ಆತ್ಮಗಳು ಪೂಜಿಸುವ ದೇವಾಲಯ ಎಂದಾಕ್ಷ ಯಾರಿಗೆ ಆಗಲಿ ಭಯ ಮೂಡುವುದು ಸಹಜವೇ ಸರಿ. ನೀವು ಎಲ್ಲೂ ಕೇಳಿರದ ಇಂಥಹ ದೇವಾಲಯವಿರುವುದು ಮಧ್ಯ ಪ್ರದೇಶ ರಾಜ್ಯದಲ್ಲಿ. ಅಲ್ಲೊಂದು ನಂಬಿಕೆ ಇದೆ. ಅದೆನೆಂದರೆ ಯಾವುದೇ ಕಾರಣಕ್ಕೂ ರಾತ್ರಿಯ ಸಮಯದಲ್ಲಿ ದೇವಾಲಯದ ಕಡೆ ಹೋಗಬಾರದು ಎಂದು. ಪ್ರೇತಾತ್ಮಗಳು ಇರುವ ಸ್ಥಳಗಳಲ್ಲಿ ಸಾಮಾನ್ಯವಾಗಿ ಜನರು ತೆರಳಲು ಭಯ ಬೀಳುತ್ತಾರೆ. ಆದರೆ ನಮ್ಮನ್ನು ರಕ್ಷಿಸುವ ಆ ತಾಯಿಯ ದೇವಾಲಯದ ಬಳಿ ಹೋಗಲು ಕೂಡ ಹೆಸರುತ್ತಾರೆ ಎಂದರೆ ಅದಕ್ಕೆ ಏನೂ ಮುಖ್ಯವಾದ ಕಾರಣವಿರಲೇಬೇಕು ಅಲ್ಲವೇ?
ಮಧ್ಯ ಪ್ರದೇಶದ ಪ್ರವಾಸ ಒಂದು ಮನೋಹರವಾದ ಪ್ರದೇಶವಾಗಿದೆ. ಮಧ್ಯ ಪ್ರದೇಶ ರಾಜ್ಯವನ್ನು "ಭಾರತ ದೇಶದ ಹೃದಯ ಭಾಗ" ಎಂದೇ ಬಣ್ಣಿಸಲಾಗುತ್ತದೆ. ಮಧ್ಯ ಪ್ರದೇಶವು ಭಾರತ ತನ್ನ ಸಂಸ್ಕøತಿ, ಭೌಗೋಳಿಕ ಸ್ಥಾನ, ಪ್ರಾಕೃತಿ ಸೌಂದರ್ಯ, ಸಾಂಸ್ಕøತಿ ಪರಂಪರೆ ಹೊಂದಿದ್ದು, ದೇಶದಲ್ಲಿಯೇ ಅತ್ಯುತ್ತಮವಾದ ಪ್ರವಾಸಿ ಕೇಂದ್ರವಾಗಿ ಹೆಸರುವಾಸಿಯಾಗಿದೆ. ರಾಜಧಾನಿಯಾದ ಭೋಪಾಲ್ "ನದಿಗಳ ನಗರ" ಎಂದು ಸುಪ್ರಸಿದ್ಧವಾಗಿದೆ.
ಇಲ್ಲೊಂದು ದೇವಾಲಯವಿದೆ. ಆ ದೇವಾಲಯ ನೀವು ಊಹಿಸಿಕೊಂಡಿದ್ದಕ್ಕಿಂತ ಅತ್ಯಂತ ವಿಭಿನ್ನವಾದುದು. ಯಾರಾದರೂ ದೇವಾಲಯವನ್ನು ಏಕೆ ದರ್ಶನ ಮಾಡಲು ತೆರಳುತ್ತಾರೆ ಹೇಳಿ. ಉತ್ತಮವಾದ ಆರೋಗ್ಯ, ಜೀವನವನ್ನು ಪಡೆಯಲು ಆ ದೇವತೆಗಳ ಆಶೀರ್ವಾದ ಬೇಕು ಎಂಬುದಕ್ಕೆ ಅಲ್ಲವೇ?
ಆದರೆ ಈ ದೇವಾಲಯದ ಬಗ್ಗೆ ನೀವು ಕೇಳಿದ್ದೀರಾ? ಇಲ್ಲಿ ಆ ದೇವಾಲಯದಲ್ಲಿ ಕಾಲ ಕಳೆದರೆ ಮರಣ ಸಂಭವಿಸುವ ಎಲ್ಲಾ ಅವಕಾಶಗಳಿವೆ. ಈ ಲೇಖನದಲ್ಲಿ ಹೇಳುವ ದೇವಾಲಯದ ಹೆಸರು ಮೈಹಾರ್ ದೇವಿಯ ಮಂದಿರವಾಗಿದೆ. ಇಲ್ಲಿ ರಾತ್ರಿ ಒಂದು ದಿನ ಕಳೆದರೆ ಪ್ರಾಣವನ್ನು ಕಳೆದುಕೊಳ್ಳಬೇಕು ಎಂದು ನಂಬುತ್ತಾರೆ.
1.ಆತ್ಮಗಳು ಪೂಜಿಸುವ ದೇವಾಲಯವಿದು...
ವಿಂಧ್ಯಾ, ಸಾತ್ಪೂರ ಪರ್ವತಗಳು, ಹಚ್ಚ ಹಸಿರಿನ ಅರಣ್ಯಗಳು ಹಲವಾರು ಜೀವಿಗಳಿಗೆ ನಿವಾಸವಾಗಿದೆ. ವನ್ಯ ಪ್ರಾಣಿ ಅಭಯಾರಣ್ಯಗಳು, ವನ್ಯಪ್ರಾಣಿ ಜಾತಿಯ ಪಾರ್ಕುಗಳು ಕೂಡ ಮಧ್ಯ ಪ್ರದೇಶದ ಪ್ರವಾಸದಲ್ಲಿನ ಪ್ರಸಿದ್ಧವಾದ ಆಕರ್ಷಣೆಯಾಗಿದೆ. ಇಂತಹ ಶ್ರೀಮಂತವಾದ ಮಧ್ಯ ಪ್ರದೇಶದಲ್ಲಿ ಈ ದೇವಾಲಯವಿದೆ. ಈ ಮಂದಿರವು ಮಧ್ಯ ಪ್ರದೇಶದಲ್ಲಿನ ಭೋಪಾಲ್ ಸಮೀಪದಲ್ಲಿನ ಸತ್ನಾಜಿಲ್ಲೆಯಲ್ಲಿನ ಮೈಹಾರ್ನಲ್ಲಿದೆ. ಈ ದೇವಾಲಯದಲ್ಲಿ ಶಾರದಾ ಅಮ್ಮನವರು ನೆಲೆಸಿದ್ದಾರೆ. ಮೈಹಾರ್ ಎಂದರೆ " ಮಾ ಕಾ ಹಾರ್" ಎಂದು ಅರ್ಥವಾಗಿದೆ.
2.ಆತ್ಮಗಳು ಪೂಜಿಸುವ ದೇವಾಲಯವಿದು...
ಈ ದೇವಾಲಯದಲ್ಲಿ ತ್ರಿಕೂಟ ಎಂಬ ಪರ್ವತದ ಮಧ್ಯದಲ್ಲಿದೆ. ಪ್ರತಿ ವರ್ಷ ಇಲ್ಲಿ ಶಾರದಾದೇವಿಯನ್ನು ದರ್ಶನ ಮಾಡುವುದಕ್ಕೆ ಹಲವಾರು ಮಂದಿ ಭಕ್ತರು ಇಲ್ಲಿಗೆ ಭೇಟಿ ನೀಡುತ್ತಾರೆ. ಅಲ್ಲಿ ಅಂತಹ ಭಯಂಕರವಾದ ಚಳಿ ಇದ್ದರೂ ಕೂಡ ಅಲ್ಲಿಗೆ ಹಲವಾರು ಭಕ್ತರು ಭೇಟಿ ನೀಡುತ್ತಾರೆ. ಈ ದೇವಾಯದ ಮಹಿಮೆಯ ಬಗ್ಗೆ ಆನೇಕ ಕಥೆಗಳು ಪ್ರಚಾರದಲ್ಲಿದೆ. ಈ ದೇವಾಲಯದಲ್ಲಿ ತ್ರಿಕೂಟ ಎಂಬ ಪರ್ವತದ ಮಧ್ಯದಲ್ಲಿದೆ. ಪ್ರತಿ ವರ್ಷ ಇಲ್ಲಿ ಶಾರದಾದೇವಿಯನ್ನು ದರ್ಶನ ಮಾಡುವುದಕ್ಕೆ ಹಲವಾರು ಮಂದಿ ಭಕ್ತರು ಇಲ್ಲಿಗೆ ಭೇಟಿ ನೀಡುತ್ತಾರೆ. ಅಲ್ಲಿ ಅಂತಹ ಭಯಂಕರವಾದ ಚಳಿ ಇದ್ದರೂ ಕೂಡ ಅಲ್ಲಿಗೆ ಹಲವಾರು ಭಕ್ತರು ಭೇಟಿ ನೀಡುತ್ತಾರೆ. ಈ ದೇವಾಯದ ಮಹಿಮೆಯ ಬಗ್ಗೆ ಆನೇಕ ಕಥೆಗಳು ಪ್ರಚಾರದಲ್ಲಿದೆ.
3.ಆತ್ಮಗಳು ಪೂಜಿಸುವ ದೇವಾಲಯವಿದು...
ಇಂದಿಗೂ ಶಾರದಾ ಮಾತೆಗೆ ಅತ್ಯಂತ ದೊಡ್ಡದಾದ ಭಕ್ತನಾದ ಅಲಹ್, ಉದಂ ಎಂಬ ಇಬ್ಬರು ಸಹೋದರ ಆತ್ಮಗಳು ಅಲ್ಲಿ ತಿರುಗುತ್ತಾ ಇರುತ್ತವೆ ಎಂತೆ. ಈ 2 ಆತ್ಮಗಳು ಅಂದಿಗೆ ಪೃಥ್ವಿರಾಜ ಚೌಹಾನ್ನ ಜೊತೆ ವೀರತ್ವದಿಂದ ಹೋರಾಡಿದ್ದರು. ಅದೇ ಅಲ್ಲದೇ ಇವರಿಬ್ಬರು ಮೊದಲ ಬಾರಿಗೆ ಮೈಹೋರ್ ದೇವಿ ದೇವಾಲಯವನ್ನು ಗುಡ್ಡದ ಮೇಲೆ ಕಂಡುಕೊಂಡರು.
4.ಆತ್ಮಗಳು ಪೂಜಿಸುವ ದೇವಾಲಯವಿದು...
ರಾತ್ರಿಯ ವೇಳೆಯಲ್ಲಿ ದೇವಾಲಯವನ್ನು ಮುಚ್ಚಿಬಿಡುತ್ತಾರೆ. ಅಲ್ಲಿನ ಸ್ಥಳೀಯರ ಪ್ರಕಾರ ಆ ಇಬ್ಬರು ಸಹೋದರರು ದೇವಿಯನ್ನು ಭಕ್ತಿಯಿಂದ ಆರಾಧಿಸುತ್ತಾರೆ. ಅದೇ ಕಾರಣವಾಗಿ ದೇವಾಲಯ ಒಳ ಭಾಗದಲ್ಲಿ ಯಾರಿಗೂ ರಾತ್ರಿಯ ಸಮಯದಲ್ಲಿ ಅನುಮತಿಯನ್ನು ನೀಡುವುದಿಲ್ಲ. ಯಾರಾದರೂ ಸಾಹಸ ಮಾಡಿ ದೇವಾಲಯಕ್ಕೆ ತೆರಳಿದರೆ ಅಂಥವರು ಪ್ರಾಣವನ್ನು ಕಳೆದುಕೊಳ್ಳುತ್ತಾರಂತೆ. ಇದು ಅಲ್ಲಿನ ಸ್ಥಳೀಯರ ನಂಬಿಕೇ ಆಗಿದೆ.