ಜಾತಕದಲ್ಲಿ ನಂಬಿಕೆ ಇರುವರಿಗೆ ಗುರು ಬಲದ ಬಗ್ಗೆ ಹಾಗೂ ಅದು ಜಾತಕದಲ್ಲಿನ ಮನೆಯಿಂದ ಮನೆಗೆ ಬದಲಾಗುವುದು ಗೊತ್ತೇ ಇರಬಹುದು. ಒಂದನೇ ಮನೆಯಿಂದ ಮೂರನೇ ಮನೆಗೆ ಹೋಗುವುದು ಹೀಗೆ ಜಾತಕದಲ್ಲಿ ಮನೆಯನ್ನು ಬದಲಾಯಿಸುತ್ತಾ ಇರುವ ಬಗ್ಗೆ ನೀವು ಕೇಳಿರಬಹುದು. ಗುರುವು ಕೆಲವು ಮನೆಯಲ್ಲಿದ್ದರೆ ಒಳ್ಳೆಯದು, ಇನ್ನೂ ಕೆಲವು ಮನೆಯಲ್ಲಿದ್ದರೆ ಒಳ್ಳೆಯದಲ್ಲ ಎನ್ನಲಾಗುತ್ತದೆ. ಈ ಗುರುವಿಗೆ ಸಂಬಂಧಿಸಿದ ಒಂದು ದೇವಸ್ಥಾನ ಇಲ್ಲಿದೆ. ಅಲ್ಲಿಗೆ ನೀವು ಭೇಟಿ ನೀಡಿದರೆ ನಿಮ್ಮ ಗುರುಬಲ ಬದಲಾಗುತ್ತಂತೆ.
ಎಲ್ಲಿದೆ ಈ ದೇವಸ್ಥಾನ
ವಶಿಷ್ಟೇಶ್ವರ ದೇವಸ್ಥಾನವು ತಮಿಳುನಾಡಿನ ತಂಜಾವೂರು ಪಟ್ಟಣದಿಂದ 10 ಕಿ.ಮೀ ದೂರದಲ್ಲಿರುವ ತಿರುಕ್ಕೂರುಗವೂರ್ ಮಾರ್ಗದಲ್ಲಿ ತಂಜಾವೂರು - ಮೆಲಟ್ಟೂರು ರಸ್ತೆಯಲ್ಲಿದೆ ತಿಟ್ಟೈ ಗ್ರಾಮದಲ್ಲಿದೆ. ಇದು ವಶಿಷ್ಟೇಶ್ವರನಿಗೆ ಮೀಸಲಾಗಿರುವ ಒಂದು ಹಿಂದೂ ದೇವಾಲಯವಾಗಿದೆ. ಈ ದೇವಸ್ಥಾನವು ಕ್ರಿ.ಶ 12 ನೇ ಶತಮಾನದಲ್ಲಿ ಚೋಳರಿಂದ ನಿರ್ಮಿಸಲ್ಪಟ್ಟಿದೆ.
ಬೆಂಗಳೂರಿನ ಈ ಮಿಲಿಟರಿ ಹೋಟೆಲ್ ಗಳಲ್ಲಿ ತಲೆಮಾಂಸ, ಖೀಮಾ ಸವಿಯಲೇ ಬೇಕು
ಸ್ವಯಂಭು ಲಿಂಗ
ಸ್ವಯಂಬೂಥೇಶ್ವರರ್ ಮತ್ತು ದೇವತೆಯಾದ ಉಳಗನಾಯಕಿ ದೇವತೆಗಳಾಗಿದ್ದಾರೆ. ಮುಖ್ಯ ದೇವತೆ ಸ್ವಯಂಭು ಲಿಂಗ ಎಂದು ಅವರು "ಸ್ವಯಂಭೂಥೇಶ್ವರ" ಎಂಬ ಹೆಸರು ಬಂದಿತು.
ಗುರು ಭಗವಾನ್
ಇಲ್ಲಿನ ಇನ್ನೊಂದು ವಿಶಿಷ್ಟವಾದವೆಂದರೆ "ಗುರು ಭಗವಾನ್" ಪ್ರತ್ಯೇಕ ಸನ್ನಿಧಿ ಇದೆ. ವಶಿಷ್ಠೇಶ್ವರ ಮತ್ತು ಲೋಗನಾಯಕಿ ಸನ್ನಿಧಿಗಳ ನಡುವೆ ಇರುವ ದೇವಾಲಯದ ಸಂಕೀರ್ಣದಲ್ಲಿ ಪ್ರತ್ಯೇಕ ಗೋಪುರವನ್ನು ಹೊಂದಿದೆ. ಗುರುಸ್ಥಳ ಆಲಂಗುಡಿ ಯಲ್ಲಿ ಸಹ, ದಕ್ಷಿಣಕ್ಕೆ ಎದುರಾಗಿರುವ ದಕ್ಷಿಣಮೂರ್ತಿ ಪ್ರಕಾರಾಂನಲ್ಲಿ ಗುರು ಎಂದು ಪೂಜಿಸಲಾಗುತ್ತದೆ.
ಬೆಂಗಳೂರಲ್ಲಿರುವ ಈ ಶಿವಲಿಂಗಕ್ಕೆ ತುಪ್ಪ ಹಚ್ಚಿದ್ರೆ ಬೆಣ್ಣೆಯಾಗುತ್ತಂತೆ!
4 ಭುಜಗಳ ಗುರು
ಗುರು 4 ಭುಜಗಳನ್ನುಹೊಂದಿದ್ದು ನಿಂತಿರುವ ಪೊಸಿಷನ್ನಲ್ಲಿ ಕೈಗಳಲ್ಲಿ ತನ್ನ ಶಸ್ತ್ರಾಸ್ತ್ರಗಳನ್ನು ಮತ್ತು ಪುಸ್ತಕವನ್ನು ಹಿಡಿದಿರುವ ಭಂಗಿಯಲ್ಲಿ ಗುರು ಭಗವಾನ್ ಅನ್ನು ನೀವು ನೋಡಬಹುದು. ಚಿತ್ರ ಪೌರ್ನಮಿ ಮತ್ತು ಗುರು ಪಯಾರ್ಚಿ ಅಂದರೆ ಗುರುವಿನ ಬದಲಾವಣೆ ಇಲ್ಲಿ ಪ್ರಮುಖವಾದ ಹಬ್ಬಗಳು.
ಉತ್ಸವಗಳು
ಈ ದೇವಾಲಯದಲ್ಲಿ ಹಲವು ಉತ್ಸವಗಳು ನಡೆಯುತ್ತಿದ್ದರೂ, ಮೂರು ಮುಖ್ಯವಾದ ಉತ್ಸವಗಳು ಅತ್ಯಂತ ವಿಶೇಷವಾಗಿ ಆಚರಿಸಲಾಗುತ್ತದೆ. ಇಲ್ಲಿ ಮತ್ತು ಗುರುಪೀರಚಿ ದಿನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಮಹಾಶಿವರಾತ್ರಿಯು ಇಲ್ಲಿ ನಡೆಯುವ ಇತರ ಉತ್ಸವಗಳಾಗಿವೆ.
ದರ್ಶನಕ್ಕೆ ತೆರೆದಿದೆ ಶಬರಿಮಲೆ ; ಪಾರ್ಕಿಂಗ್ ಎಲ್ಲಿ, ಶೌಚಾಲಯ ಎಲ್ಲಿ, ಹೊಸ ರೂಲ್ಸ್ ಏನು?
ವರ್ಷದಲ್ಲಿ ಆರು ದಿನಗಳ ಮಾತ್ರ ಸೂರ್ಯ
ಈ ದೇವಾಲಯದಲ್ಲಿ ಇನ್ನೊಂದು ವಿಶೇಷವೆಂದರೆ, ಇಲ್ಲಿ ವರ್ಷದಲ್ಲಿ ಕೇವಲ ಆರು ದಿನಗಳು ಮಾತ್ರ ಸೂರ್ಯನ ಕಿರಣ ಶಿವಲಿಂಗದ ಮೇಲೆ ಬೀಳುತ್ತದೆ. ಅಂದರೆ ಆಗಸ್ಟ್ ತಿಂಗಳಿನಲ್ಲಿ 15,16,17 ದಿನಗಳು, ಮತ್ತು ಮಾರ್ಚ್ 25,26,27 ದಿನಗಳಲ್ಲಿ ಈ ಸೂರ್ಯನು ತನ್ನ ಬೆಳಕನ್ನು ಹರಿಸುತ್ತಾನೆ.
ಆಲಯದಲ್ಲಿನ ಅದ್ಭುತ
ಈ ದೇವಸ್ಥಾನದ ವಿಶಿಷ್ಟ ವೈಶಿಷ್ಟ್ಯವೆಂದರೆ ಸೀಲಿಂಗ್ನಿಂದ ಪ್ರತಿ 24 ನಿಮಿಷಗಳಿಗೊಮ್ಮೆ ಒಂದು ಬಿಂದು ನೀರಿನ ಹನಿ ಶಿವಲಿಂಗಕ್ಕೆ ಬೀಳುತ್ತದೆ. ಇಲ್ಲಿರುವ ಎರಡು ವಿಶೇಷ ಕಲ್ಲು ಛಾವಣಿಯ ಮೇಲೆ ಇಟ್ಟಿರುವುದರಿಂದ ಹೀಗಾಗುತ್ತಿದೆ ಎನ್ನಲಾಗುತ್ತದೆ. ಈ ಕಲ್ಲು ಸುತ್ತಮುತ್ತಲಿನ ಗಾಳಿಯಿಂದ ತೇವಾಂಶವನ್ನು ಹೀರಿಕೊಳ್ಳುತ್ತದೆ ಮತ್ತು ನೀರಿನ ಹನಿಯಾಗಿ ಪರಿವರ್ತಿಸುತ್ತದೆ.
ತಿರುಮಲದಲ್ಲಿರುವ ಬಂಗಾರದ ನೀರಿನ ಬಾವಿಯನ್ನು ನೋಡಿದ್ದೀರಾ?
ಎರಡು ಕಲ್ಲುಗಳು
ಈ ಎರಡು ಕಲ್ಲುಗಳು "ಸೂರ್ಯಗಾಂಧಕ್ಕಲ್" ಮತ್ತು "ಚಂದ್ರಗಾಂಧಕ್ಕಲ್" ಇವುಗಳನ್ನು ಗೂಪುರದ ಮೇಲಿರುವ ಆಯಕಟ್ಟಿನ ಸ್ಥಳಗಳಲ್ಲಿ ಇರಿಸಲಾಗಿರುವ ಕಾರಣ, ದೇವತೆಯ ಮೇಲೆ ಹರಿಯುವ ನೀರಿನ ಹನಿಗಳಿಗೆ ಇವೇ ಕಾರಣಗಳಾಗಿವೆ. ಈ 2 ಕಲ್ಲುಗಳು ವಾತಾವರಣದಿಂದ ತೇವಾಂಶವನ್ನು ಹೀರಿಕೊಂಡು 1 ನೀರಿನ ಹನಿಗಳಾಗಿ ಮಾರ್ಪಡುತ್ತವೆ, ನೈಸರ್ಗಿಕ ಅಭಿಷೇಕವನ್ನು ದೇವರಿಗೆ ದಿನ, ರಾತ್ರಿ ಎಂದು ಲೆಕ್ಕಿಸದೆ ಪ್ರತಿ 24 ನಿಮಿಷಗಳಿಗೊಮ್ಮೆ ಮಾಡುತ್ತವೆ.
ಚಕ್ರ ತೀರ್ಥಂ
ದೇವಾಲಯಕ್ಕೆ ಎದುರಾಗಿರುವ ದೇವಸ್ಥಾನವನ್ನು "ಚಕ್ರ ತೀರ್ಥಂ" ಎಂದು ಕರೆಯಲಾಗುತ್ತದೆ, ಇದನ್ನು ಚಕ್ರವು ಮಹಾವಿಷ್ಣು ಕೈಯಿಂದ ನಿರ್ಮಿಸಲಾಗಿದೆ ಎಂದು ನಂಬಲಾಗಿದೆ. ಈ ಕ್ಷೇತ್ರಕ್ಕೆ ಯುವತಿಯರು ಭೇಟಿ ನೀಡಿದರೆ ಶೀಘ್ರವೇ ಕಲ್ಯಾಣ ಪ್ರಾಪ್ತಿಯಾಗುತ್ತಂತೆ.