ಸಾತ್ನಾ ಮಧ್ಯ ಪ್ರದೇಶದಲ್ಲಿನ ಒಂದು ಆಸಕ್ತಿಕರವಾದ ನಗರ. ಈ ನಗರ ಭಾರತ ದೇಶದ ಪ್ರಾಚೀನ ವೈಭವಕ್ಕೆ ನಿರ್ದಶನವಾಗಿದೆ. ಪ್ರಪಂಚ ಪ್ರಖ್ಯಾತಿಗಳಿಸಿದ ಖಜರಾಹೋ ದೇವಾಲಯವು ಈ ನಗರಕ್ಕೆ ಸಮೀಪದಲ್ಲಿಯೇ ಇದೆ. ಸತ್ನಾದ ಸುತ್ತಮುತ್ತ ಅನೇಕ ಪ್ರದೇಶಗಳಿವೆ. ಇಲ್ಲಿ ಮುಖ್ಯವಾಗಿ ಎಷ್ಟೋ ಧಾರ್ಮಿಕ, ಚಾರಿತ್ರಿಕ ಪ್ರದೇಶಗಳು ಇವೆ. ಅವುಗಳಲ್ಲಿ ವರಹಾ ಲಕ್ಷ್ಮೀ ದೇವಾಲಯವು ಅತ್ಯಂತ ಪ್ರಸಿದ್ಧಿ ಹೊಂದಿದೆ. ಸತ್ನಾಗೆ ಭೇಟಿ ನೀಡಲು ಅತ್ಯುತ್ತಮವಾದ ಸಮಯವೆಂದರೆ ಅದು ಮಳೆಗಾಲ, ಚಳಿಗಾಲವಾಗಿದೆ. ಸತ್ನಾಗೆ ಭೇಟಿ ನೀಡುವ ಪ್ರತಿಯೊಬ್ಬರು ಕೂಡ ಇಲ್ಲಿನ ಆಹಾರದ ರುಚಿಯನ್ನು ಸವಿಯಬೇಕಾದುದೇ! ದಹಿ ವಡಾ, ಪೋಹಾ, ಜಿಲೆಬಿ, ಇನ್ನು ಹಲವಾರು...!
ಈ ವರಹಾಮೂರ್ತಿಯ ಮೈಯೆಲ್ಲಾ ದೇವತೆಗಳೇ....
ಭಾರ್ವುಟ್ ಆರ್ಟ್ ಗ್ಯಾಲರಿ
ಭಾರ್ವುಟ್ ಆರ್ಟ್ ಗ್ಯಾಲರಿಯಲ್ಲಿ ಪ್ರಧಾನ ಆಕರ್ಷಣೆ ಗೌತಮ ಬುದ್ಧನ ಸ್ತೂಪ. ಈ ಆರ್ಟ್ ಗ್ಯಾಲರಿಯಲ್ಲಿ ಸ್ತೂಪ ಅನುಕರಣೆಗಳನ್ನು, ಛಾಯಚಿತ್ರಗಳನ್ನು ಪ್ರದರ್ಶಿಸುತ್ತಾರೆ. ಕಲೆಗಳ ಮೇಲೆ, ಚರಿತ್ರೆ ಮೇಲೆ ಆಸಕ್ತಿ ಹೊಂದಿದವರಿಗೆ ಈ ಭಾರ್ವುಟ್ ಆರ್ಟ್ ಗ್ಯಾಲರಿಗೆ ತಪ್ಪದೇ ಭೇಟಿ ನೀಡಿ.
ಈ ವರಹಾಮೂರ್ತಿಯ ಮೈಯೆಲ್ಲಾ ದೇವತೆಗಳೇ....
ಭಾರ್ವುಟ್ ಸ್ತೂಪ
ಭಾರ್ವುಟ್ ಸ್ತೂಪ ಭಾರತ ದೇಶದ ಸಂಪತ್ತು ಸಂಸ್ಕøತಿ ನಿದರ್ಶನವಾಗಿದೆ. ಈ ಸ್ಥೂಪದಂತಹ ಚಾರಿತ್ರಿಕ ಕಥೆಗಳನ್ನು (ಕ್ರಿ.ಪೂ 1500 ವರ್ಷ) ವಿಸ್ತರಿಸಿದೆ. ಸ್ತೂಪದ ಮೆಟ್ಟಿಲುಗಳು ಕೆಂಪು ಕಲ್ಲಿನಿಂದ ಅದ್ಭುತವಾಗಿ ಕೆತ್ತನೆ ಮಾಡಿದ್ದಾರೆ. ಅದು ಇಂದಿಗೂ ಸುಂದರವಾಗಿದೆ ಎಂದರೆ ನಂಬಲು ಅಸಾಧ್ಯವಾದುದು.
ಈ ವರಹಾಮೂರ್ತಿಯ ಮೈಯೆಲ್ಲಾ ದೇವತೆಗಳೇ....
ಲಾಲ್ ಚೌಕ್
ಸಾತ್ನಾದಲ್ಲಿ ಜನರಿಂದ ತುಂಬಿತುಳುಕಾಡುವ ಪನ್ನಿ ಲಾಲ್ ಚೌಕ್ ಕೂಡ ಒಂದು. ಇಲ್ಲಿ ಅನೇಕ ಅಂಗಡಿಗಳು, ರೆಸ್ಟೋರೆಂಟ್ಗಳು ಕೂಡ ಇವೆ. ಷಾಪಿಂಗ್ ಮಾಡುವವರಿಗೆ ಸ್ಥಳೀಯ ಆಹಾರಗಳ ರುಚಿಯನ್ನು ಸವಿಯಬೇಕು ಎನ್ನುವವರಿಗೆ ಇದೊಂದು ಸೂಕ್ತವಾದ ಪ್ರದೇಶವೆಂದೇ ಸೂಚಿಸಬಹುದು.
ಈ ವರಹಾಮೂರ್ತಿಯ ಮೈಯೆಲ್ಲಾ ದೇವತೆಗಳೇ....
ತುಳಸಿ ಮ್ಯೂಸಿಯಂ
ಸಾತ್ನಾಗೆ ಸುಮಾರು 16 ಕಿ.ಮೀ ದೂರದಲ್ಲಿ, ಕ್ರಿ.ಶ 1977 ರ ವರ್ಷದಲ್ಲಿ ಏರ್ಪಾಟು ಮಾಡಿರುವ ತುಳಸಿ ಮ್ಯೂಸಿಯಂ ಪ್ರವಾಸಿಗರಿಗೆ ಆಸಕ್ತಿಯನ್ನು ಉಂಟು ಮಾಡುವ ಪ್ರದೇಶಗಳಲ್ಲಿ ಇದು ಕೂಡ ಒಂದು. ಇಲ್ಲಿ ವಿವಿಧ ಶಿಲ್ಪಗಳು, ವಿವಿಧ ಮೂಲಿಕೆಗಳು ಕೂಡ ತಯಾರು ಮಾಡಲಾದ ಭಾಗಗಳನ್ನು ಇಲ್ಲಿ ಪ್ರದರ್ಶಿಸಲು ಇಡುತ್ತಾರೆ. ಬೆಳಗ್ಗೆ 10 ಗಂಟೆಯಿಂದ ಸಂಜೆ 7 ಗಂಟೆಯವರೆಗೂ ಈ ಮ್ಯೂಸಿಯಂ ಅನ್ನು ತೆರೆದಿರುತ್ತಾರೆ.
ಈ ವರಹಾಮೂರ್ತಿಯ ಮೈಯೆಲ್ಲಾ ದೇವತೆಗಳೇ....
ಶಿವಾಲಯ
ಸಾತ್ನಾಗೆ ಸುಮಾರು 30 ಕಿ.ಮೀ ದೂರದಲ್ಲಿ ಒಂದು ಪಟ್ಟಣದಲ್ಲಿ ಪುರಾತನವಾದ ಶಿವಾಲಯವಿದೆ. ಇದು ಅತ್ಯಂತ ಮಹಿಮಾನ್ವಿತವಾದುದು ಎಂದು ಸ್ಥಳೀಯರ ಅಭಿಪ್ರಾಯವಾಗಿದೆ. ಪ್ರತಿ ವರ್ಷ ಶಿವರಾತ್ರಿಯ ದಿನದಂದು ದೇವಾಲಯವನ್ನು ಅತ್ಯಂತ ಸುಂದರವಾಗಿ ಅಲಂಕಾರ ಮಾಡಿ ಉತ್ಸವಗಳನ್ನು ವಿಜೃಂಬಣೆಯಿಂದ ನಿರ್ವಹಿಸುತ್ತಾರೆ.
ಈ ವರಹಾಮೂರ್ತಿಯ ಮೈಯೆಲ್ಲಾ ದೇವತೆಗಳೇ....
ವರಹಾ ಲಕ್ಷ್ಮೀ ದೇವಾಲಯ
ವರಹಾ ಲಕ್ಷ್ಮೀ ದೇವಾಲಯವು ಸಾತ್ನಾದಿಂದ ಸುಮಾರು 100 ಕಿ.ಮೀ ದೂರದಲ್ಲಿದೆ. ಇದರಲ್ಲಿ ವರಹಾ ವಿಗ್ರಹ ಅದ್ಭುತವಾಗಿ ಇದೆ. ಪ್ರವಾಸಿಗರಿಗೆ ಮುಖ್ಯವಾದ ಆಕರ್ಷಣೆ ಎಂದೇ ಹೇಳಬಹುದು. ಈ ವಿಗ್ರಹದ ದೇಹವೆಲ್ಲಾ ಸಕಲ ದೇವತೆಗಳು ಇರುವುದು ದೊಡ್ಡದಾದ ವಿಶೇಷವೇ ಆಗಿದೆ. ಇಲ್ಲಿನ ವಿಗ್ರಹದ ಹಾಗೆ ಮತ್ತೇ ಬೇರೆ ಎಲ್ಲೂ ಇಲ್ಲ ಎಂದೇ ಹೇಳಬಹುದು.
ಈ ವರಹಾಮೂರ್ತಿಯ ಮೈಯೆಲ್ಲಾ ದೇವತೆಗಳೇ....
ದೇವಾಲಯ ಕಾಂಪೆಕ್ಸ್
ಮುಸ್ಲಿಂ ದಂಡಯಾತ್ರೆ ಧ್ವಂಸವಾಗದೇ ಉಳಿದಿರುವ ದೇವಾಲಯಗಳು ಒಟ್ಟು 22 ಇವೆ. ಅದರಲ್ಲಿ ಮಾತಂಗೇಶ್ವರ ದೇವಾಲಯ ಅತ್ಯಂತ ಪ್ರಸಿದ್ದಿಯನ್ನು ಹೊಂದಿದೆ. ಇದಕ್ಕೆ ಬಿಟ್ಟು ಉಳಿದ ಯಾವ ದೇವಾಲಯಕ್ಕೂ ಪೂಜೆಗಳು ಇರುವುದಿಲ್ಲ.
ಈ ವರಹಾಮೂರ್ತಿಯ ಮೈಯೆಲ್ಲಾ ದೇವತೆಗಳೇ....
ದೇವಾಲಯದಲ್ಲಿ ನೆಲೆಸಿರುವ ಶಿವನಿಗೆ ಪ್ರದಕ್ಷಿಣೆ ಹಾಕಿ, ಅಭಿಷೇಕ ಮಾಡಬೇಕು. ವಿಶೇಷತೆ ಏನೆಂದರೆ ದೇವಾಲಯದ ಪೂಜಾರಿ, ಸಾಮಾನ್ಯ ಭಕ್ತರು ಕೂಡ ಕಟ್ಟೆಯ ಮೇಲೆ ಏರಿ ಸ್ವಾಮಿಗೆ ಅಭಿಷೇಕ ಮಾಡುತ್ತಾರೆ. ಸಮೀಪದಲ್ಲಿನ ಶಿವಾಸಾಗರದಲ್ಲಿ ಪವಿತ್ರವಾದ ಸ್ನಾನಗಳು ಆಚರಿಸಿ ಸ್ವಾಮಿಯನ್ನು ದರ್ಶನ ಭಾಗ್ಯ ಪಡೆಯುತ್ತಾರೆ.
ಸಾತ್ನಾಗೆ ಹೇಗೆ ಸೇರಿಕೊಳ್ಳಬೇಕು?
ವಾಯು ಮಾರ್ಗದ ಮೂಲಕ
ಸಾತ್ನಾದಲ್ಲಿ ವಿಮಾನ ನಿಲ್ದಾಣವಿಲ್ಲ. ಸಮೀಪದ ವಿಮಾನ ನಿಲ್ದಾಣವೆಂದರೆ 220 ಕಿ.ಮೀ ದೂರದಲ್ಲಿರುವ ಜಬಲ್ಫೂರ್ ಎಂಬ ವಿಮಾನ ನಿಲ್ದಾಣವಾಗಿದೆ.
ರೈಲು ಮಾರ್ಗದ ಮೂಲಕ
ಸತ್ನಾದಲ್ಲಿ ರೈಲ್ವೆ ನಿಲ್ದಾಣವಿದೆ. ಇದೊಂದು ಜಂಕ್ಷನ್ ಆಗಿದ್ದು, ಇಲ್ಲಿಗೆ ದೇಶದಲ್ಲಿನ ಪ್ರಧಾನ ನಗರಗಳಿಂದ ಅನೇಕ ರೈಲುಗಳು ಭೇಟಿ ನೀಡುತ್ತಿರುತ್ತವೆ.
ರಸ್ತೆ ಮಾರ್ಗದ ಮೂಲಕ
ಭೋಪಾಲ್, ಜಬಲ್ಫೂರ್, ಇಂಡೋರ್, ಅಲಹಾಬಾದ್, ವಾರಾಣಾಸಿಯಿಂದ ಸಾತ್ನಾಗೆ ಅನೇಕ ಸರ್ಕಾರಿ ಹಾಗು ಖಾಸಗಿ ಬಸ್ಸುಗಳು ಸಂಪರ್ಕ ಸಾಧಿಸುತ್ತವೆ.