ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ನಗರ ಕೇಂದ್ರವಾದ ಭದ್ರಾವತಿಯು ಭದ್ರಾ ನದಿಯ ದಡದಲ್ಲಿರುವ ಒಂದು ಸುಂದರವಾದ ನಗರವಾಗಿದೆ ಮತ್ತು ಇದು ಪ್ರಾಚೀನ ಇತಿಹಾಸ ಮತ್ತು ಸಂಸ್ಕೃತಿಗೆ ಹೆಸರುವಾಸಿಯಾಗಿದೆ. ಸ್ಥಳೀಯ ದಂತ ಕಥೆಗಳ ಪ್ರಕಾರ ಈ ಕೈಗಾರಿಕಾ ಪಟ್ಟಣವು ಸಾಮಾನ್ಯ ಯುಗದ ಆಗಮನದಿಂದ ಅಸ್ತಿತ್ವದಲ್ಲಿದೆ ಎಂದು ನಂಬಲಾಗಿದೆ.
ಆದುದರಿಂದ ಇದಕ್ಕೆ ಪುಷ್ಟೀಕರಿಸುವ ಯಾವುದೇ ಪುರಾವೆಗಳೂ ಇನ್ನೂ ದೊರಕಿಲ್ಲ. ಈ ಪ್ರಮುಖ ನಗರದ ಗಡಿಯೊಳಗೆ ನೀವು ಅನ್ವೇಶಿಸಬಹುದಾದಂತಹ ಹಲವಾರು ಸ್ಥಳಗಳನ್ನು ಹೊಂದಿದ್ದು ಅವುಗಳಲ್ಲಿ ಪ್ರಾಚೀನ ದೇವಾಲಯಗಳು ಮತ್ತು ಐತಿಹಾಸಿಕ ಸ್ಥಳಗಳೂ ಸೇರಿವೆ. ಈ ಸ್ಥಳದಲ್ಲಿರುವ ಲಕ್ಷ್ಮೀ ನರಸಿಂಹ ದೇವಾಲಯವು ಪ್ರವಾಸಿಗರಲ್ಲಿ ಅತ್ಯಂತ ಹೆಚ್ಚಿನ ಮಹತ್ವವನ್ನು ಪಡೆದಿದೆ. ಈ ದೇವಾಲಯವು ಅತ್ಯಂತ ಪ್ರಾಚೀನ ದೇವಾಲಯಗಳಲ್ಲೊಂದಾಗಿದ್ದು, ಈ ಪ್ರದೇಶದ ಅತ್ಯಂತ ಪೂಜ್ಯನೀಯ ದೇವಾಲಯವಾಗಿದೆ.
ಈ ದೇವಾಲಯವು ಭದ್ರಾವತಿಯಲ್ಲಿಯ ಹೆಚ್ಚು ಪ್ರವಾಸಿಗರಿಂದ ಭೇಟಿ ನೀಡಲ್ಪಡುವ ಸ್ಥಳವಾಗಿದೆ. ಈ ಪ್ರಾಚೀನ ಹಾಗೂ ಅದ್ಬುತ ದೇವಾಲಯವನ್ನು ಭೇಟಿ ನೀಡಿ ಅಲ್ಲಿಯ ಕೆಲವು ದಂತಕಥೆಗಳು ಮತ್ತು ದೇವಾಲಯದ ಅಸ್ತಿತ್ವದ ಬಗ್ಗೆ ಆಸಕ್ತಿದಾಯಕ ವಿಷಯಗಳನ್ನು ತಿಳಿಯೋಣವೆ? ಲಕ್ಷ್ಮೀ ನರಸಿಂಹ ದೇವಾಲಯದ ಬಗ್ಗೆ ಇನ್ನಷ್ಟು ತಿಳಿಯಿರಿ ಮತ್ತು ಅಲ್ಲಿಗೆ ತಲುಪುವ ಬಗ್ಗೆ ಮಾಹಿತಿ ಪಡೆಯಿರಿ.
ಲಕ್ಷ್ಮೀ ನರಸಿಂಹ ದೇವಾಲಯಕ್ಕೆ ಭೇಟಿ ನೀಡಲು ಸೂಕ್ತ ಸಮಯ
ಉಷ್ಣ ವಲಯದಲ್ಲಿ ನೆಲೆಸಿರುವ ಭದ್ರಾವತಿಯು ಮಧ್ಯಮ ರೀತಿಯ ಹವಾಮಾನವನ್ನು ಅನುಭವಿಸುತ್ತದೆ ಆದುದರಿಂದ ಲಕ್ಷ್ಮೀ ನರಸಿಂಹ ದೇವಾಲಯವನ್ನು ವರ್ಷದ ಯಾವುದೇ ಸಮಯದಲ್ಲೂ ಸಹ ಭೇಟಿ ಮಾಡಬಹುದಾಗಿದೆ. ನೀವು ಬೇಸಿಗೆಯ ತಾಪಮಾನವನ್ನು ತಪ್ಪಿಸಿಕೊಳ್ಳಬೇಕೆಂದಿದ್ದಲ್ಲಿ, ಅಕ್ಟೋಬರ್ ನಿಂದ ಮಾರ್ಚ್ ವರೆಗಿನ ಸಮಯದಲ್ಲಿ ಇಲ್ಲಿಗೆ ಭೇಟಿ ಕೊಡುವುದನ್ನು ಆಯ್ಕೆ ಮಾಡಬಹುದು. ಈ ಸಮಯದಲ್ಲಿ ಇಲ್ಲಿಯ ಹವಾಮಾನವು ಅನುಕೂಲಕರವಾಗಿದ್ದು ನಿಮಗೆ ಇಲ್ಲಿಯ ತಾಣಗಳನ್ನು ಆರಾಮದಾಯಕವಾಗಿ ಅನ್ವೇಷಣೆ ಮಾಡಬಹುದಾಗಿದೆ.
ಈ ಸ್ಥಳ ಹಾಗೂ ಇದರ ಬಗೆಗಿನ ಇತಿಹಾಸದ ತುಣುಕನ್ನು ನೋಡೋಣ
ಭದ್ರಾವತಿಯಲ್ಲಿ ನೆಲೆಸಿರುವ ಲಕ್ಷ್ಮೀ ನರಸಿಂಹ ದೇವಾಲಯವು ಹೆಸರೇ ಸೂಚಿಸುವಂತೆ ವಿಷ್ಣು ದೇವರು ಮತ್ತು ಅವರ ಪತ್ನಿ ಲಕ್ಷ್ಮೀ ದೇವಿಗೆ ಅರ್ಪಿತವಾದ ದೇವಾಲಯವಾಗಿದ್ದು, ಇದನ್ನು 13ನೇ ಶತಮಾನದ ಕಾಲದಲ್ಲಿ ಹೊಯ್ಸಳರ ಆಳ್ವಿಕೆಯ ಕಾಲದಲ್ಲಿ ಹೊಯ್ಸಳ ರಾಜರಿಂದ ನಿರ್ಮಿಸಲ್ಪಟ್ಟಿದೆ ಎಂದು ನಂಬಲಾಗುತ್ತದೆ. ಈ ಸ್ಥಳವು ಕೇವಲ ಧಾರ್ಮಿಕ ಸ್ಥಳ ಮಾತ್ರವಾಗಿರದೆ ಐತಿಹಾಸಿಕ ಸ್ಥಳವೂ ಹೌದು. ಆದುದರಿಂದ ಇತಿಹಾಸ ಪ್ರಿಯರು ಮತ್ತು ಹಿಂದು ಭಕ್ತರಿಂದ ನಿರಂತರವಾಗಿ ಭೇಟಿ ನೀಡಲ್ಪಡುತ್ತದೆ.
ಪ್ರಾಚೀನ ವಾಸ್ತುಶಿಲ್ಪ ಮತ್ತು ಅತ್ಯದ್ಬುತ ರಚನಾತ್ಮಕ ರಚನೆಗಳು ಇವೆಲ್ಲವೂ ಸೇರಿ ಈ ಸ್ಥಳವು ಹಲವಾರು ವಾಸ್ತು ಶಿಲ್ಪ ಉತ್ಸಾಹಿಗಳು ಮತ್ತು ಪ್ರವಾಸಿಗರನ್ನು ಆಕರ್ಷಿಸುತ್ತದೆ. ಸ್ಥಳೀಯ ದಂತ ಕಥೆಗಳ ಪ್ರಕಾರ ಈ ದೇವಾಲಯವು ಹೊಯ್ಸಳ ರಾಜನಿಗೆ ಕನಸಿನಲ್ಲಿ ವಿಷ್ಣು ದೇವರು ಬಂದು ಈ ದೇವಾಲಯವನ್ನು ನಿರ್ಮಿಸಲು ಸೂಚಿಸಿದ್ದಕ್ಕಾಗಿ ಈ ದೇವಾಲಯವನ್ನು ನಿರ್ಮಿಸಲಾಗಿದೆ ಎಂದು ಹೇಳಲಾಗುತ್ತದೆ.
ಇದರ ಪ್ರಕಾರ ರಾಜನು ನಿದ್ದೆಯಿಂದ ಎದ್ದ ಕೂಡಲೇ ತನ್ನ ಮಂತ್ರಿಗಳಿಗೆ ತನ್ನ ರಾಜ್ಯದ ಎಲ್ಲಾ ಕಾರ್ಮಿಕರನ್ನು ಒಟ್ಟು ಸೇರಿಸಿ ದೇವಾಲಯವನ್ನು ಸಾಧ್ಯವಾದಷ್ಟು ಬೇಗ ನಿರ್ಮಿಸಬೇಕೆಂದು ಆಜ್ಞಾಪಿಸಿದನು. ಆದಾಗ್ಯೂ, ದೇವಾಲಯದ ರಚನೆಗೆ ಸಂಬಂಧಿಸಿದ ಹಲವಾರು ದಂತಕಥೆಗಳಿವೆ. ಈ ಅದ್ಭುತ ಸೌಂದರ್ಯಕ್ಕೆ ಭೇಟಿ ಕೊಟ್ಟು ಅದರ ಆಸಕ್ತಿದಾಯಕ ದಂತಕಥೆಗಳನ್ನು ಕೇಳುವುದು ಹೇಗಿರಬಹುದು?
ಲಕ್ಷ್ಮೀ ನರಸಿಂಹ ದೇವಾಲಯದಲ್ಲಿ ಅಂತಹ ವಿಶೇಷತೆ ಏನಿದೆ?
ಲಕ್ಷ್ಮೀ ನರಸಿಂಹ ದೇವಾಲಯದಲ್ಲಿರುವ ಪ್ರಮುಖ ವಿಶೇಷತೆ ಎಂದರೆ ಈ ದೇವಾಲಯದ ವಾಸ್ತು ಶಿಲ್ಪ ಸೌಂದರ್ಯ, ಐತಿಹಾಸಿಕ ಮಹತ್ವ ಮತ್ತು ಧಾರ್ಮಿಕ ಪ್ರಾಮುಖ್ಯತೆ ಆಗಿದೆ. ಭದ್ರಾವತಿಯಲ್ಲಿ ಈ ದೇವಾಲಯವು ರಚನೆಯಾದಾಗಿನಿಂದ ಪ್ರಮುಖ ಪೂಜಾ ಸ್ಥಳವಾಗಿದೆ ಎಂದು ಹೇಳಲಾಗುತ್ತದೆ. ಆದ್ದರಿಂದ, ಇದು ಪ್ರದೇಶದ ಅತ್ಯಂತ ಗೌರವಾನ್ವಿತ ದೇವಾಲಯಗಳಲ್ಲಿ ಒಂದಾಗಿದೆ.
ಇದರ ವಾಸ್ತುಶಿಲ್ಪದ ಬಗ್ಗೆ ಹೇಳುವುದಾದರೆ, ಈ ದೇವಾಲಯವು ಎತ್ತರದ ವೇದಿಕೆಯಲ್ಲಿ ನಿರ್ಮಿಸಲಾಗಿದ್ದು, ಸುಂದರ ಮಾದರಿಗಳು ಮತ್ತು ಕೆತ್ತನೆಗಳನ್ನು ಒಳಗೊಂಡಿದೆ. ಶಿವಮೊಗ್ಗ ಜಿಲ್ಲೆಯ ತ್ರಿವಳಿ ದೇಗುಲ ನಿರ್ಮಾಣವಿರುವ ಶಿವಮೊಗ್ಗ ಜಿಲ್ಲೆಯ ಕೆಲವೇ ಕೆಲವು ದೇವಾಲಯಗಳಲ್ಲಿ ಇದು ಕೂಡ ಒಂದಾಗಿದೆ. ಇದೆಲ್ಲದರ ಹೊರತಾಗಿ, ಶಾಂತಿಯುತ ವಾತಾವರಣವನ್ನು ಒಳಗೊಂಡಿರುವ ದೇವಾಲಯದ ಸುತ್ತಮುತ್ತಲಿನ ಪ್ರದೇಶವು ಅದರ ಆಕರ್ಷಣೆ ಮತ್ತು ಸೌಂದರ್ಯವನ್ನು ಹೆಚ್ಚಿಸಲು ಇನ್ನಷ್ಟು ಅನುಕೂಲಮಾಡಿಕೊಡುತ್ತದೆ.
ಭದ್ರಾವತಿಗೆ ತಲುಪುವುದು ಹೇಗೆ
ವಿಮಾನದ ಮೂಲಕ: ನೀವು ವಿಮಾನದಲ್ಲಿ ಪ್ರಯಾಣಿಸಲು ಬಯಸಿದರೆ ಭದ್ರಾವತಿಯನ್ನು ತಲುಪಲು ಉತ್ತಮ ಮಾರ್ಗವೆಂದರೆ ಮಂಗಳೂರು ವಿಮಾನ ನಿಲ್ದಾಣಕ್ಕೆ ನೇರ ವಿಮಾನದಲ್ಲಿ ಮತ್ತು ಅಲ್ಲಿಂದ ಭದ್ರಾವತಿಗೆ ಬಸ್ ಅಥವಾ ಕ್ಯಾಬ್ನಲ್ಲಿ ಪ್ರಯಾಣಿಸಬಹುದು. ಮಂಗಳೂರು ವಿಮಾನ ನಿಲ್ದಾಣ ಮತ್ತು ಭದ್ರಾವತಿ ನಡುವಿನ ಅಂತರ 195 ಕಿ.ಮೀ. ಆದ್ದರಿಂದ, ಗಮ್ಯಸ್ಥಾನವನ್ನು ತಲುಪಲು ನಿಮಗೆ ಸರಾಸರಿ 5 ಗಂಟೆಗಳ ಸಮಯ ತೆಗೆದುಕೊಳ್ಳುತ್ತದೆ
ರೈಲಿನ ಮೂಲಕ: ಭದ್ರಾವತಿಯು ತನ್ನದೇ ಆದ ರೈಲು ನಿಲ್ದಾಣವನ್ನು ಹೊಂದಿದೆ ಮತ್ತು ಆದ್ದರಿಂದ, ನೀವು ಹತ್ತಿರದ ನಿಲ್ದಾಣದಿಂದ ಭದ್ರಾವತಿಗೆ ನೇರ ರೈಲು ಹಿಡಿಯಬಹುದು.
ರಸ್ತೆಯ ಮೂಲಕ: ಕೈಗಾರಿಕಾ ನಗರವಾಗಿರುವ ಭದ್ರಾವತಿ ಮತ್ತು ಸುತ್ತಮುತ್ತಲಿನ ಪ್ರದೇಶವು ಉತ್ತಮ ರಸ್ತೆ ಜಾಲವನ್ನು ಹೊಂದಿದೆ. ಆದ್ದರಿಂದ, ನೀವು ಸುಲಭವಾಗಿ ರಸ್ತೆಯ ಮೂಲಕ ಲಕ್ಷ್ಮಿ ನರಸಿಂಹ ದೇವಸ್ಥಾನವನ್ನು ತಲುಪಬಹುದು.