ಯಮ ಒಬ್ಬ ಮೃತ್ಯು ದೇವ ಆದರೆ ಈತನಿಗೆ ಸೂತ್ರಧಾರಿ ಮಾತ್ರ ಮಹಾಶಿವನು. ಯಮನ ದೇವಾಲಯ ಕೂಡ ನಮ್ಮ ಭಾರತ ದೇಶದಲ್ಲಿದೆ. ಎಲ್ಲರೂ ತಿಳಿದಂತೆ ಮೃತ್ಯು ದೇವನಿಗೆ ದೇವಾಲಯಗಳು ಇಲ್ಲ, ಪೂಜೆಗಳು ಮಾಡುವುದಿಲ್ಲ ಎಂದೇ ಭಾವಿಸಿದ್ದಾರೆ. ಆದರೆ ಇದು ತಪ್ಪು. ಯಮಧರ್ಮ ರಾಜನಿಗೂ ಕೂಡ ದೇವಾಲಯಗಳು ಇವೆ.
ಶಿವನಿಗೆ ಮೀನಿನ ಸಾರನ್ನು ನೈವೇದ್ಯವಾಗಿ ನೀಡುವ ಆಶ್ಚರ್ಯಕರವಾದ ದೇವಾಲಯ ಎಲ್ಲಿದೆ ಗೊತ್ತ?
ನಮ್ಮ ವೇದ-ಪುರಾಣಗಳಲ್ಲಿ ವಿವರಿಸಲಾಗಿರುವ ಪುಣ್ಯ ಕಥೆಗಳು ಕೇಳಲು ರೋಚಕವಾಗಿರುತ್ತದೆ. ಅದರಲ್ಲಿ ಶಿವನಿಗೆ ಹಾಗು ಮೃತ್ಯು ದೇವತೆಗೆ ಸಂಬಂಧಿಸಿದಂತೆ ಹಲವಾರು ರೋಚಕ ಕಥೆಗಳನ್ನು ಕೇಳುತ್ತಾ ಬಂದಿದ್ದೇವೆ. ಆ ಕಥೆಯ ಕುರಿತಾಗಿ ಒಂದು ದೇವಾಲಯವಿದೆ. ಪ್ರಸ್ತುತ ಆ ದೇವಾಲಯದ ಬಗ್ಗೆ ಲೇಖನದಲ್ಲಿ ಮಾಹಿತಿ ಪಡೆಯೋಣ.
ಯಮಧರ್ಮರಾಜನ ದೇವಾಲಯ ಎಲ್ಲಿದೆ ಗೊತ್ತ?
ಕಲ್ಯಾಣಿಯ ಮಹತ್ವ
ಈ ದೇವಾಲಯವು ಮೂಲತಃ ಶಿವನ ದೇವಾಲಯವಾಗಿದ್ದು, 7 ನೇ ಶತಮಾನದಲ್ಲಿದ್ದ ತಮಿಳಿನ ಪ್ರಸಿದ್ಧವಾದ ಶೈವ ಸಂತರಾದ ತಿರುಜ್ಞಾನ ಸಂಬಧರ್ ಅವರು ಶ್ಲೋಕಗಳ ಮೂಲಕ ಈ ದೇವಾಲಯದ ಬಗ್ಗೆ ಮಾಹಿತಿಯನ್ನು ಉಲ್ಲೇಖಿಸಿದ್ದಾರೆ.
ಕಲ್ಯಾಣಿಯ ಮಹತ್ವ
ಆ ಕಥೆಯ ಪ್ರಕಾರ ಒಂದು ಘಟನೆಯಿಂದಾಗಿ ವಿಷ್ಣು ಮೂರ್ತಿಯು ಒಂದು ಪವಿತ್ರವಾದ ಮಹಿಳೆಯಿಂದ ಶಾಪಗ್ರಸ್ತನಾಗುತ್ತಾನೆ. ಆ ಶಾಪದಿಂದ ಹೊರಬರಲು ವಿಷ್ಣು ಮೂರ್ತಿಯೇ ಸ್ವತಃ ಮಹಾಶಿವನ್ನು ನೆನೆದು ತಪ್ಪಸ್ಸು ಮಾಡುತ್ತಾನೆ.
ಕಲ್ಯಾಣಿಯ ಮಹತ್ವ
ಆ ರೀತಿ ಆ ಸ್ವಾಮಿಯು ತಪ್ಪಸ್ಸು ಮಾಡಿದ ಸ್ಥಳವೇ ಈ ದೇವಾಲಯವಾಗಿದೆ ಎನ್ನಲಾಗಿದೆ. ಹಾಗಾಗಿ ಸಾಕಷ್ಟು ಪಾವಿತ್ರ್ಯತೆಯನ್ನು ಪಡೆದಿರುವ ಈ ಕ್ಷೇತ್ರವನ್ನು ಸಾಕಷ್ಟು ಭಕ್ತರು ಭೇಟಿ ನೀಡುತ್ತಿರುತ್ತಾರೆ.
ಕಲ್ಯಾಣಿಯ ಮಹತ್ವ
ಈ ದೇವಾಲಯದ ವಿಷಯಕ್ಕೆ ಬಂದರೆ ಇದು ಯಮಧರ್ಮ ರಾಜನ ದೇವಾಲಯ ಎಂದೂ ಕೂಡ ಪ್ರಸಿದ್ಧವಾಗಿದೆ. ಈ ದೇವಾಲಯವು 4 ದಿಕ್ಕುಗಳಲ್ಲಿಯೂ ವಿಶಾಲವಾದ ರಸ್ತೆ-ಬೀದಿಗಳಿದ್ದು, ದೇವಾಲಯಕ್ಕೆ ತೆರಳಲು ಅನುಕೂಲಕರವಾಗಿದೆ.
ಕಲ್ಯಾಣಿಯ ಮಹತ್ವ
ಈ ದೇವಾಲಯಕ್ಕೆ ಸಂಬಂಧಿಸಿದಂತೆ ಪ್ರಮುಖವಾದ ಒಂದು ಕಥೆ ಇದೆ. ಒಂದು ಕಾಲದಲ್ಲಿ ಪವಿತ್ರ ಸ್ಥಳದಲ್ಲಿ ತವನಿತಿ ಎಂಬ ಸಂತ ಶಿವನನ್ನು ಪ್ರತಿನಿತ್ಯ ಆರಾಧಿಸುತ್ತಿದ್ದರು. ಹೀಗಿರುವಾಗ ಒಮ್ಮೆ ಬೇಟೆಗಾರನೊಬ್ಬನು ಜಿಂಕೆಯನ್ನು ಬೆನ್ನು ಹತ್ತುತ್ತಾ ಈ ಸ್ಥಳಕ್ಕೆ ಬಂದನು.
ಕಲ್ಯಾಣಿಯ ಮಹತ್ವ
ಪ್ರಾಣ ಭೀತಿ ಎದುರಿಸುತ್ತಿದ್ದ ಆ ಜಿಂಕೆ ಓಡಿಬಂದು ತವನಿತಿ ಸಂತರ ಆಶ್ರಯ ಪಡೆಯಿತು. ಇದನ್ನು ಮನಗಂಡ ಸಂತರು ಜಿಂಕೆಯನ್ನು ರಕ್ಷಿಸುವ ಸಲುವಾಗಿ ಸ್ವತಃ ಸಂತನೇ ಹುಲಿಯ ಅವತಾರ ಪಡೆದು ಬೇಟೆಗಾರನನ್ನು ಓಡಿಸುವ ಪ್ರಯತ್ನಿಸುತ್ತಾರೆ.
ಕಲ್ಯಾಣಿಯ ಮಹತ್ವ
ಹುಲಿಯನ್ನು ಕಂಡ ಆ ಬೇಟೆಗಾರನು ಹೆದರುತ್ತಾನೆ. ಅಲ್ಲಿಯೇ ಇದ್ದ ಬಿಲ್ವ ಪತ್ರೆ ಗಿಡವನ್ನು ಏರಿ ಕುಳಿತುಕೊಳ್ಳುತ್ತಾನೆ. ಎಷ್ಟೇ ಹೊತ್ತಾದರೂ ಆ ಹುಲಿಯು ಒಂದು ಇಂಚು ಕದಲುವುದಿಲ್ಲ.
ಕಲ್ಯಾಣಿಯ ಮಹತ್ವ
ಹೀಗೆ ರಾತ್ರಿಯಾಗುತ್ತದೆ. ತಾನು ನಿದ್ರೆ ಮಾಡಬಾರದು ಎಂದು ಗಿಡದಲ್ಲಿ ಬಿಲ್ವ ಪತ್ರೆಗಳನ್ನು ಕೀಳುತ್ತ ಭೂಮಿಯ ಮೇಲೆ ಒಂದೊಂದಾಗಿ ಉದರಿಸುತ್ತಾ ನಿದ್ದೆಯನ್ನು ತಡೆಯುತ್ತಾನೆ. ಅದರೆ ಬೇಟೆಗಾರ ಉದರಿಸುತ್ತಿದ್ದ ಆ ಎಲ್ಲಾ ಬಿಲ್ವ ಪತ್ರೆ ಎಲೆಗಳು ಗಿಡದ ಕೆಳಗೆ ಇದ್ದ ಶಿವಲಿಂಗದ ಮೇಲೆ ಬೀಳುತ್ತಿರುತ್ತದೆ. ಆಶ್ಚರ್ಯ ಏನಪ್ಪ ಎಂದರೆ ಆ ದಿನವೇ ಶಿವರಾತ್ರಿ ಹಬ್ಬ ಕೂಡ ಆಗಿರುತ್ತದೆ.
ಕಲ್ಯಾಣಿಯ ಮಹತ್ವ
ಇದರಿಂದ ಪ್ರಸನ್ನನಾದ ಮಹಾಶಿವನು ಬೇಟೆಗಾರನಿಗೆ ಹರಸಿ ಆರ್ಶೀವಾದ ಮಾಡುತ್ತಾನೆ. ಮರುದಿನ ಬೆಳಗ್ಗೆ ಭೂಲೋಕದಲ್ಲಿ ಆ ಬೇಟೆಗಾರನ ಕೊನೆಯ ದಿನವಾಗಿರುತ್ತದೆ. ಹಾಗಾಗಿ ಸ್ವತಃ ಯಮನೇ ಆತನ ಪ್ರಾಣವನ್ನು ತೆಗೆದುಕೊಂಡು ಹೋಗಲು ಬಂದಿರುತ್ತಾನೆ.
ಕಲ್ಯಾಣಿಯ ಮಹತ್ವ
ಆದರೆ ಶಿವನು ಬೇಟೆಗಾರನಿಗೆ ಆರ್ಶೀವಾದ ಮಾಡಿರುತ್ತಾನೆ. ಹೀಗಾಗಿಯೇ ನಂದಿ ಹಾಗು ದಕ್ಷಿಣ ಮೂರ್ತಿ ದೇವತೆಗಳು ಯಮನನ್ನು ತಡೆಯುತ್ತಾರೆ. ಆಗ ಅಗ್ನಿ ಹಾಗು ಬ್ರಹ್ಮ ದೇವರು ಶಿವನನ್ನು ಆರಾಧಿಸಿ ಅಲ್ಲಿಯೇ ಯಮನನ್ನು ಕಲ್ಯಾಣಿಯ ರೂಪವಾಗಿ ನೆಲೆಸು ಎಂದು ಹೇಳುತ್ತಾರೆ. ಇದಕ್ಕೆ ಯಮಧರ್ಮರಾಜನು ಸಂತೋಷದಿಂದ ಒಪ್ಪುತ್ತಾರೆ.
ಕಲ್ಯಾಣಿಯ ಮಹತ್ವ
ಹಾಗಾಗಿಯೇ ಈ ದೇವಾಲಯದ ಅವರಣದಲ್ಲಿ ಯಮತೀರ್ಥವನ್ನು ಕಾಣಬಹುದಾಗಿದೆ. ಈ ಪವಿತ್ರವಾದ ಜಲವನ್ನು ಯಾರು ಭಕ್ತಿಯಿಂದ ಸ್ನಾನ ಮಾಡಿಕೊಳ್ಳುತ್ತಾರೆಯೋ ಅವರಿಗೆ ಮೃತ್ಯು ಭಯ ದೂರವಾಗುತ್ತದೆ. ಇಲ್ಲಿನ ಮತ್ತೊಂದು ವಿಶೇಷವೆನೆಂದರೆ ಈ ತೀರ್ಥದಲ್ಲಿ ಸಪ್ತಮಾತೃಕೆಯರು ಮಿಂದು ತಮ್ಮ ಸಿದ್ಧ ಶಕ್ತಿಯನ್ನು ಪುನಃ ಪಡೆದರು ಎಂದು ಹೇಳಲಾಗುತ್ತದೆ.
ಕಲ್ಯಾಣಿಯ ಮಹತ್ವ
ಅಷ್ಟಕ್ಕೂ ಈ ದೇವಾಲಯ ಯಾವುದು ಎಂದು ಯೋಚಿಸುತ್ತಿದ್ದೀರಾ? ಈ ದೇವಾಲಯವೇ ತಿರುವೈಕಾವೂರು ದೇವಾಲಯ. ಈ ಮಾಹಿಮಾನ್ವಿತವಾದ ದೇವಾಲಯವಿರುವುದು ತಮಿಳುನಾಡಿನ ತಂಜಾವೂರು ಜಿಲ್ಲೆಯ ತಿರುವೈಕಾವೂರು ಎಂಬ ಹಳ್ಳಿಯಲ್ಲಿ. ಕುಂಭಕೋಣಂ-ತಿರುವೈಕಾವೂರು ಮಾರ್ಗದಲ್ಲಿ ಕುಂಭಕೋಣಂನಿಂದ ಕೇವಲ 14 ಕಿ.ಮೀ ಹಾಗು ಸ್ವಾಮಿಮಲೈದಿಂದ ಕೇವಲ 8 ಕಿ.ಮೀಗಳಷ್ಟು ದೂರದಲ್ಲಿದೆ. ಈ ದೇವಾಲಯಕ್ಕೆ ಹಲವಾರು ಬಸ್ಸುಗಳ ವ್ಯವಸ್ಥೆ ಕೂಡ ಇದೆ.