ಸಾಧಾರಣವಾಗಿ ಒಂದೇ ಪುಣ್ಯಕ್ಷೇತ್ರದಲ್ಲಿ ಒಂದೇ ದೇವಾಲಯವಿರುತ್ತದೆ. ಕೆಲವು ಕ್ಷೇತ್ರದಲ್ಲಿ ಮಾತ್ರ ಒಂದಕ್ಕಿಂತ ಹೆಚ್ಚು ಅಂದರೆ 10 ದೇವಾಲಯಗಳನ್ನು ಕಾಣಬಹುದು. ಆದರೆ ಭಾರತ ದೇಶದಲ್ಲಿನ ಒಂದೇ ಕ್ಷೇತ್ರದಲ್ಲಿ ಮಾತ್ರ 900 ದೇವಾಲಯಗಳಿವೆ.
ಅದು ಕೂಡ ಒಂದೇ ಒಂದು ಪರ್ವತದಲ್ಲಿ. ಆ ದೇವಾಲಯವನ್ನು ಸುಂದರವಾದ ಕಲ್ಲಿನಿಂದ ನಿರ್ಮಾಣ ಮಾಡಿರುವುದು ವಿಶೇಷ. ಅದರಲ್ಲಿ ಒಂದು ದೇವಾಲಯದಲ್ಲಿ ಅತಿ ಪ್ರಾಚೀನವಾದ ಬಂಗಾರದ ಆಭರಣಗಳನ್ನು ಭದ್ರಪಡಿಸಿದ್ದಾರೆ. ಇದು ಹೀಗೆ ಇದ್ದರೆ, ಆ ಕ್ಷೇತ್ರವು ಸಸ್ಯಹಾರಿ ನಗರ ಎಂದು ಗುರುತಿಸಿಕೊಂಡಿದೆ.
ಇಷ್ಟು ವಿಶಿಷ್ಟತೆಗಳನ್ನು ಹೊಂದಿರುವ ಆ ನಗರವು ಜೈನರಿಗೆ ಪರಮ ಪವಿತ್ರವಾದ ಕ್ಷೇತ್ರವಾಗಿದೆ. ಜೀವನದಲ್ಲಿ ಹಿಂದುಗಳು ಕಾಶಿಯನ್ನು ಒಮ್ಮೆ ಹೇಗೆ ದರ್ಶಿಸಬೇಕು ಎಂದು ಭಾವಿಸುತ್ತಾರೆಯೋ ಹಾಗೆಯೇ ಜೈನರು ಕೂಡ ಈ ಕ್ಷೇತ್ರವನ್ನು ಒಮ್ಮೆಯಾದರು ದರ್ಶಿಸಬೇಕು ಎಂದು ಕೋರಿಕೊಳ್ಳುತ್ತಾರೆ. ಅಂತಹ ಪವಿತ್ರವಾದ ನಗರ ವಿಶೇಷಗಳ ಬಗ್ಗೆ ನೇಟಿವ್ ಪ್ಲಾನೆಟ್ನ ಮೂಲಕ ತಿಳಿದುಕೊಳ್ಳೊಣ.
1.ಅತಿ ಪುರಾತನವಾದ ಪಟ್ಟಣ
PC:YOUTUBE
ಗುಜರಾತ್ದಲ್ಲಿನ ಭಾವ್ ನಗರ್ ಜಿಲ್ಲೆಯಲ್ಲಿನ ಅತಿ ಪುರಾತನವಾದ ಪಟ್ಟಣವೇ ಪಾಲಿಟಾನಾ. ಪ್ರಪಂಚದಲ್ಲಿಯೇ ಮೊದಲ ಸಸ್ಯಹಾರಿ ನಗರ ಪಾಲಿಟಾನ್ ಎಂದು ಗುರುತಿಸಿಕೊಂಡಿದೆ. ಪ್ರಪಂಚದಲ್ಲಿನ 900 ದೇವಾಲಯಗಳನ್ನು ಹೊಂದಿರುವ ಹಿಲ್ ಸ್ಟೇಷನ್ ಕೂಡ ಈ ಪಾಲಿಟಾನ್ ಆಗಿರುವುದು ಗಮನಾರ್ಹ.
2.ಶತ್ರುಂಜಯ ಪರ್ವತ
PC:YOUTUBE
ಈ ಪಾಲಿಟಾನ್ಗೆ ಅತಿ ಸಮೀಪದಲ್ಲಿರುವ ಶತ್ರುಂಜಯ ಪರ್ವತಗಳಿವೆ. ಜೈನ ಧರ್ಮಕ್ಕೆ ಈ ಶತ್ರುಂಜಯ ಪರ್ವತವು ಭಕ್ತರಿಗೆ ಅತ್ಯಂತ ಪವಿತ್ರವಾದ ಪುಣ್ಯಸ್ಥಳವಾಗಿದೆ. ಜೈನರ ಮೊದಲ ತೀರ್ಥಕರರನಾದ ಅದಿನಾಥನು ಈ ಶತ್ರುಂಜಯ ಪರ್ವತದ ಮೇಲೆ ಧ್ಯಾನ ಮಾಡುತ್ತಿದ್ದನು ಎಂದು ನಂಬಲಾಗಿದೆ.
3.ಒಟ್ಟು 3 ಸಾವಿರ ದೇವಾಲಯಗಳಲ್ಲಿ 900
PC:YOUTUBE
ಪಾಟಲಿನಾಲ್ನಲ್ಲಿಯೇ
ಇಲ್ಲಿ ಅನೇಕ ದೇವಾಲಯಗಳನ್ನು ನಿರ್ಮನ ಮಾಡಿದ್ದಾರೆ. ಈ ಪರ್ವತ ಪಂಕ್ತಿಯಲ್ಲಿ ಒಟ್ಟು 3 ಸಾವಿರ ದೇವಾಲಯಗಳಿದ್ದರೆ ಅವುಗಳಲ್ಲಿ ಪಾಟಲಿನಾಲ್ನಲ್ಲಿ ಮಾತ್ರವೇ 900 ದೇವಾಲಯಗಳು ಇವೆ. ಈ ಎಲ್ಲಾ ದೇವಾಲಯಗಳಲ್ಲಿ ಪ್ರಧಾನವಾದುದು ವೃಷಭನಾಥ ದೇವಾಲಯ.
4.ಬಂಗಾರದ ಅಭರಣಗಳನ್ನು ಭದ್ರಪಡಿಸಿದ್ದಾರೆ
PC:YOUTUBE
ಈ ವೃಷಭನಾಥ ದೇವಾಲಯದ ಜೊತೆಗೆ ಇಲ್ಲಿರುವ ಸುಮಾರು ಎಲ್ಲಾ ದೇವಾಲಯಗಳು ತಂಪಾಗಿರುವ ಅಮೃತಶಿಲೆಗಳಿಂದ ನಿರ್ಮಿತವಾದುದೆ. ಮುಖ್ಯವಾಗಿ ಕುಮಾರ ಪಾಲ್, ವಿಮಲ್ ಷಾ, ಸಂಪ್ರಿತಿ ದೇವಾಲಯಗಳು ಮುಖ್ಯವಾದುವು. ಕುಮಾರ್ ಪಾಲ್ ದೇವಾಲಯದಲ್ಲಿ ಅನೇಕ ಪುರಾತನವಾದ ಬಂಗಾರ ಆಭರಣಗಳನ್ನು ಭದ್ರಪಡಿಸಿದ್ದಾರೆ.
5.3,800 ಮೆಟ್ಟಿಲುಗಳು
PC:YOUTUBE
ಪ್ರತ್ಯೇಕವಾದ ಅನುಮತಿಯನ್ನು ಪಡೆದು ಈ ಆಭರಣಗಳನ್ನು ಕಾಣಬಹುದು. ಇಲ್ಲಿರುವ ಶಿಲ್ಪ ಸಂಪತ್ತು ಕೂಡ ಅತ್ಯಂತ ಮನೋಹರವಾಗಿದೆ. ಜೈನ ಧರ್ಮದವರು ಈ ಪುಣ್ಯಕ್ಷೇತ್ರವನ್ನು ಜೀವನದಲ್ಲಿ ಒಮ್ಮೆಯಾದರು ದರ್ಶಿಸಿಕೊಳ್ಳುತ್ತಾರೆ. ಈ ಪರ್ವತದ ಪಾದದಿಂದ ಪರ್ವತದ ಶಿಖರದ ಮೇಲಿನ ತನಕ ಸುಮಾರು 3,800 ಕಲ್ಲಿನ ಮೆಟ್ಟಿಲುಗಳನ್ನು ನಿರ್ಮಾಣ ಮಾಡಿದ್ದಾರೆ.
6.ಕಠಿಣ ಉಪಾಸನೆ ದೀಕ್ಷೆ
PC:YOUTUBE
ಈ ಪರ್ವತದ ಮೇಲೆ ತಲುಪುವ ಸಮಯದಲ್ಲಿ ಜೈನರು ಆಹಾರವನ್ನು, ನೀರನ್ನು ಯಾವ ಪರಿಸ್ಥಿತಿಯಲ್ಲೇ ಆಗಲಿ ತೆಗೆದುಕೊಂಡು ಹೋಗುವುದಿಲ್ಲ. ನೀರನ್ನೇ ಆಗಲಿ, ಆಹಾರವನ್ನೇ ಆಗಲಿ ತಿನ್ನುವುದಿಲ್ಲ. ಕಠಿನವಾದ ಉಪಾಸನೆಯಿಂದ ಜೈನರು ಈ ತೀರ್ಥಯಾತ್ರೆಯನ್ನು ಪೂರ್ತಿಯಾಗಿ ಮಾಡುತ್ತಾರೆ. ಎಷ್ಟೇ ವೇಗವಾಗಿ ಹತ್ತಿದ್ದರು ಕೂಡ ಪರ್ವತ ಶಿಖರದ ಮೇಲಿನ ಭಾಗವನ್ನು ತಲುಪಲು ಸುಮಾರು 2 ಗಂಟೆಗಳ ಕಾಲ ತೆಗೆದುಕೊಳ್ಳುತ್ತದೆಯಂತೆ.
7.ಆನಂದ ಜಿ, ಕಲ್ಯಾಣ್ ಜಿ
PC:YOUTUBE
ಈ ಪರ್ವತ ಶಿಖರದ ಮೇಲಿರುವ ಒಟ್ಟು ದೇವಾಲಯಗಳು 11 ನೇ ಶತಮಾನದಿಂದ 20ನೇ ಶತಮಾನದ ಮಧ್ಯ ಕಾಲದಲ್ಲಿ ನಿರ್ಮಾಣ ಆಗಿರಬಹುದೆಂದು ನಂಬಲಾಗಿದೆ. ಅದೇ ವಿಧವಾಗಿ 11 ನೇ ಶತಮಾನದಿಂದ ಇಂದಿನವರೆವಿಗೂ ಈ ದೇವಾಲಯದ ನಿರ್ಮಾಣವನ್ನು ಆನಂದ್ ಜೀ ಹಾಗು ಕಲ್ಯಾಣ್ ಜೀ ಎಂಬ ಸಂಸ್ಥೆಯಡಿಯಲ್ಲಿ ಅಭಿವೃದ್ಧಿಯಾಗುತ್ತಿದೆ.
8.ಹೇಗೆ ಸಾಗಬೇಕು?
PC:YOUTUBE
ಪಾಟಲಿನ್ಗೆ ಸಮೀಪದಲ್ಲಿ ಭಾವ್ ನಗರ ವಿಮಾನ ನಿಲ್ದಾಣವಿದೆ. ಇಲ್ಲಿಂದ ಪಾಟಲಿನ್ಗ್ ಖಾಸಗಿ ಟ್ಯಾಕ್ಸಿಗಳು ದೊರೆಯುತ್ತವೆ. ಪಾಟಲಿನ್ನಲ್ಲಿ ರೈಲ್ವೆ ನಿಲ್ದಾಣ ಕೂಡ ಇದೆ. ಭಾವ್ ನಗರದಿಂದ ಪಾಟಲಿನ್ಗೆ ಪ್ರತಿ ಗಂಟೆಗೆ ಒಂದು ಸರ್ಕಾರಿ ಬಸ್ಸುಗಳು ಸಂಪರ್ಕ ಸಾಧಿಸುತ್ತವೆ.