Search
  • Follow NativePlanet
Share
» »ವಿಜಯವಾಡದ ಬಳಿ ಇರುವ ಈ ಪ್ರಸಿದ್ಧ ತಾಣಗಳನ್ನು ನೋಡಿದ್ದೀರಾ?

ವಿಜಯವಾಡದ ಬಳಿ ಇರುವ ಈ ಪ್ರಸಿದ್ಧ ತಾಣಗಳನ್ನು ನೋಡಿದ್ದೀರಾ?

ಆಂಧ್ರ ಪ್ರದೇಶದಲ್ಲಿರುವ ವಿಜಯವಾಡವು ಒಂದು ಪ್ರಾಚೀನ ನಗರವಾಗಿದೆ. ಐತಿಹಾಸಿಕ, ಪ್ರಾಕೃತಿಕ ಹಾಗೂ ಸಾಂಸ್ಕೃತಿಕ ದೃಷ್ಠಿಯಿಂದ ಬಹಳ ಮಹತ್ವಪೂರ್ಣವಾಗಿದೆ. ಅಷ್ಟೇ ಅಲ್ಲದೆ ರಾಜ್ಯದ ಪ್ರಮುಖ ಪ್ರವಾಸಿ ತಾಣಗಳಲ್ಲೂ ಒಂದಾಗಿದೆ. ವರ್ಷವಿಡೀ ಪ್ರವಾಸಿಗರೂ ಬರುತ್ತಲೇ ಇರುತ್ತಾರೆ.

ಪ್ರಮುಖ ತಾಣಗಳು

ಪ್ರಮುಖ ತಾಣಗಳು

PC:Krishna Chaitanya Velaga

ಈ ನಗರವು ಬಹಳ ಹಿಂದಿನಿಂದಲೂ ಸಾಂಸ್ಕೃತಿಕ, ರಾಜಕೀಯ ಹಾಗೂ ವ್ಯಾಪಾರಿ ಗತಿವಿಧಿಗಳಿಂದ ಸಕ್ರೀಯವಾಗಿತ್ತು. ಹಾಗಾಗಿ ಇದನ್ನು ಆಂಧ್ರಪ್ರದೇಶದ ಹೃದಯ ಭಾಗ ಎಂದೂ ಕರೆಯಲಾಗುತ್ತದೆ. ಇಲ್ಲಿ ಸುತ್ತಾಡಲು ಸಾಕಷ್ಟು ಸ್ಥಳಗಳಿವೆ. ಅವುಗಳಲ್ಲಿ ಕೊಂಡಪಲ್ಲಿ ಕೋಟೆ, ಭವಾನಿ ದ್ವೀಪ, ಅಂಡವಲ್ಲಿ ಗುಹೆ ಮುಂತಾದವುಗಳು ಸೇರಿವೆ. ಇಂದು ನಾವು ನಿಮಗೆ ವಿಜಯವಾಡದ ಸಮೀಪದಲ್ಲಿರುವ ಕೆಲವು ಪ್ರಮುಖ ಪ್ರೇಕ್ಷಣೀಯ ಪ್ರವಾಸಿ ತಾಣಗಳ ಬಗ್ಗೆ ತಿಳಿಸಲಿದ್ದೇವೆ.

ಸಾಯಿಬಾಬಾ ಜೀವಸಮಾಧಿಯಾಗಿದ್ದು ಎಲ್ಲಿ ಮತ್ತು ಯಾವಾಗ ಗೊತ್ತಾ?ಸಾಯಿಬಾಬಾ ಜೀವಸಮಾಧಿಯಾಗಿದ್ದು ಎಲ್ಲಿ ಮತ್ತು ಯಾವಾಗ ಗೊತ್ತಾ?

ಅಮರಾವತಿ

ಅಮರಾವತಿ

PC: Poreleeds

ವಿಜಯವಾಡದ ಸಮೀಪದ ಪ್ರವಾಸಿ ತಾಣಗಳಲ್ಲಿ ಅಮರಾವತಿ ಒಂದು. ಆಂಧ್ರ ಪ್ರದೇಶದ ಗುಂಟೂರು ಜಿಲ್ಲೆಯಲ್ಲಿರುವ ಒಂದು ಸಣ್ಣ ನಗರವಾಗಿದೆ. ಕೃಷ್ಣಾ ನದಿ ತೀರದಲ್ಲಿರುವುದರಿಂದ ಈ ನಗರವು ಪ್ರಾಕೃತಿಕವಾಗಿ ಸುಂದರವಾಗಿದೆ. ಇದು ದಕ್ಷಿಣದ ರಾಜವಂಶಜರ ಆಳ್ವಿಕೆಯ ಭಾಗವಾಗಿತ್ತು. ಇಲ್ಲಿ ಮೌರ್ಯರಿಂದ ಹಿಡಿದು ಶಾತವಾಹನರು, ಪಲ್ಲವರು, ಚೋಳರು, ದೆಹಲಿಯ ಸಯಲ್ತಾನರು ಆಳ್ವಿಕೆ ನಡೆಸಿದ್ದಾರೆ.

ಶ್ರೀಶೈಲಂ

ಶ್ರೀಶೈಲಂ

PC: Chintohere

ಶ್ರೀಶೈಲಂ, ಕರ್ನೂಲ್ ಜಿಲ್ಲೆಯ ಆಂಧ್ರ ಪ್ರದೇಶದ ಪ್ರಸಿದ್ಧ ಧಾರ್ಮಿಕ ನಗರವಾಗಿದೆ. ಒಂದು ಸುಂದರ ಮತ್ತು ಆಕರ್ಷಕ ನಗರ. ಈ ನಗರವು ಸಾಂಸ್ಕೃತಿಕ ಮತ್ತು ಐತಿಹಾಸಿಕ ಎರಡೂ ರೂಪಗಳಲ್ಲಿ ಪ್ರಾಮುಖ್ಯತೆಯನ್ನು ಹೊಂದಿದೆ.

ಧೋನಿಯ ಹುಟ್ಟೂರಿನಲ್ಲಿ ಏನೆಲ್ಲಾ ವಿಶೇಷತೆ ಇದೆ ನೋಡಿದ್ದೀರಾ?<br /> ಧೋನಿಯ ಹುಟ್ಟೂರಿನಲ್ಲಿ ಏನೆಲ್ಲಾ ವಿಶೇಷತೆ ಇದೆ ನೋಡಿದ್ದೀರಾ?

ಮಲ್ಲಿಕಾರ್ಜುನ ಸ್ವಾಮಿ ದೇವಾಲಯ

ಮಲ್ಲಿಕಾರ್ಜುನ ಸ್ವಾಮಿ ದೇವಾಲಯ

PC:Nishant Jajoo

ಇಲ್ಲಿನ ಮಲ್ಲಿಕಾರ್ಜುನ ಸ್ವಾಮಿ ದೇವಾಲಯದ ಜನಪ್ರಿಯವಾಗಿದೆ. ಈ ದೇವಸ್ಥಾನವು ಶಿವನಿಗೆ ಅರ್ಪಿತವಾಗಿದೆ. ಇದು ಮಹಾ ಶಿವರಾತ್ರಿ ಸಮಯದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ. ಶ್ರೀಶೈಲಂ ಅಣೆಕಟ್ಟುನ್ನೂ ನೋಡಬಹುದು.

ಗುಂಟೂರು

ಗುಂಟೂರು

PC: Gpics

ವಿಜಯವಾಡದಿಂದ ನೀವು ಪ್ರಸಿದ್ಧ ಪ್ರವಾಸಿ ತಾಣ ಗುಂಟೂರನ್ನು ಆನಂದಿಸಬಹುದು. ಇದು ಪ್ರಾಚೀನ ನಗರವಾಗಿದ್ದು, ಇದು ಬಂಗಾಳ ಕೊಲ್ಲಿಯಿಂದ 64 ಕಿ.ಮೀ ದೂರದಲ್ಲಿದೆ. ಸಾಂಸ್ಕೃತಿಕವಾಗಿ ಮತ್ತು ಐತಿಹಾಸಿಕವಾಗಿ ಈ ನಗರವು ಬಹಳಷ್ಟು ಮಹತ್ವವನ್ನು ಹೊಂದಿದೆ.

ಈ ಕೂಷ್ಮಾಂಡಿನಿ ದೇವಿಯ ತೀರ್ಥ ಸೇವಿಸಿದ್ರೆ ಕಾಯಿಲೆ ವಾಸಿಯಾಗುತ್ತಂತೆ !ಈ ಕೂಷ್ಮಾಂಡಿನಿ ದೇವಿಯ ತೀರ್ಥ ಸೇವಿಸಿದ್ರೆ ಕಾಯಿಲೆ ವಾಸಿಯಾಗುತ್ತಂತೆ !

ವ್ಯಾಪಾರ ಕೇಂದ್ರ

ವ್ಯಾಪಾರ ಕೇಂದ್ರ

PC:IM3847

ಇದಲ್ಲದೆ, ಗುಂಟೂರಿನ ವ್ಯಾಪಾರ ಚಟುವಟಿಕೆಗಳಿಗೆ ಪ್ರಮುಖ ಕೇಂದ್ರವೆಂದು ಪರಿಗಣಿಸಲಾಗಿದೆ. ಅಮರಾವತಿ, ಪ್ರಕಾಶಂ ಅಣೆಕಟ್ಟು, ಭಟ್ಟಿಪ್ರೊಲು, ಕೊಂಡವಿಡು, ಇತ್ಯಾದಿಗಳಂತಹ ಅನೇಕ ಪ್ರವಾಸಿ ತಾಣಗಳನ್ನು ನೀವು ಭೇಟಿ ಮಾಡಬಹುದು.

ನಲ್ಗೊಂಡ

ನಲ್ಗೊಂಡ

PC:Sudhirnlg

ನಲ್ಗೊಂಡವು ಆಂಧ್ರ ಪ್ರದೇಶದಲ್ಲಿರುವ ಒಂದು ಐತಿಹಾಸಿಕ ಸ್ಥಳವಾಗಿದ್ದು, ಅದರ ಹಿಂದೆ ಹಲವು ವರ್ಷಗಳಷ್ಟು ಹಳೆಯದಾಗಿದೆ. ಇತಿಹಾಸದ ಪುರಾವೆಗಳು ಇಲ್ಲಿ ಅನೇಕ ದಕ್ಷಿಣ ರಾಜವಂಶಗಳು ರಾಜ್ಯವನ್ನು ಆಳಿದವು ಎಂದು ತೋರಿಸುತ್ತದೆ. ಇಂದಿಗೂ ಸಹ ಅನೇಕ ಪ್ರಾಚೀನ ರಚನೆಗಳನ್ನು ಕಾಣಬಹುದು.

ದುಶ್ಯಂತ, ಶಕುಂತಲಾ ವಿವಾಹ ನಡೆದ ನಂದ ಪ್ರಯಾಗವನ್ನು ನೋಡಿದ್ದೀರಾ?<br /> ದುಶ್ಯಂತ, ಶಕುಂತಲಾ ವಿವಾಹ ನಡೆದ ನಂದ ಪ್ರಯಾಗವನ್ನು ನೋಡಿದ್ದೀರಾ?

ಪ್ರವಾಸಿ ತಾಣಗಳು

ಪ್ರವಾಸಿ ತಾಣಗಳು

PC:Devadaskrishnan

ಪ್ರಾಚೀನ ಪ್ರಾಮುಖ್ಯತೆಯ ಹೊರತಾಗಿ, ಈ ನಗರವು ಸಹಜವಾಗಿ ಶ್ರೀಮಂತವಾಗಿದೆ. ದೇವರಾಕೊಂಡ, ಭೋಂಗಿರ್ ಕೋಟೆ, ರೋಚಕೊಂಡ ಕೋಟೆ, ಮೆಲ್ಲಯಾಕ್ ಮತ್ತು ಪಿಲ್ಲಮಂರಿ ಮುಂತಾದ ಸ್ಥಳಗಳನ್ನು ಇಲ್ಲಿನ ಸುತ್ತಲಿನ ಪ್ರವಾಸಿ ತಾಣಗಳಾಗಿವೆ.

ನಾಗಾರ್ಜುನ ಸಾಗರ

ನಾಗಾರ್ಜುನ ಸಾಗರ

PC: Sumanthk

ನೀವು ವಿಜಯವಾಡದಿಂದ ನಾಗಾರ್ಜುನ ಸಾಗರ ಅಣೆಕಟ್ಟನ್ನು ನೋಡುವ ಯೋಜನೆ ರೂಪಿಸಬಹುದು. ಈ ಅಣೆಕಟ್ಟು ಕೃಷ್ಣಾ ನದಿಗೆ ಕಟ್ಟಲಾಗಿದೆ ಇದು ರಾಜ್ಯದ ಮುಖ್ಯ ಪ್ರವಾಸಿ ಸ್ಥಳಗಳಲ್ಲಿ ಒಂದಾಗಿದೆ. ಈ ಅಣೆಕಟ್ಟನ್ನು 1955 ರಿಂದ 1967 ರವರೆಗೆ ನಿರ್ಮಿಸಲಾಯಿತು. ಅಣೆಕಟ್ಟಿನ ಇಲ್ಲಿ ಜಲಾಶಯದ ಸುಂದರ ಕಟ್ಟಡವು ಪ್ರವಾಸೋದ್ಯಮ ವಿಷಯದಲ್ಲಿ ಒಂದು ಪ್ರಾಮುಖ್ಯತೆ ಹೊಂದಿದೆ. ಆನಂದಿಸಲು ವಾರಾಂತ್ಯದಲ್ಲಿ ಪ್ರವಾಸಿಗರು ಇಲ್ಲಿಗೆ ಬರುತ್ತಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X