ಬುಂದೇಲ್ಖಂಡದ ಹೃದಯಭಾಗದಲ್ಲಿರುವ ಝಾನ್ಸಿ, ಉತ್ತರ ಪ್ರದೇಶದ ಅತ್ಯಂತ ಪ್ರಸಿದ್ಧ ನಗರಗಳಲ್ಲಿ ಒಂದಾಗಿದೆ. ಹೆಚ್ಚಿನ ಪ್ರವಾಸಿಗರು ಈ ನಗರವನ್ನು ಅಪಾರ ಐತಿಹಾಸಿಕ ಮಹತ್ವಕ್ಕಾಗಿ ಭೇಟಿ ನೀಡುತ್ತಾರೆ. ಝಾನ್ಸಿ ಎಂಬ ಹೆಸರು ರಾಣಿ ಲಕ್ಷ್ಮಿ ಬಾಯಿಗೆ ಹೆಸರುವಾಸಿಯಾಗಿದೆ. ಝಾನ್ಸಿಯಲ್ಲಿನ ಇತರ ಪ್ರಮುಖ ಪ್ರವಾಸಿ ಸ್ಥಳಗಳಲ್ಲಿ ಮಹಾಲಕ್ಷ್ಮಿ ದೇವಸ್ಥಾನವೂ ಒಂದು.
ಝಾನ್ಸಿಯ ಪವಿತ್ರ ಸ್ಥಳಗಳು
PC:Shahrukhalam334
ಶ್ರೀಮಂತ ಕೋಟೆಗಳು ಮತ್ತು ಅರಮನೆಗಳಿಂದ ಕೂಡಿರುವ ಝಾನ್ಸಿಯು ನಮಗೆ ರಜಪೂತರ ಯುಗದ ಹಿಂದಿನ ಭವ್ಯತೆಯನ್ನು ನೆನಪಿಸುತ್ತದೆ. ಈ ನಗರವು ತನ್ನ ದೇವಸ್ಥಾನಗಳು, ಕೋಟೆಗಳು ಮತ್ತು ಅರಮನೆಗಳ ಮಧ್ಯಯುಗೀನ ಅವಶೇಷಗಳನ್ನು ಎಚ್ಚರಿಕೆಯಿಂದ ಅಮೂಲ್ಯವಾದದ್ದು. ಝಾನ್ಸಿಯ ಪವಿತ್ರ ಸ್ಥಳಗಳು ಎಲ್ಲ ಪ್ರವಾಸಿಗರನ್ನು ಆಕರ್ಷಿಸುತ್ತವೆ.
ಮಹಾಲಕ್ಷ್ಮಿ ದೇವಸ್ಥಾನ
PC: Ganeshrao53
ಮಹಾಲಕ್ಷ್ಮಿ ದೇವಸ್ಥಾನ, ಝಾನ್ಸಿ ದೇವಿ ಮಹಾ ಲಕ್ಷ್ಮೀಗೆ ಅರ್ಪಿತವಾದ ಪುರಾತನ ದೇವಾಲಯ. 18 ನೇ ಶತಮಾನದಲ್ಲಿ ನಿರ್ಮಿಸಲಾದ ಇದು ಲಕ್ಷ್ಮಿ ತಾಲ್ ಬಳಿಯ ಲಕ್ಷ್ಮಿ ದ್ವಾರದ ಹೊರಗೆ ಇದೆ. 1766 ರಲ್ಲಿ, ವಿಶ್ವಸ್ ರಾವ್ ಲಕ್ಷ್ಮಣ್ ಅವರು ಝಾನ್ಸಿಯ ಸುಬೇದಾರ್ ಆಗಿದ್ದರು, ಅವರ ನಂತರ ರಘುನಾಥ ರಾವ್ ನವಲ್ಕರ್ ಸುಬೇದಾರ್ ಆಗಿದ್ದ ಕಾಲದಲ್ಲಿ ಝಾನ್ಸಿಯಲ್ಲಿ ಮಹಾಲಕ್ಷ್ಮಿ ದೇವಸ್ಥಾನವನ್ನು ನಿರ್ಮಿಸಿದರು.
ಲಕ್ಷ್ಮೀ ಪೂಜಾ ಆಚರಣೆ
Wikicommons
ಝಾನ್ಸಿ ಮಹಾಲಕ್ಷ್ಮಿ ದೇವಸ್ಥಾನವನ್ನು ಅದ್ಭುತವಾಗಿ ರಚಿಸಲಾಗಿದೆ. ಈ ದೇವಸ್ಥಾನವು ಲಕ್ಷ್ಮೀ ದೇವರಿಗೆ ಸಮರ್ಪಿತವಾಗಿದೆ. ಲಕ್ಷ್ಮೀ ಪೂಜಾ ಮತ್ತು ದೀಪಾವಳಿ ಸಂದರ್ಭದಲ್ಲಿ, ಯಾತ್ರಿಗಳು ಝಾನ್ಸಿ ಮಹಾಲಕ್ಷ್ಮಿ ದೇವಾಲಯಕ್ಕೆ ಭೇಟಿ ನೀಡುತ್ತಾರೆ. ಈ ದೇವಸ್ಥಾನಕ್ಕೂ ಮತ್ತು ರಾಣಿ ಲಕ್ಷ್ಮಿ ಬಾಯಿಗೂ ಯಾವುದೇ ರೀತಿಯ ಸಂಬಂಧವಿಲ್ಲ. ರಾಣಿ ಲಕ್ಷ್ಮೀ ಬಾಯಿಯ ಆಳ್ವಿಕೆಯ ಮುಂಚೆಯೇ ಈ ದೇವಸ್ಥಾನವನ್ನು ನಿರ್ಮಿಸಲಾಗಿದ್ದು, ಇದು ಹಲವಾರು ಐತಿಹಾಸಿಕ ಘಟನೆಗಳಿಗೆ ಸಾಕ್ಷಿಯಾಗಿದೆ.
ಇತಿಹಾಸಕಾರರನ್ನೂ ಆಕರ್ಷಿಸುತ್ತದೆ
PC: WikiAffy
ಇದು ಕೇವಲ ಮಹಾಲಕ್ಷ್ಮಿ ದೇವಿಯ ಭಕ್ತರನ್ನು ಮಾತ್ರ ಆಕರ್ಷಿಸುವುದಿಲ್ಲ. ಬದಲಿಗೆ ಇತಿಹಾಸಕಾರರನ್ನು ಮತ್ತು ಪ್ರವಾಸಿಗರನ್ನು ಆಕರ್ಷಿಸುತ್ತದೆ. ಇವರು ವರ್ಷ ಪೂರ್ತಿ ಈ ದೇವಾಲಯಕ್ಕೆ ಭೇಟಿ ನೀಡುತ್ತಿರುತ್ತಾರೆ. ಇದು ಹಬ್ಬದ ಸಮಯದಲ್ಲಿ ವಿಶೇಷವಾಗಿ ದೀಪಾವಳಿಯ ಸಮಯದಲ್ಲಿ ಅಸಂಖ್ಯಾತ ಭಕ್ತರನ್ನು ಮತ್ತು ಪ್ರವಾಸಿಗರನ್ನು ಆಕರ್ಷಿಸುತ್ತದೆ.
ಝಾನ್ಸಿ ಕೋಟೆ
ಝಾನ್ಸಿಯಲ್ಲಿರುವ ಸುಂದರ ಪ್ರವಾಸಿ ತಾಣಗಳಲ್ಲಿ ಝಾನ್ಸಿ ಕೋಟೆಯೂ ಒಂದು. ಝಾನ್ಸಿ ಬ್ರಿಟೀಷ್ ಪಡೆಗಳ ವಿರುದ್ಧದ ಧೈರ್ಯದ ಹೋರಾಟಕ್ಕಾಗಿ ಪ್ರಪಂಚದಾದ್ಯಂತ ಪ್ರಸಿದ್ಧವಾಗಿದೆ. ಝಾನ್ಸಿಯ ಹೆಸರು ರಾಣಿ ಲಕ್ಷ್ಮೀ ಬಾಯಿಗೆ ಹೆಸರುವಾಸಿಯಾಗಿದೆ. ಅವರು ಸ್ವಾತಂತ್ರ್ಯ ಸಂಗ್ರಾಮದ ಸಮಯದಲ್ಲಿ ಬ್ರಿಟಿಷ್ ಪಡೆಗಳೊಂದಿಗೆ ಒಂಟಿಯಾಗಿ ಹೋರಾಡಿದ್ದಾಕೆ. ಝಾನ್ಸಿ ಕೋಟೆಯು ಉತ್ತರಪ್ರದೇಶದ ಝಾನ್ಸಿ ನಗರದ ಬೆಟ್ಟದ ಮೇಲಿರುವ ಕೋಟೆಯ ಪ್ರದೇಶಗಳಲ್ಲಿ ಒಂದಾಗಿದೆ. 17 ನೇ ಶತಮಾನದ ಆರಂಭದಲ್ಲಿ ಓರ್ಚಾ ರಾಜಾ ಬಿರ್ ಸಿಂಗ್ ದೇವ್ ಈ ಕೋಟೆಯನ್ನು ನಿರ್ಮಿಸಿದನು.
ಝಾನ್ಸಿ ವಸ್ತು ಸಂಗ್ರಹಾಲಯ
PC:Wikijib
ಝಾನ್ಸಿಯಲ್ಲಿನ ಸ್ಮಾರಕಗಳು ಮತ್ತು ಸಂಗ್ರಹಾಲಯಗಳು ಝಾನ್ಸಿಯಲ್ಲಿ ಹಿಂದಿನ ಯುಗದ ಶೌರ್ಯ ಮತ್ತು ಹೋರಾಟದ ಕುರಿತು ನಮಗೆ ನೆನಪಿಸುತ್ತದೆ. ಅವುಗಳಲ್ಲಿ ಒಂದು ಝಾನ್ಸಿ ಮ್ಯೂಸಿಯಂ. ಝಾನ್ಸಿ ಸ್ವಾತಂತ್ರ್ಯಕ್ಕಾಗಿ ಭಾರತದ ಅನ್ವೇಷಣೆಯಲ್ಲಿ ಪ್ರಮುಖ ಪಾತ್ರ ಹೊಂದಿರುವ ರಾಣಿ ಲಕ್ಷ್ಮೀ ಬಾಯಿಯವರ ತವರೂರು. ಝಾನ್ಸಿ ವಸ್ತುಸಂಗ್ರಹಾಲಯವು ಝಾನ್ಸಿ ಕೋಟೆಯಲ್ಲಿದೆ. ಇದು ಝಾನ್ಸಿಯ ಇತಿಹಾಸ ಮತ್ತು ಬುಂದೇಲ್ಖಂಡದ ಸಂಪೂರ್ಣ ಕುತೂಹಲವನ್ನು ನಮಗೆ ನೀಡುತ್ತದೆ. ಚಂದೇಲಾ ಸಾಮ್ರಾಜ್ಯದ ಜೀವನವನ್ನು ಈ ವಸ್ತುಸಂಗ್ರಹಾಲಯದಲ್ಲಿ ನೀವು ವೀಕ್ಷಿಸಬಹುದು.
ತಲುಪುವುದು ಹೇಗೆ?
PC:Wikijib
ವಿಮಾನದ ಮೂಲಕ: ಝಾನ್ಸಿದಿಂದ 103 ಕಿಲೋಮೀಟರ್ ದೂರದಲ್ಲಿರುವ ಗ್ವಾಲಿಯರ್ ಹತ್ತಿರದ ವಿಮಾನ ನಿಲ್ದಾಣವಾಗಿದೆ. ಗ್ವಾಲಿಯರ್ ವಿಮಾನ ನಿಲ್ದಾಣವು ಝಾನ್ಸಿಯನ್ನು ದೇಶದ ಇತರ ಭಾಗಗಳಿಗೆ ಸಂಪರ್ಕಿಸುತ್ತದೆ. ಉತ್ತರ ಪ್ರದೇಶದ ಖಜುರಾಹೊ ವಿಮಾನ ನಿಲ್ದಾಣವು ಝಾನ್ಸಿಯನ್ನು ಜಗತ್ತಿನ ಉಳಿದ ಭಾಗಕ್ಕೆ ಸಂಪರ್ಕಿಸುತ್ತದೆ.
ರೈಲು ಮೂಲಕ : ನೀವು ರೈಲು ಮೂಲಕ ಝಾನ್ಸಿ ತಲುಪಲು ಯೋಜಿಸುತ್ತಿದ್ದರೆ, ಝಾನ್ಸಿ ಜಂಕ್ಷನ್ ಮೂಲಕ ಹೋಗಬಹುದು. ಇದು ಮುಂಬೈ-ದೆಹಲಿ ರೈಲು ಮಾರ್ಗದಲ್ಲಿದೆ. ಝಾನ್ಸಿಯನ್ನು ದೇಶದ ಉಳಿದ ಭಾಗಕ್ಕೆ ಸಂಪರ್ಕಿಸುವ ಅತ್ಯುತ್ತಮ ರೈಲ್ವೆ ಮಾರ್ಗಗಳಿವೆ. ಶಟ್ಬಾದಿ ಎಕ್ಸ್ಪ್ರೆಸ್, ಪಂಜಾಬ್ ಮೇಲ್, ದಾದರ್-ಅಮೃತಸರ್ ಎಕ್ಸ್ಪ್ರೆಸ್, ಝೀಲಂ ಎಕ್ಸ್ಪ್ರೆಸ್, ಕರ್ನಾಟಕ ಎಕ್ಸ್ಪ್ರೆಸ್, ಮಾಲ್ವಾ ಎಕ್ಸ್ ಪ್ರೆಸ್, ಮತ್ತು ಕೇರಳ ಎಕ್ಸ್ ಪ್ರೆಸ್ ದೇಶಗಳು ಉಳಿದ ಭಾಗಗಳಿಂದ ಝಾನ್ಸಿಯನ್ನು ಸಂಪರ್ಕಿಸುವ ಅನೇಕ ರೈಲುಗಳಾಗಿವೆ.
ರಸ್ತೆ ಮೂಲಕ: ಉತ್ತರ ಪ್ರದೇಶದ ಝಾನ್ಸಿವನ್ನು ಬಿಹಾರ, ದೆಹಲಿ, ಹರಿಯಾಣ, ರಾಜಸ್ಥಾನ್, ಛತ್ತೀಸ್ಗಢ, ಮಧ್ಯಪ್ರದೇಶ ಮತ್ತು ಇನ್ನಿತರ ಪ್ರಮುಖ ನಗರಗಳಿಗೆ ಸಂಪರ್ಕಿಸುವ ರಸ್ತೆಗಳ ಉತ್ತಮ ಸಂಪರ್ಕವಿದೆ. ಸ್ಥಳೀಯ ಬಸ್ಸುಗಳಿಂದ ರಾಜ್ಯ ಸಾರಿಗೆಗಳೂ ಲಭ್ಯವಿದೆ.