ಚಿಂತಾಮಣಿ ಕರ್ನಾಟಕದ ಚಿಕ್ಕಬಳ್ಳಾಪುರ ಜಿಲ್ಲೆಯ ಒಂದು ಪಟ್ಟಣವಾಗಿದೆ. ಚಿಂತಾಮಣಿ ಬೆಂಗಳೂರಿನಿಂದ ಸುಮಾರು 80 ಕಿ.ಮೀ ದೂರದಲ್ಲಿದೆ. ಕನ್ನಡ ಅಧಿಕೃತ ಮತ್ತು ಆಡಳಿತಾತ್ಮಕ ಭಾಷೆಯಾಗಿದೆ. ಇಲ್ಲಿ ಜನರು ಕನ್ನಡ ಮತ್ತು ತೆಲುಗು ಭಾಷೆಯನ್ನು ಮಾತನಾಡುತ್ತಾರೆ. ಚಿಂತಾಮಣಿಯಲ್ಲಿ ನೋಡಬೇಕಾದಂತಹ ಯಾವೆಲ್ಲಾ ತಾಣಗಳಿವೆ ಅನ್ನೋದನ್ನು ನೋಡೋಣ.
ಚಿಕ್ಕಬಳ್ಳಾಪುರದ ಪಾಲಾದ ಚಿಂತಾಮಣಿ
PC: youtube
ಚಿಂತಾಮಣಿ ಚಿಕ್ಕಬಳ್ಳಾಪುರ ಜಿಲ್ಲೆಯ ಒಂದು ತಾಲ್ಲೂಕು ಪ್ರಧಾನ ಕಚೇರಿಯಾಗಿದೆ. ಇದು 2007 ರಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯೊಂದನ್ನು ರೂಪಿಸಲು ಕೋಲಾರ ಜಿಲ್ಲೆಯನ್ನು ಬೇರ್ಪಡಿಸಿದಾಗ ಚಿಂತಾಮಣಿ ಚಿಕ್ಕಬಳ್ಳಾಪುರ ಜಿಲ್ಲೆಯ ಭಾಗವಾಯಿತು. ಚಿಂತಾಮಣಿ ಪಟ್ಟಣವನ್ನು ಅದರ ಸ್ಥಾಪಕ ಚಿಂತಾಮಣಿ ರಾವ್ ಎಂಬ ಹೆಸರಿನ ಮರಾಠಾ ಮುಖ್ಯಸ್ಥನ ಹೆಸರಿನಿಂದ ಕರೆಯಲಾಗುತ್ತದೆ.
ಇದಕ್ಕೆಲ್ಲಾ ಫೇಮಸ್ ಚಿಂತಾಮಣಿ
PC: Sarku.swathi
ಇದು ಚಿನ್ನ ಮತ್ತು ಬೆಳ್ಳಿಯ ವ್ಯಾಪಾರ ಮತ್ತು ಅದರ ಅಗರಬತ್ತಿ (ಧೂಪ ದ್ರವ್ಯ) ಉದ್ಯಮಗಳಿಗೆ, ಸಿಲ್ಕ್ ಮತ್ತು ಟೊಮೆಟೊ ಉತ್ಪಾದನೆಗೆ ಚಿಂತಾಮಣಿ ಕರ್ನಾಟಕದಲ್ಲೇ ಅತ್ಯಂತ ದೊಡ್ಡ ಮಾರುಕಟ್ಟೆಗಳಿಗೆ ಹೆಸರುವಾಸಿಯಾಗಿದೆ. "ಫ್ರೈಡ್ ಗ್ರೌಂಡ್ನಟ್ಸ್"ಗೂ ಚಿಂತಾಮಣಿ ಹೆಸರುವಾಸಿಯಾಗಿದೆ.
ಟ್ರೆಕ್ಕಿಂಗ್ ತಾಣಗಳು
PC: youtube
ಚಿಂತಾಮಣಿ ಚಾಕ್ಬಾಲ್ಪುರ ಚಾರಣಕ್ಕಾಗಿ ಹಲವು ಸ್ಥಳಗಳನ್ನು ಒದಗಿಸುತ್ತದೆ. ಮುಖ್ಯ ಗಮ್ಯಸ್ಥಾನದಿಂದ 15 ಕಿ.ಮೀ ದೂರದಲ್ಲಿರುವ 6 ಬೆಟ್ಟಗಳಿವೆ. ನಂದಿ ಗಿರಿ, ಚಂದ್ರ ಗಿರಿ, ಇಂದ್ರ ಗಿರಿ, ಬ್ರಹ್ಮ ಗಿರಿ, ಕಲವರ ಬೆಟ್ಟ, ಮತ್ತು ಹೇಮಾ ಗಿರಿ ಬೆಟ್ಟಗಳು ಟ್ರೆಕ್ಕಿಂಗ್ ತಾಣಗಳಿಗೆ ಹೆಸರುವಾಸಿಯಾಗಿದೆ. ಶ್ರೀನಿವಾಸಪುರ, ಶಿಡ್ಲಘಟ್ಟ, ಕೋಲಾರ, ಬಾಗೇಪಲ್ಲಿ, ಮದನಪಲ್ಲಿ (ಆಂಧ್ರಪ್ರದೇಶ), ಚೆಂಬಕೂರ್ (ಆಂಧ್ರ ಪ್ರದೇಶ), ಬೆರಂಗಿ ಕೊಟ್ಟಕೋಟ (ಆಂಧ್ರಪ್ರದೇಶ) ಚಿಂತಾಮಣಿಗೆ ಸಮೀಪದ ಪಟ್ಟಣಗಳಾಗಿವೆ.
ದೊಡ್ಡ ಸರೋವರಗಳು
PC:Sarku.swathi
ಚಿಂತಾಮಣಿಯಲ್ಲಿ ಕೆಲವು ದೊಡ್ಡ ಸರೋವರಗಳಿದ್ದು, ಇದು ಕುಡಿಯುವ ನೀರಿಗೆ ಯೋಗ್ಯವಾಗಿದೆ. ಕಣಂಪಳ್ಳಿ ಸರೋವರ ಈ ಪಟ್ಟಣಕ್ಕೆ ಮುಖ್ಯ ನೀರಿನ ಜಲಾಶಯವಾಗಿದೆ. ಅಂಬಾಜಿದುರ್ಗ ಕೆರೆ, ಗೋಪಾಸಂದ್ರ ಕೆರೆ, ಮಲಪಲ್ಲಿ ಕೆರೆ, ನೆಕ್ಕುಂಡಿಪೇಟೆ ಕೆರೆಗಳು ಇತರ ಕೆರೆಗಳಾಗಿವೆ. 100 ಕೋಟಿ ಯೋಜನೆ ಅಡಿಯಲ್ಲಿ, ಈ ಸರೋವರಗಳನ್ನು ಪುನರ್ವಿಕರಣ ಮಾಡಲಾಗಿದೆ. ಆಧುನಿಕ ಸೌಕರ್ಯಗಳೊಂದಿಗೆ ಸಂಗ್ರಹಣೆಯನ್ನು ನವೀಕರಿಸಲಾಗುತ್ತಿದೆ.
ಇಲ್ಲಿನ ಇತರ ಆಕರ್ಷಣೆಗಳು
PC: youtube
ಚಿಂತಾಮಣಿಯಿಂದ ಕೆಲವೇ ನಿಮಿಷಗಳ ಪ್ರಯಾಣ ಕೈಲಾಸ ಗಿರಿ ಎಂಬ ಬೆಟ್ಟದ ಮೇಲೆ ನೆಲೆಗೊಂಡಿದೆ. ಕೈವಾರಾವು ಚಿಂತಾಮಣಿಯಲ್ಲಿನ ಮತ್ತೊಂದು ಪ್ರವಾಸಿ ಆಕರ್ಷಣೆಯಾಗಿದೆ. ಇದು ಸುಮಾರು 11 ಕಿಲೋಮೀಟರ್ ದೂರದಲ್ಲಿದೆ.
ಮುರಘ ಮಲ್ಲ ದರ್ಗಾ
PC: youtube
ಇದು ಬೆಟ್ಟದ ಪಾದದಲ್ಲೇ ಇದೆ. ಮುರಘ ಮಲ್ಲ ದರ್ಗಾವು ಪತಿ, ಪತ್ನಿ ಇಬ್ಬರು ಸಂತರ ವಿಶ್ರಾಂತಿ ಪಡೆಯುವ ಸ್ಥಳವಾಗಿದೆ. ಭಕ್ತರು ಈ ಸಂತರನ್ನು ಅಮ್ಮಾಜಾನ್ ಮತ್ತು ಬಾಬಾಜಾನ್ (ತಾಯಿ ಮತ್ತು ತಂದೆ) ಎಂದು ಕರೆಯುತ್ತಾರೆ. ಮುಸ್ಲಿಮರು ಮತ್ತು ಕೆಲವು ಹಿಂದೂಗಳು ಈ ದರ್ಗಾಕ್ಕೆ ಭೇಟಿ ನೀಡುತ್ತಾರೆ. ಈ ಸ್ಥಳಕ್ಕೆ ಭೇಟಿ ನೀಡುವ ಜನರ ಯಾವುದೇ ರೀತಿಯ ಕಾಯಿಲೆಗಳನ್ನು ಗುಣಪಡಿಸುವ ಮತ್ತು ಕಾಡುವ ಯಾವುದೇ ರೀತಿಯ ಸಮಸ್ಯೆಗಳನ್ನು ತೊಡೆದುಹಾಕುವ ಶಕ್ತಿಯನ್ನು ಈ ದರ್ಗಾ ಹೊಂದಿದೆ ಎಂದು ಭಕ್ತರು ನಂಬುತ್ತಾರೆ. ಇಲ್ಲಿ ನೀವು ಶ್ರೀ ಮುಕ್ತಿಮೇಶ್ವರ ಸ್ವಾಮಿ ದೇವಸ್ಥಾನವನ್ನು ಕಾಣಬಹುದು. ಮುರಗ ಮಲ್ಲಾದ ಸಮೀಪದಲ್ಲೇ ಇರುವ ಈ ಸ್ಥಳಕ್ಕೆ ಭೇಟಿ ನೀಡುವಿಕೆಯು ನಿಮಗೆ ಅನೇಕ ವಿಧಗಳಲ್ಲಿ ಒಳ್ಳೆಯ ಅನುಭವವನ್ನು ನೀಡುತ್ತದೆ.
ಕೈಲಾಸ ಗಿರಿ ದೇವಸ್ಥಾನ
PC: youtube
ಕೈಲಾಸಗಿರಿಯಲ್ಲಿರುವ ಕೈಲಾಸ ಗಿರಿ ದೇವಸ್ಥಾನ ಚಿಂತಾಮಣಿಯಲ್ಲಿನ ಇನ್ನೊಂದು ಆಕರ್ಷಣೆಯಾಗಿದೆ. ಇದು ಬೆಟ್ಟದ ಮೇಲೆ ಇರುವ ಪ್ರಸಿದ್ಧ ಗುಹಾ ದೇವಾಲಯವಾಗಿದೆ. ಶಿವ, ದೇವತೆ ಪಾರ್ವತಿ ಮತ್ತು ಗಣೇಶನಿಗೆ ಸಮರ್ಪಿತವಾದ ಕೈಲಾಸಗಿರಿಯಲ್ಲಿ ಮೂರು ದೇವಾಲಯಗಳಿವೆ. ಇಲ್ಲಿರುವ ಶಿವನಿಗೆ ನಾಲ್ಕು ಮುಖಗಳಿವೆ. ಕೈವಾರದಿಂದ 7 ಕಿ.ಮೀ ದೂರದಲ್ಲಿರುವ ಕೈಲಾಸಗಿರಿ - ಗುಹೆ ದೇವಾಲಯವನ್ನು ತಲುಪಲು ಸುಮಾರು 20 ನಿಮಿಷಗಳ ಕಾಲ ಪ್ರಯಾಣಿಸುತ್ತಿದ್ದೇವೆ. ಬೆಟ್ಟದ ಒಳಗೆ ಮಾನವ ನಿರ್ಮಿತ ಗುಹೆಗಳ ಒಳಗೆ ವಿವಿಧ ದೇವರುಗಳ ವಿಗ್ರಹಗಳನ್ನು ಸ್ಥಾಪಿಸಲಾಗಿದೆ. ಗುಹೆಗಳ ಹೊರಗಿನ ತಾಪಮಾನವು ತುಂಬಾ ಬಿಸಿಯಾಗಿರುತ್ತದೆ ಆದರೆ ಗುಹೆಯ ಒಳಗೆ ತುಂಬಾ ತಂಪು ಮತ್ತು ಆಹ್ಲಾದಕರವಾಗಿರುತ್ತದೆ.
ಕೈವಾರ
PC: youtube
ಈ ಪಟ್ಟಣ ಮಹಾ ಭಾರತೀಯ ಮಹಾ ಮಹಾಕಾವ್ಯ, ಮಹಾಭಾರತದೊಂದಿಗೆ ಸಂಬಂಧ ಹೊಂದಿದೆ. ಕೈವಾರವನ್ನು ಏಕಾಕ್ರಪುರ ಎಂದು ಕರೆಯಲಾಗುತ್ತಿತ್ತು, ಪಾಂಡವರು ಅಜ್ಞಾತ ವಾಸದಲ್ಲಿದ್ದಾಗ ಇಲ್ಲಿ ನೆಲೆಸಿದ್ದರು ಎನ್ನಲಾಗುತ್ತದೆ. ಪಾಂಡವರಲ್ಲಿ ಒಬ್ಬರಾದ ಭೀಮನು ಈ ಸ್ಥಳದಲ್ಲಿ ರಾಕ್ಷಸ ಬಕಾಸುರನನ್ನು ಸಂಹರಿಸಿದ್ದು ಎನ್ನಲಾಗುತ್ತದೆ. ಇಲ್ಲಿರುವ ಶ್ರೀ ಅಮರನಾರಾಯಣ, ಭೀಮೇಶ್ವರ ಮತ್ತು ಸಂತ ನಾರಾಯಣರ ಆಶ್ರಮಗಳು ಭೇಟಿಗೆ ಯೋಗ್ಯವಾದ ಸ್ಥಳಗಳಾಗಿವೆ. ಇದು ಪ್ರಸಿದ್ಧ ಸಂತ ಕೈವಾರಾ ತಾಥಯ್ಯ ಎಂದು ಪ್ರಸಿದ್ಧವಾಗಿರುವ "ನಾರಾಯಣಪ್ಪ" ರಿಂದ ಜನಪ್ರೀಯವಾಗಿದೆ. ಅವರು ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಅಮರ ನಾರಾಯಣ ಸ್ವಾಮಿ ಮೇಲೆ ಸುಂದರವಾದ ಕೀರ್ತನೆಗಳನ್ನು ಸಂಯೋಜಿಸಿದ್ದಾರೆ. "ಬ್ರಾಂಹಂಧಪುರ ಶಟಕ್ಕ" ಎಂಬ ಪುಸ್ತಕದಲ್ಲಿ ಯೋಗಗಳ ಬಗ್ಗೆ ವಿವರವಾಗಿ ತಿಳಿಸಿದ್ದಾರೆ.
ತಲುಪುವುದು ಹೇಗೆ?
ಚಿಂತಾಮಣಿ ರೈಲು ನಿಲ್ದಾಣವು ಚಿಂತಾಮಣಿಗೆ ಸಮೀಪದ ರೈಲು ನಿಲ್ದಾಣವಾಗಿದೆ. ಚಿಂತಾಮಣಿ ರೈಲ್ವೆ ನಿಲ್ದಾಣ ಪಟ್ಟಣ ಮಾರ್ಗಗಳ ಮೂಲಕ ಸಮೀಪದ ರೈಲು ಮಾರ್ಗದ ಕೇಂದ್ರಗಳಾಗಿವೆ. ಚಿಂತಾಮಣಿಗೆ ಸಮೀಪದ ಪಟ್ಟಣದಿಂದ ಸಾಕಷ್ಟು ಸಾರಿಗೆ ವ್ಯವಸ್ಥೆಗಳಿವೆ. ಚಿಂತಾಮಣಿ ಸಮೀಪದಲ್ಲಿ ಯಾವುದೇ ವಿಮಾನ ನಿಲ್ದಾಣವಿಲ್ಲ. ಬೆಂಗಳೂರು ವಿಮಾನ ನಿಲ್ದಾಣವೇ ಇಲ್ಲಿಗೆ ಸಮೀಪದ ವಿಮಾನ ನಿಲ್ದಾಣವಾಗಿದೆ.