ಉತ್ತರ ಪ್ರದೇಶ ರಾಜ್ಯವು 71 ಜಿಲ್ಲೆಯಲ್ಲಿ ಫಿಲಿಬಿತ್ ಕೂಡ ಒಂದು. ಫಿಲಿಬಿತ್ ನಗರವು ಜಿಲ್ಲಾಕೇಂದ್ರವಾಗಿದೆ.
ಜಿಲ್ಲಾ ವಾಸಿಗಳು ಫಿಲಿಬಿತ್ ಜಿಲ್ಲಾ ಬರೇಲಿ ಡಿವಿಷನಲ್ ಭಾಗವಾಗಿದೆ.
ಬಾಲಿವುಡ್, ಉರ್ದು ಸಾಹಿತ್ಯ ಮತ್ತು ರಾಜಕೀಯದಲ್ಲಿಯೂ ಕೂಡ ಪ್ರಸಿದ್ಧಿಯನ್ನು ಹೊಂದಿದೆ.
ಜಿಲ್ಲಾ ಬಾಲಿವುಡ್ ಚಿತ್ರರಂಗಕ್ಕೆ ಅಂಜುಂ ಫಿಲಿಭಿತಿ, ಅಕ್ತರ್ ಫಿಲಿಭಿತಿ ಮತ್ತು ರಫಿಗ್ ದೇವಾಲಯ ಎಂಬ ಮೂವರು ಹಾಡುಗಳನ್ನು ಬರೆದ್ದಿದ್ದಾರೆ.
ಫಿಲಿಭಿತ್ಗೆ ಮಿನಿ ಪಂಜಾಬ್ ಎಂದು ಕೂಡ ಕರೆಯುತ್ತಾರೆ.
1947ರಲ್ಲಿ ದೇಶ ವಿಭಜನೆಯ ನಂತರ ಅನೇಕ ಸ್ಥಳದಿಂದ ಬಂದು ಸ್ಥಿರವಾಗಿ ಬೆಂಗಾಲಿ ಪ್ರಜೆಗಳಾಗಿ ಅಧಿಕವಾಗಿ ಜೀವಿಸುತ್ತಿದ್ದಾರೆ.
1.ಒಂದು ಘಟನೆ
ಅವಸರ, ಪರಿಸ್ಥಿತಿಗಳು, ಕಷ್ಟಗಳು ಮನುಷ್ಯರಿಗೆ ಎಂಥಹ ನೀಚ ಸ್ಥಾನಕ್ಕಾದರೂ ಇಳಿಸುತ್ತದೆ ಎಂಬುದಕ್ಕೆ ಈ ಸ್ಥಳವೇ ಒಂದು ನಿದರ್ಶನ.
2.ಹಣಕ್ಕಾಗಿ ಸ್ವಂತದವರಿಗೆ ಕಿಡ್ನಾಪ್ ಮಾಡಿರುವ ಘಟನೆಗಳು
ಹಣಕ್ಕಾಗಿ ಸ್ವಂತದವರು ಎಂದು ಕೂಡ ನೋಡದೇ ಕಿಡ್ನಾಪ್ ಮಾಡಿರುವ ಹಲವಾರು ಘಟನೆಗಳ ಬಗ್ಗೆ ನಾವು ಕೇಳಿದ್ದೇವೆ. ಸಾಲವನ್ನು ಮಾಡಿ ಆತ್ಮಹತ್ಯೆ ಮಾಡಿಕೊಂಡಿರುವವರನ್ನು ಕೂಡ ನಾವು ನೋಡಿದ್ದೇವೆ, ಕೇಳಿದ್ದೇವೆ.
3.ಬದುಕಿದ್ದು, ಸಾಧಿಸಬೇಕು
ಬದುಕಿದ್ದು ಸಾಧಿಸಬೇಕು ಎಂದು ಸುಲಭವಾಗಿ ಹೇಳಿಬಿಡುತ್ತೇವೆ. ಆದರೆ ಅವರವರ ಜೀವನ ಅವರವರಿಗೆ ವಿಭಿನ್ನವಾಗಿರುತ್ತದೆ.
4.ಅನುಭವಿಸಿದವರಿಗೆ ಮಾತ್ರ ತಿಳಿಯುತ್ತದೆ.
ಪಕ್ಕದಲ್ಲಿರುವವರಿಗೆ ಅದೆಲ್ಲಾ ದೊಡ್ಡ ಸಮಸ್ಯೆ ಎಂಬ ಹಾಗೆಯೇ ಇರುತ್ತದೆ. ಆದರೆ ಅದೆಲ್ಲಾ ಅನುಭವಿಸಿದವರಿಗೆ ಮಾತ್ರ ತಿಳಿದಿರುತ್ತದೆ.
5.ತಂದೆ-ತಾಯಿಗಳು ದೈವಕ್ಕೆ ಸಮಾನ
ತಂದೆ ತಾಯಿಗಳು ದೈವಕ್ಕೆ ಸಮಾನ ಎಂದು ಹೇಳುತ್ತಾರೆ. ಅಂತಹ ತಂದೆ ತಾಯಿಗಳಿಗೆ ಹುಲಿಗಳಿಗೆ ಆಹಾರವಾಗಿ ಹಾಕುತ್ತಿರುವ ಘಟನೆ ಕೇಳುವುದಕ್ಕೆ ಏನೋ ಒಂದು ಬಗೆಯಾಗಿದೆ ಅಲ್ಲವೇ? ಏಕೆ ಹೀಗೆ ಮಾಡುತ್ತಿದ್ದಾರೆ ಗೊತ್ತ?
6.ಎಲ್ಲಿದೆ?
ಉತ್ತರ ಪ್ರದೇಶದಲ್ಲಿನ ಫಿಲಿಭಿತ್ ಟೈಗರ್ ರಿಜರ್ವ್ ಫಾರೆಸ್ಟ್ನಲ್ಲಿ ಇಂತಹ ಘಟನೆಗಳು ನಡೆಯುತ್ತಿದ್ದವು.
7.ಅಲ್ಲಿ ಏನು ಕಾಣಿಸುತ್ತದೆ?
ಕೆಲವು ದಿನಗಳಿಂದ ಅಲ್ಲಿನ ಹೊಲಗಳಲ್ಲಿ ಮುದುಕರ ಅಸ್ಥಿಪಂಜರಗಳು ಕಾಣಿಸುತ್ತಿವೆಯಂತೆ.
8.ಹುಲಿಗಳ ಸಂಚಾರ
ಆ ಅರಣ್ಯ ಪ್ರದೇಶದಲ್ಲಿ ಹುಲಿಗಳ ಸಂಚಾರ ಹೆಚ್ಚಾಗಿಯೇ ಇವೆ. ಹುಲಿಗಳೇ ಅಲ್ಲಿನ ಸ್ಥಳೀಯರನ್ನು ಕೊಂದು ಹಾಕುತ್ತಿವೆ ಎಂದು ಹೇಳುತ್ತಾ ಅರಣ್ಯ ಶಾಖೆಯವರಿಂದ ನಷ್ಟ ಪರಿಹಾರ ಪಡೆಯುತ್ತಿದ್ದಾರೆ.
9.ಅಸಲಿಗೆ ಆ ತಂಡಗಳು ಯಾರು?
ಅಲ್ಲಿನವರು ಇಂದಿನವರೆವಿಗೂ ಅನೇಕ ಮಂದಿ ಮರಣವನ್ನು ಹೊಂದಿದ್ದಾರೆ. ಇಲ್ಲಿ ಸ್ಥಳೀಯರಲ್ಲಿ ಹೆಚ್ಚಾಗಿ ವೃದ್ಧರೇ ಇದ್ದಾರೆ.
10.ಇವರ ಪೋಷಣೆಯ ಭಾರ
ಇವರ ಪೋಷಣೆಯ ಭಾರ ಮಾಡಲಾಗದೇ ಇವರನ್ನು ಅರಣ್ಯ ಪ್ರದೇಶದಲ್ಲಿ ಬಿಟ್ಟು ಬರುತ್ತಿದ್ದರಂತೆ. ಆ ವೃದ್ಧರು ನಡೆಯದೇ, ಓಡಲಾಗದೇ ನಿಸ್ಸಾಹಾಯವಾಗಿ ಹುಲಿಗಳ ಬಾಯಿಗೆ ಆಹಾರವಾಗುತ್ತಿದ್ದಾರಂತೆ.
11.ಅರಣ್ಯಶಾಖೆಯವರಿಂದ ನಷ್ಟ ಪರಿಹಾರ
2 ದಿನಗಳು ಆದ ನಂತರ ಆ ಅಸ್ಥಿಪಂಜರವನ್ನು ತೆಗೆದುಕೊಂಡು ಬಂದು ಹೊಲದಲ್ಲಿ ಹಾಕುತ್ತಿದ್ದಾರಂತೆ. ಹುಲಿಗಳು ದಾಳಿ ಮಾಡುತ್ತಿದೆ ಎಂದು ಹೇಳಿ ಅರಣ್ಯಶಾಖೆಯವರಿಂದ ನಷ್ಟ ಪರಿಹಾರ ಹೊಂದುತ್ತಿದ್ದಾರೆ.
12.ಹೀಗೆ ಏಕೆ ಮಾಡುತ್ತಿದ್ದಾರೆ?
ಹೀಗೆ ಏಕೆ ಮಾಡುತ್ತಿದ್ದಾರೆ ಎಂದು ಅರಣ್ಯಶಾಖೆಯವರು ಕೇಳಿದರೆ, ಅದಕ್ಕೆ ಹಣಕ್ಕಾಗಿ ಹೀಗೆಲ್ಲಾ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿತು. ಮನೆಯಲ್ಲಿನ ವೃದ್ಧರನ್ನು ಹೇಗೆ ಸಾಕಬೇಕು ಎಂಬುದೇ ಅವರ ಪ್ರೆಶ್ನೆಯಾಗಿದೆ.
13.ಪ್ರಾಜೆಕ್ಟ್ ಟೈಗರ್
ಇದೆಲ್ಲಾ ಹೊರತು ಪಡಿಸಿದರೆ ಪಿಲಿಭಿತ್ ಭಾರತದ 41 ಪ್ರಾಜೆಕ್ಟ್ ಟೈಗರ್ ಮೀಸಲುಗಳಲ್ಲಿ ಒಂದಾಗಿದೆ. ಇದೊಂದು ಉತ್ತರ ಪ್ರದೇಶದ ಕೆಲವು ಉತ್ತಮ ಕಾಡಿನ ಜಿಲ್ಲೆಗಳಲ್ಲಿ ಒಂದಾಗಿದೆ. 2004 ರ ಪ್ರಕಾರ, ಪಿಲಿಭಿಟ್ ಜಿಲ್ಲೆಯ 800 ಕಿ.ಮೀ ಅರಣ್ಯಗಳನ್ನು ಹೊಂದಿದೆ.
14.ಪ್ರಾಜೆಕ್ಟ್ ಟೈಗರ್
ಈ ಅರಣ್ಯದಲ್ಲಿ ಕನಿಷ್ಟ 36 ಹುಲಿಗಳಿವೆ. ಅವುಗಳ ಉಳಿವಿಗಾಗಿ ಉತ್ತಮ ಬೇಟೆಯನ್ನು ಕೂಡ ಹೊಂದಿದೆ. ಹಾಗೆಯೇ ಇಲ್ಲಿ ಅನೇಕ ಪ್ರವಾಸಿ ತಾಣಗಳು ಕೂಡ ಇವೆ.