ನಮ್ಮ ದೇಶದಲ್ಲಿ ಅನೇಕ ದೇವಿ, ದೇವತೆಯರ ದೇವಾಲಯಗಳು ಇವೆಯೋ ಹಾಗೆಯೇ ಅನೇಕ ಗರುಡ ದೇವಾಲಯಗಳೂ ಇವೆ. ಪ್ರತಿಯೊಂದಕ್ಕೂ ಒಂದೊಂದು ವಿಶೇಷತೆ ಇರುತ್ತದೆ. ಇಂದು ನಾವು ಅಂತಹದ್ದೇ ಒಂದು ವಿಶೇಷ ಗರುಡ ದೇವಾಲಯದ ಬಗ್ಗೆ ಹೇಳ ಹೊರಟಿದ್ದೇವೆ. ಹಾಗಾದರೆ ಬನ್ನಿ ಆ ವಿಶೇಷ ದೇವಾಲಯ ಯಾವುದು ಅನ್ನೋದನ್ನು ತಿಳಿಯೋಣ.
ಎಲ್ಲಿದೆ ಈ ದೇವಾಲಯ
ತಮಿಳುನಾಡಿನ ಚೆನ್ನೈನ ತಿರುವಳ್ಳುರು ಸಮೀಪದಲ್ಲಿ ಗರುಡನ ದೇವಾಲಯವೊಂದಿದೆ. ಇದನ್ನು ವಿನವರಾಯ ಪೆರುಮಳ್ ದೇವಸ್ಥಾನ ಎನ್ನುತ್ತಾರೆ. ಪ್ರತಿದಿನ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ.
ವಿಶೇಷತೆ ಏನು?
ಈ ದೇವಸ್ಥಾನದ ವಿಶೇಷತೆ ಏನೆಂದರೆ ಹಲ್ಲಿದೋಷ ನಿವಾರಣೆಯಾಗುತ್ತದಂತೆ. ಹಲ್ಲಿ ಮೈ ಮೇಲೆ ಬಿದ್ದರೆ ಈ ದೇವಸ್ಥಾನಕ್ಕೆ ಬಂದು ಪ್ರಾರ್ಥೀಸಿದರೆ ದೋಷ ಪರಿಹಾರವಾಗುತ್ತದೆ. ಮಕ್ಕಳಿಲ್ಲದವರಿಗೆ ಸಂತಾನ ಭಾಗ್ಯ ದೊರೆಯುತ್ತದೆ , ನಾಗದೋಷ ಪರಿಹಾರವಾಗುತ್ತದೆ ಎನ್ನಲಾಗುತ್ತದೆ.
ಈ ಊರಿನಲ್ಲಿ ಹೊರಗಿನವರು ಮನೆ ಗೋಡೆಯನ್ನೂ ಮುಟ್ಟುವಂತಿಲ್ಲ, ಯಾಕೆ ಹೀಗೆ?
ಇತಿಹಾಸ
ಈ ದೇವಸ್ಥಾನವಿದ್ದ ಊರಿನಲ್ಲಿ ಹಿಂದೊಮ್ಮೆ ರಾಜ ನಗರ ಸಮೀಕ್ಷೆಗೆ ಹೋಗಿರುತ್ತಾನೆ. ದಾರಿ ಮಧ್ಯೆ ರಾಜನಿಗಾಗಿ ತಂದಿದ್ದ ಆಹಾರವೆಲ್ಲಾ ಮುಗಿದುಹೋಗುತ್ತದೆ. ಆಗ ಈ ದೇವಸ್ಥಾನಕ್ಕೆ ಬಂದು ಏನಾದರೂ ಆಹಾರವಿದೆಯೋ ಎಂದು ಕೇಳಿದಾಗ ದೇವಸ್ಥಾನವ ಅರ್ಚಕರು ದೇವರಿಗೆ ಅರ್ಪಿಸಿದ್ದ ಆಹಾರವನ್ನು ನೀಡುತ್ತಾರೆ. ಕ್ಷಾಮದಿಂದಾಗಿ ಅಲ್ಲಿನ ಜನರಿಗೂ ಆಹಾರವಿಲ್ಲದಂತಾಗಿತ್ತು. ಅಲ್ಲಿನ ಜನರ ಸ್ಥಿತಿಯನ್ನು ಅರಿತ ರಾಜ ಧನ ಕನಕಗಳನ್ನು ದೇವಸ್ಥಾನಕ್ಕೆ ನೀಡಿದನು ಎನ್ನಲಾಗುತ್ತದೆ.
ಭಕ್ತಿಯಿಂದ ಪ್ರಾರ್ಥಿಸಿ
ಸಂತಾನ ಪಡೆಯಬೇಕೆಂದಿರುವವರು ಈ ಮಂದಿರಕ್ಕೆ ಬಂದು ಭಕ್ತಿಯಿಂದ ಪ್ರಾರ್ಥಿಸಿದರೆ ಅವರ ಇಷ್ಟ ಈಡೇರುತ್ತದೆ. ಹಾಗೆಯೇ ಹಲ್ಲಿ ಮೈ ಮೇಲೆ ಬಿದ್ದರೆ ಈ ದೇವಸ್ಥಾನಕ್ಕೆ ಹೋಗಿ ಪ್ರಾರ್ಥಿಸಿದರೆ ಹಲ್ಲಿ ದೋಷದಿಂದ ಮುಕ್ತರಾಗುತ್ತಾರೆ. ನಾಗದೋಷ ಪರಿಹಾರವಾಗುತ್ತದೆ. ಅವಿವಾಹಿತರಿಗೆ ಕಂಕಣ ಭಾಗ್ಯ ಕೂಡಿಬರುತ್ತದೆ ಎನ್ನಲಾಗುತ್ತದೆ.
ಈ ಬೆಟ್ಟವನ್ನು ಹತ್ತಿದರೆ ಮಕ್ಕಳಾಗದೇ ಇರುವ ದಂಪತಿಗಳಿಗೆ ಮಕ್ಕಳಾಗುತ್ತಂತೆ!
ಏನೆಲ್ಲಾ ದೇವರಿಗೆ ಅರ್ಪಿಸಲಾಗುತ್ತದೆ
ತಮ್ಮ ಮನೋಕಾಮನೆ ಈಡೇರಿದ್ದಲ್ಲಿ ಜನರು ಈ ದೇವರಿಗೆ ಪಟ್ಟು ಸೀರೆಯನ್ನು, ಹಣವನ್ನು ಅರ್ಪಿಸುತ್ತಾರೆ. ಅನ್ನದಾನವನ್ನು ಏರ್ಪಡಿಸುತ್ತಾರೆ. ಈ ದೇವಸ್ಥಾನಕ್ಕೆ ಅನೇಕರು ಏನಾದರೂ ಮನೋಕಾಮನೆಯನ್ನು ಇಟ್ಟುಕೊಂಡೇ ಬರುತ್ತಾರೆ.
ಯಾವಾಗ ತೆರೆದಿರುತ್ತದೆ?
ದೇವಸ್ಥಾನವು ಭಕ್ತರ ದರ್ಶನಕ್ಕಾಗಿ ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 11 ಗಂಟೆ ವರೆಗೆ ತೆರೆದಿರುತ್ತದೆ. ಸಂಜೆ 5 ಗಂಟೆಯಿಂದ ರಾತ್ರಿ 8 ಗಂಟೆವರೆಗೆ ತೆರೆದಿರುತ್ತದೆ. ಶನಿವಾರ ವಿಶೇಷ ಪೂಜೆಯನ್ನ ಏರ್ಪಡಿಸಲಾಗುತ್ತದೆ. ಈ ದೇವಾಲಯದಲ್ಲಿ ತಿರುಓಣಂ ಹಾಗೂ ವೈಕುಂಠ ಏಕಾದಶೀಯನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತದೆ.
ಇನ್ನಿತರ ದೇವರುಗಳು
ಇತರ ದೇವಸ್ಥಾನಗಳಲ್ಲಿ ಇರುವಂತೆ ಇಲ್ಲಿಯೂ ಇತರ ದೇವರುಗಳೂ ಇದ್ದಾರೆ. ಈ ದೇವಸ್ಥಾನದಲ್ಲಿ ಗರುಡಾಳ್ವರ್ನ್ನು ಹೊರತುಪಡಿಸಿ ಇನ್ನೂ ಕೆಲವು ದೇವರ ಸನ್ನಿಧಿಗಳಿವೆ. ಇಲ್ಲಿ ಪೆರುಮಾಳ್, ಕನಕವಲ್ಲಿ ಅಮ್ಮ, ಶ್ರೀದೇವಿ, ಭೂದೇವಿ, ರಾಮಾನುಜರ ಮೂರ್ತಿಗಳೂ ಇವೆ.
ತಲುಪುವುದು ಹೇಗೆ?
ಚೆನ್ನೈನ ವಿನವರಾಯ ಪೆರುಮಳ್ ದೇವಸ್ಥಾನಕ್ಕೆ ಹೋಗಬೇಕಾದರೆ ತಿರುವಳ್ಳುರು-ತಾಮರೈಪಾಕಂ-ಕೊಡುವಲ್ಲಿ ರಸ್ತೆ ಮೂಲಕ 30 ಕಿ.ಮೀ ಸಾಗಬೇಕು.
ವಿಮಾನದ ಮೂಲಕ ಹೋಗುವುದಾದರೆ ಸಮೀಪದ ಏರ್ಪೋರ್ಟ್ ಚೆನ್ನೈ ಏರ್ಪೋರ್ಟ್. ಇಲ್ಲಿಗೆ ರೈಲಿನ ವ್ಯವಸ್ಥೆಯೂ ಇದೆ. ಬಸ್ ಮೂಲಕವೂ ಹೋಗಬಹುದು.