Search
  • Follow NativePlanet
Share
» »ಗಡ್ಡ, ಮೀಸೆ ಇರುವ ಈ ಹನುಮನ ನೋಡಿದ್ದೀರಾ? ಇಲ್ಲಿನ ತೆಂಗಿನಕಾಯಿ ವಿಶೇ‍ಷ ಏನು?

ಗಡ್ಡ, ಮೀಸೆ ಇರುವ ಈ ಹನುಮನ ನೋಡಿದ್ದೀರಾ? ಇಲ್ಲಿನ ತೆಂಗಿನಕಾಯಿ ವಿಶೇ‍ಷ ಏನು?

ಸಲಾಸರ್ ಬಾಲಾಜಿ ದೇವಾಲಯವು ರಾಜಸ್ಥಾನದ ಚುರು ಜಿಲ್ಲೆಯ ಸುಜಾಂಗಾರ್ ಸಮೀಪದ ಸಣ್ಣ ಪಟ್ಟಣವಾದ ಸಲಾಸರ್‌ನಲ್ಲಿದೆ.

ಸಲಾಸರ್ ಧಾಮ್ ಅಥವಾ ಸಲಾಸರ್ ಬಾಲಾಜಿ ದೇವಾಲಯವು ರಾಜಸ್ಥಾನದ ಚುರು ಜಿಲ್ಲೆಯ ಸುಜಾಂಗಾರ್ ಸಮೀಪದ ಸಣ್ಣ ಪಟ್ಟಣವಾದ ಸಲಾಸರ್‌ನಲ್ಲಿದೆ. ಇದು ವರ್ಷಪೂರ್ತಿ ಅಸಂಖ್ಯಾತ ಭಕ್ತರನ್ನು ತನ್ನತ್ತ ಆಕರ್ಷಿಸುತ್ತದೆ. ಸಲಾಸರ್ ಧಾಮ್ ಖುತು ಶ್ಯಾಮ್ಜಿ ದೇವಸ್ಥಾನ ಮತ್ತು ರಾಣಿ ಸತಿ ದಾದಿಜಿ (ಜುನ್ಜುನು) ದೇವಾಲಯ ಇದರ ನಡುವೆ ಇದೆ. ಇವೆಲ್ಲವೂ ಪರಸ್ಪರ ಹತ್ತಿರದಲ್ಲಿದೆ.

ಗಡ್ಡ ಮೀಸೆಯ ಹನುಮ

ಗಡ್ಡ ಮೀಸೆಯ ಹನುಮ

PC: Dausaanoop

ಈ ಭವ್ಯವಾದ ದೇವಾಲಯವನ್ನು 1754 ರಲ್ಲಿ ನಿರ್ಮಿಸಲಾಯಿತು ಮತ್ತು ಇದನ್ನು ಈಗ ಶಕ್ತಿ ಎಂದು ಪರಿಗಣಿಸಲಾಗಿದೆ. ಇದು ಎಲ್ಲಾ ಬೇಡಿಕೆಗಳನ್ನು ಪೂರೈಸುವ ಸ್ಥಳವಾಗಿದೆ. ಇಲ್ಲಿನ ಹನುಮಂತನ ಮೂರ್ತಿಯು ಸ್ವಯಂಭೂ ಎನ್ನಲಾಗುತ್ತದೆ. ಈ ಹನುಮನ ವಿಶೇಷ ಎಂದರೆ ಗಡ್ಡ, ಮೀಸೆ ಇದೆ.

ಡಿಸೆಂಬರ್‌ನ ಈ ಚುಮುಚುಮು ಚಳಿಯಲ್ಲಿ ಹನಿಮೂನ್‌ಗೆ ಹೋಗೋದಾದ್ರೆ ಇಲ್ಲಿಗೆಲ್ಲಾ ಹೋಗಿಡಿಸೆಂಬರ್‌ನ ಈ ಚುಮುಚುಮು ಚಳಿಯಲ್ಲಿ ಹನಿಮೂನ್‌ಗೆ ಹೋಗೋದಾದ್ರೆ ಇಲ್ಲಿಗೆಲ್ಲಾ ಹೋಗಿ

ದಂತಕಥೆ

ದಂತಕಥೆ

1811 ರಲ್ಲಿ ಶ್ರಾವಣ ಶುಕ್ಲಾ-ನವಮಿಯಂದು ರೈತನೊಬ್ಬನು ತನ್ನ ಜಮೀನನ್ನು ಉಳುತ್ತಿದ್ದಾಗ ಗಡ್ಡ, ಮೀಸೆ ಹೊಂದಿರುವ ವಿಶೇಷವಾದ ಹನುಮಾನ್ ವಿಗ್ರಹ ದೊರೆಯುತ್ತದೆ. ಅದನ್ನು ಸಲಾಸರ್‌ಗೆ ಕಳುಹಿಸುತ್ತಾನೆ. 1754 ರಲ್ಲಿ ಮೋಹನ್‌ದಾಸ್ ಮಹಾರಾಜರಿಂದ ಈ ದೇವಾಲಯವನ್ನು ನಿರ್ಮಿಸಲಾಯಿತು.

ಬರೀ ಗಾಲಲ್ಲೇ ಭಕ್ತರ ಸೇವೆ

ಬರೀ ಗಾಲಲ್ಲೇ ಭಕ್ತರ ಸೇವೆ

ಚೈತ್ರ ಪೂರ್ಣಿಮಾ ಮತ್ತು ಅಶ್ವಿನಿ ಪೂರ್ಣಿಮಾಗಳಲ್ಲಿ, ದೊಡ್ಡ ಮೇಳಗಳನ್ನು ಆಯೋಜಿಸಲಾಗುತ್ತದೆ ಮತ್ತು ದೇಶದಾದ್ಯಂತದ ಭಕ್ತರು ದೇವರಿಗೆ ತಮ್ಮ ಗೌರವವನ್ನು ಸಲ್ಲಿಸಲು ಧಾಮಕ್ಕೆ ಆಗಮಿಸುತ್ತಾರೆ. ಭಕ್ತರು ದೇವರಿಗೆ ಹರಕೆ ಹೊತ್ತು ದೇವರ ಮೇಲಿನ ಭಕ್ತಿಯಿಂದ ಬರೀ ಗಾಲಲ್ಲೇ ದೇವರ ಸನ್ನಿಧಾನಕ್ಕೆ ತೆರಳುತ್ತಾರೆ.

ಕೆಜಿಎಫ್‌ನಲ್ಲಿ ಏನೆಲ್ಲಾ ಆಕರ್ಷಣೆಗಳು ಇವೆ ನೋಡಿದ್ದೀರಾ?ಕೆಜಿಎಫ್‌ನಲ್ಲಿ ಏನೆಲ್ಲಾ ಆಕರ್ಷಣೆಗಳು ಇವೆ ನೋಡಿದ್ದೀರಾ?

 ಕಲ್ಲು ಮಣ್ಣಿನ ದೇವಸ್ಥಾನ

ಕಲ್ಲು ಮಣ್ಣಿನ ದೇವಸ್ಥಾನ

ಸಲಾಸರ್ ಧಾಮ ದೇವಸ್ಥಾನವು ಒಂದು ದೈವಿಕ ಕನಸಿನ ನಂತರ ರಚಿಸಲ್ಪಟ್ಟಿತು, ಇದರಲ್ಲಿ ಬಾಲಾಜಿ ಸ್ವತಃ ಮೋಹನ್‌ದಾಸ್ ಮಹಾರಾಜ್ ಅವರ ವಿಗ್ರಹಕ್ಕಾಗಿ ದೇವಸ್ಥಾನವನ್ನು ನಿರ್ಮಿಸಲು ಆದೇಶಿಸಿದನು. ಫತೇಪುರ್ ಶೇಖಾವತ್‌ನ ಮುಸ್ಲಿಂ ಕುಶಲಕರ್ಮಿಗಳಾದ ನೋರಾ ಮತ್ತು ಡೌ ಅವರ ಸಹಾಯದಿಂದ ಅವರು ಆರಂಭಿಕ ಕಲ್ಲು ಮಣ್ಣಿನ ದೇವಸ್ಥಾನವನ್ನು ನಿರ್ಮಿಸಿದರು.

ದೇವಸ್ಥಾನದ ಮರುನಿರ್ಮಾಣ

ದೇವಸ್ಥಾನದ ಮರುನಿರ್ಮಾಣ

ಸಿಕರ್ ಜಗಿರ್ದಾರ್ ರಾವ್ ದೇವಿ ಸಿಂಗ್ ಅವರ ಉತ್ತರಾಧಿಕಾರಿ ಸಹಾಯದಿಂದ ದೇವಾಲಯದ ನಂತರ ಕಾಂಕ್ರೀಟ್‌ನಲ್ಲಿ ಮರುನಿರ್ಮಾಣ ಮಾಡಲಾಯಿತು. ನಂತರ, ಮೋಹನ್‌ದಾಸ್‌ ವಂಶಸ್ಥರಾದ ಕಣಿರಾಮ್ ಮತ್ತು ಈಶ್ವರ್‌ದಾಸ್ ಅವರು ದೇವಸ್ಥಾನವನ್ನು ಅಭಿವೃದ್ಧಿಪಡಿಸಿದರು ಮತ್ತು ನವೀಕರಿಸಿದರು.

ನಿಮ್ಮ ಆಸೆ ಈಡೇರಬೇಕಾದರೆ ಇಲ್ಲಿ ಒಂದು ಮಾವಿನಹಣ್ಣನ್ನು ಅರ್ಪಿಸಬೇಕಂತೆ! ನಿಮ್ಮ ಆಸೆ ಈಡೇರಬೇಕಾದರೆ ಇಲ್ಲಿ ಒಂದು ಮಾವಿನಹಣ್ಣನ್ನು ಅರ್ಪಿಸಬೇಕಂತೆ!

ಚಿನ್ನ ಮತ್ತು ಬೆಳ್ಳಿಯ ಕಲಾಕೃತಿಗಳು

ಚಿನ್ನ ಮತ್ತು ಬೆಳ್ಳಿಯ ಕಲಾಕೃತಿಗಳು

ಇಟ್ಟಿಗೆಗಳು, ಕಲ್ಲುಗಳು, ಸಿಮೆಂಟ್, ನಿಂಬೆ ಗಾರೆ ಮತ್ತು ಬಿಳಿ ಅಮೃತಶಿಲೆಗಳನ್ನು ಬಳಸಿಕೊಂಡು ಈ ದೇವಾಲಯವನ್ನು ನಿರ್ಮಿಸಲು 2 ವರ್ಷಗಳು ಬೇಕಾಯಿತು. ಪ್ರಾರ್ಥನಾ ಸಭಾಂಗಣ ಮತ್ತು ಗರ್ಭ ಗೃಹಗಳು ಚಿನ್ನ ಮತ್ತು ಬೆಳ್ಳಿಯ ಕಲಾಕೃತಿಗಳನ್ನು ಒಳಗೊಂಡಿದೆ. ಪರಿಕ್ರಮ ಪಥವನ್ನು ಬಿಳಿ ಮಾರ್ಬಲ್‌ನಿಂದ ತಯಾರಿಸಲಾಗುತ್ತದೆ. ಪೂಜೆ, ಬಾಗಿಲುಗಳು ಮತ್ತು ಗೋಡೆಗಳಲ್ಲಿ ಬಳಸುವ ವಿವಿಧ ಪಾತ್ರೆಗಳನ್ನು ಬೆಳ್ಳಿಯಿಂದ ತಯಾರಿಸಲಾಗುತ್ತದೆ. ಪವಿತ್ರವಾದ ಸ್ಯಾಂಟೋರಮ್ ಸುಂದರವಾದ ಹೂವಿನ ಅಲಂಕಾರ ಮತ್ತು ಮೊಸಾಯಿಕ್ ಕೆಲಸಗಳನ್ನು ಮಾಡಲಾಗಿದೆ.

ತೆಂಗಿನಕಾಯಿ ಕಟ್ಟುವುದು

ತೆಂಗಿನಕಾಯಿ ಕಟ್ಟುವುದು

ದೇವಸ್ಥಾನದ ಆವರಣದಲ್ಲಿ ಪವಿತ್ರ ಕೆಂಪು ದಾರದ ಜೊತೆಯಲ್ಲಿ ತೆಂಗಿನ ಕಾಯಿಯನ್ನು ದೇವಸ್ಥಾನದ ಆವರಣದಲ್ಲಿ ಕಟ್ಟುವ ಪ್ರತೀತಿ ಇದೆ. ಭಕ್ತರು ತಮ್ಮ ಬೇಡಿಕೆಯ ಈಡೇರಿಕೆಗಾಗಿ ತೆಂಗಿನಕಾಯಿಯನ್ನು ಕಟ್ಟುತ್ತಾರೆ. ಈ ಅಭ್ಯಾಸವನ್ನು ಸಿಕರ್‌ನ ಜಾಗಿರ್ದಾರರಿಂದ ಪ್ರಾರಂಭಿಸಲಾಯಿತು.

7.5 ಅಡಿ ಎತ್ತರದ ಶಿವಲಿಂಗವಿದ್ದರೂ ಇದೊಂದು ಅಪೂರ್ಣ ಮಂದಿರ7.5 ಅಡಿ ಎತ್ತರದ ಶಿವಲಿಂಗವಿದ್ದರೂ ಇದೊಂದು ಅಪೂರ್ಣ ಮಂದಿರ

ಬೇಡಿಕೆ ಈಡೇರುತ್ತದೆ

ಬೇಡಿಕೆ ಈಡೇರುತ್ತದೆ


ರಾವ್ ರಾಜ ದೇವಿ ಸಿಂಗ್ ಅವರು ಪುತ್ರಪ್ರಾಪ್ತಿಗಾಗಿ ದೇವಸ್ಥಾನದಲ್ಲಿ ಒಂದು ತೆಂಗಿನಕಾಯಿ ಕಟ್ಟಿದರು. 10 ತಿಂಗಳೊಳಗೆ ಅವರಿಗೆ ಗಂಡು ಮಗುವಿನ ಜನನವಾಗಿದೆ. ಅಂದಿನಿಂದ ಇಲ್ಲಿ ತೆಂಗಿನಕಾಯಿ ಕಟ್ಟುವ ಸಂಪ್ರದಾಯ ಪ್ರಾರಂಭವಾಯಿತು.

ಸವಮನಿ

ಸವಮನಿ

ಇಲ್ಲಿನ ಮತ್ತೊಂದು ಅಭ್ಯಾಸವೆಂದರೆ ಸವಮನಿ (ಸುಮಾರು 50 ಕೆಜಿಯಷ್ಟು) ಆಹಾರವನ್ನು ದೇವರಿಗೆ ನೀಡುತ್ತಾರೆ. ಹಿಂದಿನ ದಿನಗಳಲ್ಲಿ ಆಹಾರವನ್ನು ಅಡುಗೆ ಮಂದಿರದಲ್ಲೇ ತಯಾರಿಸಲಾಗುತ್ತಿತ್ತು, ಆದರೆ ಜನರು ಹೆಚ್ಚಾದಂತೆ, ಹಲವಾರು ಸ್ವತಂತ್ರ ಅಂಗಡಿಯವರು ಮತ್ತು ಕೇಟರಿಂಗ್‌ಗಳಿಗೆ ನೀಡಲಾಗುತ್ತಿದೆ. ದಾಲ್, ಬಾಟಿ, ಕುರ್ಮಾ, ಬೂಂದಿ, ಪೆಡಾ ಮತ್ತು ಲಡ್ಡು ಮುಂತಾದ ಅನೇಕ ಭಕ್ಷ್ಯಗಳನ್ನು ದೇವರಿಗೆ ನೈವೇದ್ಯಕ್ಕಾಗಿ ತಯಾರಿಸಲಾಗುತ್ತದೆ. ಆಹಾರವನ್ನು ಮೊದಲು ದೇವರಿಗೆ ಅರ್ಪಿಸಿ ನಂತರ ಬಂದ ಭಕ್ತರಿಗೆ ವಿತರಿಸಲಾಗುತ್ತದೆ.

ಆನೆಯ ತಲೆಯನ್ನೇ ಹೋಲುವ ಈ ಬೆಟ್ಟವನ್ನು ನೋಡಿದ್ದೀರಾ?ಆನೆಯ ತಲೆಯನ್ನೇ ಹೋಲುವ ಈ ಬೆಟ್ಟವನ್ನು ನೋಡಿದ್ದೀರಾ?

ಯಾವಾಗ ಭೇಟಿ ಸೂಕ್ತ

ಯಾವಾಗ ಭೇಟಿ ಸೂಕ್ತ

ವರ್ಷದಲ್ಲಿ ಯಾವುದೇ ಸಮಯದಲ್ಲಿ ನೀವು ದೇವಸ್ಥಾನಕ್ಕೆ ಭೇಟಿ ನೀಡಬಹುದಾದರೂ, ಬೇಸಿಗೆಯ ತಿಂಗಳುಗಳನ್ನು ಶಾಖದ ಉಷ್ಣತೆಯಿಂದ ತಪ್ಪಿಸುವುದು ಉತ್ತಮ. ಉತ್ಸವದಲ್ಲಿ ಪಾಲ್ಗೊಳ್ಳಬೇಕಾದರೆ ನೀವು ಉತ್ಸವದ ಸಮದರ್ಭದಲ್ಲೇ ಇಲ್ಲಿಗೆ ಭೇಟಿ ನೀಡುವುದು ಒಳ್ಳೆಯದು.

 ತಲುಪುವುದು ಹೇಗೆ?

ತಲುಪುವುದು ಹೇಗೆ?

ಜೈಪುರದಿಂದ 165 ಕಿ.ಮೀ ಡ್ರೈವ್ ಮಾಡಿದರೆ ರಾಷ್ಟ್ರೀಯ ಹೆದ್ದಾರಿಯ ಮೂಲಕ ಸರಿಸುಮಾರಾಗಿ ಎರಡು ಮತ್ತು ಅರ್ಧ ಘಂಟೆಗಳಲ್ಲಿ ಸಲಾಸರ್ ತಲುಪುತ್ತೀರಿ. ಇದು ಸಿಕರ್‌ನಿಂದ 57 ಕಿ.ಮೀ , ಲಕ್ಷ್ಮಂಗಾರ್‌ನಿಂದ 31 ಕಿಮೀ ಮತ್ತು ಸುಜಾಂಗರ್‌ನಿಂದ 27 ಕಿ.ಮೀ ದೂರದಲ್ಲಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X