Search
  • Follow NativePlanet
Share
» »ಮಾರಣಾಂತಿಕ ಕಾಯಿಲೆ ವಾಸಿಮಾಡುತ್ತಾನಂತೆ ತುಮಕೂರಿನ ಈ ವೈದ್ಯನಾಥೇಶ್ವರ

ಮಾರಣಾಂತಿಕ ಕಾಯಿಲೆ ವಾಸಿಮಾಡುತ್ತಾನಂತೆ ತುಮಕೂರಿನ ಈ ವೈದ್ಯನಾಥೇಶ್ವರ

ಜನರು ತಮ್ಮ ಯಾವುದೇ ದೊಡ್ಡ ದೊಡ್ಡ ಕಾಯಿಲೆಗಳಿಗೆ ಗುಣವಾಗಲು ಈ ದೇವರ ಸನ್ನಿಧಿಗೆ ಬರುತ್ತಾರೆ. ಹಾಗಾದರೆ ಬನ್ನಿ ಆ ವಿಶೇಷ ದೇವಾಲಯ ಯಾವುದು ಎನ್ನುವುದನ್ನು ನಾವು ತಿಳಿಯೋಣ.

ಮನುಷ್ಯನಿಗೆ ಯಾವುದೇ ಕಷ್ಟ ಬಂದರು , ರೋಗ ಬಂದರೂ ಮೊದಲು ಪ್ರಾರ್ಥಿಸೋದು ದೇವರನ್ನ. ಎಷ್ಟೇ ದೊಡ್ಡ ವೈದ್ಯರಾದರೂ ತಮ್ಮ ಕೈಯಲ್ಲಿ ಸಾಧ್ಯವಾಗೋದಿಲ್ಲ ಎಂದಾಗ ಇನ್ನು ದೇವರೇ ಕಾಪಾಡ ಬೇಕಷ್ಟೇ ಎಂದು ಕೈ ಚೆಲ್ಲಿಬಿಡುತ್ತಾರೆ. ಮನುಷ್ಯರೂ ಅಷ್ಟೇ ಕೊನೆಯ ಕ್ಷಣದಲ್ಲಿ ಏನಾದರೂ ಚಮತ್ಕಾರ ಆಗುತ್ತದೋ ಎಂದು ದೇವರ ಮೊರೆ ಹೋಗುತ್ತಾರೆ. ದೇವರ ಕೃಪೆಯಿಂದ ಸಾಕಷ್ಟು ಚಮತ್ಕಾರಗಳಾಗಿರುವುದರ ಬಗ್ಗೆ ನೀವು ಕೇಳಿರಬಹುದು. ಅಂತಹದ್ದೇ ಒಂದು ಚಮತ್ಕಾರವನ್ನು ಉಂಟು ಮಾಡುವ ದೇವಸ್ಥಾನ ತುಮಕೂರಿನಲ್ಲಿದೆ. ಜನರು ತಮ್ಮ ಯಾವುದೇ ದೊಡ್ಡ ದೊಡ್ಡ ಕಾಯಿಲೆಗಳಿಗೆ ಗುಣವಾಗಲು ಈ ದೇವರ ಸನ್ನಿಧಿಗೆ ಬರುತ್ತಾರೆ. ಹಾಗಾದರೆ ಬನ್ನಿ ಆ ವಿಶೇಷ ದೇವಾಲಯ ಯಾವುದು ಎನ್ನುವುದನ್ನು ನಾವು ತಿಳಿಯೋಣ.

ಎಲ್ಲಿದೆ ಈ ದೇವಸ್ಥಾನ

ಎಲ್ಲಿದೆ ಈ ದೇವಸ್ಥಾನ

PC: Facebook
ಶ್ರೀ ವೈದ್ಯನಾಥೇಶ್ವರ ಸ್ವಾಮಿ ದೇವಸ್ಥಾನವು ಪುರಾತನಕಾಲದ್ದು. ಶ್ರೀ ವೈದ್ಯನಾಥೇಶ್ವರ ಸ್ವಾಮಿ ದೇವಸ್ಥಾನವು ಬೆಂಗಳೂರು ಮಹಾನಗರದಿಂದ 70 ಕಿ.ಮೀ. ದೂರದಲ್ಲಿರುವ ತುಮಕೂರು ನಗರದದ ನೈರುತ್ಯ ದಿಕ್ಕಿನಲ್ಲಿ ಹಚ್ಚ ಹಸುರಿನಿಂದಾವೃತವಾಗಿರುವ ಅರೆಯೂರು ಗ್ರಾಮದಲ್ಲಿದೆ. ತುಮಕೂರು ನಗರಕ್ಕೆ 16 ಕಿ.ಮೀ. ದೂರದಲ್ಲಿರುವ ಈ ಪ್ರಸಿದ್ಧ ಯಾತ್ರಾಸ್ಥಳವು ಬೆಂಗಳೂರು - ಹೊನ್ನಾವರ ರಾಷ್ಟ್ರೀಯ ಹೆದ್ದಾರಿ 206 ರಲ್ಲಿ ತುಮಕೂರಿನಿಂದ ಶಿವಮೊಗ್ಗದ ಕಡೆ ಕ್ರಮಿಸುವಾಗ ಸಿಗುವ ಮಲ್ಲಸಂದ್ರ ಗ್ರಾಮದಿಂದ ದಕ್ಷಿಣಕ್ಕೆ 8 ಕಿ.ಮೀ. ದೂರದಲ್ಲಿದೆ.

ಸಾವಿರ ವರ್ಷಗಳ ಪುರಾತನ ಶಿವಾಲಯ

ಸಾವಿರ ವರ್ಷಗಳ ಪುರಾತನ ಶಿವಾಲಯ

ಈ ದೇವಸ್ಠಾನವು ಸುಮಾರು ಒಂದು ಸಾವಿರ ವರ್ಷಗಳ ಪುರಾತನವಾದ ಶಿವಾಲಯವಾಗಿದೆ. ಈ ದೇವಸ್ಥಾನದಲ್ಲಿ ಮಹಾಮಹಿಮೆಯ ಜ್ಯೋತಿರ್ಲಿಂಗವೊಂದಿದೆ. ಶ್ರೀ ವೈದ್ಯನಾಥೇಶ್ವರ ಸ್ವಾಮಿ ದೇವಸ್ಥಾನಕ್ಕೆ ಪ್ರತಿದಿನ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಹಾಗೂ ರೋಗಿಗಳು ಬರುತ್ತಿರುತ್ತಾರೆ. ಕಾರಣವೇನೆಂದರೆ ಶ್ರೀ ವೈದ್ಯನಾಥೇಶ್ವರ ಸ್ವಾಮಿ ದೇವರನ್ನು ದೃಢ ಭಕ್ತಿಯಿಂದ ನಂಬಿ ಪೂಜಿಸಿದರೆ ಭಕ್ತರ ಇಷ್ಟಾರ್ಥಗಳು ಈಡೇರುತ್ತವೆ. ರೋಗಿಗಳ ರೋಗಗಳು ಸಹ ಯಾವುದೇ ಔಷಧೋಪಚಾರ ಅಥವಾ ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳದಿದ್ದರೂ ಸಹ ಪವಾಡ ಸದೃಶ್ಯವಾಗಿ ವಾಸಿಯಾಗುತ್ತದಂತೆ.

ಶ್ರೀ ವೈದ್ಯನಾಥೇಶ್ವರ ಸ್ವಾಮಿ

ಶ್ರೀ ವೈದ್ಯನಾಥೇಶ್ವರ ಸ್ವಾಮಿ

ಈ ಮಹಾಮಹಿಮೆಯ ಪುರಾತನ ಜ್ಯೋತಿರ್ಲಿಂಗ ಶ್ರೀ ವೈದ್ಯನಾಥೇಶ್ವರ ಸ್ವಾಮಿ ಎಂದೇ ಪ್ರಸಿದ್ಧವಾಗಿದೆ. ಈ ದೇವಸ್ಥಾನದ ಹಿಂಭಾಗದಲ್ಲಿ ಅಂದರೆ ಅರೆಯೂರು ಕೆರೆಯ ಏರಿಯ ಆಳದಲ್ಲಿ ಉದ್ಭವ ಲಿಂಗರೂಪಿಯಾದ ಶ್ರೀ ಹಾಲು ಮಲ್ಲೇಶ್ವರ ಸ್ವಾಮಿ ದೇವಸ್ಥಾನವಿದೆ.ಈ ದೇವಾಲಯವು ಕರ್ನಾಟಕದ ಚೋಳ ರಾಜವಂಶದ ಕಾಲದಲ್ಲಿ ವಿಸ್ತರಿಸಲಾಯಿತು. ಪ್ರಸ್ತುತ ಹಾಲು ಮಲ್ಲೇಶ್ವರ ಸ್ವಾಮಿ ದೇವಸ್ಥಾನವಿರುವ ಸ್ಥಳದಲ್ಲಿ ದೈವಿಕ ಔಷಧೀಯ ಮರವೊಂದು ಇತ್ತು. ಈ ಔಷಧಿ ವೃಕ್ಷದ ಎಲೆಗಳಿಂದ ಔಷಧಿಗಳನ್ನು ತಯಾರಿಸಿ ಸಂತರು ತಮ್ಮ ಬಳಿಗೆ ಬರುವ ರೋಗಿಗಳ ರೋಗಗಳನ್ನು ಗುಣಪಡಿಸಲು ಬಳಸುತ್ತಿದ್ದರು.

ಮಾರಣಾಂತಿಕ ರೋಗಗಳು ಗುಣವಾಗುತ್ತದೆ

ಮಾರಣಾಂತಿಕ ರೋಗಗಳು ಗುಣವಾಗುತ್ತದೆ


ಈ ದೇವರನ್ನು ವೈದ್ಯನಾಥ ಎನ್ನುತ್ತಾರೆ. ಅಂದರೆ ವೈದ್ಯಕೀಯ ದೇವತೆ ಎಂದರ್ಥ. ಇಲ್ಲಿನ ದೇವರು ಮಾರಣಾಂತಿಕ ರೋಗಗಳಾದ ಕ್ಯಾನ್ಸರ್, ಹೃದಯಾಘಾತ, ಮೂತ್ರಪಿಂಡದ ವೈಫಲ್ಯ, ಶಸ್ತ್ರಚಿಕಿತ್ಸೆಯಿಲ್ಲದೆಯೇ ಪ್ರಾಣಾಂತಿಕ ರೋಗಗಳನ್ನು ಗುಣಪಡಿಸುತ್ತಾರೆ ಎನ್ನುವ ನಂಬಿಕೆ ಜನರದ್ದು. ಇದಕ್ಕೆ ಉದಾಹರಣೆ ಎನ್ನುವಂತೆ ಹಲವಾರು ಘಟನೆಗಳೂ ನಡೆದಿವೆ.

ಶ್ರೀ ಗದ್ದಿಗಪ್ಪದ ಸಮಾಧಿ

ಶ್ರೀ ಗದ್ದಿಗಪ್ಪದ ಸಮಾಧಿ

ಅರಿಯೂರು ಪ್ರವೇಶಿಸುವಾಗ, ಸಂತ ಶ್ರೀ ಗದ್ದಿಗಪ್ಪರ ಸಮಾಧಿಯನ್ನು ಕಾಣಬಹುದು. 60-70 ವರ್ಷಗಳ ಹಿಂದೆ ಈ ಸಮಾಧಿಯಿಂದ ಪರಿಮಳಯುಕ್ತ ವಾಸನೆ ಹೊಮ್ಮುತ್ತಿತ್ತಂತೆ. ಆದರೆ ಇತ್ತೀಚಿನ ದಿನಗಳಲ್ಲಿ ಅಂತಹ ಸುವಾಸನೆ ಕಂಡುಬರುತ್ತಿಲ್ಲ. 19 ನೇ ಶತಮಾನದ ಆರಂಭದಲ್ಲಿ ಶ್ರೀ ಆಧ್ಯಾನವೇ ಸ್ವಾಮಿ ಅವರು ಶ್ರೀ ವೈದ್ಯನಾಥೇಶ್ವರ ಸ್ವಾಮಿ ದೇವಾಲಯದ ಪಕ್ಕದಲ್ಲಿ ವಾಸಿಸುತ್ತಿದ್ದಾರೆಂದು ನಂಬಲಾಗಿದೆ. ಇಂದಿಗೂ ಅವರ ಸಮಾಧಿಯನ್ನು ಇಲ್ಲಿ ಕಾಣಬಹುದು.

ಜ್ಯೋತಿರ್ಲಿಂಗವು ಕಾಸ್ಮಿಕ್ ದೈವಿಕ ಶಕ್ತಿ ಹೊಂದಿದೆ

ಜ್ಯೋತಿರ್ಲಿಂಗವು ಕಾಸ್ಮಿಕ್ ದೈವಿಕ ಶಕ್ತಿ ಹೊಂದಿದೆ

PC: Facebook
ಸಾವಿರಾರು ವರ್ಷಗಳ ಹಿಂದೆ ವಾಸವಾಗಿದ್ದ ಮತ್ತು ಇಂದಿನವರೆಗೂ ಬದುಕಿದ ದೈವಿಕ ಋಷಿಗಳ ಅಸ್ತಿತ್ವದಿಂದ ಈ ದೇವಾಲಯವು ಇನ್ನೂ ಪ್ರಭಾವಿತವಾಗಿದೆ. ಆ ಋಷಿಗಳು ತಮ್ಮ ಅಗೋಚರ ದೇಹದಲ್ಲಿ ಇಲ್ಲಿ ವಾಸಿಸುತ್ತಿದ್ದರು. ಅವರು ಸ್ಥಾಪಿಸಿದ ಜ್ಯೋತಿರ್ಲಿಂಗವು ಕಾಸ್ಮಿಕ್ ದೈವಿಕ ಶಕ್ತಿಯನ್ನು ಹೊಂದಿದೆಯೆಂದು ಹೇಳಲಾಗುತ್ತದೆ. ಜ್ಯೋತಿರ್ಲಿಂಗದ ಕಾಸ್ಮಿಕ್ ದೈವಿಕ ಶಕ್ತಿಯೊಂದಿಗೆ ಋಷಿಗಳ ದೈವಿಕ ಪ್ರಭಾವದ ವಿಧವು ಬ್ಯಾಕ್ಟೀರಿಯಾವನ್ನು ಉತ್ಪತ್ತಿ ಮಾಡುವ ರೋಗವನ್ನು ನಾಶಮಾಡುವ ಮೂಲಕ ರೋಗಗಳನ್ನು ಗುಣಪಡಿಸುವ ಜವಾಬ್ದಾರಿಯನ್ನು ಹೊಂದುವ ಪ್ರಮುಖ ಅಂಶವಾಗಿದೆ. ಪ್ರಾಚೀನ ದಿನಗಳಿಂದಲೂ, ರೋಗಗಳಿಂದ ಬಳಲುತ್ತಿರುವ ಜನರು ಅನೇಕ ದಿನಗಳಿಂದ ದೇವಸ್ಥಾನದ ಆವರಣದಲ್ಲಿ ಉಳಿಯಲು ಮತ್ತು ತಮ್ಮ ರೋಗಗಳನ್ನು ಗುಣಪಡಿಸಿಕೊಳ್ಳುವುದು ಸ್ಥಳೀಯ ಜನರಿಂದ ತಿಳಿದುಬಂದಿದೆ.

 ದೇವಸ್ಥಾನವನ್ನು ಕಾಯುತ್ತವೆ ಹಾವುಗಳು

ದೇವಸ್ಥಾನವನ್ನು ಕಾಯುತ್ತವೆ ಹಾವುಗಳು


ಈ ದೇವಸ್ಥಾನದ ಆವರಣದಲ್ಲಿ ಹಾವುಗಳು ವಾಸಿಸುತ್ತಿದ್ದಾವೆ ಮತ್ತು ಈ ಶ್ರೀ ಕ್ಷೇತ್ರವನ್ನು ಕಾವಲು ಮಾಡುತ್ತಿದ್ದಾವೆ ಎಂಬ ನಂಬಿಕೆ ಇದೆ. ರಾತ್ರಿಯ ಸಮಯದಲ್ಲಿ ಈ ಹಾವು ಹಾಲು ಮಲ್ಲೇಶ್ವರ ದೇವಸ್ಥಾನದಿಂದ ಶ್ರೀ ವೈದ್ಯನಾಥೇಶ್ವರ ಸ್ವಾಮಿ ದೇವಾಲಯಕ್ಕೆ ಟ್ಯಾಂಕ್ ನೀರಿನಲ್ಲಿ ಈಜಿಕೊಂಡು ಹೋಗುತ್ತದೆ, ಅಲ್ಲಿ ಅದು ಸ್ವಲ್ಪ ಕಾಲ ಉಳಿಯುತ್ತದೆ ಮತ್ತು ನಂತರ ಅದರ ಸ್ಥಳಕ್ಕೆ ಹಿಂದಿರುಗುತ್ತದೆ. ಸ್ಥಳೀಯರು ಈ ಹಾವು ಗಾತ್ರದಲ್ಲಿ ದೊಡ್ಡದಾಗಿ ಕಾಣುತ್ತಿರುತ್ತವೆ ಮತ್ತು ಶಿವಲಿಂಗದ ಸುತ್ತಲು ತನ್ನ ಹೆಡೆ ಬಿಚ್ಚಿರುತ್ತವೆ. ಉಳಿದ ಸಮಯದಲ್ಲಿ ಹಾವು ಸಾಮಾನ್ಯ ಹಾವಿನಂತೆ ಕಾಣುತ್ತದೆ. ಈ ದೇವಸ್ಥಾನ ಅರ್ಚಕ ಸ್ನಾನ ಮಾಡದೇ ಈ ದೇವಸ್ಥಾನದ ಒಳಗೆ ಪ್ರವೇಶಿಸಲು ಬಂದರೆ, ಈ ಸರ್ಪವು ಅತ್ತಿತ್ತ ಓಡಾಡಿ ಅರ್ಚಕರು ದೇವಾಲಯದ ಒಳಕ್ಕೆ ಪ್ರವೇಶಿಸದಂತೆ ತಡೆಯುತ್ತದೆ. ಅರ್ಚಕ ಮತ್ತೆ ಹಿಂದಿರುಗಿ ಸ್ನಾನ ಮಾಡಿ ಬಂದರೆ ಸರ್ಪವು ಕಾಣೆಯಾಗಿರುತ್ತದೆ.

ಹೂವಿನ ಪ್ರಸಾದ

ಹೂವಿನ ಪ್ರಸಾದ

ನನ್ನ ಖಾಯಿಲೆ ವಾಸಿಯಾಗುತ್ತದೆಯೇ? ನನ್ನ ಇಷ್ಟಾರ್ಥಗಳು ಈಡೇರುತ್ತವೆಯೇ? ಎಂಬ ಪ್ರಶ್ನೆಗಳನ್ನು ಮನಸ್ಸಿನಲ್ಲೇ ಕೇಳಿಕೊಂಡು ಅರ್ಚಕರಿಗೆ ದೇವರ ಮೇಲೆ ಪ್ರಸಾದ ಕೊಡುವಂತೆ ವಿನಂತಿಸಿದರೆ ಅರ್ಚಕರು ಭಕ್ತಿಯಿಂದ ಲಿಂಗದ ಮೇಲೆ ಇಟ್ಟಿರುವ ಬಿಡಿ ಹೂವುಗಳನ್ನು ಮೂರು ಬೆರಳಿನಲ್ಲಿ ಪ್ರಸಾದ ರೂಪದಲ್ಲಿ ತಂದುಕೊಡುತ್ತಾರೆ.
ಆಗ ನಮಗೆ ಪ್ರಸಾದವಾಗಿ ಬಂದ ಹೂವುಗಳು "ಬೆಸಸಂಖ್ಯೆ"ಯಲ್ಲಿ ಅಂದರೆ 1, 3, 5, 7, 9, .. ರಂತೆ ಇದ್ದರೆ ಇಷ್ಟಾರ್ಥ ಸಿದ್ಧಿಯಾಗುತ್ತದೆ ಎಂದು ಅರ್ಥ. ಅದೇ "ಸಮಸಂಖ್ಯೆ"ಯಲ್ಲಿ ಅಂದರೆ 2, 4, 6, 8, .. ರಂತೆ ಹೂವುಗಳು ಬಂದರೆ ಖಾಯಿಲೆ ವಾಸಿಯಾಗುವುದಿಲ್ಲ ಅಥವಾ ಕಾರ್ಯ ಆಗುವುದಿಲ್ಲ ಎಂದರ್ಥ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X