ದಾವಣಗರೆ ಸಮೀಪದಲ್ಲಿರುವ ಹೆಳವನಕಟ್ಟೆ ರಂಗನಾಥ ಸ್ವಾಮಿ, ಅಥವಾ ಹೆಳವನಕಟ್ಟೆ ಗಿರಿಯಮ್ಮನ ಬಗ್ಗೆ ಕೇಳಿದ್ದೀರಾ? ಗಿರಿಯಮ್ಮ ರಂಗನಾಥ ಸ್ವಾಮಿಯ ಮಹಾನ್ ಭಕ್ತೆ. ಈಕೆಯಿಂದಾಗಿಯೇ ಈ ಕ್ಷೇತ್ರ ಸಾಕಷ್ಟು ಪ್ರಸಿದ್ಧಿ ಹೊಂದಿತು.ಈ ಹೆಳವನಕಟ್ಟೆ ಗ್ರಾಮವನ್ನು ಕೋಮಾರನಹಳ್ಳಿ ಎಂದೂ ಕರೆಯುತ್ತಾರೆ.
ಎಲ್ಲಿದೆ ಈ ದೇವಾಲಯ
PC: facebook
ಬೆಂಗಳೂರಿನಿಂದ ಸುಮಾರು 5-6ಗಂಟೆಯಲ್ಲಿ ದಾವಣಗೆರೆಯನ್ನು ತಲುಪಬಹುದು. ಹೊನ್ನಾವಳಿ ಮಾರ್ಗದಲ್ಲಿ ಸಾಗಿದರೆ ಮಲೆಬೆನ್ನೂರು ಎನ್ನುವ ಊರು ಸಿಗುತ್ತದೆ. ಅಲ್ಲಿಗೆ ಸಮೀಪದಲ್ಲಿದೆ ರಂಗನಾಥನ ಸನ್ನಿಧಿ. ದಾವಣಗೆರೆಯಿಂದ ಸುಮಾರು 20 ಕಿ.ಮೀ ದೂರದಲ್ಲಿದೆ.
ನವಂಬರ್ನಲ್ಲಿ ಸುತ್ತಾಡೋಡೋಕೆ ಹೋಗೋದಾದ್ರೆ ಇಲ್ಲಿಗೆ ಹೋಗೋದು ಬೆಸ್ಟ್
ಹೆಸರು ಬಂದಿದ್ದು ಹೇಗೆ?
PC: facebook
ಸೂರ್ಯನ ಸಾರಥಿ ಅರುಣ ಶಾಪಗ್ರಸ್ಥನಾಗಿ ಹೆಳವನಾಗಿದ್ದನಂತೆ. ಹಸುವಿನ ಮೈ ತೊಳೆಯಲು ಹೆಳವನು ಒಂದು ಕಟ್ಟೆಯನ್ನು ನಿರ್ಮಿಸಿದ್ದನಂತೆ. ಹಾಗಾಗಿ ಇಲ್ಲಿಗೆ ಹೆಳವನ ಕಟ್ಟೆ ಎನ್ನಲಾಗುತ್ತದೆ. ಇಲ್ಲಿ ರಂಗನಾಥ ಸ್ವಾಮಿ ನೆಲೆಸಿರುವುದು ತಿಳಿದುಬಂದಿದ್ದು ಹಸುವಿನಿಂದ ಎನ್ನಲಾಗುತ್ತದೆ.
ರಂಗನಾಥನಿಗೆ ಹಾಲೆರೆಯುತ್ತಿದ್ದ ಹಸು
PC: facebook
ಹೆಳವ ತಾನು ಮೇಯಿಸುತ್ತಿದ್ದ ದನಗಳನ್ನು ಯಜಮಾನದ ಮನೆಗೆ ಹೋಗಿ ಬಿಡುತ್ತಿದ್ದ ಆಗ ಎಲ್ಲಾ ಹಸುಗಳು ಹಾಲನ್ನು ನೀಡುತ್ತಿದ್ದವು ಆದರೆ ಒಂದು ಹಸು ಮಾತ್ರ ಹಾಲು ನೀಡುತ್ತಿರಲಿಲ್ಲವಂತೆ. ಈ ಬಗ್ಗೆ ಪರೀಕ್ಷಿಸಿದಾಗ ಹಸು ರಂಗನಾಥ ಸ್ವಾಮಿಗೆ ಹಾಲು ಅರ್ಪಿಸುತ್ತಿದ್ದದು ಬೆಳಕಿಗೆ ಬರುತ್ತದೆ.
ಈ ನಕ್ಷತ್ರದಲ್ಲಿ ಜನಿಸಿದವರು ವರ್ಷಕ್ಕೊಮ್ಮೆ ಇಲ್ಲಿಗೆ ಭೇಟಿ ನೀಡಿದ್ರೆ ಸಕಲ ಸಂಕಷ್ಟ ದೂರವಾಗುತ್ತಂತೆ!
ಹೆಳವನಕಟ್ಟೆ ಗಿರಿಯಮ್ಮ
PC: facebook
ಒಂದು ದಿನ ಸಾದ್ವಿ ಒಬ್ಬರು ಇಲ್ಲಿಗೆ ಭೇಟಿ ನೀಡಿ ರಂಗನಾಥನ ಸೇವೆ ಮಾಡುತ್ತಾಳೆ. ಆಕೆ ಇಲ್ಲಿಗೆ ಬಂದ ನಂತರ ಈ ಸ್ಥಳ ಪ್ರಖ್ಯಾತವಾಗಿದದ್ದು. ಆ ಸಾದ್ವಿಯ ಹೆಸರು ಹೆಳವನಕಟ್ಟೆ ಗಿರಿಯಮ್ಮ.
ರಂಗಸ್ಪರಣೆಯಲ್ಲೇ ಜೀವನ ಕಳೆದ ಗಿರಿಯಮ್ಮ
PC: facebook
ಗಿರಿಯಮ್ಮ ವಾಸಮಾಡುತ್ತಿದ್ದ ಮಲೆಬೆನ್ನೂರಿನ ಮನೆಯಲ್ಲಿ ಇಂದಿಗೂ ಬೃಂದಾವನವನ್ನು ಕಾಣಬಹುದು. ಇಲ್ಲಿ ಸಾಕಷ್ಟು ಗೀತೆಗಳನ್ನು ರಚಿಸಿದ್ದಾರಂತೆ. ರಂಗಸ್ಪರಣೆಯಲ್ಲೇ ಬದುಕನ್ನು ಕಳೆಯುತ್ತಿದ್ದರಂತೆ.
ಹಿಮಾಲಯದಲ್ಲಿರುವ ಖೀರ್ಗಂಗಾಕ್ಕೆ ಚಾರಣ ಕೈಗೊಳ್ಳಲೇ ಬೇಕು
ದೇಹತ್ಯಾಗ ಮಾಡಿದ್ದ ಸ್ಥಳ
PC: facebook
ಕಮ್ಮಾರಗಟ್ಟೆ ಎನ್ನುವ ಸ್ಥಳದಲ್ಲಿ ಬುಡಮೇಲಾದ ಹುಣಸೆ ಮರದ ಕೆಳಗೆ ದೇಹತ್ಯಾಗ ಮಾಡಿದರು ಎನ್ನಲಾಗುತ್ತದೆ. ಈಗಲೂ ಆ ಬುಡಮೇಲಾದ ಹುಣಸೆಮರವನ್ನು ಕಾಣಬಹುದು.
ರಂಗನಾಥ ಆಶ್ರಮ
PC: facebook
ಇಲ್ಲಿ ಶಿವ, ಮಹಾಲಕ್ಷ್ಮೀಯನ್ನೂ ಪೂಜಿಸಲಾಗುತ್ತದೆ. ಇನ್ನೂ ಇಲ್ಲಿಗೆ ಬರುವ ಭಕ್ತರಿಗೆ ಉಳಿಯಲು ರಂಗನಾಥ ಆಶ್ರಮದಲ್ಲಿ ಉಚಿತ ವ್ಯವಸ್ಥೆಯೂ ಇದೆ.