ದಕ್ಷಿಣ ಭಾರತ ದೇಶದಲ್ಲಿನ ಗುಂಟೂರು ಜಿಲ್ಲೆಯಲ್ಲಿ ಕೃಷ್ಣಾ ನದಿ ತೀರದಲ್ಲಿ ಒಂದು ಚಿಕ್ಕದಾದ ಪಟ್ಟಣವೇ ಅಮರಾವತಿ. ಇಲ್ಲಿರುವ ಅಮರೇಶ್ವರ ದೇವಾಲಯದ ಕಾರಣವಾಗಿ ಈ ಪ್ರದೇಶಕ್ಕೆ ಪ್ರಪಂಚ ವ್ಯಾಪಕವಾಗಿ ಈ ಹೆಸರು ಬಂದಿತು. ಅಷ್ಟೇ ಅಲ್ಲ, ಇಲ್ಲಿ ನಿರ್ಮಾಣ ಮಾಡಿದ ಅತಿ ದೊಡ್ಡ ಬೌದ್ಧ ಮಂದಿರಗಳ ಕಾರಣವಾಗಿಯೂ ಕೂಡ ಪ್ರಸಿದ್ಧಿಯನ್ನು ಪಡೆದಿದೆ. ಪ್ರಾಚೀನ ಶಾಸನಗಳ ಪ್ರಕಾರ ಇದನ್ನು ಒಂದು ಕಾಲದಲ್ಲಿ ಧ್ಯಾನ ಕಟಕಂ ಅಥವಾ ಧರಣಿಕೋಟೆ ಎಂದು ಕರೆಯುತ್ತಿದ್ದರು. ಬೌದ್ಧ ಧರ್ಮದ ಮೇಲೆ ಆಸಕ್ತಿ ಹೊಂದಿದವರು ಇಲ್ಲಿ ಅನೇಕ ಬೌದ್ಧ ಮಂದಿರಗಳು, ಶಿಲ್ಪಗಳನ್ನು ಕಾಣಬಹುದು. ಪ್ರಸ್ತುತ ನಿರ್ಮಾಣಗಳು ಶಿಥಿಲಾವಾಗುತ್ತಾ ಹೋಗುತ್ತಿರುವ ಕಾರಣವಾಗಿ, ಬುದ್ಧನ ಜೀವನ ವಿಶೇಷಗಳ ಬಗ್ಗೆ ಕೆತ್ತನೆ ಮಾಡುವುದು ಸಾಧಾರಣವಾದ ವಿಷಯವೇ. ಇನ್ನು ಉಳಿದ ನಿರ್ಮಾಣಗಳು ಬೌದ್ಧ ಧರ್ಮ ಪ್ರಚಾರಗಳಲ್ಲಿ ಪ್ರಧಾನವಾದ ಪಾತ್ರ ವಹಿಸುತ್ತದೆ.
ಭಾರತೀಯ ಚರಿತ್ರೆಯ ಶಿಲ್ಪಕಲೆಗಳನ್ನು ಹೊಂದಿರುವ ಅದ್ಭುತವಾದ ಮ್ಯೂಸಿಯಂ ಇದು...
ಇದರ ಸ್ಥಳ ಪುರಾಣವು ಆಂಧ್ರ ಪ್ರದೇಶದ ಆಳ್ವಿಕೆಕಾರರು ಮೊದಲನೇಯವರಾದರೂ ಕೂಡ ಶಾತವಾಹನರು ಸುಮಾರು ಕ್ರಿ.ಪೂ 2 ನೇ ಶತಮಾನದಿಂದ ಸುಮಾರು 3 ನೇ ಶತಮಾನದವರೆಗೆ ಸಾಮ್ರಾಜ್ಯದ ರಾಜಧಾನಿಯಾಗಿತ್ತು. ಗೌತಮ ಬುದ್ಧನು ತನ್ನ ಕಾಲಚಕ್ರ ಪ್ರಕ್ರಿಯೆಗಳನ್ನು ಅಮರಾವತಿಯಲ್ಲಿಯೇ ಬೋಧಿಸಿದನು. ಹಾಗಾಗಿಯೇ ಅಮರಾವತಿ ಬುದ್ಧನಿಗಿಂತ ಮೊದಲಿನಿಂದಲೂ ಕೂಡ ಇದೆ ಎಂದು ಗುರುತಿಸಲಾಗುತ್ತಿದೆ.
ಭಾರತೀಯ ಚರಿತ್ರೆಯ ಶಿಲ್ಪಕಲೆಗಳನ್ನು ಹೊಂದಿರುವ ಅದ್ಭುತವಾದ ಮ್ಯೂಸಿಯಂ ಇದು...
ಇಂದು ಈ ಪಟ್ಟಣವು, ಅಮರಾವತಿ ಸ್ತೂಪ, ಪುರಾವಸ್ತು ಮ್ಯೂಜಿಯಂನಂತಹ ಆಕರ್ಷಣೆಗಳ ಕಾರಣವಾಗಿ ಒಂದು ಸುಂದರವಾದ ಪ್ರವಾಸಿ ಪ್ರದೇಶವಾಗಿ ಪ್ರಸಿದ್ಧಿಯನ್ನು ಪಡೆದಿದೆ. ಅಮರಾವತಿ ಸ್ತೂಪವು ಆಂಧ್ರ ಪ್ರದೇಶದಲ್ಲಿನ ಗುಂಟೂರು ಜಿಲ್ಲೆಯಲ್ಲಿದೆ. ಇದು ಅಮರಾವತಿಯಲ್ಲಿರುವ ಅಮರಾವತಿ ಸ್ತೂಪವು ಒಂದು ದೊಡ್ಡ ಆಕರ್ಷಣೆ ಎಂದೇ ಹೇಳಬಹುದು. ಈ ಸ್ತೂಪಗಳನ್ನು ಅಶೋಕ ಚಕ್ರವರ್ತಿಯ ಕಾಲದಲ್ಲಿ ನಿರ್ಮಾಣ ಮಾಡಲಾಗಿದ್ದು ಎಂದು ಗುರುತಿಸಲಾಗಿದೆ.
ಭಾರತೀಯ ಚರಿತ್ರೆಯ ಶಿಲ್ಪಕಲೆಗಳನ್ನು ಹೊಂದಿರುವ ಅದ್ಭುತವಾದ ಮ್ಯೂಸಿಯಂ ಇದು...
ಈ ಸ್ತೂಪದ ಮೇಲಿರುವ ಕೆತ್ತನೆಗಳು ಬುದ್ಧನ ಜೀವಿನ ಕಥೆಗಳನ್ನು ಮತ್ತು ಆತನ ಬೋಧನೆಗಳನ್ನು ತಿಳಿಸುತ್ತದೆ. ಪ್ರವಾಸಿಗರು ಇಲ್ಲಿಗೆ ಭೇಟಿ ನೀಡಿ ಬುದ್ಧನ ಸ್ತೂಪಗಳನ್ನು ದರ್ಶನ ಮಾಡಿ ಆತನ ಮಾರ್ಗದಲ್ಲಿ ನಡೆಯಲು ಪ್ರಯತ್ನ ಮಾಡುತ್ತಾರೆ. ಇಲ್ಲಿಗೆ ಅನೇಕ ಮಂದಿ ಬೌದ್ಧ ಭೀಕ್ಷುಗಳು ಪ್ರತಿ ವರ್ಷ ಭೇಟಿ ನೀಡುತ್ತಿರುತ್ತಾರೆ.
ಭಾರತೀಯ ಚರಿತ್ರೆಯ ಶಿಲ್ಪಕಲೆಗಳನ್ನು ಹೊಂದಿರುವ ಅದ್ಭುತವಾದ ಮ್ಯೂಸಿಯಂ ಇದು...
ಕೃಷ್ಣಾ ನದಿ ಎಷ್ಟೋ ಆಹ್ಲಾದಕರವಾಗಿರುವ ನದಿ ತೀರವಾಗಿದೆ. ಇಲ್ಲಿಗೆ ಪ್ರವಾಸಿಗರು ದೊಡ್ಡ ಸಂಖ್ಯೆಯಲ್ಲಿ ಭೇಟಿ ನೀಡುತ್ತಿರುತ್ತಾರೆ. ಇದು ಅಲ್ಲಿರುವ ಪ್ರಜೆಗಳಿಗೆ ಅಲ್ಲದೇ ಪ್ರವಾಸಿಗರಿಗೂ ಕೂಡ ವಿಶ್ರಾಂತಿ ನೀಡುವ ತಾಣವಾಗಿರುವ ಪ್ರದೇಶವಾಗಿದೆ. ಇಲ್ಲಿ ಕೃಷ್ಣಾ ನದಿ ತೀರದಲ್ಲಿ ಹಿಂದುಗಳು ಹೆಚ್ಚಾಗಿ ಭೇಟಿ ನೀಡಿ ವಿಶೇಷವಾಗಿ ಸ್ನಾನವನ್ನು ಆಚರಿಸುತ್ತಾರೆ.
ಭಾರತೀಯ ಚರಿತ್ರೆಯ ಶಿಲ್ಪಕಲೆಗಳನ್ನು ಹೊಂದಿರುವ ಅದ್ಭುತವಾದ ಮ್ಯೂಸಿಯಂ ಇದು...
ಎಷ್ಟೇ ಕಾಲದಿಂದ ಈ ನದಿ ಇದ್ದರೂ ಕೂಡ ಆ ನದಿಯ ಪ್ರಮುಖ್ಯತೆ ಹೆಚ್ಚಾಗುತ್ತಲೇ ಇದ್ದು, ಇಂದಿಗೂ ಅವಿಯಾಗಿಲ್ಲ, ಇದೊಂದು ಜೀವ ನದಿ ಎಂದೇ ಅಲ್ಲಿನ ಪ್ರಜೆಗಳು ಭಾವಿಸುತ್ತಾರೆ. ಕೃಷ್ಣಾ ನದಿ ತೀರದಲ್ಲಿ ಸ್ನಾನ ಆಚರಿಸುವ ಭಕ್ತರು ಅಮರಾವತಿಯಲ್ಲಿ ಕೃಷ್ಣಾ ನದಿಯ ಬಲ ಭಾಗದಲ್ಲಿ ಒಂದು ಮ್ಯೂಸಿಯಂ ಇದೆ. ಈ ಮ್ಯೂಸಿಯಂನಲ್ಲಿ ಅಮರಾವತಿ ಚರಿತ್ರೆ, ಅದರ ಸಂಸ್ಕøತಿ, ಅಂದಿನ ಪ್ರದೇಶದ ಸಂಪ್ರದಾಯಗಳಂತಹ ವಸ್ತುಗಳನ್ನು ಇಲ್ಲಿನ ಮ್ಯೂಸಿಯಂನಲ್ಲಿ ಕಾಣಬಹುದು.
ಭಾರತೀಯ ಚರಿತ್ರೆಯ ಶಿಲ್ಪಕಲೆಗಳನ್ನು ಹೊಂದಿರುವ ಅದ್ಭುತವಾದ ಮ್ಯೂಸಿಯಂ ಇದು...
ಅಮರಾವತಿಯಲ್ಲಿ ಹುಟ್ಟಿದ ಕಲೆಗಳು ಮತ್ತು ಭಾರತೀಯ ಕಲೆಗಳಿಗೆ ಚಾರಿತ್ರಿಕವಾದ ಆಧಾರಗಳನ್ನು ಇಲ್ಲಿ ಕಾಣಬಹುದು. ಸುಮಾರು 3 ನೇ ಶತಮಾನದಲ್ಲಿನ ಬೌದ್ಧ ಧರ್ಮದ ಶಿಲ್ಪಕಲೆಗಳು ಕೂಡ ಈ ಮ್ಯೂಸಿಯಂನಲ್ಲಿದೆ. ಇದು ಅಮರಾವತಿಯಲ್ಲಿ ತಪ್ಪದೇ ನೋಡಬೇಕಾಗಿರುವ ಪ್ರದೇಶವಾಗಿ ಪ್ರಸಿದ್ಧಿ ಪಡೆದಿದೆ. ಅಮರಾವತಿ ಪಟ್ಟಣ ಚರಿತ್ರೆಯಿಂದ ತಿಳಿಯುತ್ತದೆ. ಇಲ್ಲಿ ಅನೇಕ ಚರಿತ್ರೆ ಪುಸ್ತಕಗಳು ಇಲ್ಲಿವೆ. ಒಮ್ಮೆ ಮ್ಯೂಸಿಯಂ ಭೇಟಿ ನೀಡಿದರೆ ಸಾಕು ಎಷ್ಟೋ ಚರಿತ್ರೆ ತಿಳಿಯುತ್ತದೆ.
ಅಮರಾವತಿ ಸೇರಿಕೊಳ್ಳುವ ಬಗೆ ಹೇಗೆ?
ಈ ಪಟ್ಟಣಕ್ಕೆ ರಸ್ತೆ, ರೈಲು ಹಾಗು ವಿಮಾನ ಮಾರ್ಗಗಳ ಮೂಲಕ ಸೇರಿಕೊಳ್ಳಬಹುದು.
ವಾಯು ಮಾರ್ಗದ ಮೂಲಕ
ಅಮರಾವತಿ ಸಮೀಪದಲ್ಲಿರುವ ವಿಮಾನ ನಿಲ್ದಾಣ ವಿಜಯವಾಡದಲ್ಲಿರುವ ಗನ್ನವರಂ ವಿಮಾನ ನಿಲ್ದಾಣವಾಗಿದೆ. ಈ ವಿಮಾನ ನಿಲ್ದಾಣದಿಂದ ಬಸ್ಸಿನ ಮುಲಕ ಅಮರಾವತಿಗೆ ಭೇಟಿ ನೀಡಬೇಕೆಂದರೆ 1 ಗಂಟೆಗಳ ಕಾಲ ತಗುಲುತ್ತದೆ.
ಅಮರಾವತಿ ಸೇರಿಕೊಳ್ಳುವ ಬಗೆ ಹೇಗೆ?
ರೈಲ್ವೆ ಮಾರ್ಗದ ಮೂಲಕ
ಅಮರಾವತಿಗೆ ರೈಲು ಮಾರ್ಗದ ಮೂಲಕ ತಲುಪಬೇಕು ಎಂದರೆ ಗುಂಟೂರು ಸಮೀಪದಲ್ಲಿ ಅಥವಾ ವಿಜಯವಾಡ ಸಮೀಪದಲ್ಲಿ ಇಳಿದು ರಸ್ತೆ ಮಾರ್ಗವಾಗಿ ಪ್ರಯಾಣ ಸಾಗಿಸಬಹುದು. ಈ 2 ರೈಲ್ವೆ ನಿಲ್ದಾಣಗಳಿಂದಲೂ ಕೂಡ ಸುಲಭವಾಗಿ ತೆರಳಬಹುದು. ದೇಶದ ಮೂಲೆ-ಮೂಲೆಗಳಿಂದಲೂ ಈ ಪ್ರದೇಶಕ್ಕೆ ರೈಲುಗಳು ಸಂಪರ್ಕ ಸಾಧಿಸುತ್ತವೆ.