ನೀವು ಬಣ್ಣ ಬದಲಾಯಿಸುವ ವಿನಾಯಕನ ಬಗ್ಗೆ ಕೇಳಿದ್ದೀರಾ? ತಮಿಳುನಾಡಿನಲ್ಲಿ ಇಂತಹ ಒಂದು ಗಣೇಶನ ದೇವಸ್ಥಾನವಿದೆ. ಅದು ಇರುವುದು ತಮಿಳುನಾಡಿನ ಕೇರಳಪುರಂನಲ್ಲಿ. ಹಾಗಾದ್ರೆ ಆ ವಿಶೇಷ ದೇವಸ್ಥಾನದ ಬಗ್ಗೆ ತಿಳಿಯೋಣ ಬನ್ನಿ... ಆರು ವರ್ಷಕ್ಕೊಮ್ಮೆ ಬಣ್ಣ ಬದಲಾಯಿಸುವ ಗಣೇಶನ ಬಗ್ಗೆ.
ಬಾಹುಬಲಿಯ ಮಾಹಿಷ್ಮತಿ ಸಾಮ್ರಾಜ್ಯವನ್ನು ಕಣ್ಣಾರೆ ನೋಡ್ಬೇಕಾ....ಹಾಗಾದ್ರೆ ಇಲ್ಲಿಗೆ ಹೋಗಿ
ಬಾವಿಯ ನೀರಿನ ಬಣ್ಣ ಕೂಡಾ ಬದಲಾಗುತ್ತದೆ
PC: youtube
ಈ ದೇವಸ್ಥಾನದಲ್ಲಿ ಇನ್ನೊಂದು ವಿಶೇಷವಿದೆ. ಅದೇನೆಂದರೆ ಈ ಗಣೇಶನ ವಿಗ್ರಹ ಬಣ್ಣ ಬದಲಾಗುವಾಗ ಇಲ್ಲಿನ ಬಾವಿಯ ನೀರಿನ ಬಣ್ಣ ಕೂಡಾ ಬದಲಾಗುತ್ತಂತೆ. ಈ ದೇವಾಲಯದ ಆವರಣದಲ್ಲಿ ಒಂದು ಕುಡಿಯುವ ನೀರಿನ ಬಾವಿ ಇದೆ ಅದರಲ್ಲಿನ ನೀರು ಬಣ್ಣ ಬದಲಾಗುತ್ತದೆ.
ಎಷ್ಟು ಬಾರಿ ಪುನಃನಿರ್ಮಿಸಲಾಯಿತು
PC: youtube
ಸುಮಾರು 2300 ವರ್ಷಗಳ ಚರಿತ್ರೆ ಈ ದೇವಾಲಕ್ಕಿದೆಯಂತೆ. 1317ರಲ್ಲಿ ಈ ದೇವಸ್ಥಾನವನ್ನು ನಿರ್ಮಿಸಲಾಗಿದೆ ಎನ್ನಲಾಗುತ್ತದೆ. ಈ ದೇವಾಲಯದ ಪ್ರಾಂಗಣದಲ್ಲಿ ಒಂದು ಶಿವಾಲಯವಿದೆ. ಆ ನಂತರ ಇದನ್ನು ನಿರ್ಮಿಸಿದರಂತೆ ಹಾಗಾಗಿ ಇದನ್ನು ಮಹದೇವನ ಅತಿಶಯ ವಿನಾಯಕ ದೇವಾಲಯ ಎನ್ನಲಾಗುತ್ತದೆ.
ಈ ದೇವಾಲಯಕ್ಕೆ ಒಂದು ಚರಿತ್ರೆ ಕೂಡಾ ಇದೆ
PC: youtube
ಕೇರಳಪುರಂನ ರಾಜ ತನ್ನ ಪರಿವಾರದೊಂದಿಗೆ ತೀರ್ಥ ಯಾತ್ರೆಗೆ ರಾಮೇಶ್ವರಕ್ಕೆ ತೆರಳಿದಾಗ ಅಲ್ಲಿ ದಕ್ಷಿಣ ಸಮುದ್ರದಲ್ಲಿ ಸ್ನಾನ ಮಾಡುತ್ತಿದ್ದ ಸಂದರ್ಭ ನೀರಿನಲ್ಲಿ ಒಂದು ಗಣೇಶನ ವಿಗ್ರಹ ದೊರೆಯುತ್ತದೆ. ವಿಗ್ರಹ ಪ್ರತಿಷ್ಟಾಪಿಸಿದ ರಾಜ ಕೇರಳಪುರಂನ ರಾಜ ತನಗೆ ದೊರೆತ ಆ ವಿಗ್ರಹವನ್ನು ರಾಮೇಶ್ವರಂನ ರಾಜನಿಗೆ ನೀಡಿದರು ಆದರೆ ರಾಮೇಶ್ವರಂನ ರಾಜ ಆ ವಿಗ್ರಹವನ್ನು ಮರಳಿ ಕೇರಳಪುರಂನ ರಾಜನಿಗೆ ನೀಡಿ ದೊರೆತವರಿಗೆ ಈ ವಿಗ್ರಹ ಸೇರುವುದು ಉಚಿತ ಎಂದು , ಇನ್ನೊಂದು ವಿಗ್ರಹವನ್ನು ನೀಡಿದರು. ಕೇರಳಪುರಂ ರಾಜ ಆ ವಿಗ್ರಹವನ್ನು ತನ್ನ ರಾಜ್ಯಕ್ಕೆ ತೆಗೆದುಕೊಂಡು ಹೋಗಿ ಪ್ರತಿಷ್ಟಾಪಿಸಿದನು.
ತಲುಪುವುದು ಹೇಗೆ?
PC: youtube
ಕನ್ಯಾಕುಮಾರಿಯಿಂದ ಕೇರಳಪುರಂ ದೇವಾಲಯಕ್ಕೆ ಹೋಗಲು ಸಾಕಷ್ಟು ಬಸ್ಸುಗಳು ಇವೆ. ರೈಲು ಮೂಲಕ ಹೋಗುವುದಾದರೆ ಕನ್ಯಾಕುಮಾರಿ ರೈಲು ನಿಲ್ದಾಣಕ್ಕೆ ಬಂದು ಅಲ್ಲಿಂದ ಬಸ್ಸು ಇಲ್ಲವೆ ಟ್ಯಾಕ್ಸಿ ಹಿಡಿದುಕೊಂಡು ಹೋಗಬಹುದು. ಇನ್ನು ವಿಮಾನದಲ್ಲಿ ಹೋಗುವುದಾದರೆ ಅಲ್ಲಿಗೆ ಸಮೀಪವಿರುವ ಏರ್ಪೋರ್ಟ್ ಎಂದರೆ ತ್ರಿವೆಂಡ್ರಮ್ ಏರ್ಪೋರ್ಟ್.