Search
  • Follow NativePlanet
Share
» »ಮಾನ್ಸೂನ್ ಮಳೆಗಾಲದ ಸಮಯದಲ್ಲಿ ಸಾವಣದುರ್ಗಬೆಟ್ಟಕ್ಕೆ ಭೇಟಿ ಕೊಟ್ಟು ಅಲ್ಲಿ ಮಾಡಬಹುದಾದ ಚಟುವಟಿಕೆಗಳು

ಮಾನ್ಸೂನ್ ಮಳೆಗಾಲದ ಸಮಯದಲ್ಲಿ ಸಾವಣದುರ್ಗಬೆಟ್ಟಕ್ಕೆ ಭೇಟಿ ಕೊಟ್ಟು ಅಲ್ಲಿ ಮಾಡಬಹುದಾದ ಚಟುವಟಿಕೆಗಳು

ಕರ್ನಾಟಕದ ಡೆಕ್ಕನ್ ಪ್ರಸ್ಥಭೂಮಿಯಲ್ಲಿ ನೆಲೆಸಿರುವ ಸಾವಣದುರ್ಗವು ಕರಿಗುಡ್ಡ ಮತ್ತು ಬಿಳಿಗುಡ್ಡವೆಂಬ ಎರಡು ಗುಡ್ಡಗಳ ಸಮ್ಮಿಲನವಾಗಿದೆ. ಮತ್ತು ಗ್ರಾನೈಟ್ ಬಿಳಿ ಬಂಡೆಗಳಿಂದ ರೂಪುಗೊಂಡಿದ್ದು ಡೆಸಿಡಿಯಸ್ ಅರಣ್ಯಗಳಿಂದ ಆವೃತವಾಗಿದೆ.ಏಷ್ಯಾದಲ್ಲಿಯೇ ಅತಿ ದೊಡ್ಡ ಏಕಶಿಲಾ ಬಂಡೆ ಎಂದು ಪ್ರಸಿದ್ಧವಾಗಿರುವ ಸಾವಣದುರ್ಗ ಬೆಟ್ಟವು 4200 ಅಡಿ ಎತ್ತರದ ಕಲ್ಲು, ಕೆಸರು ಮತ್ತು ಅರಣ್ಯದ ಹಾದಿಗಳ ರೋಮಾಂಚಕಾರಿ ಸಂಯೋಜನೆಯಾಗಿದೆ. ಈ ಸ್ಥಳವು ಬೆಂಗಳೂರು ನಗರ ಕೇಂದ್ರ ಭಾಗದಿಂದ 60 ಕಿಮೀ ದೂರದಲ್ಲಿದೆ.

ಇದನ್ನು ಸಾವಿನದುರ್ಗ ಎಂದೂ ಕನ್ನಡದಲ್ಲಿ ಕರೆಯಲಾಗುತ್ತದೆ ( ಸಾವಿನ ಕೋಟೆ) . ಇಲ್ಲಿ ಚಾರಣವನ್ನು 80 ರ ದಶಕದ ಆರಂಭದಲ್ಲಿ ಅಸುರಕ್ಷಿತ ರಕ್ಷಣಾ ರಚನೆಗಳಿಂದಾಗಿ ಅಪಾಯಕಾರಿ ಎಂದು ಎಂದು ಭಾವಿಸಿ ನಿಷೇಧಿಸಲಾಗಿತ್ತು . ತದನಂತರ ಮಾನವ ನಿರ್ಮಿತ ಸುರಕ್ಷಿತ ಪಾದಯಾತ್ರೆಯ ಹಾದಿಗಳಿಂದಾಗಿ, ಸಾವಣದುರ್ಗವು ಇತ್ತೀಚಿನ ದಿನಗಳಲ್ಲಿ ಅಪಾಯ ರಹಿತವಾಗಿದ್ದು ಸಾಹಸಮಯ ಚಾರಣ ಮಾಡುವ ಸ್ಥಳವೆನಿಸಿದೆ. ಆರಂಭಿಕರು ಮತ್ತು ವೃತ್ತಿಪರ ಪರ್ವತಾರೋಹಿಗಳಿಗೆ ಈ ಸ್ಥಳವು ಸ್ವರ್ಗವಾಗಿದೆ. ಅಲ್ಲದೆ, ಮಾನ್ಸೂನ್ ಸಮಯದಲ್ಲಿ ಇಲ್ಲಿಯ ಶ್ರೀಮಂತವಾದ ಹಸಿರು ದೃಶ್ಯಾವಳಿಗಳು ಮತ್ತು ಮಾಗಡಿಯಲ್ಲಿಯ ಹಸಿರಿನ ಹಿನ್ನೆಲೆಯ ಮಧ್ಯೆ ಹಳದಿ ಬುಲ್ಬುಲ್‌ಗಳ ನೋಟವನ್ನು ಸುಲಭವಾಗಿ ನೋಡಬಹುದಾಗಿದೆ.

ಮಾನ್ಸೂನ್ ಹವಾಮಾನದ ಜೊತೆಗೆ ಏರು ತಗ್ಗುಗಳಿರುವ ಕಡಿದಾದ ಭೂಪ್ರದೇಶಗಳನ್ನು ನಿರಂತರವಾಗಿ ಹೊಂದಿರುವ ಈ ಬೆಟ್ಟಗಳ ಹಾದಿಯು ಕಲ್ಲಿನ ಹಾದಿಯು ಸಾಹಸಪ್ರೀಯರಿಗೆ ಅಚ್ಚುಮೆಚ್ಚಿನದಾಗಿದ್ದು ಇಲ್ಲಿ ಚಾರಣವು ಸುಮಾರು 4ರಿಂದ 6 ಗಂಟೆಗಳ ಕಾಲ ಗಮ್ಯಸ್ಥಾನವನ್ನು ತಲುಪಲು ತೆಗೆದುಕೊಳ್ಳುತ್ತದೆ. ಇಲ್ಲಿ ಬೆಟ್ಟ ಹತ್ತುವ ಸವಾಲುಗಳನ್ನು ಮತ್ತು ಮೋಜಿನೊಂದಿಗೆ ಮಾಡಿ ಅದೇ ತರ ಇಳಿಜಾರಾದ ಏಕಶಿಲೆಯ ಬಂಡೆಯನ್ನು ಸ್ಕೇಲಿಂಗ್ ಮಾಡುವುದು ಖಂಡಿತವಾಗಿಯೂ ಅಡ್ರಿನಾಲಿನ್ ಮಾಡುವಂತೆ ಪ್ರಚೋದಿಸುತ್ತದೆ! ಆರೋಹಣದ ಜೊತೆಗೆ, ಸಾವಣದುರ್ಗವು ಮಂಚಿನಬೆಲೆ ಅಣೆಕಟ್ಟಿನ ಅದ್ಭುತ ದೃಶ್ಯವನ್ನು ನೀಡುತ್ತದೆ. ಮತ್ತು ಅರ್ಕಾವತಿ ನದಿಯು ತಿಪ್ಪಗೊಂಡನಹಳ್ಳಿ ಸರಬರಾಜಿಗೆ ಹರಿಯುವ ಪೂರ್ಣ, ಭವ್ಯವಾದ ನೋಟವನ್ನು ನೀಡುತ್ತದೆ.

ಸಾವಣದುರ್ಗವು ಅದರ ತಪ್ಪಲಿನಲ್ಲಿ ಎರಡು ದೇವಾಲಯಗಳನ್ನು ಹೊಂದಿದೆ. ಈ ದೇವಾಲಯಗಳು ಕ್ರಿಶ 1340 ನೇ ಶತಮಾನದ ಇತಿಹಾಸವನ್ನು ಒಳಗೊಂಡಿದ್ದು ಹೊಯ್ಸಳ ಆಡಳಿತಗಾರರಿಂದ ನಿರ್ಮಿಸಲ್ಪಟ್ಟಿತು ಎಂದು ಹೇಳಲಾಗುತ್ತದೆ. ಒಂದು ಸಾವಂಡಿ ವೀರಭದ್ರಸ್ವಾಮಿ ದೇವಸ್ಥಾನ ಮತ್ತು ಇನ್ನೊಂದು ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ದೇವಸ್ಥಾನ. ಮೇಲಕ್ಕೆ ಹೋಗುವ ಮಾರ್ಗವನ್ನು ನಾಲ್ಕು ವಿಭಾಗಗಳಾಗಿ ವಿಂಗಡಿಸಲಾಗಿದ್ದು, ಹೆಚ್ಚಿನ ಟ್ರೆಕ್ಕಿಂಗ್ ಮಾರ್ಗವು ಏಕಶಿಲೆಯ ದಕ್ಷಿಣ ಭಾಗದಲ್ಲಿದ್ದು, 700-950 ಅಡಿಗಳಷ್ಟು ತಾಂತ್ರಿಕ ಆರೋಹಣಗಳನ್ನು ಹೊಂದಿದೆ. ನರಸಿಂಹಸ್ವಾಮಿ ದೇವಸ್ಥಾನದ ಹಿಂದೆ ಮೇಲ್ಭಾಗದ ಮಾರ್ಗವು ಪ್ರಾರಂಭವಾಗುತ್ತದೆ. 200 ರಿಂದ 300 ಮೀ ವರೆಗೆ ಆಸ್ಫಾಲ್ಟ್ ಸ್ಟ್ರೋಲ್ ಇದ್ದು ಇದು ಮಾರ್ಗವನ್ನು ಅನುಸರಿಸಲು ಪ್ರೇರೇಪಿಸುತ್ತದೆ.

ಇಲ್ಲಿಯ ಮಾರ್ಗವು ಸರಳವಾಗಿದ್ದು ಭಕ್ತರು ಮತ್ತು ಚಾರಣಿಗರು ಇದರ ಕಡೆಗೆ ಹೋಗುವುದನ್ನು ಕಾಣಬಹುದಾಗಿದೆ. ಕೆಳಭಾಗಗಳಿಗೆ ಹೋಗುವಂತಹ ಮಾರ್ಗಗಳು ಕೆಲವು ದಿಕ್ಕಿನಲ್ಲಿ ಕೆಸರಿನಿಂದ ತುಂಬಿರುತ್ತದೆ. ಈ ಪ್ರದೇಶವು ಇಳಿಜಾರಿನ ಬುಡವನ್ನು ತಲುಪುವವರೆಗೂ ಕಷ್ಟಕರವಾಗಿರುವುದಿಲ್ಲ. ಕಲ್ಲಿನ ಪ್ರದೇಶ ಮತ್ತು ಬೆಟ್ಟಾದ ತಪ್ಪಲಿನ ಭಾಗವು ಮೊದಲ ಆರೋಹಣದ ಮುಕ್ತಾಯವನ್ನು ಸೂಚಿಸುತ್ತದೆ. ಇಳಿಜಾರಿನ ತಳಭಾಗವನ್ನು ತಲುಪಲು ನಿಮಗೆ ಸುಮಾರು 10 ರಿಂದ 15 ನಿಮಿಷಗಳು ಬೇಕಾಗುತ್ತದೆ.

ಸಾವಣದುರ್ಗವು ಕರಿಗುಡ್ಡ

ಸಾವಣದುರ್ಗವು ಕರಿಗುಡ್ಡ

ಕರ್ನಾಟಕದ ಡೆಕ್ಕನ್ ಪ್ರಸ್ಥಭೂಮಿಯಲ್ಲಿ ನೆಲೆಸಿರುವ ಸಾವಣದುರ್ಗವು ಕರಿಗುಡ್ಡ ಮತ್ತು ಬಿಳಿಗುಡ್ಡವೆಂಬ ಎರಡು ಗುಡ್ಡಗಳ ಸಮ್ಮಿಲನವಾಗಿದೆ. ಮತ್ತು ಗ್ರಾನೈಟ್ ಬಿಳಿ ಬಂಡೆಗಳಿಂದ ರೂಪುಗೊಂಡಿದ್ದು ಡೆಸಿಡಿಯಸ್ ಅರಣ್ಯಗಳಿಂದ ಆವೃತವಾಗಿದೆ.ಏಷ್ಯಾದಲ್ಲಿಯೇ ಅತಿ ದೊಡ್ಡ ಏಕಶಿಲಾ ಬಂಡೆ ಎಂದು ಪ್ರಸಿದ್ಧವಾಗಿರುವ ಸಾವಣದುರ್ಗ ಬೆಟ್ಟವು 4200 ಅಡಿ ಎತ್ತರದ ಕಲ್ಲು, ಕೆಸರು ಮತ್ತು ಅರಣ್ಯದ ಹಾದಿಗಳ ರೋಮಾಂಚಕಾರಿ ಸಂಯೋಜನೆಯಾಗಿದೆ. ಈ ಸ್ಥಳವು ಬೆಂಗಳೂರು ನಗರ ಕೇಂದ್ರ ಭಾಗದಿಂದ 60 ಕಿಮೀ ದೂರದಲ್ಲಿದೆ.

ಇದನ್ನು ಸಾವಿನದುರ್ಗ ಎಂದೂ ಕನ್ನಡದಲ್ಲಿ ಕರೆಯಲಾಗುತ್ತದೆ ( ಸಾವಿನ ಕೋಟೆ) . ಇಲ್ಲಿ ಚಾರಣವನ್ನು 80 ರ ದಶಕದ ಆರಂಭದಲ್ಲಿ ಅಸುರಕ್ಷಿತ ರಕ್ಷಣಾ ರಚನೆಗಳಿಂದಾಗಿ ಅಪಾಯಕಾರಿ ಎಂದು ಎಂದು ಭಾವಿಸಿ ನಿಷೇಧಿಸಲಾಗಿತ್ತು . ತದನಂತರ ಮಾನವ ನಿರ್ಮಿತ ಸುರಕ್ಷಿತ ಪಾದಯಾತ್ರೆಯ ಹಾದಿಗಳಿಂದಾಗಿ, ಸಾವಣದುರ್ಗವು ಇತ್ತೀಚಿನ ದಿನಗಳಲ್ಲಿ ಅಪಾಯ ರಹಿತವಾಗಿದ್ದು ಸಾಹಸಮಯ ಚಾರಣ ಮಾಡುವ ಸ್ಥಳವೆನಿಸಿದೆ. ಆರಂಭಿಕರು ಮತ್ತು ವೃತ್ತಿಪರ ಪರ್ವತಾರೋಹಿಗಳಿಗೆ ಈ ಸ್ಥಳವು ಸ್ವರ್ಗವಾಗಿದೆ. ಅಲ್ಲದೆ, ಮಾನ್ಸೂನ್ ಸಮಯದಲ್ಲಿ ಇಲ್ಲಿಯ ಶ್ರೀಮಂತವಾದ ಹಸಿರು ದೃಶ್ಯಾವಳಿಗಳು ಮತ್ತು ಮಾಗಡಿಯಲ್ಲಿಯ ಹಸಿರಿನ ಹಿನ್ನೆಲೆಯ ಮಧ್ಯೆ ಹಳದಿ ಬುಲ್ಬುಲ್‌ಗಳ ನೋಟವನ್ನು ಸುಲಭವಾಗಿ ನೋಡಬಹುದಾಗಿದೆ.

ಮಂಚಿನಬೆಲೆ ಜಲಾಶಯಗಳು

ಮಂಚಿನಬೆಲೆ ಜಲಾಶಯಗಳು

ನೀವು ಇಳಿಜಾರಿನ ಮೇಲೆ ಹೆಜ್ಜೆ ಹಾಕುತ್ತಾ ನಂತರ ವಿಭಾಗವು ಪ್ರಾರಂಭವಾಗುತ್ತದೆ ಇದು ಅತ್ಯುನ್ನತ ಬಿಂದುವಿನ ಕಡೆಗೆ ಚಲಿಸಲು ಪ್ರಾರಂಭಿಸುತ್ತದೆ. ಸೂರ್ಯನು ಒಮ್ಮೆ ಮೇಲಕ್ಕೆ ಬಂದಾಗ, ಕಲ್ಲು ಬೆಚ್ಚಗಾಗುತ್ತದೆ ಮತ್ತು ನಿರ್ದಿಷ್ಟವಾಗಿ ಬೇಸಿಗೆಯಲ್ಲಿ ತಿಂಗಳುಗಳಾದ್ಯಂತ ತಾಪಮಾನವು ಹೆಚ್ಚಿರುತ್ತದೆ. ನೀವು ಬಂಡೆಯ ಮೇಲೆ ಏರಲು ಪ್ರಾರಂಭಿಸಿದ ನಂತರ, ಮಂಚಿನಬೆಲೆ ಜಲಾಶಯದ ಗಮನಾರ್ಹವಾದ ಹಸಿರು ನೋಟವನ್ನು ನೋಡುವ ಅವಕಾಶವನ್ನು ನೀವು ಪಡೆಯುತ್ತೀರಿ. ಈ ಪ್ರದೇಶವು ಸ್ವಲ್ಪ ಕಡಿದಾಗಿದೆ ಹಾಗೂ 400-500 ಮೀ ಎತ್ತರದಲ್ಲಿದ್ದು, 20-25 ನಿಮಿಷಗಳನ್ನು ಹತ್ತಲು ತೆಗೆದುಕೊಳ್ಳುತ್ತದೆ. ಇಲ್ಲಿಯ ಮಾರ್ಗವು ಸರಳವಾಗಿಲ್ಲ, ಆದ್ದರಿಂದ ನೀವು ಸರಿಯಾದ ಹಾದಿಯಲ್ಲಿ ಸಾಗುತ್ತಿರುವಿರಿ ಎಂದು ಖಚಿತಪಡಿಸಿಕೊಳ್ಳಲು ಬಂಡೆಗಳು ಮತ್ತು ಕಲ್ಲುಗಳ ಮೇಲಿನ ಗುರುತುಗಳನ್ನು ನೋಡಿಕೊಳ್ಳಿ. ನೀವು ಹಳೆಯ ಕೋಟೆ ರಚನೆಯನ್ನು ತಲುಪಿದಲ್ಲಿ ನೀವು ನಿಮ್ಮ ಟ್ರೆಕ್‌ನ ಎರಡನೇ ಭಾಗವನ್ನು ಪೂರ್ಣಗೊಳಿಸಿದಂತಾಗುವುದು.

ಮಂಚಿನ್ ಬೆಲೆ ಮತ್ತು ತಿಪ್ಪಗೊಂಡನ ಹಳ್ಳಿ

ಮಂಚಿನ್ ಬೆಲೆ ಮತ್ತು ತಿಪ್ಪಗೊಂಡನ ಹಳ್ಳಿ

ಇಲ್ಲಿಂದ ಸಾಗುವ ಮತ್ತೊಂದು ಕೋಟೆಗೆ ಸಾಗುವ ದಾರಿಯು ಮಹತ್ತರವಾದ ಕಡಿದಾದ ತಿರುವುಗಳಿಂದ ಪ್ರಾರಂಭವಾಗಿ ಸುಮಾರು ಒಂದು ಗಂಟೆಯಲ್ಲಿ ಕೋಟೆಯ ಗೋಡೆಯನ್ನು ತಲುಪುತ್ತದೆ. ಇಲ್ಲಿನ ಬಂಡೆಗಳಲ್ಲಿ ಕೆಲವು ಕೆತ್ತನೆಗಳಿದ್ದು, ಇವುಗಳನ್ನು ಇಳಿಜಾರಿನ ಮೇಲೆ ಏರಲು ಬಳಸಲಾಗುತ್ತದೆ. ಕಲ್ಲಿನಲ್ಲಿ ಕೆತ್ತಲ್ಪಟ್ಟಿರುವ ಈ ಸ್ಥಳಗಳನ್ನು ದಳವಾಯಿ ದೇವರಾಜರ ಕಾಲ ಅಥವ ಅದಕ್ಕೂ ಹಿಂದಿನಕಾಲದಲ್ಲಿಯೋ ಕತ್ತರಿಸಲ್ಪಟ್ಟಿರಬಹುದೆಂದು ಊಹಿಸಲಾಗಿದೆ. ಈ ಪ್ರದೇಶದಲ್ಲಿ, ಬೆಟ್ಟದ ಟೊಳ್ಳಾದ ರಚನೆಗಳಲ್ಲಿ ಮಳೆನೀರು ಸಂಗ್ರಹವಾಗುವುದನ್ನು ನೋಡಬಹುದಾಗಿದೆ. ಕೋಟೆಯ ನಿವಾಸಿಗಳು ಮಳೆನೀರನ್ನು ಸಂಗ್ರಹಿಸಲು ಬಳಸುತ್ತಿದ್ದ ಒಂದೆರಡು ತೊಟ್ಟಿಗಳಂತಹ ರಚನೆಗಳನ್ನೂ ಸಹ ಇಲ್ಲಿ ನೋಡಬಹುದಾಗಿದೆ.

ಒಂದೆರಡು ಕ್ಷಣಗಳ ನಂತರ ನೀವು ಕೋಟೆಯ ಎರಡನೇ ಗೋಡೆಯ ಕಡೆಗೆ ಬಂದ ನಂತರ ನಿಮಗೆ ಕಲ್ಲಿನ ಹಾದಿಯಿಂದ ವಿರಾಮವನ್ನು ಪಡೆಯುವಿರಿ. ಇಲ್ಲಿಯ ಮಾರ್ಗಗಳು ಪ್ರಸ್ತುತ ಕಲ್ಲಿನ ಗುಹೆಯ ರಚನೆಯಾಗಿ ಬದಲಾಗುತ್ತದೆ ಮತ್ತು ನೀವು ಮೇಲ್ಬಾಗವನ್ನು ತಲುಪುವವರೆಗೆ ಮತ್ತೆ ಇಳಿಜಾರು ಹಾದಿಯಾಗಿ ಬದಲಾಗುತ್ತಾ ಹೋಗುತ್ತದೆ. ಈ ಭಾಗವು ಸ್ವಲ್ಪಮಟ್ಟಿಗೆ ಕಷ್ಟಕರವಾಗಿರುತ್ತದೆ ಏಕೆಂದರೆ ಇಲ್ಲಿ ಮಾರ್ಗವು ಅಸಮತೋಲನವಾಗಿದೆ, ಮತ್ತು ನೀವು ದಾರಿ ತಪ್ಪುವ ಸಾದ್ಯತೆಗಳು ಇರುತ್ತದೆ ನೀವು ಅದೃಷ್ಟವಂತರಾಗಿದ್ದಲ್ಲಿ ಸರಿಯಾದ ದಾರಿಯನ್ನು ಕಂಡುಕೊಳ್ಳಬಹುದಾಗಿದೆ. ಹಾಗು ಪ್ರಯಾಣಮಾಡಬಹುದಾಗಿದೆ. ಇಲ್ಲಿ ಹೆಚ್ಚುವರಿಯಾಗಿ, ಬಂಡೆಗಳ ಮೇಲೆ ನೀವು ಜಿಗಿದು ಚಲಿಸಬೇಕಾದ ಭಾಗಗಳಿವೆ.

ಒಮ್ಮೆ ನೀವು ಈ ಎಲ್ಲಾ ಕಷ್ಟಕರವಾದ ಬಂಡೆಗಳನ್ನು ದಾಟಿದ ತಕ್ಷಣ ತುತ್ತ ತುದಿಯನ್ನು ತಲುಪುವಿರಿ ಮತ್ತೆ ಸ್ವಲ್ಪ ದೂರ ನಡೆದಲ್ಲಿ ನಂದಿ ದೇವಾಲಯವನ್ನು ತಲುಪುವಿರಿ ಮತ್ತು ಅಲ್ಲಿಯ ಅಸಾಧಾರಣ ದೃಶ್ಯದಲ್ಲಿ ಮೈ ಮರೆಯುವಿರಿ. ಇಲ್ಲಿನ ಅಭಯಾರಣ್ಯಕ್ಕೆ ತಲುಪಲು ನಿಮಗೆ ಗರಿಷ್ಟ 10-15 ನಿಮಿಷಗಳು ಬೇಕಾಗುತ್ತದೆ.

ಮೇಲಿನಿಂದ ನೋಟವು ಅದ್ಭುತವಾಗಿರುವುದರಿಂದ ವಿಹಾರವು ಅದ್ಭುತವಾಗಿದ್ದು ನಿಮಗೆ ಬೇಸರವೆನಿಸಲಾರದು . ರಾಮನಗರ ಮತ್ತು ಮಾಗಡಿ ಪಟ್ಟಣಗಳಲ್ಲಿಯ ಸಮೃದ್ದವಾದ ಹಸಿರು ಹಿನ್ನೆಲೆಯಿರುವ ಮರಗಳು ಮತ್ತು ಮಂಚಿಂಬೆಲೆ ಮತ್ತು ತಿಪ್ಪಗೊಂಡನಹಳ್ಳಿಯ ಕೆಲವು ಭಾಗಗಳನ್ನು ಮತ್ತು ಆಕಾಶದೆತ್ತರದ ನೋಟದಲ್ಲಿ ನೀವು ನೋಡಬಹುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X