ಗುಜರಾತ್ನ ಅರಬ್ಬಿ ಸಮುದ್ರದ ಮಧ್ಯದಲ್ಲಿ 5000 ವರ್ಷಗಳಷ್ಟು ಹಳೆಯದಾದ ಪುರಾತನ ದೇವಾಲಯವೊಂದಿದೆ. ಈ ದೇವಾಲಯದ ವಿಶೇಷತೆ ಏನೆಂದರೆ ಎತ್ತರದಅಲೆಗಳು ಬಂದರೆ ದೇವಸ್ಥಾನ ನೀರಿನಲ್ಲಿ ಮುಚ್ಚಿ ಹೋಗುತ್ತದೆ. ಬರೀ ಧ್ವಜವಷ್ಟೇ ಕಾಣಿಸುತ್ತದೆ. ಇದು ಗುಜರಾತ್ ರಾಜ್ಯದ ಭಾವನಗರ ಜಿಲ್ಲೆಯಿಂದ 28 ಕಿ.ಮೀ ದೂರದಲ್ಲಿರುವ ಕೊಲಿಯಕ್ನಲ್ಲಿದೆ. ಈ ದೇವಾಲಯವು ಶಿವನಿಗೆ ಸಮರ್ಪಿಸಲಾಗಿದೆ.
ನಿಷ್ಕಲಂಕ ಮಹಾದೇವ
PC: youtube
ಜನರು ಈ ದೇವಸ್ಥಾನವನ್ನು ತಲುಪಲು ಸುಮಾರು 1.5 ಕಿ.ಮೀ. ನೀರಿನಲ್ಲಿ ನಡೆಯಬೇಕು. ಈ ದೇವಾಲಯವನ್ನು "ನಿಷ್ಕಲಂಕ ಮಹಾದೇವ ದೇವಾಲಯ" ಎಂದೂ ಕರೆಯಲಾಗುತ್ತದೆ. ಸಮುದ್ರದಲ್ಲಿನ ಎತ್ತರದ ಅಲೆಗಳ ಸಮಯದಲ್ಲಿ, ಕೇವಲ ಧ್ವಜ ಮತ್ತು ದೇವಸ್ಥಾನದ ಕಂಬವನ್ನು ಮಾತ್ರ ಸಮುದ್ರದಲ್ಲಿ ಕಾಣಬಹುದಾಗಿದೆ.
ಪಾಪ ಪರಿಹಾರ
PC: youtube
ಈ ದೇವಾಲಯವು ಸಮುದ್ರದಲ್ಲಿನ ಎತ್ತರದ ಅಲೆಗಳ ಸಮಯದಲ್ಲಿ ನೀರಿನ ಅಡಿಯಲ್ಲಿರುತ್ತದೆ ಮತ್ತು ಕಡಿಮೆ ಅಲೆಗಳ ಸಮಯದಲ್ಲಿ ಹೊರಕಾಣಿಸುತ್ತದೆ, ಪಾಪಗಳೆಲ್ಲವೂ ತೊಳೆದು ಹೋಗುತ್ತದೆ ಎನ್ನುವ ಭರವಸೆ ಭಕ್ತರದ್ದು.
ಸ್ವಂಯಂಭೂ ಶಿವಲಿಂಗ
PC: youtube
ಸ್ಥಳೀಯರು ಈ ದೇವಸ್ಥಾನವನ್ನು ಈಗಲೂ ಬಳಸುತ್ತಿದ್ದಾರೆ. ಜನರು ಇಲ್ಲಿಗೆ ನಡಿಗೆಯ ಮೂಲಕ ಭೇಟಿ ನೀಡುತ್ತಾರೆ. ಇದು 5 ಪ್ರತ್ಯೇಕ ಸ್ವಂಯಂಭೂ ಶಿವಲಿಂಗಗಳನ್ನು ಹೊಂದಿದ್ದು ಖಂಡಿತವಾಗಿಯೂ ತನ್ನ ಜೀವಿತಾವಧಿಯಲ್ಲಿ ಒಮ್ಮೆ ಭೇಟಿ ನೀಡುವ ಅತ್ಯುತ್ತಮ ಆಧ್ಯಾತ್ಮಿಕ ಸ್ಥಳಗಳಲ್ಲಿ ಒಂದಾಗಿದೆ.
ಕೌರವರನ್ನು ಕೊಂದ ಪಾಪ
PC: youtube
ಮಹಾಭಾರತದದಲ್ಲಿ ಪಾಂಡವರು ಕೃಷ್ಣನ ಸೂಚನೆಯ ಮೇರೆಗೆ ಶಿವನನ್ನು ಪೂಜಿಸುತ್ತಾರೆ. ಏಕೆಂದರೆ ಅವರು ತಮ್ಮ ಸಹೋದರರನ್ನು ಅಂದರೆ ಎಲ್ಲಾ ಕೌರವರನ್ನು ಕೊಂದ ಪಾಪವನ್ನು ಮಾಡಿರುತ್ತಾರೆ.
ನಿಷ್ಕಳಂಕ ಆಶಿರ್ವಾದ
PC: youtube
ಶಿವನ ಆಶೀರ್ವಾದಕ್ಕಾಗಿ ಪಾಂಡವರು ತಪಸ್ಸು ಮಾಡಿದರು. ನಂತರ ಅವರ ಆರಾಧನೆಯಿಂದ ಪ್ರಭಾವಿತರಾಗಿ 5 ಲಿಂಗದ ರೂಪದಲ್ಲಿ ಪಾಂಡವರ ಮುಂದೆ ಕಾಣಿಸಿಕೊಂಡರು ಮತ್ತು ಅವರನ್ನು ನಿಷ್ಕಳಂಕ ಎಂದು ಆಶೀರ್ವದಿಸಿದರು.
ಐದು ಲಿಂಗಗಳು
PC: flickr
ಪಾಂಡವರು ಈ ಐದು ಲಿಂಗಗಳಿಗೆ ಭಕ್ತಿಯಿಂದ ಪೂಜಿಸುತ್ತಿದ್ದರು. ಅವಿಶ್ವಾಸವಿದೆ ಮತ್ತು ಈ ಮಂದಿರವು 500 ಅಡಿ ಎತ್ತರದಲ್ಲಿದೆ ಮತ್ತು ಇದು ಸಮುದ್ರದಲ್ಲಿ 2000 ಅಡಿ ಉದ್ದವಾಗಿದೆ. ನಿಷ್ಕಲಂಕ ಮಹಾದೇವ್ ಎಂಬ ಹೆಸರನ್ನು ಪಡೆದುಕೊಂಡಿದೆ.
ಸ್ವಯಂಭೂ ಶಿವ ಲಿಂಗಗಳು
PC: youtube
ಈ ದೇವಾಲಯದಲ್ಲಿ 5 ವಿಶಿಷ್ಟ ಸ್ವಯಂಭೂ ಶಿವ ಲಿಂಗಗಳು ಪಾಂಡವ ಸಹೋದರರಿಂದ ಆರಾಧಿಸಲ್ಪಟ್ಟಿವೆ, ಮತ್ತು ಪ್ರತಿಯೊಂದೂ ಶಿವಲಿಂಗದ ಎದುರು ನಂದಿ ವಿಗ್ರಹವಿದೆ. ಇಲ್ಲಿ ಭಕ್ತರು ಮೊದಲು ತಮ್ಮ ಕೈಗಳನ್ನು ಮತ್ತು ಕಾಲುಗಳನ್ನು ಪಾಂಡವಸ್ ಪೊನ್ ಎಂಬ ಕೊಳದಲ್ಲಿ ತೊಳೆದುಕೊಳ್ಳುತ್ತಾರೆ.
ಯಾವಾಗ ಭೇಟಿ ನೀಡುವುದು ಸೂಕ್ತ
PC: youtube
ಈ ದೇವಸ್ಥಾನವನ್ನು ಅಮಾಸ್ಯೆ ರಾತ್ರಿಯ ದಿನದಂದು 9.00 ರಿಂದ 12.00 ರವರೆಗೆ ಭೇಟಿ ಮಾಡಬಹುದು. ಸಮುದ್ರವು ಮತ್ತೆ ಏರುವಂತೆ ಪ್ರವಾಸಿಗರು ಈ ಸ್ಥಳವನ್ನು 1:00 ಗಂಟೆಗೂ ಮುಂಚಿತವಾಗಿ ಇಲ್ಲಿಂದ ತೆರಳಬೇಕು. ಅಮಾವಾಸ್ಯೆ ಸಮಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಈ ದೇವಾಲಯವನ್ನು ಭೇಟಿ ನೀಡುತ್ತಾರೆ. ಈ ದೇವಾಲಯವನ್ನು ಭೇಟಿಕೊಡಲು ಅಲೆಗಳ ಉಬ್ಬರವಿಳಿತಕ್ಕಾಗಿ ಅವರು ತಾಳ್ಮೆಯಿಂದ ಕಾಯುತ್ತಿರುತ್ತಾರೆ. ಆದ್ದರಿಂದ ಒಂದು ದಿನದಲ್ಲಿ ಈ ದೇವಾಲಯಕ್ಕೆ ಕೇವಲ ಎರಡು ಬಾರಿ ಒಳಗೆ ಹೋಗಬಹುದು.
ತಲುಪುವುದು ಹೇಗೆ?
PC: youtube
ರಸ್ತೆಯ ಮೂಲಕ: ರಸ್ತೆಯ ಮೂಲಕ ಪ್ರಯಾಣಿಸಲು ಬಯಸುವವರು ಈ ದೇವಾಲಯವನ್ನು ತಲುಪಲು ಬಸ್ ಅಥವಾ ಸ್ವಂತ ಕಾರನ್ನು ತೆಗೆದುಕೊಳ್ಳಬಹುದು. ಭಾವನಗರದಿಂದ ಕೊಲಿಯಾಕ್ ಗೆ ರಸ್ತೆಯಿಂದ 30 ನಿಮಿಷಗಳು ಬೇಕಾಗುತ್ತದೆ.
ವಿಮಾನ ನಿಲ್ದಾಣ: ಭಾವನಗರಕ್ಕೆ 126 ಕಿ.ಮೀ ದೂರದಲ್ಲಿರುವ ವಡೋದರಾ ವಿಮಾನ ನಿಲ್ದಾಣ ಭಾವನಗರಕ್ಕೆ ಹತ್ತಿರದ ವಿಮಾನ ನಿಲ್ದಾಣವಾಗಿದೆ. ಅಹಮದಾಬಾದ್ ಕೊಲಿಯಾಕ್ ತಲುಪಲು ಮತ್ತೊಂದು ಆಯ್ಕೆಯಾಗಿದೆ.
ರೈಲು ಮೂಲಕ: ಗುಜರಾತಿನ ಭಾವನಗರ್ ರೈಲ್ವೆ ನಿಲ್ದಾಣವು ಭಾರತದ ಪ್ರಮುಖ ನಗರಗಳೊಂದಿಗೆ ಸಂಪರ್ಕ ಹೊಂದಿದ ಈ ದೇವಸ್ಥಾನವನ್ನು ತಲುಪಲು ಹತ್ತಿರದ ರೈಲು ನಿಲ್ದಾಣವಾಗಿದೆ.