ಏನಾಶ್ಚರ್ಯ! ಕ್ರಿಸ್ತನು ಹಿಂದು ದೇವಾಲಯಕ್ಕೆ ಭೇಟಿ ನೀಡಿದ್ದನೆ? ಎಂದೆನಿಸದೆ ಇರಲಾರದು. ಆದರೆ ಕೆಲವು ತಜ್ಞರ ಪ್ರಕಾರ, ಇದು ಹೌದೆಂದು ಕೆಅಲವರು ನಂಬುತ್ತಾರೆ. ಅದರಲ್ಲೂ ವಿಶೇಷವಾಗಿ ಇಸ್ರೇಲ್ ದೇಶದ ಯಹೂದಿಯರಲ್ಲಿ ಸಾಕಷ್ಟು ಜನರು ಇದನ್ನು ನಂಬುತ್ತಾರೆ.
ಶಂಕರರು ಪಟ್ಟಿ ಮಾಡಿರುವ ಆ ಮಹಾಶಕ್ತಿಪೀಠಗಳು
ಇಸ್ರೇಲಿಗರು ಸಾಮಾನ್ಯವಾಗಿ ನಂಬಿರುವಂತೆ ಕ್ರಿಸ್ತನ ಕಾಲದ ಯಹೂದಿಯರು ಭಾರತದ ಕಾಶ್ಮೀರ ಪ್ರಾಂತ್ಯದಲ್ಲಿ ವಾಸಿಸಿದ್ದರೆಂದು ನಂಬಲಾಗುತ್ತದೆ. ಅಲ್ಲದೆ ಕೆಲವು ಪಂಡಿತರು ಹಾಗೂ ತಜ್ಞರ ಪ್ರಕಾರ ಕಾಶ್ಮೀರಿ ಹಾಗೂ ಇಸ್ರೇಲಿಗರಲ್ಲಿ ಸಾಕಷ್ಟು ಸಾಮ್ಯತೆ ಇರುವುದನ್ನು ಅವಲೋಕಿಸಿ ಇದನ್ನು ಪುಷ್ಟಿಕರಿಸುತ್ತಾರೆ.
ಚಿತ್ರಕೃಪೆ: Tauqee Zahid
ಇನ್ನೊಂದು ವಿಷಯವೆಂದರೆ ಕ್ರೈಸ್ತರ ಪವಿತ್ರ ಗ್ರಂಥವಾದ ಬೈಬಲ್ ನಲ್ಲೂ ಸಹ ಕ್ರಿಸ್ತನ ಬಾಲ್ಯದಿಂದ ಯೌವನಾವಸ್ಥಯವರೆಗಿನ ಸಮಯದ ಕುರಿತು ಯಾವುದೆ ವಿವರಣೆಗಳಿಲ್ಲ. ಅದನ್ನು "ಲಾಸ್ಟ್ ಹಿಸ್ಟರಿ ಆಫ್ ಜೀಸಸ್" ಎಂದು ಕರೆಯುತ್ತಾರೆ. ಕೆಲವು ಇತಿಹಾಸಕಾರರ ಪ್ರಕಾರ, ಈ ಸಮಯದಲ್ಲಿ ಕ್ರಿಸ್ತನು ಭಾರತಕ್ಕೆ ಭೇಟಿ ನೀಡಿದ್ದನೆನ್ನಲಾಗುತ್ತದೆ.
ದೇವಾಲಯದೊಳಗೆ, ಚಿತ್ರಕೃಪೆ: Divya Gupta
ಅದರಲ್ಲೂ ವಿಶೇಷವಾಗಿ ಕಾಶ್ಮೀರ ಪ್ರಾಂತ್ಯಕ್ಕೆ ಕ್ರಿಸ್ತನು ಭೇಟಿ ನೀಡಿದ್ದನಂತೆ. ಅದಕ್ಕೆ ಕುರುಹಾಗಿ ಶ್ರೀನಗರದ ಬಳಿಯಿರುವ ಪರ್ವತವೊಂದರ ಮೇಲಿರುವ ಶಂಕರಾಚಾರ್ಯ ದೇವಾಲಯವನ್ನು ಹೆಸರಿಸಲಾಗುತ್ತದೆ. ಹೌದು, ಜಮ್ಮು ಕಾಶ್ಮೀರ ರಾಜ್ಯದ ಶ್ರೀನಗರದ ಜಬರ್ವಾನ್ ಪರ್ವತ ಶ್ರೇಣಿಗಳಲ್ಲಿರುವ ಶಂಕರಾಚಾರ್ಯ ಬೆಟ್ಟದ ಮೇಲಿದೆ ಈ ಶಂಕರಾಚಾರ್ಯ ದೇವಾಲಯ.
ಇದನ್ನು ಜ್ಯೇಷ್ಠೇಶ್ವರ ದೇವಾಲಯ ಎಂತಲೂ ಸಹ ಕರೆಯಲಾಗುತ್ತದೆ ಹಾಗೂ ಶಂಕರಾಚಾರ್ಯ ಬೆಟ್ಟವನ್ನು ಗೋಪದಾರಿ/ಗೋಪಾದ್ರಿ ಬೆಟ್ಟ ಎಂತಲೂ ಸಹ ಕರೆಯಲಾಗುತ್ತದೆ. ಮೂಲತಃ ಶಿವನಿಗೆ ಮುಡಿಪಾದ ಅತ್ಯಂತ ಪುರಾತನ ದೇವಾಲಯ ಇದಾಗಿದೆ. ದೇವಾಲಯದ ಇತಿಹಾಸವು ಕ್ರಿ.ಪೂ 200 ಕ್ಕೆ ಸಂಬಂಧಿಸಿದ್ದರೂ ಪ್ರಸ್ತುತ ರಚನೆಯು 9 ನೇಯ ಶತಮಾನಕ್ಕೆ ಸಂಬಂಧಿಸಿದ್ದೆನ್ನಲಾಗುತ್ತದೆ.
ಚಿತ್ರಕೃಪೆ: Didier Lamouche
8-9 ನೇಯ ಶತಮಾನದಲ್ಲಿದ್ದ ಅದ್ವೈತ ಮತದ ಸ್ಥಾಪಕರಾದ ಶ್ರೀ ಆದಿ ಶಂಕರಾಚಾರ್ಯರು ಈ ದೇವಾಲಯಕ್ಕೆ ಭೇಟಿ ನೀಡಿ ಇಲ್ಲಿ ತಪಸ್ಸನ್ನಾಚರಿಸಿದ್ದಲ್ಲದೆ ಇದರೊಡನೆ ಸಾಕಷ್ಟು ಬಾಂಧವ್ಯವನ್ನೂ ಬೆಳೆಸಿಕೊಂಡರು. ಹಾಗಾಗಿ ಕ್ರಮೇಣವಾಗಿ ಇದು ಶಂಕರಾಚಾರ್ಯ ದೇವಾಲಯ ಎಂದೆ ಕರೆಯಲ್ಪಡತೊಡಗಿತು.
ಈ ದೇವಾಲಯದಲ್ಲಿ ಶಂಕರ ಗುಹೆಯೂ ಇದ್ದು ಅಲ್ಲಿ ಶಂಕರರು ತಪಸ್ಸು ಮಾಡುತ್ತಿದ್ದರೆನ್ನಲಾಗಿದೆ. ಶಿವನ ಈ ದೇವಾಲಯಕ್ಕೆ ಭೇಟಿ ನೀಡುವವರು ಗುರುಗಳಾದ ಶಂಕರರ ಸನ್ನಿಧಿಗೂ ತೆರಳಿ ಆಶೀರ್ವಾದ ಪಡೆಯುತ್ತಾರೆ. ಇನ್ನೂ ದೇವಾಲಯ ಕಟ್ಟಡಕ್ಕೆ ಸಂಬಂಧಿಸಿದಂತೆ ಸಾಕಷ್ಟು ಐತಿಹಾಸಿಕ ಉಲ್ಲೇಖಗಳಿವೆ ಹಾಗೂ ಮಾಹಿತಿಗಳಿವೆ.
ಚಿತ್ರಕೃಪೆ: Divya Gupta
ಈ ದೇವಾಲಯದ ಮೆಟ್ಟಿಲುಗಳ ಮೇಲೆ ಪರ್ಷಿಯನ್ ಭಾಷೆಯಲ್ಲಿ ಬರೆಯಲಾದ ನಾಲ್ಕು ಉಲ್ಲೇಖಗಳು ಅಥವಾ ಶಾಸನಗಳು ಹೀಗಿವೆ: 1. ಇದರ ಕೆಲಸಗಾರ ಬಿಹಿಶ್ತಿ ಜರ್ಗಾರ್ ವರ್ಷ 54 2. ಈ ಖಂಬ ನೆಟ್ಟವರು ಮುರ್ಜಾನ್ ಮಗನಾದ ಖ್ವಾಜಾ ರುಕುನ್ 3. ಈ ಸಮಯದಲ್ಲಿ ಯುಜ್ ಅಸಫ್ ತಮ್ಮ ಪ್ರವಾದಿತ್ವವನ್ನು ಸಾರಿದರು 4. ಅವರು ಜೀಸಸ್ ಇಸ್ರೇಲ್ ಮಕ್ಕಳ ಪ್ರವಾದಿ. ಹೀಗಾಗಿ ಕ್ರಿಸ್ತನು ಈ ದೇವಾಲಯಕ್ಕೆ ಭೇಟಿ ನೀಡಿದ್ದನೆಂಬ ನಂಬಿಕೆಯಿದೆ.
ಶಂಕರರು ಜನಿಸಿದ ಕಾಲಡಿಗೊಂದು ಭೇಟಿ!
ಸೌಂದರ್ಯ ಲಹರಿ ಎಂಬುದು ಆದಿ ಶಂಕರರು ರಚಿಸಿದ ಒಂದು ಸುಪ್ರಸಿದ್ಧ ಸಂಸ್ಕೃತ ಸಾಹಿತ್ಯ ಗ್ರಂಥವಾಗಿದೆ. ಇಂದಿಗೂ ಧಾರ್ಮಿಕಾಸಕ್ತರ, ಶಂಕರರ ಅನುಯಾಯಿಗಳ ನೆಚ್ಚಿನ ಗ್ರಂಥವಾಗಿರುವ ಈ ಸೌಂದರ್ಯಲಹರಿಯನ್ನು ಶಂಕರಾಚಾರ್ಯರು ಈ ದೇವಾಲಯವಿರುವ ಬೆಟ್ಟದ ಮೇಲೆಯೆ ರಚಿಸಿದ್ದಾರೆಂಬ ಪ್ರತೀತಿಯಿದೆ. ಹೀಗಾಗಿ ಈ ದೇವಾಲಯ ಸಾಕಷ್ಟು ಕುತೂಹಲ ಕೆರಳಿಸುತ್ತದೆ.