Search
  • Follow NativePlanet
Share
» »ಶಿವಮೊಗ್ಗದಲ್ಲಿರುವ ವರದಾಮೂಲಕ್ಕೆ ಹೋಗಿದ್ದೀರಾ?

ಶಿವಮೊಗ್ಗದಲ್ಲಿರುವ ವರದಾಮೂಲಕ್ಕೆ ಹೋಗಿದ್ದೀರಾ?

ವರದಾಮೂಲವು ಶಿವಮೊಗ್ಗ ಜಿಲ್ಲೆಯ ಸಾಗರ ಪಟ್ಟಣದಿಂದ 6 ಕಿ.ಮೀ ದೂರದಲ್ಲಿದೆ. ಕರ್ನಾಟಕದ ಪಶ್ಚಿಮ ಘಟ್ಟಗಳಲ್ಲಿರುವ ವರಾದಮೂಲವು ಸುಂದರವಾದ ಸ್ಥಳವಾಗಿದೆ. ವರದಾ ನದಿಯು ಈ ಸ್ಥಳದಿಂದ ಹುಟ್ಟಿದ ಕಾರಣದಿಂದಾಗಿ ಇಲ್ಲಿಗೆ ವರದಾ ಎಂಬ ಹೆಸರು ಬಂದಿದೆ. ತುಂಗಭದ್ರ ನದಿಗೆ ಸೇರುವ ಮುನ್ನ ಬರಾವಸಿ ಪಟ್ಟಣದಿಂದ ವರಾದ ನದಿ ಹರಿಯುತ್ತದೆ.

ಸರ್ವತೀರ್ಥ

ಸರ್ವತೀರ್ಥ

ವರದಾಮೂಲ ಎನ್ನೋದು ಹೆಸರೇ ಹೇಳುವಂತೆ ವರದಾನದಿಯ ಉಗಮಸ್ಥಾನ. ಇಲ್ಲಿ ವರದಾನದಿಯು ಲಕ್ಷ್ಮೀದೇವಿಯ ಪಾದದಡಿಯಿಂದ ಉದ್ಭವಿಸಿ ಲಕ್ಷ್ಮೀತೀರ್ಥವೆಂದು ಕರೆಯಲ್ಪಡುವ ಮೊದಲ ಕಲ್ಯಾಣಿಯನ್ನು ಸೇರುತ್ತಾಳೆಂಬ ಪ್ರತೀತಿಯಿದೆ. ಹೊರಗಿನ ಕೊಳದಲ್ಲಿ ಪ್ರತೀ ಎರಡು ಮೂರು ಅಡಿಗಳಿಗೊಂದರಂತೆ ಒಟ್ಟು ೨೪ ತೀರ್ಥಗಳು ಉಗಮಿಸುತ್ತವೆಂದೂ ಅದಕ್ಕೇ ಅದಕ್ಕೆ ಸರ್ವತೀರ್ಥವೆಂದು ಕರೆಯುತ್ತಾರೆಂದು ಸ್ಥಳೀಯರು ತಿಳಿಸುತ್ತಾರೆ.

ವರದಾಂಬ

ವರದಾಂಬ

ವರದಮೂಲದ ಮುಖ್ಯ ಆಕರ್ಷಣೆಯೆಂದರೆ ವರದಾಂಬ ಅಥವಾ ವರದಾದೇವಿಗೆ ಸಮರ್ಪಿತವಾಗಿದೆ. ವರದಾ ನದಿಯ ಹೆಸರೇ ಇದು ಒಂದು ವರವನ್ನು ನೀಡುವ ನದಿ ಎಂದು ಸೂಚಿಸುತ್ತದೆ. ಇಲ್ಲಿ ನೀವು ಸೂರ್ಯ ನಾರಾಯಣನಿಗೆ ಸಮರ್ಪಿತವಾದ ಇನ್ನೊಂದು ದೇವಸ್ಥಾನವನ್ನೂ ಕಾಣಬಹುದು.

ವರದಾತೀರ್ಥ

ವರದಾತೀರ್ಥ

ಪುರಾಣವನ್ನು ಕೇಳುವುದಾದರೆ ತನ್ನಿಂದಲೇ ಸೃಷ್ಠಿಯಾದ ಶತರೂಪೆಯನ್ನು ಮೋಹಿಸುತ್ತಿದ್ದ ಬ್ರಹ್ಮನ ಐದನೇ ತಲೆಯನ್ನು ಶಿವ ಕಡಿದು ಕಪಾಲವನ್ನಾಗಿ ಬಳಸುತ್ತಾನೆ. ಆದರೆ ಇದರ ಪಾಪ ಶಿವನನ್ನ ಕಾಡತೊಡಗಿ ಆತ ಚತುಶೃಂಗಗಳ ಮಧ್ಯೆ ತಪಸ್ಸಿಗೆ ಕೂರುತ್ತಾನೆ. ಶಿವನ ಪಾಪ ಪರಿಹಾರಕ್ಕಾಗಿ ವಿಷ್ಣುವು ತನ್ನ ಶಂಖದಿಂದ ಗಂಗೆಯಲ್ಲಿ ಶಿವನಿಗೆ ಅಭಿಷೇಕ ಮಾಡುತ್ತಾನೆ. ಆ ನಂತರದಲ್ಲಿ ಉಳಿದ ನೀರೇ ವರದಾತೀರ್ಥವಾಯಿತೆಂದು ಪ್ರತೀತಿಯಿದೆ.

ಎಲ್ಲೆಲ್ಲಾ ಹರಿಯುತ್ತದೆ

ಎಲ್ಲೆಲ್ಲಾ ಹರಿಯುತ್ತದೆ

ತುಂಗಭದ್ರನ ಮತ್ತೊಂದು ಉಪನದಿ ವರದಾ, ಸಾಗರ ತಾಲ್ಲೂಕಿನಲ್ಲಿನ ಇಕ್ಕೇರಿ ಬಳಿ ವರದಮೂಲದಲ್ಲಿ ಹುಟ್ಟಿ , ಸೊರಬ ತಾಲೂಕಿನ ಚಂದ್ರಗುಟ್ಟಿ ಉತ್ತರಕ್ಕೆ ಹರಿದು ಉತ್ತರ ಕನ್ನಡ ಜಿಲ್ಲೆಯ ಸಿರಸಿ ತಾಲ್ಲೂಕಿನ ಬನವಾಸಿ ಪಟ್ಟಣವನ್ನು ತಲುಪುತ್ತದೆ ಮತ್ತು ಈಶಾನ್ಯ ಕಡೆಗೆ ತಿರುಗುತ್ತದೆ.

ಧಾರವಾಡಕ್ಕೂ ಪ್ರವೇಶಿಸಿಸುತ್ತದೆ

ಧಾರವಾಡಕ್ಕೂ ಪ್ರವೇಶಿಸಿಸುತ್ತದೆ

ವರದಾ ನದಿಯು ನಂತರ ಧಾರವಾಡ ಜಿಲ್ಲೆಯಲ್ಲಿ ಪ್ರವೇಶಿಸಿ ಉತ್ತರದ ಕಡೆಗೆ ಹರಿಯುತ್ತಾಳೆ, ಕ್ರಮೇಣವಾಗಿ ಈಶಾನ್ಯಕ್ಕೆ ಬಾಗುವುದು. ನಂತರ ಬಂಕಾಪುರ ಮತ್ತು ಸವಣೂರ್‌ನ ದಕ್ಷಿಣ ಭಾಗದಲ್ಲಿ ಹರಿದು ತುಂಗಭದ್ರದಲ್ಲಿನ ಗಲಗನಾಥದ ಈಸ್ಟರ್ನ್
ಮಾರ್ಗವನ್ನು ಹಾದು ಹೋಗುತ್ತದೆ.

ಸರ್ವತೀರ್ಥ

ಸರ್ವತೀರ್ಥ

ಈ ದೇಗುಲದ ಪಕ್ಕದಲ್ಲೇ ಗೋಪಾಲ ಮೊದಲಾದ ದೇಗುಲಗಳಿವೆ. ಇಲ್ಲೊಂದು ಸಣ್ಣ ಕೊಳವಿದ್ದು ಅದಕ್ಕೆ ಅಗ್ನಿತೀರ್ಥವೆಂದು ಹೆಸರು. ಪಕ್ಕದಲ್ಲೇ ಇದ್ದರೂ ಲವಣಗಳಿಂದ ತುಂಬಿರೋ ಈ ನೀರಿನ ರುಚಿ ಸರ್ವತೀರ್ಥದ ನೀರ ರುಚಿಗಿಂತ ಭಿನ್ನವಾಗಿರುವುದು ವಿಶೇಷ.

ಇತರ ಆಕರ್ಷಣೆಗಳು

ಇತರ ಆಕರ್ಷಣೆಗಳು

ವರದಾ ಮೂಲವು ಶಿವಮೊಗ್ಗ ಜಿಲ್ಲೆಯಲ್ಲಿರುವುದರಿಂದ ಇಲ್ಲಿ ಸಾಕಷ್ಟು ಪ್ರವಾಸಿ ತಾಣಗಳಿವೆ. ಆಕರ್ಷಣೆಗಳಿವೆ. ಅವುಗಳಲ್ಲಿ ಪ್ರಮುಖವಾದವುಗಳೆಂದರೆ, ಇಕ್ಕೇರಿ, ಜೋಗ ಫಾಲ್ಸ್, ವರದಹಳ್ಳಿ ಶ್ರೀಧರ ಮುಟ್, ಚಂದ್ರಗುತ್ತಿ, ಕೆಳದಿ.

ಎಲ್ಲಿದೆ ?

ಎಲ್ಲಿದೆ ?

ವರದಾಮೂಲಕ್ಕೆ ಸಾಗರದಿಂದ 6 ಕಿ.ಮೀ. ಸಾಗರದಿಂದ ಇಕ್ಕೇರಿ/ಸಿಗಂದೂರು ಮಾರ್ಗದಲ್ಲಿ 3ಕಿ.ಮೀ ಸಾಗಿದರೆ ಇಕ್ಕೇರಿ ಸರ್ಕಲ್ ಅಥವಾ ಅಘೋರೇಶ್ವರ ಸರ್ಕಲ್ ಅಂತ ಸಿಗುತ್ತದೆ. ಅದರಲ್ಲಿ ಎಡಕ್ಕೆ ಸಾಗಿದರೆ 3.ಕಿ.ಮೀ ಕ್ರಮಿಸುವಷ್ಟರಲ್ಲಿ ವರದಾಮೂಲ ಸಿಗುತ್ತದೆ. ಬಲಕ್ಕೆ ಸಾಗಿದರೆ ಒಂದು ಕಿ.ಮೀನಲ್ಲಿ ಇಕ್ಕೇರಿ. ಹಾಗಾಗಿ ಮತ್ತೊಂದು ಪ್ರೇಕ್ಷಣೀಯ ಸ್ಥಳ ಇಕ್ಕೇರಿಯಿಂದ ವರದಾಮೂಲಕ್ಕೆ 4 ಕಿ.ಮೀ ಅಷ್ಟೆ.

ತಲುಪುವುದು ಹೇಗೆ?

ತಲುಪುವುದು ಹೇಗೆ?

ಹತ್ತಿರದ ವಿಮಾನ ನಿಲ್ದಾಣ: ಮಂಗಳೂರು

ಹತ್ತಿರದ ರೈಲು ನಿಲ್ದಾಣ: ಶಿವಮೊಗ್ಗ ಮತ್ತು ಸಾಗರ್

ರಸ್ತೆ: ವರದಮೂಲ ರಸ್ತೆ ರಸ್ತೆ ಮೂಲಕ ಉತ್ತಮ ಸಂಪರ್ಕ ಹೊಂದಿದೆ. ವರದಮುಲ ಸಾಗರ್ ಪಟ್ಟಣದಿಂದ 6 ಕಿ.ಮೀ ದೂರದಲ್ಲಿದೆ. ಕರ್ನಾಟಕದ ಹಲವಾರು ಪಟ್ಟಣಗಳಿಂದ ಸಾಗರಕ್ಕೆ ಹಲವಾರು ಬಸ್ ಸೇವೆಗಳು ಲಭ್ಯವಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X