ನವರಾತ್ರಿಯ ಒಂಭತ್ತನೇ ದಿನ ದುರ್ಗಾ ಮಾತೆಯ ಒಂಭತ್ತನೇ ಸ್ವರೂಪವಾದ ಸಿದ್ಧಿದಾತ್ರಿಯನ್ನು ಪೂಜಿಸಲಾಗುತ್ತದೆ. ಸಿದ್ಧಿದಾತ್ರಿಯು ಕಮಲದ ಮೇಲೆ ಆಸೀನಳಾಗಿದ್ದಾಳೆ. ಸಿಂಹ ಈಕೆಯ ವಾಹನ. ಚತುರ್ಭುಜೆಯಾಗಿರುವ ತಾಯಿಯು ಕೈಯಲ್ಲಿ ಗಧೆ, ಶಂಖ, ಚಕ್ರ, ಹೂವನ್ನು ಹಿಡಿದುಕೊಂಡಿದ್ದಾಳೆ.
ಸಿದ್ಧಿದಾತ್ರಿ
PC:Jonoikobangali
ಸಿದ್ಧಿದಾತ್ರಿಯನ್ನು ಪೂಜಿಸಿದರೆ ಮನೋಕಾಮನೆಗಳು ಈಡೇರುತ್ತದೆ. ಈಕೆ ಅಷ್ಟಸಿದ್ಧಿ ಕರುಣಿಸುವ ತಾಯಿ. ನವರಾತ್ರಿಯ 8 ದಿನಗಳ ಕಾಲ ಪೂಜೆ ಮಾಡಿ ನಂತರ ಒಂಭತ್ತನೇ ದಿನ ಸಿದ್ಧಿದಾತ್ರಿಯ ಪೂಜೆ ಮಾಡುವುದರಿಂದ ಲೌಖಿಕ, ಪಾರಲೌಖಿಕ ಸುಖ ಸಿಗುತ್ತದೆ. ಕಷ್ಟಗಳೆಲ್ಲಾ ತನ್ನಷ್ಟಕ್ಕೆ ದೂರವಾಗುತ್ತದೆ.
ಬೆಂಗಳೂರಿಗೆ ಬಂದಿದೆ ಹಾರುವ ರೆಸ್ಟೋರೆಂಟ್ : ಒಂದು ಊಟದ ಬೆಲೆ ಎಷ್ಟು ಗೊತ್ತಾ?
ವಾರಣಾಸಿ
ಸಿದ್ದೇಶ್ವರಿಯನ್ನೇ ಸಿದ್ಧಿದಾತ್ರಿ ಎನ್ನಲಾಗುತ್ತದೆ. ಇದು ವಾರಣಾಸಿಯ ಸಿದ್ದೇಶ್ವರಿ ಮೊಹಲ್ಲಾದಲ್ಲಿದೆ. ನೀವು ಇಲ್ಲಿಗೆ ಚೌಕ್ವರೆಗೆ ತಲುಪಿ ಆ ನಂತರ ಅಲ್ಲಿಂದ ರಿಕ್ಷಾ ಮೂಲಕ ದೇವಾಲಯವನ್ನು ತಲುಪಬಹುದು. ಭಾರತದ ಇನ್ನೂ ಹಲವು ಕಡೆಗಳಲ್ಲಿ ಸಿದ್ಧಿದಾತ್ರಿ ಮಂದಿರವಿದೆ.
ಸತ್ನಾ
ಇದು ಮಧ್ಯಪ್ರದೇಶ ರಾಜ್ಯದ ಜಿಲ್ಲೆಯ ಕೇಂದ್ರ ಕಾರ್ಯಾಲಯ ನಗರವಾಗಿದೆ. ಬಸ್ ಡಿಪೋದ ಪಕ್ಕದಲ್ಲಿ ಚನ್ನಕಪುರಿ ವಸಾಹತು ಪ್ರದೇಶದಲ್ಲಿ ಸಿದ್ಧಿದಾತ್ರಿ ಮಂದಿರವಿದೆ. ಈ ದೇವಾಲಯ ಸತ್ನಾದಿಂದ 2.5 ಕಿ.ಮೀ ದೂರದಲ್ಲಿದೆ.
ಮಹಾಗೌರಿ ದೇವಸ್ಥಾನ ವಾರಣಾಸಿ: ಈ ದೇವಿಯನ್ನು ಪೂಜಿಸುವವರಿಗೆ ದರಿದ್ರ ಬರೋದಿಲ್ಲ
ಆಯುಧ ಪೂಜೆ
ಮಹಾ ನವರಾತ್ರಿ ಸಮಯದಲ್ಲಿ ಆಯುಧ ಪೂಜೆ ಬರುತ್ತದೆ ಮತ್ತು ಇದು ದಕ್ಷಿಣ ಭಾರತದಲ್ಲಿ ಮುಖ್ಯವಾಗಿ ಕರ್ನಾಟಕ, ತಮಿಳುನಾಡು, ಆಂಧ್ರ ಪ್ರದೇಶ ಮತ್ತು ಕೇರಳದಲ್ಲಿ ಮಾತ್ರ ಜನಪ್ರಿಯವಾಗಿದೆ. ಐತಿಹಾಸಿಕವಾಗಿ ಆಯುಧ ಪೂಜೆ ಶಸ್ತ್ರಾಸ್ತ್ರಗಳನ್ನು ಪೂಜಿಸಲು ಉದ್ದೇಶಿಸಲಾಗಿತ್ತು ಆದರೆ ಪ್ರಸ್ತುತ ರೂಪದಲ್ಲಿ ಎಲ್ಲಾ ರೀತಿಯ ಉಪಕರಣಗಳನ್ನು ಅದೇ ದಿನದಂದು ಪೂಜಿಸಲಾಗುತ್ತದೆ.
ವಾಹನಗಳ ಪೂಜೆ
ದಕ್ಷಿಣ ಭಾರತದಲ್ಲಿ ಕುಶಲಕರ್ಮಿಗಳು ತಮ್ಮ ಸಾಧನಗಳನ್ನು ಪೂಜಿಸುತ್ತಾರೆ. ಆಯುಧ ಪೂಜಾದಂದು ಜನರು ಕಾರುಗಳು, ಸ್ಕೂಟರ್, ಮತ್ತು ಮೋಟಾರ್ ಬೈಕುಗಳು ಸೇರಿದಂತೆ ತಮ್ಮ ವಾಹನಗಳನ್ನು ಪೂಜಿಸುತ್ತಾರೆ. ವಾಹನ ಪೂಜೆಯ ಸಂದರ್ಭದಲ್ಲಿ ಎಲ್ಲಾ ರೀತಿಯ ವಾಹನಗಳನ್ನು ಉಪಯೋಗಿಸಲಾಗಿದ್ದು, ಅವುಗಳು ಹೂಮಾಲೆ, ಮಾವಿನ ಎಲೆಗಳು ಮತ್ತು ಬಾಳೆ ಸಸಿ ಮತ್ತು ನಿಂಬೆ ಹಣ್ಣು ಇಟ್ಟು ಪೂಜಿಸಲಾಗುತ್ತದೆ.
ಸಾಯಿಬಾಬಾ ಜೀವಸಮಾಧಿಯಾಗಿದ್ದು ಎಲ್ಲಿ ಮತ್ತು ಯಾವಾಗ ಗೊತ್ತಾ?
ಬಿಳಿ ಕುಂಬಳಕಾಯಿ
ವಾಹನಾ ಪೂಜೆಯ ಸಮಯದಲ್ಲಿ ಒಂದು ಬಿಳಿ ಕುಂಬಳಕಾಯಿ ಅತ್ಯಂತ ಗಮನಾರ್ಹವಾಗಿದೆ. ಅದನ್ನು ಅರಿಶಿನಿಂದ ಅಲಂಕರಿಸಲಾಗುತ್ತದೆ. ಎಲ್ಲಾ ರೀತಿಯ ದುಷ್ಟತನವನ್ನು ತೊಡೆದುಹಾಕಲು ಸಂಪ್ರದಾಯವಾಗಿ ವಾಹನದ ಮುಂದೆ ಅದನ್ನು ಹೊಡೆದು ಹಾಕಲಾಗುತ್ತದೆ.