ಕಡಲ ತೀರಗಳು ಸಾಮಾನ್ಯವಾಗಿ ಎಲ್ಲರಿಗೂ ಸಂತಸ ನೀಡುತ್ತವೆ. ಕಣ್ಣು ಹಾಯಿಸಿದಷ್ಟೂ ಅನಂತವಾಗಿ ಚಾಚಿರುವ ಸಮುದ್ರದ ನೋಟ, ರಪ ರಪ ಎಂದು ಒಂದೆ ಸಮನೆ ತೀರಕ್ಕೆ ಅಪ್ಪಳಿಸುತ್ತಿರುವ ಸಮುದ್ರದಲೆಗಳು [ತರಂಗಂಬಾಡಿಯ ನಾದಮಯ ಅಲೆಗಳು], ದಂಡೆಗುಂಟ ನಾ ಎತ್ತರ, ನೀ ಎತ್ತರ ಎಂಬಂತೆ ಬೆಳೆದು ನಿಂತಿರುವ ತೆಂಗಿನ ಮರಗಳು ಇವೆಲ್ಲವೂ ಸೇರಿ ಕಡಲ ತೀರಗಳನ್ನು ಒಂದು ವಿಶಿಷ್ಟ ಸ್ಥಳವನ್ನಾಗಿ ಮಡಿ ಬಿಡುತ್ತವೆ.
ಚಿತ್ರಕೃಪೆ: Sankara Subramanian
ನಮ್ಮ ನಾಡಿನ ತುಂಬೆಲ್ಲ ನೂರಾರು ಸಂಖ್ಯೆಯಲ್ಲಿ ಕಡಲ ತೀರಗಳನ್ನು ಕಾಣಬಹುದಾಗಿದೆ. ಒಂದಕ್ಕಿಂತ ಒಂದು ಸುಂದರ ಎಂಬಂತೆ ಆಕರ್ಷಿಸುತ್ತವೆ ಈ ಬೀಚುಗಳು. ಇನ್ನು ಹದಿಹರೆಯದವರ ಪಾಲಿಗೆ ಬೀಚುಗಳೆಂದರೆ ಸ್ವರ್ಗಕ್ಕೆ ಮೂರೇ ಗೇಣು ಎಂಬಂತಿರುತ್ತದೆ. ಸಾಹಸಮಯ ಜಲ ಕ್ರೀಡೆಗಳು, ಮೋಜು ಮಸ್ತಿಗಳು ಒಂದಕ್ಕೊಂದು ಅಂಟಿಕೊಂಡಿರುತ್ತವೆ. [ಭಾರತದ ಅದ್ಭುತ ಕಡಲ ತೀರಗಳು] ಹೀಗಾಗಿ ಎಲ್ಲ ಪ್ರಾಯದವರಿಗೂ ಬೀಚುಗಳೆಂದರೆ ಇಷ್ಟ.
ಚಿತ್ರಕೃಪೆ: Riju K
ಕರ್ನಾಟಕದ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಬಳಿಯಿರುವ ಮರವಂತೆ ಎಂಬ ಹಳ್ಳಿಯು ತನ್ನ ಅತಿ ಮಧುರವಾದ ಹಾಗೂ ಅಷ್ಟೆ ಸುಂದರವಾದ ಕಡಲ ತೀರಕ್ಕೆ ಹೆಸರುವಾಸಿಯಾಗಿದೆ. ಈ ಕಡಲ ತೀರ ಎಷ್ಟೊಂದು ಸುಂದರವಾಗಿದೆ ಎಂದರೆ ಔಟ್ ಲುಕ್ ಎಂಬ ಪ್ರವಾಸಿ ನಿಯತಕಾಲಿಕೆಯು ಇದನ್ನು ಕರ್ನಾಟಕದಲ್ಲಿರುವ ಅತಿ ಸುಂದರ ಕಡಲ ತೀರಗಳ ಪಟ್ಟಿಯಲ್ಲಿ ಒಂದೆಂದು ಹೆಸರಿಸಿದೆ.
ಚಿತ್ರಕೃಪೆ: Ashwin Kumar
ಉಡುಪಿಯಿಂದ ಸುಮಾರು 55 ಕಿ.ಮೀ ಗಳಷ್ಟು ದೂರವಿರುವ ಈ ಕರಾವಳಿ ಹಳ್ಳಿಗೆ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 66 ರ ಮೂಲಕ ತಲುಪಬಹುದಾಗಿದೆ. ವಿಶೇಷವೆಮ್ದರೆ ಈ ಹೆದ್ದಾರಿಯ ಒಂದು ಬದಿ ಸಮುದ್ರವಿದ್ದರೆ ಇನ್ನೊಂದು ಬದಿಯಲ್ಲಿ ಸೌಪರ್ಣಿಕಾ ನದಿ ಹರಿದಿದೆ. ಈ ರೀತಿಯ ದೃಶ್ಯವು ತನ್ನಲ್ಲೆ ತಾನೆ ವಿಶಿಷ್ಟವಾಗಿದ್ದು ಕಾಣ ಸಿಗುವುದು ಬಹು ಅಪರೂಪ ಎಂತಲೆ ಹೇಳಬಹುದು.
ಚಿತ್ರಕೃಪೆ: Ashwin Kumar
ಮರವಂತೆಯು ಮೂಲವಾಗಿ ಒಂದು ಶಾಂತ ಪರಿಸರದ ಅದ್ಭುತ ಕಡಲ ತೀರ ಪ್ರದೇಶವಾಗಿದ್ದು, ಭೇಟಿ ನೀಡುವವರಿಗೆ ನೆಮ್ಮದಿ, ಶಾಂತಿ ಹಾಗೂ ಆನಂದವನ್ನು ಕರುಣಿಸುತ್ತದೆ. ಮರವಂತೆಯ ಕಡಲ ತೀರದ ಬಳಿಯಿರುವ ಮರಸ್ವಾಮಿ ದೇವಾಲಯವು ಪ್ರಮುಖ ಆಕರ್ಷಣೆಯಾಗಿದೆ. ಈ ದೇವಾಲಯಕ್ಕೆ ವಿಶಿಷ್ಟ ಎಂಬುವಂತೆ ಮೂರು ಗರ್ಭ ಗೃಹಗಳಿದ್ದು ಮೂರು ಮೂಲ ದೇವತೆಗಳಿವೆ.
ಚಿತ್ರಕೃಪೆ: Ashwin Kumar
ಈ ದೇವಾಲಯದ ಮೂರು ದೇವತೆಗಳ ಪೈಕಿ ಒಂದು ವಿಷ್ಣುವಿನ ಅವತಾರವಾದ ವರಾಹ ದೇವತೆಗೆ ಮುಡಿಪಾಗಿದೆ. ಆದ್ದರಿಂದ ಈ ದೇವಸ್ಥಾನವನ್ನು ವರಾಹಸ್ವಾಮಿ ದೇವಸ್ಥಾನ ಎಂಬ ಹೆಸರಿನಿಂದಲೂ ಸಹ ಕರೆಯಲಾಗುತ್ತದೆ. ದೇವತೆಗಳ ಜೊತೆಗೆ ಈ ದೇವಸ್ಥಾನದಲ್ಲಿ ಆಮೆ, ಮೊಸಳೆ ಹಾಗಿ ಮೀನೂ ಸಹ ಪೂಜಿಸಲ್ಪಡುತ್ತವೆ.