ಮಾಧೋಪುರ ಹೆಸರಿನ ಸವಾಯಿ ಮಾದೋಪುರ್ ರಾಜಸ್ಥಾನದ ಒಂದು ಸುಂದರವಾದ ಪೌರಾಣಿಕ ನಗರವಾಗಿದೆ. ನೀವು ಇತಿಹಾಸ ಪ್ರೇಮಿಯಾಗಿದ್ದಲ್ಲಿ ಹಾಗೂ ರೋಮಾಂಚಕತೆಯಲ್ಲಿ ಆಸಕ್ತಿ ಹೊಂದಿದ್ದರೆ ನೀವು ಈ ಸ್ಥಳಕ್ಕೇ ಭೇಟಿ ನೀಡಲೇ ಬೇಕು. ಈ ಪ್ರಾಚೀನ ನಗರದಲ್ಲಿ ಅನೇಕ ಐತಿಹಾಸಿಕ ಸ್ಮಾರಕಗಳು ಹಾಗೂ ಕೋಟೆಗಳು ಇವೆ. ಇದು ಪ್ರವಾಸಿಗರನ್ನು ರೋಮಾಂಚಿತಗೊಳಿಸುತ್ತದೆ.
ಪ್ರವಾಸದ ಜೊತೆ ಇಲ್ಲಿನ ಲೋಕಲ್ ಆಲ್ಕೋಹಾಲ್ ಟೇಸ್ಟ್ ಮಾಡ್ಲೇ ಬೇಕು
ಈ ನಗರವು ಪ್ರಸಿದ್ಧ ರಣಥಂಬೋರ್ ನ್ಯಾಷನಲ್ ಪಾರ್ಕ್ನ ಸಮೀಪವಿದೆ. ಇದು ವಿಭಿನ್ನ ಜೀವ ಜಗತ್ತುಗಳ ಜೊತೆಗೆ ತನ್ನ ವನ್ಯ ಜೀವನಕ್ಕೂ ಪ್ರಸಿದ್ಧಿಯಾಗಿದೆ. ಹಾಗಾಗಿ ಇದು ಭಾರತದ ಇತಿಹಾಸದ ಜೊತೆಗೆ ವಲ್ಡ್ ಲೈಫ್ ಪ್ರೇಮಿಗಳ ನಡುವೆಯೂ ಬಹಳ ಜನಪ್ರೀಯವಾಗಿದೆ.
ರಣಥಂಬೇಶ್ವರ ನ್ಯಾಷನಲ್ ಪಾರ್ಕ್
PC: Aravalli Range
ರಣಥಂಬೇಶ್ವರ ನ್ಯಾಷನಲ್ ಪಾರ್ಕ್ ದೇಶದ ಪ್ರಸಿದ್ಧ ವನ್ಯಜೀವಿ ಧಾಮಗಳಲ್ಲಿ ಒಂದಾಗಿದೆ. ಇದು ಮುಖ್ಯ ನಗರದಿಂದ 11 ಕಿ.ಮೀ ದೂರದಲ್ಲಿದೆ. ಇಲ್ಲಿ ಹುಲಿಗಳ ಸಂಖ್ಯೆ ಹೆಚ್ಚು ಇದೆ. ಈ ಹುಲಿಗಳನ್ನು ನೋಡಿಕೊಳ್ಳಲು ಅಧಿಕಾರಿಗಳಿಗೆ ವಿಶೇಷ ರೀತಿಯಲ್ಲಿ ನಿರ್ದೇಶನವನ್ನು ನೀಡಲಾಗುತ್ತದೆ. ಹುಲಿಯನ್ನು ಹೊರತುಪಡಿಸಿ ಇಲ್ಲಿ ಇನ್ನಿತರ ವನ್ಯಜೀವಿಗಳನ್ನೂ ನೋಡಬಹುದು. ಪಕ್ಷಿ ಪ್ರಜಾತಿಗಳನ್ನು ನೋಡಬಹುದು.
ರಣಥಂಬೋರ್ ಕೋಟೆ
PC: Farhan Khan
ವನ್ಯ ಜೀವಿ ಅಭಯಾರಣ್ಯವನ್ನು ಹೊರತುಪಡಿಸಿ ನೀವು ಇಲ್ಲಿ ಐತಿಹಾಸಿಕ ಕೋಟೆಯನ್ನು ನೋಡಬಹುದು. ರಣಥಂಬೋರ್ ಕೋಟೆಯು ರಾಜ್ಯದ ಪ್ರಾಚೀನ ಕೋಟೆಗಳಲ್ಲಿ ಒಂದಾಗಿದೆ. ರಣಥಂಬೋರ್ ರಾಷ್ಟ್ರೀಯ ಉದ್ಯಾನದ ಒಳಗೆ ಈ ಕೋಟೆಯನ್ನು 8ನೇ ಶತಮಾನದಲ್ಲಿ ಚೌಹಾನ ರಾಜರು ನಿರ್ಮಿಸಿದರು ಎನ್ನಲಾಗುತ್ತದೆ. ಈ ಕೋಟೆಯಲ್ಲಿ ಬಹಾದ್ದೂರ್ ಷಾ, ಫೀರೋಜ್ ಷಾ ತುಘಲಕ್, ಕುತುಬ್ ಉದ್ ದಿನ್ ಹಾಗೂ ಅಲ್ಲಾವುದ್ದೀನ್ ಖಿಲ್ಜಿ ಮೂಲಕ ಆಕ್ರಮಣಗಳಾಗುತ್ತಿದ್ದವು ಎನ್ನುತ್ತದೆ ಇಲ್ಲಿನ ಇತಿಹಾಸಕ್ಕೆ ಸಂಬಂಧಿಸಿದ ಸಾಕ್ಷ್ಯ.
ಕಲಿಯುಗದ ಅಂತ್ಯ ಯಾವಾಗ ಅನ್ನೋದನ್ನು ತಿಳಿಸುತ್ತಂತೆ ಈ ಗುಹೆಯಲ್ಲಿರುವ ಕಲ್ಲು!
ಖಂದರ್ ಕೋಟೆ
PC: Rahulsahurahul
ರಣಥಂಬೋರ್ ಕೋಟೆಯನ್ನು ಹೊರತುಪಡಿಸಿ ನೀವು ಮುಖ್ಯ ನಗರದಿಂದ 40 ಕಿ.ಮಿ ದೂರದಲ್ಲಿ ಖಂದರ್ ಕೋಟೆಯನ್ನು ನೋಡಬಹುದು. ಇತಿಹಾಸದ ಸಾಕ್ಷ್ಯಗಳ ಪ್ರಕಾರ, ಈ ಕೋಟೆಯನ್ನು ಯಾವ ರಾಜ ನಿರ್ಮಿಸಿದ್ದನೋ ಆತನನ್ನು ಯಾರೂ ಸೋಲಿಸಲು ಸಾಧ್ಯವಾಗಿರಲಿಲ್ಲ. ಇತಿಹಾಸಕ್ಕೆ ಸಂಬಂಧಿಸಿದ ಈ ವಿಚಾರಗಳಿಂದಾಗಿ ಈ ಕೋಟೆಯು ಪ್ರವಾಸಿಗರ ನಡುವೆ ಜನಪ್ರೀಯವಾಗಿದೆ. ಕಾಲಕ್ರಮೇಣ ಈ ಕೋಟೆಯಲ್ಲಿ ಸಿಸೋಧಿಯಾ ರಾಜರಿಂದ ಹಿಡಿದು ಮೊಘಲ್ ರಾಜರು ಆಳ್ವಿಕೆ ನಡೆಸಿದರು. ಈ ಕೋಟೆಯ ಒಳಗೆ 7 ಮಂದಿರಗಳಿವೆ.
ಚೌಥ್ ಮಾತಾ ಮಂದಿರ
ಪ್ರಾಕೃತಿಕ ಹಾಗೂ ಐತಿಹಾಸಿಕ ಸ್ಥಳಗಳನ್ನು ಹೊರತುಪಡಿಸಿ ನೀವು ಇಲ್ಲಿ ಪ್ರಸಿದ್ಧ ಧಾರ್ಮಿಕ ಸ್ಥಳಗಳನ್ನೂ ನೋಡಬಹುದು. ಇಲ್ಲಿನ ಚೌಥ್ ಮಂದಿರದ ದರ್ಶನವನ್ನೂ ಪಡೆಯಬಹುದು. ನಗರದಿಂದ 45 ಕಿ.ಮೀ ದೂರದಲ್ಲಿರುವ ಈ ಮಂದಿರವು ಇಲ್ಲಿನ ಪ್ರಾಚೀನ ಮಂದಿರವಾಗಿದೆ. ಈ ಮಂದಿರವ ಮೂರ್ತಿಯನ್ನು ಬಾರ್ವಾಡದ ರಾಜ ಭೀಮ್ ಸಿಂಗ್ ತಂದಿದ್ದು ಎನ್ನಲಾಗುತ್ತದೆ. ಭೀಮ್ ಸಿಂಗ್ ಈ ಮಂದಿರವನ್ನು ಒಂದು ಬೆಟ್ಟದ ತುದಿಯಲ್ಲಿ ಪ್ರತಿಷ್ಠಾಪಿಸಿದ್ದನು ನಂತರ ಅದಕ್ಕೆ ಭವ್ಯವಾದ ದೇವಸ್ಥಾನವನ್ನು ನಿರ್ಮಿಸಿದನು ಎನ್ನಲಾಗುತ್ತದೆ. ಇಲ್ಲಿ ಚೌಥ್ ಮಾತಾ ಮೂರ್ತಿಯನ್ನು ಹೊರತುಪಡಿಸಿ ಗಣೇಶ ಹಾಗೂ ಬೈರವನ ಮೂರ್ತಿಯೂ ಇದೆ. ಗಣೇಶ ಚತುರ್ಥೀಯ ಸಂದರ್ಭ ಭವ್ಯ ಆಯೋಜನೆಯನ್ನು ನಡೆಸಲಾಗುತ್ತದೆ.
ಚಮತ್ಕಾರಿ ಮಂದಿರ
ಈ ಮೇಲಿನ ಸ್ಥಳಗಳನ್ನು ಹೊರತುಪಡಿಸಿ ನೀವು ಇಲ್ಲಿನ ಪ್ರಸಿದ್ಧ ಜೈನ ಮಂದಿರದ ದರ್ಶನವನ್ನೂ ಮಾಡಬಹುದು. ಈ ಜೈನ ಮಂದಿರವನ್ನು ಚಮತ್ಕಾರಿ ಮಂದಿರ ಎಂದೂ ಕರೆಯಲಾಗುತ್ತದೆ. ಇದರ ಹಿಂದೆ ಹಲವು ಕಥೆಗಳಿವೆ. ಇದು ಜೈನರ ಪವಿತ್ರಸ್ಥಾನವಾಗಿದೆ. ಹಿಂದೆ ನಡೆದ ಘಟನೆಗಳ ಕಾರಣದಿಂದಾಗಿ ಈ ಮಂದಿರವು ಅಸ್ತಿತ್ವಕ್ಕೆ ಬಂತು ಹಾಗಾಗಿ ಈ ಮಂದಿರಕ್ಕೆ ಚಮತ್ಕಾರಿ ಮಂದಿರ ಎನ್ನುವ ಹೆಸರು ಬಂದಿದೆ.
ಕಥೆಗಳ ಪ್ರಕಾರ, ಇಲ್ಲಿ ಓರ್ವ ರೈತನಿಗೆ ದೇವರು ಕನಸಿನಲ್ಲಿ ಬಂದು ಒಂದು ಸ್ಥಳದ ಬಗ್ಗೆ ಹೇಳಿ ಅಲ್ಲಿ ಅಗೆಯುವಂತೆ ತಿಳಿಸುತ್ತಾರೆ. ರೈತನು ಅದೇ ರೀತಿ ಆ ಸ್ಥಳದಲ್ಲಿ ಅಗೆಯುವಾಗ ಒಂದು ದೇವರ ಮೂರ್ತಿ ಸಿಗುತ್ತದೆ. ಆ ರೈತನು ಆ ಮೂರ್ತಿಯನ್ನು ಜೈನ ದಿಗಂಬರ ಸಾಧುಗಳಿಗೆ ಹಸ್ತಾಂತರಿಸುತ್ತಾನೆ.
ಅದೇ ರೈತನಿಗೆ ಮತ್ತೆ ದೇವರು ಕನಸಿನಲ್ಲಿ ಬಂದು ಆ ಮೂರ್ತಿಯನ್ನು ಒಂದು ಕುದುರೆಗಾಡಿಯಲ್ಲಿಡುವಂತೆ ಆದೇಶಿಸುತ್ತಾರೆ. ಆ ಕುದುರೆಗಾಡಿಯು ಎಲ್ಲಿ ನಿಲ್ಲುತ್ತದೋ ಅಲ್ಲೇ ಮಂದಿರ ನಿರ್ಮಿಸುವಂತೆ ತಿಳಿಸುತ್ತಾರೆ.