ ದೇವಾಲಯದ ಪ್ರವಾಸವನ್ನು ಕೈಗೊಳ್ಳೋಣ ಮತ್ತು ಅವರ ಆಶೀರ್ವಾದವನ್ನು ಪಡೆಯೋಣ.
ಲಕ್ಷ್ಮೀನಾರಾಯಣ ದೇವಾಲಯ (ಬಿರ್ಲಾ ಮಂದಿರ) ದೆಹಲಿ
ದೆಹಲಿಯಲ್ಲಿರುವ ಬಿರ್ಲಾ ಮಂದಿರವು ಉದ್ಯಮಿಗಳಾದ ಬಿ.ಆರ್ ಬಿರ್ಲಾ ಮತ್ತು ವಿಜಯ್ ತ್ಯಾಗಿ ಅವರಿಂದ 1939 ರಲ್ಲಿ ನಿರ್ಮಿಸಲ್ಪಟ್ಟಿತು. ಈ ದೇವಾಲಯವು ಲಕ್ಷ್ಮೀ ದೇವಿ ಮತ್ತು ವಿಷ್ಣು ದೇವರಿಗೆ ಅರ್ಪಿತವಾದುದಾಗಿದೆ.
ಈ ದೇವಾಲಯದ ಆಸಕ್ತಿದಾಯಕ ವಿಷಯವೆಂದರೆ ಇದನ್ನು ಮಹಾತ್ಮಾಗಾಂಧಿಯವರು ಉದ್ಘಾಟಿಸಿದರು ಮತ್ತು ಇಂದು ಇದು ದೆಹಲಿಯ ಅತ್ಯಂತ ಪ್ರಮುಖ ಪ್ರವಾಸಿ ಆಕರ್ಷಣೆಗಳಲ್ಲೊಂದಾಗಿದೆ.
ಈ ದೇವಾಲಯವು ಕೃಷ್ಣ ಜನ್ಮಾಷ್ಟಮಿ ಮತ್ತು ದೀಪಾವಳಿ ಸಮಯದಲ್ಲಿ ಹಲವಾರು ಸಂಖ್ಯೆಯಲ್ಲಿ ಭಕ್ತರಿಂದ ಭೇಟಿ ನೀಡಲ್ಪಡುತ್ತದೆ. ದೇವಾಲಯದ ಸಂಕೀರ್ಣದಲ್ಲಿ ಗಣೇಶ, ಶಿವ, ಹನುಮಾನ್, ಬುದ್ದ ದೇವಾಲಯ ಮತ್ತು ದೇವಿ ದುರ್ಗೆ ಈ ದೇವರುಗಳನ್ನು ಪೂಜಿಸುವ ಸಣ್ಣ ಸಣ್ಣ ಗುಡಿಗಳನ್ನು ಒಳಗೊಂಡಿದೆ.
ಶ್ರೀಪುರಮ್ ಗೋಲ್ಡನ್ ಟೆಂಪಲ್, ವೆಲ್ಲೂರು
ಶ್ರೀಪುರಮ್ ಗೋಲ್ಡನ್ ಟೆಂಪಲ್ (ದೇವಾಲಯ) ತಮಿಳುನಾಡಿನ ವೆಲ್ಲೂರಿನಲ್ಲಿ ನೆಲೆಸಿದೆ. ಈ ದೇವಾಲಯವು ಲಕ್ಷ್ಮೀ ದೇವಿಗೆ ಸಮರ್ಪಿತವಾದುದಾಗಿದ್ದು, ಭಾರತದಲ್ಲಿಯ ಒಂದು ವಿಭಿನ್ನ ರೀತಿಯ ದೇವಾಲಯವಾಗಿದೆ.
ಈ ದೇವಾಲಯ ಮತ್ತು ದೇವಾಲಯದ ಗೋಪುರವು ಚಿನ್ನದ ಹಾಳೆಯಿಂದ ಲೇಪಿತವಾಗಿದೆ. ಮಲೈಕೋಡಿ ಎಂಬ ಸಣ್ಣ ಬೆಟ್ಟದಲ್ಲಿರುವ ಈ ದೇವಾಲಯವು ಶ್ರೀ ಚಕ್ರವನ್ನು (ಚಕ್ರ) ಪ್ರತಿನಿಧಿಸುವ ನಕ್ಷತ್ರಾಕಾರದ ಮಾರ್ಗವನ್ನು ಹೊಂದಿರುವ ಈ ದೇವಾಲಯವು ಭಾರತದ ಅತಿ ದೊಡ್ಡ ದೇವಾಲಯಗಳಲ್ಲಿ ಕೂಡ ಒಂದಾಗಿದೆ.
ಮಹಾಲಕ್ಷ್ಮಿ ದೇವಾಲಯ, ಕೊಲ್ಹಾಪುರ
ಮಹಾರಾಷ್ಟ್ರದ ಕೊಲ್ಹಾಪುರವು ಮಹಾಲಕ್ಷ್ಮಿ ದೇವಾಲಯಕ್ಕೆ ಹೆಸರುವಾಸಿಯಾಗಿದೆ. ಈ ಶಕ್ತಿ ಪೀಠವು ಹಿಂದುಗಳ ಒಂದು ಯಾತ್ರಾ ಸ್ಥಳವಾಗಿದೆ. ವಿಷ್ಣು ದೇವರು ಭಗವಾನ್ ವಿಷ್ಣುವು ತನ್ನ ಪತ್ನಿಯಾದ ಲಕ್ಷ್ಮಿಯ ವಾಸಸ್ಥಳವಾದ ಈ ಪ್ರದೇಶವನ್ನು ಬಹಳ ಇಷ್ಟಪಡುತ್ತಾನೆ ಎಂದು ನಂಬಲಾಗಿದೆ ಆದುದರಿಂದ ವಿಷ್ಣು ಮತ್ತು ಲಕ್ಷ್ಮಿ ಇಬ್ಬರೂ ಈ ಪ್ರದೇಶದಲ್ಲಿ ನೆಲೆಸುತ್ತಾರೆ ಮತ್ತು ಆಶೀರ್ವದಿಸುತ್ತಾರೆ ಎಂದು ಜನರು ನಂಬುತ್ತಾರೆ.
ಕರ್ನಾಟಕದ ಚಾಲುಕ್ಯರಿಂದ ನಿರ್ಮಿಸಲ್ಪಟ್ಟ ಕೊಲ್ಹಾಪುರ ದೇವಾಲಯವು ಇಂದು ಭಾರತದ ಅತ್ಯಂತ ಪ್ರಸಿದ್ದ ದೇವಾಲಯಗಳಲ್ಲಿ ಒಂದೆನಿಸಿದೆ.
ಅಷ್ಟಲಕ್ಷ್ಮೀ ದೇವಾಲಯ, ಚೆನ್ನೈ
ದೇವಿ ಲಕ್ಷ್ಮಿಯ ಎಂಟು ಅವತಾರಗಳನ್ನು ಈ ಅಷ್ಟಲಕ್ಶ್ಮೀ ದೇವಾಲಯದಲ್ಲಿ ಪೂಜಿಸಲಾಗುತ್ತದೆ. ಇಲ್ಲಿ ಈ ಎಂಟು ಅವತಾರಗಳಿಗೆ ಅರ್ಪಿತವಾದ ಪ್ರತ್ಯೇಕ ಗುಡಿಗಳನ್ನು ದೇವಾಲಯ ಸಂಕೀರ್ಣದಲ್ಲಿ ಕಾಣಬಹುದಾಗಿದೆ.
ಅಷ್ಟಲಕ್ಷ್ಮಿ ಕೋವಿಲ್ ಚೆನ್ನೈನ ಎಲಿಯಟ್ಸ್ ಬೀಚ್ ಬಳಿ ಇದೆ. ಈ ದೇವಾಲಯದಲ್ಲಿ ಲಕ್ಷ್ಮಿ ಮತ್ತು ಅವಳ ಪತ್ನಿ ವಿಷ್ಣು ಈ ಮುಖ್ಯ ದೇವತೆಗಳಿಂದ ಪ್ರಾರಂಭಿಸಿ, ಸಂಪತ್ತು, ಸಂತಾನ, ಯಶಸ್ಸು, ಸಮೃದ್ಧಿ, ಧೈರ್ಯ, ಆಹಾರ, ಜ್ಞಾನ ಮತ್ತು ಶೌರ್ಯ ದೇವತೆಗಳ ದೇವಾಲಯಗಳನ್ನು ಇಲ್ಲಿ ಕಾಣಬಹುದಾಗಿದೆ.
ಲಕ್ಷ್ಮೀದೇವಿ ದೇವಾಲಯ, ಹಾಸನ
ದೊಡ್ಡಗಡ್ಡವಳ್ಳಿಯಲ್ಲಿರುವ ಲಕ್ಷ್ಮೀ ದೇವಾಲಯವು ಕರ್ನಾಟಕದ ಹೊಯ್ಸಳರ ಕಾಲಕ್ಕೆ ಸೇರಿದ ದೇವಾಲಯವಾಗಿದೆ.
ಈ ಲಕ್ಷ್ಮಿ ದೇವಿ ದೇವಾಲಯವು ಹೊಯ್ಸಳ ಶೈಲಿಯ ಆರಂಭಿಕ ವಾಸ್ತುಶಿಲ್ಪಗಳಲ್ಲಿ ಒಂದಾಗಿದೆ. ಈ ದೇವಾಲಯ ಸಂಕೀರ್ಣವು ಹಲವಾರು ಹಿಂದು ದೇವರು ಮತ್ತು ದೇವತೆಗಳನ್ನು ಹೊಂದಿದ್ದು, ಹಾಸನದಲ್ಲಿರುವ ಈ ದೇವಾಲಯ ಮತ್ತು ಅದರ ಪುರಾತನ ಸಂಕೀರ್ಣವಾದ ವಾಸ್ತುಶಿಲ್ಪಗಳ ಸೌಂದರ್ಯವು ಭೇಟಿ ಕೊಡಲು ಯೋಗ್ಯವಾಗಿದೆ.
ಮಹಾಲಕ್ಷ್ಮಿ ದೇವಾಲಯ, ಮುಂಬೈ
ಮುಂಬೈನ ಮಹಾಲಕ್ಷ್ಮಿ ದೇವಾಲಯವು ದೇವಿ ಲಕ್ಷ್ಮಿಗೆ ಅರ್ಪಿತವಾದುದಾಗಿದ್ದು ಇಲ್ಲಿನ ಅತ್ಯಂತ ಪ್ರಸಿದ್ದ ದೇವಾಲಯಗಳಲ್ಲೊಂದಾಗಿದೆ. ಈ ದೇವಾಲಯವು ಹಾರ್ನ್ಬಿ ವೆಲ್ಲಾರ್ಡ್ (ಮುಂಬೈನ ಎಲ್ಲಾ ದ್ವೀಪಗಳನ್ನು ಸಂಪರ್ಕಿಸುವ ಸೇತುವೆ) ಕಟ್ಟಡಕ್ಕೆ ಸಂಬಂಧಿಸಿದ ಆಸಕ್ತಿದಾಯಕ ಕಥೆಯನ್ನು ಹೊಂದಿದೆ. ಹಾರ್ನ್ಬಿ ವೆಲ್ಲಾರ್ಡ್ ಗೋಡೆಯು ಎರಡು ಬಾರಿ ಕುಸಿದ ನಂತರ, ಇದನ್ನು ನಿರ್ಮಿಸುತ್ತಿದ್ದ ಎಂಜಿನಿಯರ್ ಲಕ್ಷ್ಮಿ ದೇವಿಯನ್ನು ಕನಸಿನಲ್ಲಿ ಕಂಡರು.
ಆಶ್ಚರ್ಯಕರ ವಿಷಯವೆಂದರೆ, ಆ ಪ್ರದೇಶದಲ್ಲಿ ಅವರು ಹುಡುಕಿದಾಗ ಅಲ್ಲಿ ದೇವಿಯ ಪ್ರತಿಮೆ ಕಂಡುಬಂತು ಎಂದು ಹೇಳಲಾಗುತ್ತದೆ. ಆದ್ದರಿಂದ, ಅಲ್ಲಿ ಈ ದೇವಿಯ ಪ್ರತಿಮೆಯನ್ನು ಸ್ಥಾಪಿಸಿ ದೇವಾಲಯವನ್ನು ನಿರ್ಮಿಸಲಾಯಿತು. ಆ ನಂತರವೇ ಹಾರ್ನ್ಬಿ ವೆಲ್ಲಾರ್ಡ್ ಯೋಜನೆ ಪೂರ್ಣಗೊಂಡಿತು ಎಂದು ಹೇಳಲಾಗುತ್ತದೆ.