ಪಾರ್ವತಿ ಪುತ್ರ ಗಣೇಶನ ತಲೆಯನ್ನು ಶಿವ ತುಂಡರಿಸಿರುವುದು ನಿಮಗೆಲ್ಲಾ ಗೊತ್ತೇ ಇದೆ. ಆ ನಂತರ ಶಿವನು ಆನೆಯ ತಲೆಯನ್ನು ತಂದು ಜೋಡಿಸಿದನು ಎನ್ನೋದು ತಿಳಿದೇ ಇದೆ. ಆದ್ರೆ ಗಣೇಶನ ತುಂಡಾದ ತಲೆ ಎಲ್ಲಿದೆ ಅನ್ನೋದು ನಿಮಗೆ ಗೊತ್ತಾ?
ಪಾರ್ವತಿ ಪುತ್ರ ಗಣೇಶ
PC:Kangra miniature
ಲಂಬೋದರ, ವಿನಾಯಕ, ವಕ್ರತುಂಡ, ಏಕದಂತ ಹೀಗೆ ಗಣೇಶನಿಗೆ ಸಾವಿರಾರು ಹಲವಾರು ಹೆಸರುಗಳಿವೆ. ಪಾರ್ವತಿಯು ಗಣೇಶನನ್ನು ಸೃಷ್ಠಿಸಿದಳು. ಗಣೇಶ ಆನೆಯ ಮೊಗ ಹೊಂದುವ ಮೊದಲು ಶಿವನು ಗಣೇಶನ ಶಿರ ಕತ್ತರಿಸಿದ ಎನ್ನುವುದು ನಿಮಗೆಲ್ಲಾ ಗೊತ್ತೇ ಇದೆ.
ನಮ್ಮ ಬೆಂಗಳೂರು ಬಗ್ಗೆ ನಿಮಗೆಷ್ಟು ಗೊತ್ತು?
ಪಾತಾಳ ಭುವನೇಶ್ವರ ಗುಹೆ
PC: youtube
ಶಿವನು ತ್ರಿಶೂಲದಿಂದ ಕತ್ತರಿಸಿ ಆ ಶಿರ ಏನಾಯಿತು, ಎಲ್ಲಿದೆ ಎಂದರೆ ಅದು ಉತ್ತರಖಂಡದಲ್ಲಿರುವ ಪಾತಾಳ ಭುವನೇಶ್ವರ ಗುಹೆಯಲ್ಲಿದೆ ಎನ್ನಲಾಗುತ್ತದೆ.
ಕಲಿಯುಗದ ಅಂತ್ಯ
ಸುಣ್ಣದಿಂದ ನಿರ್ಮಿತವಾದಂತೆ ಕಾಣುವ ಗುಹೆಗಳು ಪ್ರಕೃತಿ ಸಹಜವಾಗಿಯೇ ಬೆಳೆದಿದೆ. ಈ ಗುಹೆಯೊಳಗೆ ಒಂದು ಶಿವಲಿಂಗವಿದೆ. ಇದು ದಿನದಿಂದ ದಿನಕ್ಕೆ ಬೆಳೆಯುತ್ತಿದೆ ಎನ್ನಲಾಗುತ್ತದೆ. ಒಂದು ವೇಳೆ ಈ ಶಿವಲಿಂಗವು ಇನ್ನಷ್ಟು ಬೆಳೆದು ಗುಹೆಯ ಹೊರಗೆ ಬಂದರೆ ಅಂದೇ ಕಲಿಯುಗದ ಅಂತ್ಯವಾಗಲಿದೆ ಎನ್ನಲಾಗುತ್ತದೆ.
ವಿನಾಯಕನ ತಲೆ
ಈ ಗುಹೆಯು ಎಷ್ಟು ಸಣ್ಣದಾಗಿದೆಯೆಂದರೆ ಕೇವಲ ಒಬ್ಬ ಮನುಷ್ಯನಿಗಷ್ಟೇ ಹೋಗಬಹುದು. ಉಸಿರಾಡಲೂ ಕಷ್ಟವಾಗುತ್ತದೆ. ಗುಹೆಯ ದ್ವಾರವು ಶಿವನ ಈ ಗುಹೆಯಲ್ಲಿ ವಿನಾಯಕನ ತಲೆ ಇದೆ ಎನ್ನಲಾಗುತ್ತದೆ. ಇಲ್ಲಿಂದ ಕೈಲಾಶಕ್ಕೆ ಹೋಗುವ ದಾರಿಯೂ ಇದೆಯಂತೆ. ಆದರೆ ಇದು ಬಹಳ ಡೇಂಜರಸ್ ಆಗಿದೆ.
9 ಬಗೆಯ ವಿಷದಿಂದ ತಯಾರಾದ ವಿಗ್ರಹ ಇದು; ಅಭಿಷೇಕದ ತೀರ್ಥ ಕುಡಿದ್ರೆ ಏನಾಗುತ್ತೆ ?
33 ಕೋಟಿ ದೇವತೆಗಳ ಆಕಾರ ಕಾಣಬಹುದು
ಪಾತಾಳ ಭುವನೇಶ್ವರ ಗುಹೆ ಶಿವನ ಜಟಾಜೂಟಾ, ನಾಗರಹಾವು, ಐರಾವತ, ಕಲ್ಪವೃಕ್ಷ, ಬ್ರಹ್ಮ , ವಿಷ್ಣು ಮಹೇಶ್ವರ ಹಾಗೂ 33 ಕೋಟಿ ದೇವತೆಗಳ ಆಕಾರವನ್ನು ಇಲ್ಲಿ ಕಾಣಬಹುದಾಗಿದೆ.
ಪ್ರಕೃತಿ ದತ್ತ ಗುಹೆ
ಪ್ರಕೃತಿ ದತ್ತವಾಗಿ ನಿರ್ಮಾಣವಾಗ ದೇವಾಲಯವಾಗಿದೆ. ಗಣೇಶನ ದರ್ಶನಕ್ಕೆ ಬರುವ ಈ ಗುಹಾ ದೇವಾಲಯದ ಸ್ವಲ್ಪ ದೂರದಲ್ಲಿ ಒಂದು ಸಣ್ಣ ಬಾಲಕ ಕಾಣಿಸುತ್ತಾನಂತೆ.
ಬ್ರಹ್ಮಾಂಡದ ಮೊದಲ ಶಿವಲಿಂಗ ಇದು, ಇಲ್ಲಿ ಜನರು ಮೃತ್ಯುಂಜಯ ಪೂಜೆ ಮಾಡಿಸ್ತಾರೆ ಯಾಕೆ
ಔಷಧೀಯ ಗಿಡಮೂಲಿಕೆಗಳೂ ಇವೆ
ಅನೇಕ ಔಷಧೀಯ ಗಿಡಮೂಲಿಕೆಯನ್ನೂ ಕಾಣಬಹುದು. ಪಾಂಡವರು ಇಲ್ಲಿಂದಲೇ ಕೈಲಾಸಕ್ಕೆ ತೆರಳಿದರು ಎನ್ನಲಾಗುತ್ತದೆ. ಈ ಗುಹೆಗೆ ಕಾಲುನಡಿಗೆಯ ಮೂಲಕವೇ ಹೋಗಬೇಕಾಗುತ್ತದೆ