ಈ ಕ್ಷೇತ್ರದಲ್ಲಿ ವಿಶ್ವಾಮಿತ್ರ ಮಹರ್ಷಿಯು ತಪಸ್ಸು ಮಾಡಿ "ಬ್ರಹ್ಮ ಋಷಿ" ಎಂಬ ಪದವಿಯನ್ನು ಪಡೆಯಬೇಕು ಎಂದು ಪ್ರಯತ್ನಿಸುತ್ತಾನೆ. ಇದಕ್ಕಾಗಿ ಶಿವಲಿಂಗವನ್ನು ಕೂಡ ಪ್ರತಿಷ್ಟಾಪಿಸುತ್ತಾನೆ. ಆದರೆ ಆತನ ತಪೋ ದೀಕ್ಷೆ ಭಗ್ನವಾಗಿಸಲು ಕಾಕಾಸುರ ಎಂಬ ರಾಕ್ಷಸನು ವಿಫಲ ಪ್ರಯತ್ನವನ್ನು ಮಾಡುತ್ತಾನೆ.
ಈ ಕ್ರಮದಲ್ಲಿ ವಿಶ್ವಾಮಿತ್ರನ ಶಾಪದಿಂದಾಗಿ ಇಲ್ಲಿ ಆ ಪುರಾಣದ ಕಾಲದಿಂದಲೂ ಇಂದಿನವರೆವಿಗೂ ಒಂದೇ ಒಂದು ಕಾಗೆ ಕೂಡ ಹಾರುವುದಿಲ್ಲ. ಅದಕ್ಕೆ ನಿದರ್ಶನವಾಗಿ ಈ ಕ್ಷೇತ್ರ ಪರಿಸರ ಪ್ರದೇಶದಲ್ಲಿ ಒಂದು ಕಾಗೆ ಕೂಡ ನಮಗೆ ಕಾಣಿಸುವುದಿಲ್ಲ.
ಅದ್ದರಿಂದ ಈ ಕ್ಷೇತ್ರಕ್ಕೆ ಶನಿದೋಷ ನಿವಾರಣೆಗೆ ಲಕ್ಷಾಧಿ ಮಂದಿ ಭಕ್ತರು ಭೇಟಿ ನೀಡುತ್ತಿರುತ್ತಾರೆ. ಇನ್ನು ಇಲ್ಲಿನ ಪುರಾಣ ಪ್ರಾಧಾನ್ಯತೆ ಇರುವ ಅನೇಕ ದೇವಾಲಯಗಳನ್ನು ಕೂಡ ದರ್ಶಿಸಿಕೊಳ್ಳಬಹುದು. ಇಷ್ಟು ವಿಶಿಷ್ಟತೆಗಳನ್ನು ಹೊಂದಿರುವ ಪುಣ್ಯಕ್ಷೇತ್ರಕ್ಕೆ ಸಂಬಂಧಿಸಿದ ಪೂರ್ತಿ ವಿವರಗಳನ್ನು ಲೇಖನದ ಮೂಲಕ ತಿಳಿಸುಕೊಳ್ಳಿ.
1.ವೀರಭಾಗವತ ಕ್ಷೇತ್ರ...
PC:YOUTUBE
ವೀರಭಾಗವತ ಕ್ಷೇತ್ರವೆಂದು ವಿಖ್ಯಾತಿ ಹೊಂದಿರುವ ಸತ್ರಶಾಲ ಗುಂಟೂರು ಜಿಲ್ಲೆಯಲ್ಲಿನ ಪ್ರಮುಖವಾದ ಶೈವ ಕ್ಷೇತ್ರವಾಗಿದೆ. ಈ ಪುಣ್ಯಕ್ಷೇತ್ರದಲ್ಲಿ ಶ್ರೀ ಗಂಗಾಭ್ರಮರಾಂಬ ಸಮೇತ ಮಲ್ಲಿಕಾರ್ಜುನ ಸ್ವಾಮಿಯು ನೆಲೆಸಿದ್ದಾನೆ.
2.ವೀರಭಾಗವತ ಕ್ಷೇತ್ರ...
PC:YOUTUBE
ಸುಮಾರು 25 ಕಿ.ಮೀ ದೂರದಲ್ಲಿ ರೆಂಟವಿಂತಲ ಮಂಡಲದಲ್ಲಿ ಈ ಕ್ಷೇತ್ರವು ಪರಮಪವಿತ್ರವಾದುದು ಎಂದು ನಂಬಲಾಗಿದೆ. ಇದು ಕೃಷ್ಣಾ ನದಿ ತೀರದಲ್ಲಿದೆ. ಇಲ್ಲಿ ಕೃಷ್ಣ ಪುಷ್ಕರಣಿ ನಡೆಯುವ ಸಂದರ್ಭದಲ್ಲಿ ಅನೇಕ ಅಭಿವೃದ್ಧಿ ಕಾರ್ಯಕ್ರಮಗಳು ಮಾಡುತ್ತಾರೆ.
3.ಸ್ಥಳೀಯ ಪುರಾಣ
PC:YOUTUBE
ಸ್ಥಳೀಯ ಪುರಾಣದ ಕಥೆಯ ಪ್ರಕಾರ ವಿಶ್ವಾಮಿತ್ರ ಮಹರ್ಷಿಯು ಪದವಿಯನನು ಪಡೆಯಬೇಕು ಎಂಬ ಆಸೆಯಿಂದ ಸತ್ರಶಾಲದಲ್ಲಿ ಒಂದು ಶಿವಲಿಂಗವನ್ನು ಪ್ರತಿಷ್ಟಾಪಿಸಿ ಘೋರವಾದ ತಪಸ್ಸನ್ನು ಮಾಡುತ್ತಾ ಇರುತ್ತಾನೆ.
4.ವೀರಭಾಗವತ ಕ್ಷೇತ್ರ...
PC:YOUTUBE
ಇದನ್ನು ತಿಳಿದುಕೊಂಡು ದೈತ್ಯ ಕುಮಾರನಾದ ಕಾಕಾಸುರನು ಆ ವಿಶ್ವಾಮಿತ್ರನ ತಪಸ್ಸನ್ನು ಭಂಗಗೊಳಿಸುವುದುಕ್ಕೆ ಅನೇಕ ಪ್ರಯತ್ನಗಳನು ಮಾಡುತ್ತಾನೆ. ಕೊನೆಗೆ ಕಾವ್..ಕಾವ್.. ಎಂದು ಸತತವಾಗಿ ಕೂಗಿಕೊಳ್ಳುತ್ತಿರುತ್ತಾನೆ.
5.ವೀರಭಾಗವತ ಕ್ಷೇತ್ರ...
PC:YOUTUBE
ಇದರಿಂದಾಗಿ ಆಗ್ರಹಗೊಂಡ ವಿಶ್ವಾಮಿತ್ರನು ತನ್ನ ತಪಸ್ಸಿಗೆ ಭಂಗ ತಂದ ಕಾಗೆಗಳು ಈ ಕ್ಷೇತ್ರದಲ್ಲಿ ಕಾಲಿಟ್ಟರೆ ಆ ಜಾತಿಯೆಲ್ಲಾ ನಾಶವಾಗುತ್ತದೆ ಎಂದು ಶಪಿಸುತ್ತಾನೆ.
6.ವೀರಭಾಗವತ ಕ್ಷೇತ್ರ...
PC:YOUTUBE
ಅದ್ದರಿಂದಲೇ ಆ ಪುರಾಣ ಕಾಲದಿಂದಲೂ ಇಂದಿನವರೆವಿಗೂ ಸತ್ರಶಾಲ ಪುಣ್ಯಕ್ಷೇತ್ರದಲ್ಲಿ ಒಂದೇ ಒಂದು ಕಾಗೆಗಳು ಕೂಡ ಕಾಣಿಸುವುದಿಲ್ಲ. ಇದಕ್ಕೆ ಸಂಬಂಧಿಸಿದಂತೆ ಅನೇಕ ಸಂಶೋಧನೆ ಹಾಗು ಅಧ್ಯಯನ ಕೂಡ ಮಾಡಿದರು ಕೂಡ ಯಾವುದೇ ಉತ್ತರ ದೊರೆತ್ತಿಲ್ಲ.
7.ವೀರಭಾಗವತ ಕ್ಷೇತ್ರ...
PC:YOUTUBE
ಇದು ಹೀಗೆ ಇದ್ದರೆ, ಶನಿವಾಹನವಾದ ಕಾಗೆಗಳು ಇಲ್ಲಿ ಹಾರುವುದಿಲ್ಲವಾದ್ದರಿಂದ ಈ ಕ್ಷೇತ್ರದಲ್ಲಿ ಪೂಜೆಗಳನ್ನು ಮಾಡಿದರೆ ಶನಿ ದೋಷಗಳಿಂದ ಭಾದೆ ಹೊಂದುತ್ತಿರುವವರು ಮುಕ್ತಿ ಪಡೆಯಬಹುದು ಎಂದು ಭಕ್ತರ ಪ್ರಬಲವಾದ ನಂಬಿಕೆಯಾಗಿದೆ.
8.ವೀರಭಾಗವತ ಕ್ಷೇತ್ರ...
PC:YOUTUBE
ಹಾಗಾಗಿಯೇ ಈ ಕ್ಷೇತ್ರಕ್ಕೆ ಲಕ್ಷಾಧಿ ಮಂದಿ ಭಕ್ತರು ಭೇಟಿ ನೀಡಿ ಪ್ರತ್ಯೇಕವಾದ ಪೂಜೆಗಳನ್ನು ಮಾಡಿಸುತ್ತಿರುತ್ತಾರೆ. ಇಲ್ಲಿ ಶನಿಪರಿಹಾರ ದೋಷ ಪೂಜೆಗಳು ಮಾಡುವುದರಿಂದ ಕುಟುಂಬ ಕಲಹಗಳು ಆಗುವುದಿಲ್ಲ ಎಂದೂ, ವ್ಯಾಪಾರವು ಚೆನ್ನಾಗಿ ನಡೆಯುತ್ತದೆ ಎಂದು ಭಕ್ತರು ನಂಬುತ್ತಾರೆ.
9.ವೀರಭಾಗವತ ಕ್ಷೇತ್ರ...
PC:YOUTUBE
ಇದು ಹೀಗೆ ಇದ್ದರೆ, ವಿಶ್ವಾಮಿತ್ರನು ಈ ಕ್ಷೇತ್ರದಲ್ಲಿ ಪ್ರತಿಷ್ಟಾಪಿಸಿದ ಶಿವಲಿಂಗವು ತದನಂತರದ ಕಾಲದಲ್ಲಿ ಭ್ರಮರಾಂಬ ಸಮೇತ ಮಲ್ಲಿಕಾರ್ಜುನ ಸ್ವಾಮಿಯ ಹೆಸರಿನಿಂದ ಪ್ರಚಾರ ಹೊಂದಿತು.
10.ವೀರಭಾಗವತ ಕ್ಷೇತ್ರ...
PC:YOUTUBE
ಇನ್ನು ಇಲ್ಲಿ ಅನೇಕ ಮಂದಿ ಸಾಧುಗಳು, ಋಷಿಗಳು ಇಲ್ಲಿ ಸತ್ರಾಲದಲ್ಲಿ ಇದ್ದು, ಅನೇಕ ಯಾಗಗಳು ಮಾಡುತ್ತಿದ್ದರಿಂದ ಈ ಕ್ಷೇತ್ರವನ್ನು ಸತ್ರಶಾಲ ಎಂದು ಹೆಸರು ಬಂದಿತು ಎಂದು ಸ್ಥಳೀಯ ಪ್ರಜೆಗಳು ನಂಬುತ್ತಾರೆ.
11.ವೀರಭಾಗವತ ಕ್ಷೇತ್ರ...
PC:YOUTUBE
ಇನ್ನು ಇಲ್ಲಿರುವ ದೇವಾಲಯವನ್ನು ಕ್ರಿ.ಶ 1244 ರಲ್ಲಿ ಕಾಕತೀಯ ಮಹಾರಾಜನಾದ ಮಹಾಮಂಡಲೇಶ್ವರ ಕಾಯಸ್ತ ಅಂಬಯ್ಯ ದೇವನು ಸ್ವಾಮಿಗೆ ಧೂಪ, ದೀಪ, ನೈವೇದ್ಯಗಳನ್ನು ಮಾಡಿಸುವುದಕ್ಕೆ ವಸೂಲು ಮಾಡಿದ ಕಂದಾಯವನ್ನು ದೇವಾಲಯದ ನಿರ್ಮಣ ಕಾರ್ಯಕ್ಕೆ ಬಳಸಿದನಂತೆ.
12.ವೀರಭಾಗವತ ಕ್ಷೇತ್ರ...
PC:YOUTUBE
ಸತ್ರಶಾಲದಲ್ಲಿ ಕೇವಲ ಭ್ರಮರಾಂಬ ಮಲ್ಲಿಕಾಜುನ ದೇವಾಲಯವೇ ಅಲ್ಲದೇ ಅನೇಕ ಪ್ರಾಚೀನವಾದ ಹಾಗು ಪುರಾಣ ಪ್ರಾಧ್ಯಾನ್ಯತೆಯನ್ನು ಹೊಂದಿರುವ ದೇವಾಲಯಗಳು ಕೂಡ ಇವೆ. ಅವುಗಳಲ್ಲಿ ಕುಮಾರಸ್ವಾಮಿ ದೇವಾಲಯ ಅತಿ ಮುಖ್ಯವಾದುದು.
13.ವೀರಭಾಗವತ ಕ್ಷೇತ್ರ...
PC:YOUTUBE
ಅಷ್ಟೇ ಅಲ್ಲದೇ, ಕಲಿಯುಗ ದೈವವಾದ ವೆಂಕಟೇಶ್ವರ ಸ್ವಾಮಿ ದೇವಾಲಯ, ಕಾಲಭೈರವ, ಚಿಕಟಿ ಮಲ್ಲಯ್ಯ, ಬ್ರಹ್ಮ, ಆಂಜನೇಯ, ಅಮರಲಿಂಗೇಶ್ವರ, ಸಂತಾನ ಮಲ್ಲಿಕಾರ್ಜುನ, ಶ್ರೀ ಚೆನ್ನ ಕೇಶವ ಸ್ವಾಮಿ, ಶ್ರೀ ಉತ್ತರೇಶ್ವರಸ್ವಾಮಿ ದೇವಾಲಯಗಳಿವೆ.
14.ವೀರಭಾಗವತ ಕ್ಷೇತ್ರ...
PC:YOUTUBE
ಪ್ರತಿ ವರ್ಷ ಇಲ್ಲಿ ಅಷಾಢ ಶುದ್ಧ ಏಕಾದಶಿಯಂದು, ವ್ಯಾಸ ಪೌರ್ಣಿಮ, ಮಹಾಶಿವರಾತ್ರಿ ಪರ್ವದಿನಗಳಲ್ಲಿ ಇಲ್ಲಿ ದೇಶದ ಮೂಲೆ-ಮೂಲೆಗಳಿಂದ ಲಕ್ಷಾಧಿ ಮಂದಿ ಭಕ್ತರು ಇಲ್ಲಿಗೆ ಬಂದು ಸ್ವಾಮಿಗೆ ದರ್ಶಿಸಿಕೊಳ್ಳುತ್ತಿರುತ್ತಾರೆ.
15.ವೀರಭಾಗವತ ಕ್ಷೇತ್ರ...
PC:YOUTUBE
ಗುಂಟೂರಿನಿಂದ ಸುಮಾರು 125 ಕಿ.ಮೀ ದೂರದಲ್ಲಿ ಸತ್ರಶಾಲವಿದೆ. ಅದೇವಿಧವಾಗಿ ಮಾಚೆರ್ಲುಯಿಂದ ಕೇವಲ 20 ಕಿ.ಮೀ ದೂರದಲ್ಲಿ ಈ ಪವಿತ್ರವಾದ ಪುಣ್ಯಕ್ಷೇತ್ರವಿದೆ. ಗುಂಟೂರು, ಮಾಚಾರ್ಲದ ಮೂಲಕ ಬಸ್ಸಿನ ಮೂಲಕ ಪಾಲ್ವಾಯಿ ಜಂಕ್ಷನ್ ಸೇರಿಕೊಳ್ಳಬೇಕು. ಅಲ್ಲಿಂದ ಕೇವಲ 6 ಕಿ.ಮೀ ದೂರದಲ್ಲಿರುವ ಈ ಕ್ಷೇತ್ರಕ್ಕೆ ನಿತ್ಯವು ಆಟೋ ದೊರೆಯುತ್ತವೆ.