ಹೊಸ ಕಲ್ಲಿನಯುಗದಲ್ಲಿ ಮಾನವನು ಗುಂಪು-ಗುಂಪುಗಳಾಗಿ ಸಂಚಾರ ಜೀವನವನ್ನು ಮಾಡುತ್ತಿದ್ದರು. ಆ ಕಾಲದಲ್ಲಿ ಯಾರಾದರೂ ಮರಣ ಹೊಂದಿದರೆ ಅವರಿಗೆ ಪುನರ್ ಜನ್ಮವಿರುತ್ತದೆ ಎಂದಯ ಭಾವಿಸಿ ಮರಣ ಹೊಂದಿದ ಶವವನ್ನು ದೊಡ್ಡ ಸ್ಥಳದಲ್ಲಿ ಮಣ್ಣನ್ನು ಅಗೆದು ಅದರಲ್ಲಿ ಇಟ್ಟು ಎಲೆಗಳು, ನಾರುಗಳು, ಮಣ್ಣಿನಿಂದ ಅದನ್ನು ಭೂಮಿಯಲ್ಲಿ ಉಳುತ್ತಿದ್ದರಂತೆ. ಆ ನಂತರ ಆ ಶವವನ್ನು ಯಾವುದೇ ಕೀಟವು ತಿನ್ನದೇ ಇರುವುಂತೆ ದೊಡ್ಡ ದೊಡ್ಡದಾದ ಬಂಡೆಗಳಿಂದ ಮುಚ್ಚಿ ಹಾಕುತ್ತಿದ್ದರಂತೆ. ಇವುಗಳನ್ನು ಪುರಾವಸ್ತು ಶಾಸ್ತ್ರಕಾರರು ಪಾಂಡವ ಗೂಡು ಅಥವಾ ರಾಕ್ಷಸ ಗೂಡು ಎಂದು ಕರೆಯುತ್ತಿರುತ್ತಾರೆ.