ಹನುಮಂತ ನೋಡಿದ ಮೊದಲ ಸಂಜೀವಿನಿ ಬೆಟ್ಟ ಎಲ್ಲಿದೆ? ರಾಮಾಯಣದ ಪ್ರಕಾರ ಹನುಮಂತನು ಸಂಜೀವಿ ಮೂಲಿಕೆಗಳನ್ನು ತೆಗೆದುಕೊಂಡು ಬರುವ ಸಲುವಾಗಿ ಅನೇಕ ಪ್ರದೇಶಗಳನ್ನು ಹುಡುಕುತ್ತಾ ಸಂಜೀವಿನಿ ಹಾಗೆ ಕಾಣಿಸುವ ಪ್ರತಿ ಬೆಟ್ಟದ ಕೆದಕಿ ಅದೇನಾ ಅಥವಾ ಅಲ್ಲವೇ? ಎಂದು ಹುಡುಕುತ್ತಿದ್ದನು. ಆದರೆ ಹನುಮಂತನು ಮೊದಲು ಸಂಜೀವಿನಿಯನ್ನು ಹುಡುಕಿದ ಬೆಟ್ಟವಾಗಿ ಈ ಬೆಟ್ಟವನ್ನು ಭಕ್ತರು ಪೂಜಿಸುತ್ತಾರೆ. ಆ ಬೆಟ್ಟ ಎಲ್ಲಿದೆ ಗೊತ್ತ? ಆ ಬೆಟ್ಟದ ಪ್ರಾಮುಖ್ಯತೆ ಎನು ಎಂಬುದು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.
ಬೇ ಆಫ್ ಬೆಂಗಾಲ್ನಿಂದ ಸುಮಾರು 60 ಕಿ.ಮೀ ದೂರದಲ್ಲಿರುವ ಗುಂಟೂರು ನಗರ ದಕ್ಷಿಣ ಭಾರತದ ರಾಜ್ಯವಾದ ಆಂಧ್ರ ಪ್ರದೇಶದಲ್ಲಿದೆ. ಇದು ಹೈದ್ರಾಬಾದ್ ನಗರಕ್ಕೆ ಆಗ್ನೇಯದಲ್ಲಿ ಸುಮಾರು 266 ಕಿ.ಮೀ ದೂರದಲ್ಲಿದೆ. 2012 ರಲ್ಲಿ ಗುಂಟೂರು ನಗರ ಪರಿಸರದಲ್ಲಿರುವ 10 ಉಪಗ್ರಾಮವನ್ನು ಗುಂಟೂರು ಕೂಡ ಸೇರಿ ಅತಿ ದೊಡ್ಡದಾದ ನಗರವಾಗಿ ವಿಸ್ತರಿಸಿಕೊಂಡಿದೆ.
1. ಆ ಪರ್ವತದ ಮೇಲೆ ಒಂದೇ ರಾತ್ರಿ ನಿದ್ರಿಸಿದರೆ ಸಾಕು ಎಂಥಹ ಆರೋಗ್ಯ ಸಮಸ್ಯೆಗಳು ದೂರವಾಗುತ್ತದೆ....!
ಗುಂಟೂರು ಜಿಲ್ಲೆ ವಿನುಕೊಂಡದಿಂದ ಸುಮಾರು 22 ಕಿ.ಮೀ ದೂರದಲ್ಲಿ ಈಪೂರುಮಂಡಲ, ಬೊಮ್ಮರಾಜು ಪಲ್ಲಿ ಗ್ರಾಮಕ್ಕೆ ಸಮೀಪದಲ್ಲಿದೆ. ಅರಣ್ಯ ಪ್ರದೇಶದ ಅಂತರ್ ಗರ್ಭದಲ್ಲಿ ಸಂಜೀವಿನ ಬೆಟ್ಟವಿದೆ. ಈ ಬೆಟ್ಟದಲ್ಲಿ ಅಮೂಲ್ಯವಾದ ಮೂಲಿಕೆಗಳಿಂದ ಅನೇಕ ವ್ಯಾಧಿಗಳು ನಿವಾರಣೆಯಾಗುತ್ತದೆ ಎಂಬುದು ಭಕ್ತರ ನಂಬಿಕೆಯಾಗಿದೆ.
2. ಆ ಪರ್ವತದ ಮೇಲೆ ಒಂದೇ ರಾತ್ರಿ ನಿದ್ರಿಸಿದರೆ ಸಾಕು ಎಂಥಹ ಆರೋಗ್ಯ ಸಮಸ್ಯೆಗಳು ದೂರವಾಗುತ್ತದೆ....!
ಹಾಗಾಗಿಯೇ ಈ ಬೆಟ್ಟಕ್ಕೆ ಸಂಜೀವಿನಿ ಬೆಟ್ಟ ಎಂದೇ ಕರೆಯುತ್ತಾರೆ. ಆದರೆ ತ್ರೇತಾಯುಗದಲ್ಲಿ ಸಂಜೀವಿನಿ ಮೂಲಿಕೆಗಾಗಿ ಹನುಮಂತನು ಹುಡುಕಿದ ಬೆಟ್ಟವಾಗಿ ಭಕ್ತರು ಈ ಬೆಟ್ಟವನ್ನು ಸಂಜೀವಿನಿ ಬೆಟ್ಟವೆಂದೇ ನಂಬುತ್ತಾರೆ.
3. ಆ ಪರ್ವತದ ಮೇಲೆ ಒಂದೇ ರಾತ್ರಿ ನಿದ್ರಿಸಿದರೆ ಸಾಕು ಎಂಥಹ ಆರೋಗ್ಯ ಸಮಸ್ಯೆಗಳು ದೂರವಾಗುತ್ತದೆ....!
ಅನೇಕ ಮಂದಿಗೆ ತಿಳಿಯದ ವಿಷಯವೆನೆಂದರೆ ಒಂದು ಕಾಲದಲ್ಲಿ ಇಲ್ಲಿ ಸುತ್ತಲೂ ಮುಳ್ಳಿನ ಗಿಡಗಳು, ವಿಷ ಜಂತುಗಳ ಸಂಚಾರ ಮಾಡುತ್ತಿದ್ದರಿಂದ ಆ ಕಡೆ ಯಾರು ಕೂಡ ಹೋಗುವುದಕ್ಕೆ ಸಾಹಸವನ್ನು ಮಾಡುತ್ತಿರಲಿಲ್ಲವಂತೆ.
4. ಆ ಪರ್ವತದ ಮೇಲೆ ಒಂದೇ ರಾತ್ರಿ ನಿದ್ರಿಸಿದರೆ ಸಾಕು ಎಂಥಹ ಆರೋಗ್ಯ ಸಮಸ್ಯೆಗಳು ದೂರವಾಗುತ್ತದೆ....!
ಒಮ್ಮೆ ಒಬ್ಬ ಭಕ್ತನು ಬೆಟ್ಟದ ಮೇಲೆ ತೆರಳಿ ಅಲ್ಲಿ ಒಂದು ಚಿಕ್ಕದಾದ ದೇವಾಲಯದಲ್ಲಿ ಸ್ವಾಮಿಯನ್ನು ಪ್ರಾರ್ಥನೆ ಮಾಡಿಕೊಂಡ. ನಂತರ ಆತನು ಅಲ್ಲಿ ತನ್ನ ಕೋರಿಕೆಗಳನ್ನು ಕೋರಿಕೊಂಡನಂತೆ. ಆತನ ಕೋರಿಕೆಯು ತಕ್ಷಣ ನೆರವೇರಿದ್ದರಿಂದ ಆತನು ಆ ವಿಷಯದ ಬಗ್ಗೆ ಎಲ್ಲರಿಗೂ ಹೇಳಿದನಂತೆ. ಆಗ ಸಂಜೀವಿ ಬೆಟ್ಟ ಎಲ್ಲರಿಗೂ ಪ್ರಚಾರವಾಯಿತು.
5. ಆ ಪರ್ವತದ ಮೇಲೆ ಒಂದೇ ರಾತ್ರಿ ನಿದ್ರಿಸಿದರೆ ಸಾಕು ಎಂಥಹ ಆರೋಗ್ಯ ಸಮಸ್ಯೆಗಳು ದೂರವಾಗುತ್ತದೆ....!
ಆ ಬೆಟ್ಟದ ಮೇಲೆ ಸಂಜೀವಿ ಇರಬಹುದು ಎಂದು ಕೆಲವರು ಹೇಳುತ್ತಾರೆ. ಈ ಬೆಟ್ಟದ ಮೇಲೆ ಒಂದು ದಿನ ತಂಗಿದರೆ ವಾಸಿಯಾಗದ ಹಲವಾರು ವ್ಯಾಧಿಗಳಿಂದ ವಿಮುಕ್ತಿ ಹೊಂದಬಹುದು ಇನ್ನು ಕೆಲವರು ಹೇಳುತ್ತಾರೆ. ಬೆಟ್ಟದ ಮೇಲೆ ನೆಲೆಸಿರುವ ಸ್ವಾಮಿಯು ಶಿವನ ಭಕ್ತನಾದ ಕೋಟಯ್ಯ ಎಂದು ಹೇಳುತ್ತಾರೆ.
6. ಆ ಪರ್ವತದ ಮೇಲೆ ಒಂದೇ ರಾತ್ರಿ ನಿದ್ರಿಸಿದರೆ ಸಾಕು ಎಂಥಹ ಆರೋಗ್ಯ ಸಮಸ್ಯೆಗಳು ದೂರವಾಗುತ್ತದೆ....!
ಶಿವನು ಇದೇ ಬೆಟ್ಟದ ಮೇಲೆ ತಪಸ್ಸು ಮಾಡಿದನೆಂದು, ಈ ಪ್ರದೇಶದಲ್ಲಿಯೇ ಮೃಗಗಳ ಕೂಗುಗಳಿಗೆ ತಪೋಭಂಗವಾಗಿ ಕೋಟಯ್ಯಸ್ವಾಮಿ ತ್ರಿಕೋಟ ಪರ್ವತಕ್ಕೆ ಹೋದನು ಎಂದು ಸ್ಥಳೀಯರು ಅನೇಕ ಕಥೆಗಳನ್ನು ಹೇಳುತ್ತಾರೆ. ಅದು ಇಂದು ನಾವು ಹೇಳುತ್ತಿರುವ ಕೊಟಪ್ಪಕೊಂಡವೇ ಆಗಿದೆ.
7. ಆ ಪರ್ವತದ ಮೇಲೆ ಒಂದೇ ರಾತ್ರಿ ನಿದ್ರಿಸಿದರೆ ಸಾಕು ಎಂಥಹ ಆರೋಗ್ಯ ಸಮಸ್ಯೆಗಳು ದೂರವಾಗುತ್ತದೆ....!
ಕೋರಿದ ಕೋರಿಕೆಗಳನ್ನು ನೆರವೇರಿಸುತ್ತಿರುವುದರಿಂದ ಇಲ್ಲಿಗೆ ಭಕ್ತರು ಬಂದು ಸ್ವಾಮಿಯನ್ನು ಆರಾಧಿಸುತ್ತಾರೆ. ಈ ವಿಧವಾಗಿ ಶಿವನು ಕೋಟಯ್ಯನಾಗಿ ನೆಲೆಸಿದ. ಹಾಗೆಯೇ ಹನುಮಂತನು ಸಂಜೀವಿನಿಗಾಗಿ ಬಂದ ಈ ಪ್ರದೇಶವು ಭಕ್ತರನ್ನು ವಿಶೇಷವಾಗಿ ಆಕರ್ಷಿಸುತ್ತದೆ.
8. ಆ ಪರ್ವತದ ಮೇಲೆ ಒಂದೇ ರಾತ್ರಿ ನಿದ್ರಿಸಿದರೆ ಸಾಕು ಎಂಥಹ ಆರೋಗ್ಯ ಸಮಸ್ಯೆಗಳು ದೂರವಾಗುತ್ತದೆ....!
ಆಂಧ್ರ ಪ್ರದೇಶದಲ್ಲಿರುವ ಗುಂಟೂರು ಜಿಲ್ಲೆಯಲ್ಲಿನ ಮಂಗಳಗಿರಿ ಒಂದು ಚಿಕ್ಕದಾದ ಗ್ರಾಮವಾಗಿದೆ. ಈ ಗ್ರಾಮವು ಗುಂಟೂರು ನಗರದಿಂದ ಸುಮಾರು 21 ಕಿ.ಮೀ ದೂರದಲ್ಲಿದೆ. ಈ ಪ್ರದೇಶವು ಗುಂಟೂರು ಹಾಗೆಯೇ ವಿಜಯವಾಡ ಪ್ರದೇಶಕ್ಕೆ ಒಂದು ಪ್ರಧಾನವಾದ ಪ್ರವಾಸಿ ಸ್ಥಳವಾಗಿದೆ. ಮಂಗಳಗಿರಿ ಎಂದರೆ ಅರ್ಥ ಪವಿತ್ರವಾದ ಬೆಟ್ಟವೇ ಆಗಿದೆ.
9. ಆ ಪರ್ವತದ ಮೇಲೆ ಒಂದೇ ರಾತ್ರಿ ನಿದ್ರಿಸಿದರೆ ಸಾಕು ಎಂಥಹ ಆರೋಗ್ಯ ಸಮಸ್ಯೆಗಳು ದೂರವಾಗುತ್ತದೆ....!
ಪ್ರಖ್ಯಾತವಾದ ಲಕ್ಷ್ಮೀ ನಾರಾಯಣ ಸ್ವಾಮಿ ದೇವಾಲಯವು ಕೂಡ ಈ ಗ್ರಾಮದಲ್ಲಿದೆ. ಎಷ್ಟೊ ಮಂದಿ ಭಕ್ತರು ಸ್ವಾಮಿ ದರ್ಶನಕ್ಕಾಗಿ ಈ ದೇವಾಲಯಕ್ಕೆ ಭೇಟಿ ನೀಡುತ್ತಿರುತ್ತಾರೆ. ಈ ದೇವಾಲಯವನ್ನು ಒಂದು ಬೆಟ್ಟದ ಮೇಲೆ ನಿರ್ಮಾಣ ಮಾಡಿದ್ದಾರೆ. ಕೆಲವು ವರ್ಷಗಳ ಹಿಂದೆ ಈ ಬೆಟ್ಟ ಒಂದು ಅಗ್ನಿ ಪರ್ವತವಾಗಿತ್ತಂತೆ. ಇದು ಸಮುದ್ರ ಮಟ್ಟದಿಂದ ಸುಮಾರು 30 ಅಡಿ ಎತ್ತರದಲ್ಲಿದೆ. ಇಲ್ಲಿನ ಸ್ವಾಮಿಗೆ ಪಾನಕವನ್ನು ನೈವೇದ್ಯವಾಗಿ ಭಕ್ತರು ಅರ್ಪಿಸುತ್ತಾರೆ.
10.ಉತ್ತಮ ಸಮಯ
ಅಕ್ಟೋಬರ್ ತಿಂಗಳಿನಿಂದ ಡಿಸೆಂಬರ್, ಜನವರಿ ಹಾಗೆಯೇ ಫೆಬ್ರವರಿ ತಿಂಗಳಿನಲ್ಲಿ ಈ ಗುಂಟೂರು ನಗರವನ್ನು ಭೇಟಿ ನೀಡಲು ಉತ್ತಮವಾದ ಸಮಯವಾಗಿದೆ. ಈ ಸಮಯದಲ್ಲಿ ಉಷ್ಣವು ಕಡಿಮೆ ಇರುವುದರಿಂದ ಈ ಮಾಸದಲ್ಲಿ ಭೇಟಿ ನೀಡುವುದು ಅತ್ಯುತ್ತಮವೇ ಆಗಿದೆ.
11. ಹೇಗೆ ಸಾಗಬೇಕು?
ರಸ್ತೆ ಮಾರ್ಗವಾಗಿ
ರಸ್ತೆ ಮಾರ್ಗವಾಗಿ ಗುಂಟೂರು ನಗರಕ್ಕೆ ಸುಲಭವಾಗಿ ತೆರಳಬಹುದು. ಹಾಗಾಗಿಯೇ ಇಲ್ಲಿ ಲಭಿಸುವ ಬಸ್ಸುಗಳಿಂದ ಅನೇಕ ಪ್ರವಾಸ ತಾಣಗಳಿಗೆಲ್ಲಾ ಭೇಟಿ ನೀಡಬಹುದು. ಬೆಂಗಳೂರು, ಚೆನ್ನೈ, ಕೋಲ್ಕತ್ತಾ ಹಾಗೆಯೇ ಹೈದ್ರಾಬಾದ್ನಿಂದ ಕೂಡ ಗುಂಟೂರಿಗೆ ತೆರಳಬಹುದು. ಗುಂಟೂರಿಗೆ ರೈಲ್ವೆ ನಿಲ್ದಾಣಗಳು ಇವೆ.