ಮಹೇಶ್ವರ ಮಧ್ಯಪ್ರದೇಶದ ಖಾರ್ಗೋನ್ ಜಿಲ್ಲೆಯಲ್ಲಿದೆ. ನರ್ಮದಾ ಹರಿಯುವ ಸ್ಥಳದಲ್ಲಿ ಶಿವನನ್ನು ಪೂಜಿಸಲಾಗುತ್ತದೆ. ಇದೊಂದು ಆಧ್ಯಾತ್ಮಿಕ ತಾಣವಾಗಿದ್ದು, ನರ್ಮದಾ ನದಿ ತೀರದಲ್ಲಿದೆ. ಮಹೇಶ್ವರವು ಯಾವುದಕ್ಕೆ ಪ್ರಸಿದ್ಧಿಯಾಗಿದೆ, ಮಧ್ಯಪ್ರದೇಶದ ಈ ತಾಣದ ವಿಶೇಷತೆ ಏನು ಅನ್ನೋದನ್ನು ತಿಳಿಯೋಣ.
ನರ್ಮದಾ ನದಿಯನ್ನು ತಡೆದ ರಾಜ
PC:Dusanesurbhi
ಇದು ಪೌರಾಣಿಕ ಮತ್ತು ಐತಿಹಾಸಿಕ ಪ್ರಾಮುಖ್ಯತೆಯನ್ನು ಹೊಂದಿದೆ. 500 ಪತ್ನಿಯರ ಪತಿಯಾಗಿದ್ದ ರಾಜ ಸಹಸ್ರಾರ್ಜುನ್ ನರ್ಮದಾ ನದಿಯನ್ನು ತನ್ನ 1000 ಕೈಗಳಿಂದ ನಿಲ್ಲಿಸಿ, ತನ್ನ ಪತ್ನಿಯರಿಗೆ ಆಟದ ಪ್ರದೇಶವನ್ನಾಗಿ ಮಾಡಿದನು. ಈ ಸಮಯದಲ್ಲಿ, ನದಿಮುಖದ ಮೇಲೆ ರಾವಣನು ಶಿವಲಿಂಗವನ್ನು ನಿರ್ಮಿಸಿದನು.
ಸಹಸ್ರಾರ್ಜುನ್ ದೇವಾಲಯ
PC:Lukas Vacovsky
ರಾಜನು ನದಿಯ ನೀರನ್ನು ಬಿಡುಗಡೆ ಮಾಡಿದಾಗ, ಆ ನೀರಿನಲ್ಲಿ ಶಿವಲಿಂಗ ಕೊಚ್ಚಿಕೊಂಡು ಹೋಯಿತು. ಹಾಗಾಗಿ ಅವರಿಬ್ಬರ ನಡುವೆ ಯುದ್ಧ ನಡೆಯಿತು. ಆದರೆ ಅರಸನು ಗೆಲುವು ಪಡೆದಾಗ ರಾವಣನ ತಲೆಯ ಮೇಲೆ ಹತ್ತು ದೀಪಗಳನ್ನು ಇಟ್ಟುಕೊಂಡನು ಮತ್ತು ಅವನ ಕೈಯಲ್ಲಿ ಒಂದು. ಈಗ, ನೀವು ಸಹಸ್ರಾರ್ಜುನ್ ದೇವಾಲಯದ 11 ದೀಪಗಳನ್ನು ನೋಡಬಹುದಾಗಿದೆ.
ಕೈಮಗ್ಗ ಸೀರೆಗಳಿಗೆ ಫೇಮಸ್
ಮಹೇಶ್ವರವು ತನ್ನ ಆಧ್ಯಾತ್ಮಿಕ ಪ್ರಾಮುಖ್ಯತೆಗಾಗಿ ಹೆಸರುವಾಸಿಯಾಗಿದೆ. ಇದನ್ನು ಹಿಂದೂ ಮಹಾಕಾವ್ಯಗಳಾದ ರಾಮಾಯಣ ಮತ್ತು ಮಹಾಭಾರತದಲ್ಲಿ ಮಹಾಶಿಮಾ ಎಂದು ಉಲ್ಲೇಖಿಸಲಾಗಿದೆ. ಇವುಗಳಲ್ಲದೆ, ಮಹೇಶ್ವರವು ಅನನ್ಯ ಮತ್ತು ಸೂಕ್ಷ್ಮವಾದ ಹತ್ತಿ ಮತ್ತು ರೇಷ್ಮೆ ಮಿಶ್ರಣ ಕೈಮಗ್ಗ ಸೀರೆಗಳನ್ನು ತಯಾರಿಸಲು ಜನಪ್ರಿಯವಾಗಿದೆ. ಇದು ಮಹೇಶ್ವರಿ ಸೀರೆಗಳ ಅತಿದೊಡ್ಡ ಉತ್ಪಾದನೆಗೆ ಗುರುತಿಸಲ್ಪಟ್ಟಿದೆ.
ಹ್ಯಾಂಡ್ಲುಮ್ ಜವಳಿ ಕೇಂದ್ರ
PC:cool_spark
ಮಹೇಶ್ವರ 5 ನೇ ಶತಮಾನದಿಂದ ಹ್ಯಾಂಡ್ಲುಮ್ ಜವಳಿ ಕೇಂದ್ರವಾಗಿದೆ ಮತ್ತು ಅತ್ಯುತ್ತಮ ಕೈಮಗ್ಗ ಫ್ಯಾಬ್ರಿಕ್ ಸಂಪ್ರದಾಯಗಳ ಒಂದು ನೆಲೆಯಾಗಿದೆ. ಈ ನಗರವು ಹಲವಾರು ಶಿವ ದೇವಾಲಯಗಳನ್ನು ಹೊಂದಿದೆ.
ಈ ಪಟ್ಟಣದ ಸೌಂದರ್ಯ ಮತ್ತು ನರ್ಮದಾ ನದಿಯನ್ನು ಬಾಲಿವುಡ್ ಮತ್ತು ತಮಿಳು ಚಲನಚಿತ್ರಗಳಲ್ಲಿ ಕಾಣಬಹುದು.
ಇತರ ದೇವಸ್ಥಾನಗಳು
PC:Bernard Gagnon
ನೀವು ಮಹೇಶ್ವರದ ನದಿಮುಖದ ದೇವಸ್ಥಾನಗಳನ್ನು ಕಾಲೇಶ್ವರ ದೇವಸ್ಥಾನ, ರಾಜರಾಜೇಶ್ವರ ದೇವಸ್ಥಾನ, ಅಖಿಲೇಶ್ವರ ದೇವಸ್ಥಾನ ಮತ್ತು ವಿಠಲೇಶ್ವರ ದೇವಸ್ಥಾನ ಸೇರಿದಂತೆ ಇನ್ನೀತರ ಧಾರ್ಮಿಕ ತಾಣಗಳನ್ನೂ ಅನ್ವೇಷಿಸಬಹುದು. ಇದು ಅನನ್ಯವಾದ ಹಿಂಬದಿಯ ಬಾಲ್ಕನಿಗಳು ಮತ್ತು ಸುಂದರವಾದ ಗೋಡೆಗಳಿಗೆ ಜನಪ್ರಿಯವಾಗಿದೆ.
ಮಹೇಶ್ವರ ಕೋಟೆ
PC:Bernard Gagnon
ಮಹೇಶ್ವರ ಕೋಟೆ, 16 ನೇ ಶತಮಾನದ ಕೋಟೆಗೆ ಭೇಟಿ ನೀಡಿ ಪುರಾತತ್ತ್ವ ಶಾಸ್ತ್ರದ ವಸ್ತುಸಂಗ್ರಹಾಲಯವನ್ನು ಪ್ರಾಚೀನ ವಸ್ತುಗಳನ್ನು ಪ್ರದರ್ಶಿಸುತ್ತದೆ ಮತ್ತು ಹೋಳ್ಕರ ರಾಜವಂಶದ ಆಸ್ತಿಯನ್ನು ಹೋಲುತ್ತದೆ. ಕೋಟೆಯ ಪ್ರಮುಖ ಆಕರ್ಷಣೆಯು ರಾಣಿ ಅಹಲ್ಯಾಬಾಯಿ ಪ್ರತಿಮೆಯಾಗಿದೆ
ಜವಳಿ ಕಲೆ
PC:Dchandresh
ನಗರವು ಸೂಕ್ಷ್ಮವಾದ ಹತ್ತಿ ಮತ್ತು ರೇಷ್ಮೆ ಬಟ್ಟೆಗಳಿಗೆ ಹೆಸರುವಾಸಿಯಾಗಿದೆ. ಮಹೇಶ್ವರಿ ಸೀರೆ ಎಂದು ಕರೆಯಲ್ಪಡುವ ನೇಯ್ದ ಮತ್ತು ವಿನ್ಯಾಸ ರೇಷ್ಮೆ ಸೀರೆಗಳನ್ನು ನೀಡುವ ಕೈಮಗ್ಗ ಅಂಗಡಿಗಳು ಸಾಕಷ್ಟು ಇವೆ. ನೀವು ಇಲ್ಲಿ ಶಾಪಿಂಗ್ ಮಾಡಬೇಕೆಂದಿದ್ದರೆ ಜವಳಿ ಕಲೆಯ ಅದ್ಭುತ ತುಣುಕುಗಳನ್ನು ಖರೀದಿಸಲು ತಪ್ಪಿಸಿಕೊಳ್ಳಬೇಡಿ.
ತಲುಪುವ ಬಗೆ
PC: Bernard Gagnon
ವಿಮಾನದ ಮೂಲಕ: 91 ಕಿ.ಮೀ ದೂರದಲ್ಲಿರುವ ಇಂದೋರ್ ವಿಮಾನ ನಿಲ್ದಾಣ ಮಹೇಶ್ವರವನ್ನು ತಲುಪಲು ಹತ್ತಿರದ ವಿಮಾನ ನಿಲ್ದಾಣವಾಗಿದೆ.
ರೈಲು ಮಾರ್ಗ: ಮಾರ್ವಾಹಾ ರೈಲ್ವೆ ನಿಲ್ದಾಣ (ಅಪ್ರೋಕ್ಸ್ )39 ಕಿ.ಮೀ ದೂರದಲ್ಲಿದೆ. ಇದು ಮಹೇಶ್ವರಕ್ಕೆ ಹತ್ತಿರದ ರೈಲ್ವೇ ಜಂಕ್ಷನ್ ಆಗಿದೆ.
ರಸ್ತೆಯ ಮೂಲಕ: ಮಹೇಶ್ವರ ಮಧ್ಯ ಪ್ರದೇಶದ ವಿವಿಧ ನಗರಗಳಿಗೆ ಉತ್ತಮ ಸಂಪರ್ಕವನ್ನು ಹೊಂದಿದೆ. ನಾಸಿಕ್, ಮುಂಬೈ ,ಪುಣೆ ಮತ್ತು ಕೊಲ್ಹಾಪುರ ನಂತಹ ಪ್ರಮುಖ ನಗರಗಳಿಗೆ ಸಂಪರ್ಕ ಕಲ್ಪಿಸುವ ಹಲವಾರು ಖಾಸಗಿ ಮತ್ತು ರಾಜ್ಯ ಸರ್ಕಾರಿ ಬಸ್ಸುಗಳು ಇವೆ.