ಬೆಂಗಳೂರು ಸಮೀಪದಲ್ಲಿರುವ ಮುತ್ಯಾಲ ಮಡುವು ಒಂದು ವಾರಾಂತ್ಯವನ್ನು ಕಳೆಯಲು ಉತ್ತಮ ತಾಣವಾಗಿದೆ. ಪ್ರಕೃತಿ ಮಡಿಲಲ್ಲಿ ಉತ್ತಮ ಸಮಯವನ್ನು ಕಳೆಯಬಹುದಾಗಿದೆ. ಇಲ್ಲಿನ ಕಾಡುಗಳು, ಜಲಪಾತ, ಮರಗಿಡಗಳು ನಿಮಗೆ ಈ ಸ್ಥಳದ ಮೇಲೆ ಆಕರ್ಷಣೆಯನ್ನುಂಟು ಮಾಡುತ್ತದೆ.
ಪ್ರವಾಸಿಗರ ಸ್ವರ್ಗ
PC: youtube
ಈ ನಿಗೂಢ ಅರಣ್ಯವು ಅಲ್ಲಿನ ರಹಸ್ಯಗಳು ಈ ಸ್ಥಳವನ್ನು ಪ್ರವಾಸಿಗರ ಸ್ವರ್ಗದಂತೆ ಮಾಡುತ್ತದೆ. ಈ ಸ್ಥಳವು ಬೆಂಗಳೂರಿನ ಸಮೀಪವಿರುವ ಒಂದು ರಹಸ್ಯವಾದ ರಹಸ್ಯವಾಗಿದ್ದು, ಜೀವನದಲ್ಲಿ ಒಮ್ಮೆಗೆ ಭೇಟಿ ನೀಡಬೇಕು.
ಸಮುದ್ರದ ಮಧ್ಯೆ ಇರುವ ಈ ನಿಷ್ಕಲಂಕ ಮಹಾದೇವನ ಸನ್ನಿಧಿಗೆ ಹೋದ್ರೆ ನೀವೂ ನಿಷ್ಕಳಂಕರಾಗ್ತೀರಾ
ಮುತ್ಯಲಾ ಮಡುವು
PC: youtube
ಮುತ್ಯಲ ಎಂದರೆ 'ಮುತ್ತು' ಮತ್ತು ಮಡುವು ಎಂದರೆ 'ಕೊಳ'. ಈ ಸ್ಥಳವನ್ನು ಅದರ ಸೌಂದರ್ಯದ ಕಾರಣದಿಂದಾಗಿ ಮುತ್ಯಲ ಮಡುವು ಎಂದು ಕರೆಯಲಾಗುತ್ತದೆ ಮತ್ತು ಜಲಪಾತಗಳಿಂದ ನೀರು ಹರಿಯುವ ಸಂದರ್ಭದಲ್ಲಿ ಮುತ್ತುಗಳು ತಂತಿಯಿಂದ ಬೀಳುವಂತೆ ಕಾಣುತ್ತದೆ. ಕಾರಣದಿಂದಾಗಿ ಇದು ಕಂಡುಬರುತ್ತದೆ.
ದಟ್ಟವಾದ ಅರಣ್ಯ
ಈ ಕಣಿವೆಯು ನಿಗೂಢ ದಟ್ಟವಾದ ಅರಣ್ಯದಿಂದ ಆವೃತವಾಗಿದೆ, ಇದು ವಿವಿಧ ರೀತಿಯ ಜಾತಿಯ ಮರಗಿಡಗಳನ್ನು ಒಳಗೊಂಡಿದೆ. ವರ್ಣಮಯ ಪಕ್ಷಿಗಳ ಚಿಲಿಪಿಲಿಯನ್ನು ಈ ಕಾಡುಗಳಲ್ಲಿ ಕೇಳಬಹುದು. ಈ ಅರಣ್ಯವು ಆನೆಗಳು ಮತ್ತು ಕಾಡು ಕರಡಿಗಳಿಗೆ ನೆಲೆಯಾಗಿದೆ. ಅಪರೂಪದ ಮತ್ತು ಹೂಬಿಡುವ ಹೂಗಳನ್ನೂ ಇಲ್ಲಿ ಕಾಣಬಹುದು.
ಹನುವಾಂಟಿಯ ದ್ವೀಪದಲ್ಲಿ ಒಂದು ದಿನ ಕಳೆದು ನೋಡಿ
ಮುತ್ಯಲಾ ಮಡುವು ಜಲಪಾತ
PC: flickr
ಪ್ರಶಾಂತ ಜಲಪಾತವು ಮುತ್ಯಲಾ ಮಡುವಿನ ಪ್ರಮುಖ ಲಕ್ಷಣವಾಗಿದೆ. ನೀರು 100 ಅಡಿ ಎತ್ತರದಿಂದ ಬೀಳುತ್ತದೆ ಮತ್ತು ಮುತ್ತುಗಳು ಸ್ವರ್ಗದಿಂದ ಕೆಳಕ್ಕೆ ಬೀಳುತ್ತಿರುವಂತೆ ಭಾಸವಾಗುತ್ತದೆ. ಮುತ್ಯಲ ಮಡುವು ಜಲಪಾತವು ವಿಶ್ರಾಂತಿಗೆ ಯೋಗ್ಯವಾದ ಸ್ಥಳವಾಗಿದೆ ಮತ್ತು ಜಲಪಾತದ ಕಾರಣದಿಂದಾಗಿ ರೂಪುಗೊಳ್ಳುವ ಕೆರೆಯಲ್ಲಿ ಆಟವಾಡುವುದು ನಿಜಕ್ಕೂ ಒಂದು ಉತ್ತಮ ಅನುಭವವನ್ನು ನೀಡುತ್ತದೆ.
ಅಶೋಕ ಚಂದ್ರ ಕಾಂಪ್ಲೆಕ್ಸ್
PC: youtube
ಅಶೋಕ ಚಂದ್ರ ಕಾಂಪ್ಲೆಕ್ಸ್ ಇದೊಂದು ಶಾಪಿಂಗ್ ಮಾಡುವ ಸ್ಥಳವಾಗಿದ್ದು, ಮುತ್ಯಲ ಮಡುವಿನಿಂದ ಸುಮಾರು 15 ಕಿ.ಮೀ ದೂರದಲ್ಲಿದೆ. ನೀವು ಮುತ್ಯಲ ಮಡುವಿಗೆ ಬಂದಾಗ ಮನೆ ಹಿಂದಿರುಗುವಾಗ ಏನಾದರೂ ನಡನಪಿನ ಕಾಣಿಕೆಯನ್ನು ಕೊಂಡುಕೊಳ್ಳಲು ಇದು ಉತ್ತಮ ಸ್ಥಳವಾಗಿದೆ. ಇದು ವ್ಯಾಪಕವಾದ ಕರಕುಶಲ ಮತ್ತು ಸಾಂಪ್ರದಾಯಿಕ ಉತ್ಪನ್ನಗಳನ್ನು ಹೊಂದಿದೆ.
ಈ ಪ್ರಸಿದ್ಧ ಬಕ್ರೇಶ್ವರ ದೇವಸ್ಥಾನದ ದರ್ಶನ ಮಾಡಿದ್ದೀರಾ?
ತಾಜ್ ಮಹಲ್
PC: youtube
ತಾಜ್ ಮಹಲ್ ಯಾವಾಗ ಆಗ್ರಾದಿಂದ ಇಲ್ಲಿಗೆ ಸ್ಥಳಾಂತರಿಸಲಾಯಿತು ಎಂದು ನೀವು ಯೋಚಿಸುತ್ತಿರುವಿರಿ. ಆದ್ರೆ ಇದು ನಿಜವಾದ ತಾಜ್ಮಹಲ್ ಅಲ್ಲ. ಪ್ರಪಂಚದ ಏಳು ಅದ್ಭುತಗಳಲ್ಲಿ ಒಂದಾದ ತಾಜ್ಮಹಲ್ನ ಪ್ರತಿರೂಪವು ಸೆವೆನ್ ವಂಡರ್ಸ್ ಬಾರ್ ಹಾಗೂ ರೆಸ್ಟೋರೆಂಟ್ನಲ್ಲಿದೆ. ಇದು ಮುತ್ಯಲಾ ಮಡುವಿನಿಂದ 16 ಕಿ.ಮೀ ದೂರದಲ್ಲಿದೆ. ನೀವು ಆಗ್ರಾಕ್ಕೆ ಭೇಟಿ ನೀಡದಿದ್ದರೂ ಕೂಡ, ಈ ಸ್ಥಳಕ್ಕೆ ಭೇಟಿ ನೀಡಿ ತಾಜ್ಮಹಲ್ನ್ನು ಕಣ್ಣಾರೆ ನೋಡಬಹುದು.
ಶಿವದೇವಾಲಯ
ಜಲಪಾತದ ಮೇಲೆ ಶಿವನಿಗೆ ಅರ್ಪಿತವಾದ ಪುರಾತನ ದೇವಾಲಯವಿದೆ. ಪ್ರತಿದಿನ ಬೆಳಗ್ಗೆ ದೇವಸ್ಥಾನದಲ್ಲಿ ಪೂಜೆಯನ್ನು ನಡೆಸಲಾಗುತ್ತದೆ. ಪ್ರತಿದಿನ ಸಾಕಷ್ಟು ಭಕ್ತರು ಪ್ರಾರ್ಥನೆ ಮತ್ತು ಆಶೀರ್ವಾದ ಪಡೆಯಲು ಈ ದೇವಾಲಯಕ್ಕೆ ಭೇಟಿ ನೀಡುತ್ತಾರೆ.
ಪ್ರಿಯಾಂಕಾ ಚೋಪ್ರಾ ವಿವಾಹ ನಡೆದ ಉಮೇದ್ ಭವನ ಅರಮನೆಯಲ್ಲಿ 1 ರಾತ್ರಿ ತಂಗಲು ಬೆಲೆ ಎಷ್ಟು ಗೊತ್ತಾ?
ಚಾರಣಕೈಗೊಳ್ಳಬಹುದು
ಮುತ್ಯಾಲ ಮಡುವು ಚಾರಣಕೈಗೊಳ್ಳಲು ಸೂಕ್ತ ತಾಣವಾಗಿದೆ. ಇಲ್ಲಿಮ ಕಾಡಿನಲ್ಲಿ ಬೆಟ್ಟಗುಡ್ಡಗಳನ್ನು ಹತ್ತುತ್ತಾ ನಿಮ್ಮ ದೇಹವನ್ನು ಉಲ್ಲಾಸಗೊಳಿಸಬಹುದು. ಫ್ರೆಂಡ್ಸ್ ಜೊತೆ ಪಿಕ್ನಿಕ್ ಪ್ಲ್ಯಾನ್ ಮಾಡಲು ಉತ್ತಮ ಆಯ್ಕೆ ಇದಾಗಿದೆ.
ಯಾವಾಗ ಭೇಟಿ ನೀಡುವುದು ಸೂಕ್ತ
ಮುತ್ಯಾಲ ಮಡುವಿಗೆ ಭೇಟಿ ನೀಡಲು ಸೂಕ್ತ ಸ್ಥಳವೆಂದರೆ ಆಗಸ್ಟ್ ಮತ್ತು ನವಂಬರ್. ಈ ಸಂದರ್ಭದಲ್ಲಿ ಜಲಪಾತದ ನೀರು ಬಹಳ ಸುಂದರವಾಗಿ ಕಾಣಿಸುತ್ತದೆ. ಈ ಸಮಯದಲ್ಲಿ ಈ ಸ್ಥಳದ ಸುತ್ತಲೂ ಇರುವ ಮಂಜು ಅಲ್ಲಿನ ನೋಟವನ್ನು ಇನ್ನಷ್ಟು ಅದ್ಭುತವಾಗಿಸುತ್ತದೆ.
ಡಿಸೆಂಬರ್ನ ಈ ಚುಮುಚುಮು ಚಳಿಯಲ್ಲಿ ಹನಿಮೂನ್ಗೆ ಹೋಗೋದಾದ್ರೆ ಇಲ್ಲಿಗೆಲ್ಲಾ ಹೋಗಿ
ತಲುಪುವುದು ಹೇಗೆ?
ವಿಮಾನದ ಮೂಲಕ: ಬೆಂಗಳೂರಿನ ಕೆಂಪೇಗೌಡಾ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವು ಮುತ್ಯಲಾ ಮಡುವಿಗೆ ಸಮೀಪದ ವಿಮಾನ ನಿಲ್ದಾಣವಾಗಿದ್ದು, ಭಾರತದ ಪ್ರಮುಖ ನಗರಗಳೊಂದಿಗೆ ಉತ್ತಮ ಸಂಪರ್ಕ ಹೊಂದಿದೆ. ಈ ವಿಮಾನ ನಿಲ್ದಾಣವು ಮುತ್ಯಲಾ ಮಡುವಿನಿಂದ ಸುಮಾರು 40 ಕಿ.ಮೀ ದೂರದಲ್ಲಿದೆ. ಅಲ್ಲಿಂದ ಬಾಡಿಗೆ ಕಾರುಗಳು ಮತ್ತು ಬಸ್ಸುಗಳು ಲಭ್ಯವಿವೆ.
ರೈಲು ಮೂಲಕ
ಹತ್ತಿರದ ರೈಲು ನಿಲ್ದಾಣವೆಂದರೆ ಬೆಂಗಳೂರಿನ ರೈಲ್ವೆ ನಿಲ್ದಾಣವಾಗಿದ್ದು, ಸುಮಾರು 43 ಕಿ.ಮೀ ದೂರದಲ್ಲಿ ಮುತ್ಯಾಲ ಮಡುವು ಇದೆ. ಅಲ್ಲಿಂದ ಬಸ್ಸುಗಳು ಮತ್ತು ಬಾಡಿಗೆ ಕಾರುಗಳು ಸುಲಭವಾಗಿ ಲಭ್ಯವಿವೆ. ಅದು ನಿಮ್ಮನ್ನು ಮುತ್ಯಲಾ ಮಡುವಿಗೆ ಕರೆದೊಯ್ಯುತ್ತದೆ.
ರಸ್ತೆ ಮೂಲಕ: ಬೆಂಗಳೂರಿನಿಂದ ಸುಮಾರು 40 ಕಿ.ಮೀ. ದೂರದಲ್ಲಿ ಮುತ್ಯಾಲಮಡುವು ಇದೆ. NH7 ಮೂಲಕ ಮುತ್ಯಾಲ ಮಡುವಿಗೆ ಹೋಗಬಹುದು.