ಕಾಸರಗೋಡು ಜಿಲ್ಲೆಯಲ್ಲಿರುವ ರಾಣಿಪುರಂ ಕೇರಳದ ಗಿರಿಧಾಮಗಳಲ್ಲಿ ಒಂದಾಗಿದೆ. ಕೇರಳದ ರಾಣಿಪುರದ ಸೌಮ್ಯ ಬೆಟ್ಟಗಳು ಅದರ ಟ್ರೆಕ್ಕಿಂಗ್ ಜಾಡುಗಳಿಗೆ ಹೆಸರುವಾಸಿಯಾಗಿದೆ. ಇದು ಕೊಟ್ಟಂಚೇರಿ-ತಲಕಾವೇರಿ ಪರ್ವತ ಶ್ರೇಣಿಯ ಪಕ್ಕದಲ್ಲಿ ಸಮುದ್ರ ಮಟ್ಟದಿಂದ ಸುಮಾರು 750 ಮೀಟರ್ ಎತ್ತರದಲ್ಲಿದೆ. ಈ ಪ್ರದೇಶವು ದಟ್ಟ ಅರಣ್ಯ ಸಸ್ಯ ಮತ್ತು ಹಸಿರು ಹುಲ್ಲುಗಾವಲುಗಳನ್ನು ಹೊಂದಿದೆ. ಇಡೀ ಸ್ಥಳವು ರಾಣಿಪುರಂ ವನ್ಯಜೀವಿ ಧಾಮದೊಳಗೆ ಪ್ರಸ್ತಾಪಿಸಲಾಗಿದೆ. ಇದು ಕರ್ನಾಟಕದ ತಲಕಾವೇರಿ ವನ್ಯಜೀವಿ ಅಭಯಾರಣ್ಯದೊಂದಿಗೆ ವಿಲೀನವಾಗಿದ್ದು, ಕರ್ನಾಟಕದ ಗಡಿಯನ್ನು ಹಂಚಿಕೊಳ್ಳುತ್ತದೆ.
ಮದತುಮಾಲ
PC: Vinayaraj
ಮೊದಲಿಗೆ ಇದನ್ನು ಮದತುಮಾಲ ಎಂದು ಕರೆಯಲಾಗುತ್ತಿತ್ತು. ಮಡತುಮಾಳದ ವ್ಯಾಪಕವಾದ ಕಾಡುಗಳು ಕರ್ನಾಟಕದ ಅರಣ್ಯಗಳೊಂದಿಗೆ ವಿಲೀನಗೊಳ್ಳುತ್ತವೆ. ಇದು ನಿತ್ಯಹರಿದ್ವರ್ಣ ಕಾಡುಗಳು, ಮಳೆಕಾಡುಗಳು ಮತ್ತು ಹುಲ್ಲುಗಾವಲುಗಳಿಂದ ಆವೃತವಾಗಿರುವ ಒಂದು ಸುಂದರ ಪರ್ವತ ಭೂಪ್ರದೇಶವಾಗಿದೆ.
ರಾಣಿಪುರಾಮ್ ರಾಷ್ಟ್ರೀಯ ಉದ್ಯಾನವನ
PC: Vinayaraj
ರಾಣಿಪುರಾಮ್ ರಾಷ್ಟ್ರೀಯ ಉದ್ಯಾನವನದ ಪ್ರಮುಖ ಆಕರ್ಷಣೆಯಾಗಿದೆ. 50 ಚ.ಕಿ.ಮೀ. ಅಭಯಾರಣ್ಯವು ಕರ್ನಾಟಕದ ತಲಕಾವೇರಿಯಿಂದ ಗಡಿಯಾಗಿದೆ. ರಾಷ್ಟ್ರೀಯ ಉದ್ಯಾನವನವು ಗಣನೀಯ ಸಂಖ್ಯೆಯ ಆನೆಗಳು ಮತ್ತು ಜಿಂಕೆ, ಚಿರತೆ, ಮುಳ್ಳುಹಂದಿ, ಚಿಟ್ಟೆಗಳು ಮತ್ತು ದೈತ್ಯ ಅಳಿಲುಗಳಂತಹ ಪ್ರಾಣಿಗಳಿಗೆ ನೆಲೆಯಾಗಿದೆ. ಇಲ್ಲಿ 200 ಕ್ಕೂ ಹೆಚ್ಚಿನ ಜಾತಿಯ ಪಕ್ಷಿಗಳಿವೆ. ಸಫಾರಿಗೂ ಅವಕಾಶವಿದೆ. ಅಭಯಾರಣ್ಯವನ್ನು ಅನ್ವೇಷಿಸಲು ಸಫಾರಿ ಅತ್ಯುತ್ತಮ ಮಾರ್ಗವಾಗಿದೆ.
ಟ್ರೆಕ್ಕಿಂಗ್ ಮಾರ್ಗಗಳಿವೆ
PC: Vinayaraj
ರಾಣಿಪುರಾಮ್ ತನ್ನ ಟ್ರೆಕ್ಕಿಂಗ್ ಮಾರ್ಗ ಮತ್ತು ವೈವಿಧ್ಯಮಯ ಸಸ್ಯವರ್ಗಗಳಿಗೆ ಹೆಸರುವಾಸಿಯಾಗಿದೆ. ರಾಣಿಪುರದ ಪಶ್ಚಿಮ ಘಟ್ಟಗಳ ಸೌಂದರ್ಯವನ್ನು ಅನ್ವೇಷಿಸಲು ಎರಡು ಟ್ರೆಕ್ಕಿಂಗ್ ಮಾರ್ಗಗಳು ಲಭ್ಯವಿದೆ. ಮಣಿ ಎಂದು ಕರೆಯಲ್ಪಡುವ ರಾಣಿಪುರಾಂ ಬೆಟ್ಟದ ತುದಿಯನ್ನು ತಲುಪಲು, ಕಾಡಿನ ಮೂಲಕ 45 ನಿಮಿಷಗಳ ಚಾರಣ ಕೈಗೊಳ್ಳುವ ಅಗತ್ಯವಿದೆ.
ಚಾರಣ ಕೈಗೊಳ್ಳುವಾಗ ಎಚ್ಚರದಿಂದಿರಬೇಕು
PC: Vinayaraj
ಟ್ರಕ್ಕಿಂಗ್ ಮೂಲಕ ನೀವು ಭೂದೃಶ್ಯ ಮತ್ತು ಹಸಿರು ಕಣಿವೆಗಳ ವಿಶಾಲವಾದ ನೋಟವನ್ನು ನೋಡಬಹುದಾಗಿದೆ. ಟ್ರೆಕ್ಕಿಂಗ್ ಹಾದಿಯಲ್ಲಿ ಬಂಡೆಗಳು ಜಾರುತ್ತವೆ ಹಾಗಾಗಿ ಚಾರಣ ಹೋಗುವಾಗ ಎಚ್ಚರದಿಂದಿರಬೇಕು. ಇಲ್ಲಿ ರಕ್ತ ಹೀರುವ ಲೀಚ್ ಹುಳ ತುಂಬಾ ಸಾಮಾನ್ಯವಾಗಿರುವುದರಿಂದ ಪ್ರಯಾಣಿಕರು ಶೂ ಹಾಗೂ ಸಾಕ್ಸ್ಗಳನ್ನು ಧರಿಸುವುದು ಅಗತ್ಯ. ರಾಣಿಪುರಂನಿಂದ ತಲಕಾವೇರಿಗೆ ಮತ್ತು ಕೊಟ್ಟಗಿರಿಗೆ ಚಾರಣ ಮಾರ್ಗಗಳಿವೆ.
ಇತರ ಆಕರ್ಷಣೀಯ ತಾಣಗಳು
PC: Vinayaraj
ಮಡಿಯಮ್ ಕೋವಿಲಕಾಂ ದೇವಸ್ಥಾನ, ಪಾಲಕ್ಕಿನ್ ಭಗವತಿ ದೇವಸ್ಥಾನ, ಭರಣಿ ಮಹೋತ್ಸವಂ, ಆನಂದಾಶ್ರಾಮ, ನಿತ್ಯಾನಂದಶ್ರಾಮ ಮತ್ತು ಕೊಟ್ಟಂಚೇರಿ ಬೆಟ್ಟಗಳು ರಾಣಿಪುರಕ್ಕೆ ಸಮೀಪವಿರುವ ಇತರ ಆಕರ್ಷಣೆಗಳಾಗಿವೆ. ಕೇರಳ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಒದಗಿಸಿದ ಪ್ರವಾಸಿ ಕುಟೀರಗಳು ಬೆಟ್ಟದ ಮೇಲೆ ಇವೆ. ನವೆಂಬರ್ ನಿಂದ ಮಾರ್ಚ್ ವರೆಗೆ ರಾಣಿಪುರಂಗೆ ಭೇಟಿ ನೀಡಲು ಸೂಕ್ತ ಸಮಯವಾಗಿದೆ.
ಟ್ರೆಕ್ಕಿಂಗ್ ಟಿಪ್ಸ್
PC: Vinayaraj
ರಾಣಿಪುರಾಮ್ ಸಂಪೂರ್ಣ ಟ್ರೆಕ್ ಮಾರ್ಗವು ಬಹಳ ಸುಂದರವಾದದ್ದು ಮತ್ತು ಪ್ರಕೃತಿ ಛಾಯಾಗ್ರಾಹಕರಿಗೆ ಸಂತೋಷವಾಗಿದೆ. ಪ್ರಾಣಿ ಪಕ್ಷಿಗಳಿಂದ ಕೂಡಿರುವ ಈ ಅದ್ಭುತ ತಾಣವು ಖಂಡಿತವಾಗಿಯೂ ಒಂದು ಪ್ರಶಾಂತ ಅನುಭವವನ್ನು ನೀಡುತ್ತದೆ. ಮಧ್ಯಾಹ್ನ ತೀವ್ರ ಉಷ್ಣಾಂಶವನ್ನು ತಪ್ಪಿಸಲು ಬೆಳಿಗ್ಗಿನ ಹೊತ್ತಿನಲ್ಲಿ ಚಾರಣವನ್ನು ಪ್ರಾರಂಭಿಸುವುದು ಒಳ್ಳೆಯದು. ಅಲ್ಲಿ ನಿಮಗೆ ಯಾವುದೇ ತಿಂಡಿ ತಿನಿಸು ಸಿಗುವುದಿಲ್ಲ. ಹಾಗಾಗಿ ಹೋಗುವಾಗಲೇ ಉಪಹಾರಕ್ಕೆ ಎಲ್ಲಾ ವ್ಯವಸ್ಥೆ ಮಾಡಿಕೊಂಡು ಹೋಗಿ.
ಯಾವಾಗ ಭೇಟಿ ನೀಡುವುದು ಸೂಕ್ತ
PC:Krishnappa
ನೀವು ರಾಣಿಪುರಂಗೆ ಪ್ರವಾಸ ಕೈಗೊಳ್ಳುತ್ತಿದ್ದರೆ, ಚಳಿಗಾಲವನ್ನು ಆಯ್ಕೆ ಮಾಡಿಕೊಳ್ಳುವುದು ಸೂಕ್ತ. (ಅಕ್ಟೋಬರ್ - ಮಾರ್ಚ್). ಮಳೆಗಾಲದಲ್ಲಿ ಇಲ್ಲಿ ಪ್ರಯಾಣ ಮಾಡುವುದು ಸುರಕ್ಷಿತವಲ್ಲ, ಏಕೆಂದರೆ ಈ ಪ್ರದೇಶವು ಭಾರಿ ಮಳೆಗೆ ಒಳಗಾಗುತ್ತದೆ. ಆದ್ದರಿಂದ ನೀವು ಒಂದು ದಿನದ ಪ್ರವಾಸಕ್ಕೆ ಯೋಚಿಸುತ್ತಿದ್ದರೆ ತಕ್ಷಣವೇ ರಾಣಿಪುರಂಗೆ ಭೇಟಿ ನೀಡುವುದು ಉತ್ತಮ.
ತಲುಪುವುದು ಹೇಗೆ?
PC: Vaikoovery
ರಾಣಿಪುರಾಂ ಅನ್ನು ಕಾಙಂಘಾಡ್ ಮತ್ತು ಪನಾಥಡಿ ಮೂಲಕ ತಲುಪಬಹುದು. ಪಣಥಾಡಿ ಹತ್ತಿರದ ರಾಣಿಪುರಂ ಗಿರಿಧಾಮದಿಂದ 9 ಕಿಮೀ ದೂರದಲ್ಲಿದೆ. ಪನಾಥಡಿಯಿಂದ ಜೀಪ್ ಸೇವೆಗಳು ಲಭ್ಯವಿದೆ. ಅರಣ್ಯ ಇಲಾಖೆಯು ನಿಮಗೆ ಇಡೀ ದಿನ ಇಲ್ಲಿಗೆ ಟ್ರಕ್ಕಿಂಗ್ ಮಾಡಲು ಅನುಮತಿ ನಿಡುತ್ತದೆ.
ವಿಮಾನದ ಮೂಲಕ
ರಾಣಿಪುರಾಮ್ಗೆ ಹತ್ತಿರದ ವಿಮಾನ ನಿಲ್ದಾಣವೆಂದರೆ ಮಂಗಳೂರು ವಿಮಾನ ನಿಲ್ದಾಣ. ಇದು ಕಾಸರಗೋಡುನಿಂದ 80 ಕಿ.ಮೀ. ದೂರದಲ್ಲಿದೆ. ಇಲ್ಲಿಂದ ನೀವು ರಾಣಿಪುರಂ ತಲುಪಲು ಟ್ಯಾಕ್ಸಿ ಬಾಡಿಗೆಗೆ ತೆಗೆದುಕೊಳ್ಳಬಹುದು. ಇಲ್ಲವಾದಲ್ಲಿ ಏರ್ಪೋರ್ಟ್ನಿಂದ ನೀವು ಕೆಎಸ್ಆರ್ಟಿಸಿ ಬಸ್ ಅನ್ನು ತೆಗೆದುಕೊಳ್ಳಬಹುದು, ಅದು ನಿಮ್ಮನ್ನು ಕಾಙಂಘಾಡ್ಗೆ ಕರೆದೊಯ್ಯುತ್ತದೆ ಮತ್ತು ಇನ್ನೊಂದು ಬಸ್ ಅನ್ನು ರಾಣಿಪುರಾಮ್ಗೆ ಕರೆದೊಯ್ಯುತ್ತದೆ.
ರೈಲಿನ ಮೂಲಕ
ರಾಣಿಪುರಂಗೆ ಸಮೀಪದ ರೈಲ್ವೇ ನಿಲ್ದಾಣವು ಕಾಙಂಘಾಡ್ ಆಗಿದೆ. ಇದು ಬೆಟ್ಟಗಳಿಂದ 55 ಕಿ.ಮೀ ದೂರದಲ್ಲಿದೆ. ಕಾಙಂಘಾಡ್ ನಿಂದ ಟ್ಯಾಕ್ಸಿ ಬಾಡಿಗೆಗೆ ತೆಗೆದುಕೊಳ್ಳಬಹುದು ಅಥವಾ ಪನಾಥೂರ್ ಕಡೆಗೆ ಚಲಿಸುವ ಸ್ಥಳೀಯ ಬಸ್ ಮೂಲಕ ಪ್ರಯಾಣಿಸಲು ಆಯ್ಕೆ ಮಾಡಿಕೊಳ್ಳಬಹುದು. ಪಣಥಡಿ ರಾಣಿಪುರಂ ಬೆಟ್ಟದಿಂದ 9 ಕಿ.ಮೀ. ದೂರದಲ್ಲಿದೆ. ಇಲ್ಲಿಂದ, ನೀವು ರಾಣಿಪುರಂಗೆ ತಲುಪಲು ಜೀಪ್ ಅನ್ನು 200ರೂ.ಗೆ ಬಾಡಿಗೆಗೆ ತೆಗೆದುಕೊಳ್ಳಬೇಕಾಗುತ್ತದೆ. ಮತ್ತೊಂದು ಆಯ್ಕೆಯು ಕಾಙಂಘಾಡ್ನಿಂದ ಬಸ್ ಸೇವೆಯಾಗಿದೆ. ಈ ಬಸ್ 4:00 ಕ್ಕೆ ಹೊರಟು ರಾಣಿಪುರಾಮ್ಗೆ ಸಂಜೆ 6:30 ಕ್ಕೆ ತಲುಪುತ್ತದೆ.