ಭಾರತ ದೇಶದಲ್ಲಿ ಹಲವಾರು ದೇವಾಲಯಗಳಿವೆ. ಅತ್ಯಂತ ಪ್ರಾಚೀನವಾದ ದೇವಾಲಯಗಳೆಲ್ಲಾ ದೇವಾನು ದೇವತೆಗಳು ನಿರ್ಮಿಸಿರಬಹುದೆಂದು ಭಾವಿಸಲಾಗುತ್ತದೆ. ಇದಕ್ಕೆ ಕಾರಣ ಆ ದೇವಾಲಯದ ಮಹಿಮೆ ಹಾಗೂ ಯಾವುದೇ ಆಧಾರಗಳು ಇಲ್ಲದೇ ಇರುವುದರಿಂದ. ದೇವಾಲಯಗಳಲ್ಲಿನ ಶಿಲ್ಪಗಳೆಂದರೆ ಮನಸ್ಸಿಗೆ ಮುದ ನೀಡುವಂತಹದು. ಈ ಸುಂದರವಾದ ಶಿಲ್ಪಗಳನ್ನು ಹೇಗೆ ಕೆತ್ತಿದರೂ ಏನೊ? ಎಂದು ಆಶ್ಚರ್ಯ ಪಡುತ್ತಾ ಇರುತ್ತೇವೆ.
ನಮ್ಮ ಭಾರತ ದೇಶದ ಶಿಲ್ಪಕಲಾ ಸೌಂದರ್ಯಕ್ಕೆ ಅತಿ ಹೆಚ್ಚು ಪ್ರಸಿದ್ಧಿಯನ್ನು ಪಡೆದಿದೆ. ಈ ಶಿಲ್ಪಗಳು ಕೆಲವು ಬಾರಿ ನಿಗೂಢವಾಗಿ ಪರಿಣಮಿಸುತ್ತದೆ. ನಮ್ಮ ಕರ್ನಾಟಕದಲ್ಲಿ ಕೋಟಿ ಲಿಂಗಗಳು ಇದ್ದ ಹಾಗೆ ಕೋಟಿ ಶಿಲ್ಪ ಸಂಪತ್ತನ್ನು ಹೊಂದಿರುವ ದೇವಾಲಯವು ಇದೆ. ಆಶ್ಚರ್ಯ ಪಡಬೇಡಿ ಆ ದೇವಾಲಯವಿರುವುದು ನಮ್ಮ ಪುಣ್ಯ ಭೂಮಿ ಭಾರತ ದೇಶದ ತ್ರಿಪುರ ಜಿಲ್ಲೆಯಲ್ಲಿ.
ಪ್ರಸ್ತುತ ಲೇಖನದಲ್ಲಿ ಕೋಟಿಗೆ ಶಿಲ್ಪಗಳ ರಹಸ್ಯವನ್ನು ಹೊಂದಿರುವ ದೇವಾಲಯದ ಬಗ್ಗೆ ತಿಳಿಯೋಣ.
ಕೋಟಿ ಶಿಲ್ಪ
ಈ ಸುಂದರವಾದ ರಹಸ್ಯ ದೇವಾಲಯದಲ್ಲಿ ಕೋಟಿಗೆ (ಒಂದು ಕಡಿಮೆ ಇರುವ ಶಿಲ್ಪ) ಯಾರು ಕೆತ್ತಿದರು? ಯಾಕೆ ಕೆತ್ತಿದ್ದರು ಎಂಬ ಹಲವಾರು ಪ್ರಶ್ನೆಗೆ ಉತ್ತರ ರಹಸ್ಯವಾಗಿಯೇ ಉಳಿದಿದೆ.
PC:YOUTUBE
ಚಾರಿತ್ರಿಕ ಆಧಾರ
ಈ ದೇವಾಲಯದಲ್ಲಿನ ಶಿಲ್ಪದ ಬಗ್ಗೆ ಚಾರಿತ್ರಿಕ ಆಧಾರವೇ ಆಗಲಿ, ಶಾಸನಗಳೇ ಆಗಲೀ ದೊರೆತ್ತಿಲ್ಲ. ಆದರೆ ಅಲ್ಲಿನ ಸ್ಥಳೀಯರು ಮಾತ್ರ 2 ಸೊಗಸಾದ ಕಥೆಗಳನ್ನು ಈ ದೇವಾಲಯದ ಕೋಟಿ ಶಿಲ್ಪಗಳ ಬಗ್ಗೆ ತಿಳಿಸುತ್ತಾರೆ.
PC:YOUTUBE
ಪರಮಶಿವನು
ಪರಮಶಿವನು ದೇವಗಣಗಳ ಜೊತೆ ಸೇರಿ ಕಾಶಿಗೆ ಭೇಟಿ ನೀಡಬೇಕು ಎಂದು ನಿರ್ಧರಿಸುತ್ತಾನೆ. ದೇವಗಣಗಳ ಜೊತೆ ಕಾಶಿಗೆ ಹೋಗುವ ಸಮಯದಲ್ಲಿ ಮಾರ್ಗ ಮದ್ಯೆಯಲ್ಲಿ.....
PC:YOUTUBE
ಕೈಲಾಸ
ಕೈಲಾಸ ಎಂಬ ಪ್ರದೇಶದಲ್ಲಿ ರಾತ್ರಿ ಇಲ್ಲಿಯೇ ಇದ್ದು ಮರುದಿನ ಮುಂಜಾನೆ ಕಾಶಿಗೆ ತೆರಳಬೇಕು ಎಂದು ನಿರ್ಧರಿಸುತ್ತಾನೆ.
PC:YOUTUBE
ದೇವಗಣ
ಶಿವನು ನಿರ್ಧರಿಸಿದಂತೆ ಮರುದಿನ ಮುಂಜಾನೆ ಏಳುತ್ತಾನೆ. ಆದರೆ ಪರಮ ಶಿವನ ಜೊತೆಗೂಡಿ ಬಂದ ದೇವಗಣಗಳು ಯಾರು ಕೂಡ ಏಳುವುದಿಲ್ಲ ಇದರಿಂದ ಶಿವನಿಗೆ ಅತ್ಯಂತ ಕೋಪಗೊಳ್ಳುತ್ತಾನೆ.
PC:YOUTUBE
ಶಿಲ್ಪ
ದೇವಗಣ ಮಾಡಿದ ಈ ತಪ್ಪಿನಿಂದ ಮಹಾ ಶಿವನಿಗೆ ಕೋಪಾಗ್ನಿ ಹೆಚ್ಚಾಗಿ ಅವರನ್ನು ಶಿಲ್ಪಗಳಾಗಿ ಎಂದು ಶಾಪವನ್ನು ನೀಡಿದನಂತೆ ಹಾಗಾಗಿಯೇ ಇಲ್ಲಿ ಕೋಟಿ ಶಿಲ್ಪಗಳಿವೆ ಎಂದು ಅಲ್ಲಿನ ಸ್ಥಳೀಯರು ತಿಳಿಸುತ್ತಾರೆ.
PC:YOUTUBE
ಎಲ್ಲಿದೆ?
ಈ ರಹಸ್ಯಮಯವಾದ ದೇವಾಲಯವು ತ್ರಿಪುರ ರಾಜ್ಯದ ಅರ್ಗತದ ಸುಮಾರು 150 ಕಿ,ಮೀ ದೂರದಲ್ಲಿ ಊನಾಕೋಟಿ ಇದೆ. ಇಲ್ಲಿನ ಶಿಲ್ಪಗಳು ಆಶ್ಚರ್ಯವನ್ನು ಹಾಗೂ ಅದ್ಭುತವನ್ನು ಉಂಟು ಮಾಡುತ್ತದೆ.
PC:YOUTUBE
8 ನೇ ಶತಮಾನದಲ್ಲಿ
ಈ ಸುಂದರವಾದ ಶಿಲ್ಪಗಳ ದೇವಾಲಯವನ್ನು 8 ನೇ ಶತಮಾನದಲ್ಲಿ ನಿರ್ಮಿಸಿರಬಹುದೆಂದು ಊಹಿಸಲಾಗಿದೆ. ಇದಕ್ಕೂ ಕೂಡ ಒಂದು ಸ್ವಾರಸ್ಯಕರವಾದ ಕಥೆಯನ್ನು ಹೊಂದಿದೆ.
PC:YOUTUBE
ಕಲ್ಲುಕುಮಾರು
ಪೂರ್ವದಲ್ಲಿ ಕಲ್ಲು ಕುಮಾರ ಎಂಬ ಶಿಲ್ಪಿ ಇದ್ದು, ಆತನಿಗೆ ಕೈಲಾಸಕ್ಕೆ ತೆರಳಿ ಆ ಪರಮಶಿವನನ್ನು ದರ್ಶನ ಮಾಡಿ ಸ್ವಾಮಿಯ ಸನ್ನಿಧಾನದಲ್ಲಿ ಇರಬೇಕು ಎಂಬುದು ಅವನ ಅಭಿಲಾಷೆಯಾಗಿರುತ್ತದೆ. ಹಾಗಾಗಿ ಹಲವಾರು ದೀಕ್ಷೆಗಳನ್ನು ಮಾಡಿ ಪರಮಶಿವನ್ನು ಆರಾಧಿಸುತ್ತಿದ್ದನು.
PC:YOUTUBE
ಕೈಲಾಸ ಪ್ರವೇಶ
ಕೈಲಾಸ ಪ್ರವೇಶ ಅದು ಸಾಧಾರಣಾ ಮಾನವನಿಗೆ ಸಾಧ್ಯವಾಗುವಂತಹುದಲ್ಲ. ಒಮ್ಮೆ ಪಾರ್ವತಿ ದೇವಿ ಕಲ್ಲು ಕುಮಾರನ ದೀಕ್ಷೆಯನ್ನು ಮೆಚ್ಚಿದಳು.
PC:YOUTUBE
ಕನಸು
ಆತನ ಕನಸಿನಲ್ಲಿ ಪಾರ್ವತಿ ದೇವಿಯು ಆತನ ಭ್ರಮೆಯನ್ನು ತೊಲಗಿಸಲು ಒಂದು ದಿನದ ರಾತ್ರಿಯಲ್ಲಿ ಕೋಟಿ ಶಿಲ್ಪಗಳನ್ನು ಕೆತ್ತಬೇಕು ಎಂದು ಆಜ್ಞೆ ನೀಡಿದಳು.
PC:YOUTUBE
ನಿಬಂಧನೆ
ಕೋಟಿ ಶಿಲ್ಪಗಳನ್ನು ಕೆತ್ತಿದ್ದರೆ ಕಲ್ಲು ಕುಮಾರನಿಗೆ ಕೈಲಾಸಕ್ಕೆ ಕರೆದುಕೊಂಡು ಹೋಗುತ್ತವೆ ಇಲ್ಲವಾದರೆ ಕೈಲಾಸಕ್ಕೆ ಪ್ರವೇಶ ಅಸಾಧ್ಯವೆಂದು ನಿಬಂಧನೆಯನ್ನು ಪಾರ್ವತಿ ದೇವಿಯು ವಿಧಿಸುತ್ತಾಳೆ.
PC:YOUTUBE
ಕೆತ್ತನೆ
ಪಾರ್ವತಿ ದೇವಿಯ ಆಜ್ಞೆಯ ಮೇರೆಗೆ ತನ್ನ ಕೈಲಾಸದಲ್ಲಿನ ಪರಮಶಿವನ ಸಾನಿಧ್ಯದಲ್ಲಿ ಸೇವೆಯನ್ನು ಮಾಡಬಹುದು ಎಂದು ಒಂದು ದಿನ ರಾತ್ರಿ ಕೋಟಿ ಶಿಲ್ಪಗಳನ್ನು ಕೆತ್ತಲು ಪ್ರಾರಂಭಿಸುತ್ತಾನೆ.
PC:YOUTUBE
ಕೋಟಿ ಶಿಲ್ಪ
ಮುಂಜಾನೆಯಾಗುವುದರೊಳಗೆ ತನ್ನ ಕೋಟಿ ಶಿಲ್ಪಗಳ ಗುರಿಯನ್ನು ಸಾಧಿಸಿದನು. ಆತನು ಕೋಟಿ ಶಿಲ್ಪಗಳನ್ನು ನಿರ್ಮಿಸಿದ ನಂತರ ಗರ್ವ ಅವನಲ್ಲಿ ಪ್ರಾರಂಭವಾಗುತ್ತದೆ.
PC:YOUTUBE
ದೇವತಾ ಮೂರ್ತಿ
ದೇವತಾ ಮೂರ್ತಿಯ ಬದಲಿಗೆ ತನ್ನ (ಕಲ್ಲು ಕುಮಾರ) ಪ್ರತಿಮೆಯನ್ನು ಕೆತ್ತಲು ಪ್ರಾರಂಭಿಸಿದನು. ಈ ವಿಧವಾಗಿ ದೇವತಾ ಮೂರ್ತಿಗಳ ಬದಲಾಗಿ ತನ್ನದೇ ಚಿತ್ರವನ್ನು ಹೋಲುವ ಶಿಲ್ಪಗಳನ್ನು ಕೆತ್ತಿದನು.
PC:YOUTUBE
ಭಗ್ನವಾದ ಗುರಿ
ದೇವತಾ ಮೂರ್ತಿಗಳ ಶಿಲ್ಪಗಳನ್ನು ಕೆತ್ತುವುದನ್ನು ಬಿಟ್ಟು ಯಾವಾಗಾ ತನ್ನ ಮೂರ್ತಿಗಳನ್ನು ಕೆತ್ತನೆ ಮಾಡಲು ಪ್ರಾರಂಭಿಸಿದನೂ ಆಗಲೇ ಆತನ ಗುರಿ ಭಗ್ನವಾಯಿತು.
PC:YOUTUBE
ಆನರ್ಹ
ಕೋಟಿ ಶಿಲ್ಪಗಳಲ್ಲಿ ಒಂದು ಶಿಲ್ಪ ಮಾತ್ರ ಕಲ್ಲು ಕುಮಾರನ ಶಿಲ್ಪವಾದ್ದರಿಂದ ಆತನು ಕೈಲಾಸದ ಪ್ರವೇಶಕ್ಕೆ ಅನರ್ಹನೆಂದು ಸಾಭಿತಾಗುತ್ತದೆ.
PC:YOUTUBE
ಪ್ರವಾಸಿ
ಅದೇನೇ ಇರಲಿ ಇಲ್ಲಿನ ಕೋಟಿ ಶಿಲ್ಪಗಳ ಸೌಂದರ್ಯ ಅತ್ಯಂತ ಅದ್ಭುತವಾಗಿದ್ದು, ಹಲವಾರು ದೇಶ, ವಿದೇಶಗಳಿಂದ ಪ್ರವಾಸಿಗಳು ಭೇಟಿ ನೀಡುತ್ತಾರೆ. ಕೋಟಿ ಶಿಲ್ಪ ದೇವಾಲಯವು ತ್ರಿಪುರಾದ ಅತ್ಯಂತ ಸುಂದರವಾದ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ.
PC:YOUTUBE
ತಲುಪುವ ಬಗೆ?
ಈ ಸುಂದರ ಶಿಲ್ಪಗಳು ತ್ರೀಪುರದ ಅರ್ಗತಾಲದಲ್ಲಿರುವದರಿಂದ ಸಮೀಪದ ವಿಮಾನ ನಿಲ್ದಾಣವೆಂದರೆ ಅದು ಅರ್ಗತಾಲ ವಿಮಾನ ನಿಲ್ದಾಣ. ಇಲ್ಲಿಂದ ಕೋಟಿ ಶಿಲ್ಪಗಳ ದೇವಾಲಯಕ್ಕೆ ಸುಮಾರು 150 ಕಿ,ಮೀ ದೂರದಲ್ಲಿದೆ.
PC:YOUTUBE