ಅನೇಕ ಯುಗಗಳು ಕಳೆದಿವೆ. ಪ್ರತಿಯೊಂದು ಯುಗಗಳು ಅಂತ್ಯವಾದಗಲೂ ಮತ್ತೊಂದು ಹೊಸ ಯುಗ ಸೃಷ್ಟಿಯಾಗುತ್ತದೆ. ಪಾಪಗಳು, ಅಧರ್ಮಗಳು ನಡೆಯುತ್ತಿರುವ ಯುಗವನ್ನು ಅಂತ್ಯಗೊಳಿಸುವ ಸಮಯದಲ್ಲಿ ಸಕಲ ದೇವತೆಗಳು ಒಂದೆಡೆ ಸೇರಿ ಚರ್ಚೆ ಮಾಡುತ್ತಾರೆ ಎಂದು ನಂಬಲಾಗಿದೆ. ಆ ನಂಬಿಕೆಯ ಪ್ರಕಾರವಾಗಿ ಭೂಲೋಕದಲ್ಲಿ ಒಂದು ಪವಿತ್ರವಾದ ಸ್ಥಳದಲ್ಲಿ ಸೇರುತ್ತಾರಂತೆ. ಆ ಸ್ಥಳ ಯಾವುದು? ಎಲ್ಲಿ ಸಮ್ಮೇಳನ ನಡೆಸುತ್ತಾರೆ? ಎಂಬುದನ್ನು ಲೇಖನದ ಮೂಲಕ ಸಂಕ್ಷೀಪ್ತವಾಗಿ ತಿಳಿಯೋಣ.
ದೇವತೆಗಳು ಭೇಟಿ ಮಾಡುವ ಸ್ಥಳ ನಮ್ಮ ಕರ್ನಾಟಕದಲ್ಲಿ ಇದೆಯಂತೆ....
ಭೂಲೋಕದಲ್ಲಿ ಒಂದು ಪವಿತ್ರವಾದ ಸ್ಥಳವಿದ್ದು, ಸಕಲ ದೇವತೆಗಳು ಭೂಲೋಕಕ್ಕೆ ಇಳಿದು ಬರುತ್ತಾರೆ ಎಂದು ಸಾಕಷ್ಟು ಜನರು ನಂಬುತ್ತಾರೆ. ಆ ಸ್ಥಳ ಎಲ್ಲಿದೆ ಎಂದರೆ ನಿಮಗೆ ಆಶ್ಚರ್ಯವನ್ನು ಉಂಟು ಮಾಡದೇ ಇರಲಾರದು. ಆ ಸ್ಥಳ ಇರುವುದು ಕರ್ನಾಟಕದಲ್ಲಿಯೇ.
ದೇವತೆಗಳು ಭೇಟಿ ಮಾಡುವ ಸ್ಥಳ ನಮ್ಮ ಕರ್ನಾಟಕದಲ್ಲಿ ಇದೆಯಂತೆ....
ಆಶ್ಚರ್ಯಗೊಳ್ಳಬೇಡಿ ಆ ಸ್ಥಳ ಇರುವುದು ಕರ್ನಾಟಕದಲ್ಲಿಯೇ. ಕರ್ನಾಟಕದ ಕೋಲಾರ ಜಿಲ್ಲೆಯ ಮುಳುಬಾಗಿಲು ತಾಲೂಕಿನಲ್ಲಿರುವ ಕುರುಡುಮಲೆ ಎಂಬ ಸ್ಥಳವೇ ಆ ಪ್ರವಿತ್ರವಾದ ಪ್ರದೇಶವಾಗಿದೆ. ಕುರುಡುಮಲೆಯು ಕರ್ನಾಟಕದ ಕೋಲಾರ ಜಿಲ್ಲೆಯಲ್ಲಿದ್ದು, ಪ್ರಸಿದ್ಧವಾದ ಯಾತ್ರಾ ಸ್ಥಳವೆಂದೂ ಸಹ ಖ್ಯಾತಿಯನ್ನು ಪಡೆದಿದೆ.
ದೇವತೆಗಳು ಭೇಟಿ ಮಾಡುವ ಸ್ಥಳ ನಮ್ಮ ಕರ್ನಾಟಕದಲ್ಲಿ ಇದೆಯಂತೆ....
ಆ ಸ್ಥಳದಲ್ಲಿ ಪ್ರಾಚೀನಾವಾದ ಶಿವನ ದೇವಾಲಯ ಮತ್ತು ಗಣಪತಿ ದೇವಾಲಯವಿರುವ ಸ್ಥಳವೇ ಕುರುಡುಮಲೆಯಾಗಿದೆ. ಇಲ್ಲಿನ ಗಣಪತಿ ಮೂರ್ತಿಯು ಅತ್ಯಂತ ಮಹಿಮಾನ್ವಿತವಾದ ದೇವತಾ ಮೂರ್ತಿ ಎಂದು ಹೆಸರುವಾಸಿಯಾಗಿದೆ. ನಿಮಗೆ ಗೊತ್ತ....
ದೇವತೆಗಳು ಭೇಟಿ ಮಾಡುವ ಸ್ಥಳ ನಮ್ಮ ಕರ್ನಾಟಕದಲ್ಲಿ ಇದೆಯಂತೆ....
ಈ ಕುರುಡು ಮಲೆಯಲ್ಲಿರುವ ಗಣಪತಿಯ ಮೂರ್ತಿಯ ಬಗ್ಗೆ ಒಂದು ದಂತಕಥೆ ಇದೆ. ಅದರ ಪ್ರಕಾರ ಈ ಗಣಪತಿ ಮೂರ್ತಿಯನ್ನು ಸಾಕ್ಷಾತ್ ತ್ರಿಮೂರ್ತಿಗಳು ಪ್ರತಿಷ್ಟಾಪಿಸಿದರು ಎಂದು ನಂಬಲಾಗಿದೆ. ಈ ವಿಗ್ರಹದ ಸುತ್ತಲೂ ಅನೇಕ ದೇವಾಲಯಗಳು ಕೂಡ ಇವೆ.
ದೇವತೆಗಳು ಭೇಟಿ ಮಾಡುವ ಸ್ಥಳ ನಮ್ಮ ಕರ್ನಾಟಕದಲ್ಲಿ ಇದೆಯಂತೆ....
ಆ ಸುಂದರವಾದ ದೇವಾಲಯಗಳೆಲ್ಲಾ ವಿಜಯನಗರದ ಅರಸರು ನಿರ್ಮಾಣ ಮಾಡಿದರು ಎಂದು ಸ್ಥಳ ಪುರಾಣವು ತಿಳಿಸುತ್ತದೆ. ಕುರುಡು ಮಲೆಗೆ ಅನೇಕ ದಂತ ಕಥೆಗಳು ಕೂಡ ಪ್ರಚಾರದಲ್ಲಿದೆ. ಕುರುಡು ಮಲೆ ಎಂಬ ಹೆಸರು ಕೂಡು ಮತ್ತು ಮಲೆ ಎಂಬ ಪದಗಳಿಂದ ಬಂದಿದೆ. ಇದರರ್ಥ ಸೇರುವ ಅಥವಾ ಭೇಟಿಯಾಗುವ ಸ್ಥಳವೆಂದೇ ಅರ್ಥ.
ದೇವತೆಗಳು ಭೇಟಿ ಮಾಡುವ ಸ್ಥಳ ನಮ್ಮ ಕರ್ನಾಟಕದಲ್ಲಿ ಇದೆಯಂತೆ....
ಸ್ಥಳೀಯರ ನಂಬಿಕೆಯ ಪ್ರಕಾರ ಈ ಸ್ಥಳವು ದೇವರುಗಳಿಗೆ ಬೇಸರವಾದಾಗ ಅವರು ತಮ್ಮ ಕಾಲವನ್ನು ಕಳೆಯುವ ಸಲುವಾಗಿ ಭೂಮಿಗೆ ಇಳಿಯುತ್ತಾರಂತೆ. ಆ ಪವಿತ್ರವಾದ ಸ್ಥಳವೇ ಈ ಕುರುಡು ಮಲೆ. ಇಲ್ಲಿನ ಮಹಿಮಾನ್ವಿತವಾದ ಗಣೇಶನ ದೇವಾಲಯದಲ್ಲಿ ಸುಮಾರು 17 ಅಡಿ ಎತ್ತರದ ಗಣಪತಿ ಮೂರ್ತಿ ಇದೆ.
ದೇವತೆಗಳು ಭೇಟಿ ಮಾಡುವ ಸ್ಥಳ ನಮ್ಮ ಕರ್ನಾಟಕದಲ್ಲಿ ಇದೆಯಂತೆ....
ಈ ಸುಂದರವಾದ ದೇವಾಲಯವನ್ನು 2 ವಿಭಿನ್ನವಾದ ಶೈಲಿಗಳಲ್ಲಿ ನಿರ್ಮಾಣ ಮಾಡಲಾಗಿದೆ. ಇದರ ಕುರಿತು ದಂತಕಥೆಗಳಿದ್ದು, ಅದರ ಪ್ರಕಾರ ಈ ದೇವಾಲಯವನ್ನು ಇತಿಹಾಸ ಪ್ರಸಿದ್ಧವಾದ ಶಿಲ್ಪಿಗಳಾದ ಜಕಣಾಚಾರಿ ಮತ್ತು ಆತನ ಮಗ ಡಕಣಾಚಾರಿ ಇಬ್ಬರು ವಿನ್ಯಾಸಗೊಳಿಸಿದರು ಎಂದು ಹೇಳಲಾಗುತ್ತಿದೆ.
ದೇವತೆಗಳು ಭೇಟಿ ಮಾಡುವ ಸ್ಥಳ ನಮ್ಮ ಕರ್ನಾಟಕದಲ್ಲಿ ಇದೆಯಂತೆ....
ಇಷ್ಟೇ ಅಲ್ಲ ಕುರುಡುಮಲೆಯಲ್ಲಿ ಶಿವನಿಗೆ ಮುಡಿಪಾದ ಪುರಾತನವಾದ ಸೋಮೇಶ್ವರ ದೇವಾಲಯವಿದೆ. ಅದು ಇಲ್ಲಿನ ಗಣಪತಿ ದೇವಾಲಯಕ್ಕಿಂತ ಪುರಾತನವಾದುದು. ಚೋಳರು ಆಳ್ವಿಕೆಯ ಸಮಯದಲ್ಲಿ ಈ ದೇವಾಲಯವನ್ನು ನಿರ್ಮಾಣ ಮಾಡಿದರು ಎಂದು ಲೆಕ್ಕಾಚಾರ ಹಾಕಲಾಗಿದೆ.
ದೇವತೆಗಳು ಭೇಟಿ ಮಾಡುವ ಸ್ಥಳ ನಮ್ಮ ಕರ್ನಾಟಕದಲ್ಲಿ ಇದೆಯಂತೆ....
ಇಷ್ಟೆಲ್ಲಾ ವಿಶೇಷತೆಗಳಿರುವ ಕುರುಡುಮಲೆ ಒಂದು ವಿಶಿಷ್ಟವಾದ ಧಾರ್ಮಿಕ ಪ್ರವಾಸಿ ತಾಣವಾಗಿಯೂ ಜನರನ್ನು ಗಮನ ಸೆಳೆಯುತ್ತಿದೆ. ಹೀಗಾಗಿಯೇ ಇಲ್ಲಿಗೆ ಅನೇಕ ಮಂದಿ ಭಕ್ತರು ಇಲ್ಲಿನ ದೇವಾಲಯಗಳಿಗೆಲ್ಲಾ ಭೇಟಿ ನೀಡುತ್ತಿರುತ್ತಾರೆ.
ದೇವತೆಗಳು ಭೇಟಿ ಮಾಡುವ ಸ್ಥಳ ನಮ್ಮ ಕರ್ನಾಟಕದಲ್ಲಿ ಇದೆಯಂತೆ....
ಕೋಲಾರ ಜಿಲ್ಲೆಯಲ್ಲಿರುವ ಕುರುಡುಮಲೆಯು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸುಮಾರು 100 ಕಿ.ಮೀ ಗಳಷ್ಟು ದೂರದಲ್ಲಿದೆ. ರಸ್ತೆ ಮಾರ್ಗದ ಮೂಲಕ ಸುಲಭವಾಗಿ ತಲುಪಬಹುದು. ಮುಳುಬಾಗಿಲಿನಿಂದ ಈ ಸ್ಥಳಕ್ಕೆ ತೆರಳಲು ವಾಹನಗಳು ಸುಲಭವಾಗಿ ದೊರೆಯುತ್ತವೆ.