Search
  • Follow NativePlanet
Share
» »ಔರಂಗಜೇಬನನ್ನೇ ನಡುಗಿಸಿದ ಧ್ಯಾನಾಂಜನೇಯನ ದರ್ಶನ ಪಡೆದ್ರೆ ಎಲ್ಲವೂ ಶುಭವೇ

ಔರಂಗಜೇಬನನ್ನೇ ನಡುಗಿಸಿದ ಧ್ಯಾನಾಂಜನೇಯನ ದರ್ಶನ ಪಡೆದ್ರೆ ಎಲ್ಲವೂ ಶುಭವೇ

ಕರ್ಮಂಗ್ಹಾಟ್ ಹನುಮಾನ್ ದೇವಸ್ಥಾನವು 12 ನೇ ಶತಮಾನದಲ್ಲಿ ನಿರ್ಮಿಸಲ್ಪಟ್ಟಿದೆ. "ಕರ್ಮಂಗ್ಹಾಟ್" ಎಂಬ ಪದದ ಹಿಂದೆ ಒಂದು ಸುಂದರವಾದ ಕಥೆ ಇದೆ ಮತ್ತು ಈ ದೇವಾಲಯದಲ್ಲಿ ಹನುಮಾನ್ ಅಸ್ತಿತ್ವದಲ್ಲಿದೆ .

ಕರ್ಮಂಗ್ಹಾಟ್ ಹನುಮಾನ್ ದೇವಾಲಯವು ಹೈದರಾಬಾದ್ ನಗರದ ಅತ್ಯಂತ ಹಳೆಯ ದೇವಾಲಯಗಳಲ್ಲಿ ಒಂದಾಗಿದೆ. ಕರ್ಮಂಗ್ಹಾಟ್ ಹನುಮಾನ್ ದೇವಸ್ಥಾನವು 12 ನೇ ಶತಮಾನದಲ್ಲಿ ನಿರ್ಮಿಸಲ್ಪಟ್ಟಿದೆ. "ಕರ್ಮಂಗ್ಹಾಟ್" ಎಂಬ ಪದದ ಹಿಂದೆ ಒಂದು ಸುಂದರವಾದ ಕಥೆ ಇದೆ ಮತ್ತು ಈ ದೇವಾಲಯದಲ್ಲಿ ಹನುಮಾನ್ ಅಸ್ತಿತ್ವದಲ್ಲಿದೆ . 17 ನೇ ಶತಮಾನದಲ್ಲಿ, ಗೋಲ್ಕೊಂಡಾ ವಶಪಡಿಸಿಕೊಂಡ ನಂತರ, ಔರಂಗಜೇಬನು ತನ್ನ ಪುರುಷರನ್ನು ಹನುಮಾನ್ ದೇವಾಲಯವನ್ನು ನಾಶಮಾಡಲು ಕಳುಹಿಸಿದನು.

ದೇವಸ್ಥಾನದೊಳಕ್ಕೆ ಪ್ರವೇಶಿಸಲು ಸಾಧ್ಯವಾಗೋದಿಲ್ಲ

ದೇವಸ್ಥಾನದೊಳಕ್ಕೆ ಪ್ರವೇಶಿಸಲು ಸಾಧ್ಯವಾಗೋದಿಲ್ಲ

PC: Sriharsha Rao

ಆದರೆ ಅವರು ಎಷ್ಟೇ ಪ್ರಯತ್ನಿಸಿದರೂ ದೇವಸ್ಥಾನಕ್ಕೆ ಪ್ರವೇಶಿಸಲು ಸಾಧ್ಯವಾಗೋದಿಲ್ಲ. ದೇವಸ್ಥಾನಕ್ಕೆ ಪ್ರವೇಶಿಸದಂತೆ ಅವರನ್ನು ಯಾವುದೋ ಅದೃಶ್ಯ ಶಕ್ತಿಯೊಂದು ತಳ್ಳುತ್ತಿತ್ತು . ಅವರು ಈ ವಿಷಯವನ್ನು ಔರಂಗಜೇಬ್‌ಗೆ ತಿಳಿಸುತ್ತಾರೆ. ಹಾಗಾಗಿ ಸ್ವತಃ ಔರಂಗಜೇಬ್‌ ಈ ದೇವಾಲಯವನ್ನು ನಾಶಮಾಡಲು ಬರುತ್ತಾನೆ. ಆದರೆ ಆತ ಕೂಡ ದೇವಸ್ಥಾನಕ್ಕೆ ಪ್ರವೇಶಿಸಲು ಸಾಧ್ಯವಾಗುವುದಿಲ್ಲ.

ಅಬ್ಬಾಬ್ಬಾ ...111 ಫೀಟ್ ಎತ್ತರದ ಶಿವಲಿಂಗ ಇದು, ಎಲ್ಲಿದೆ ಗೊತ್ತಾ?ಅಬ್ಬಾಬ್ಬಾ ...111 ಫೀಟ್ ಎತ್ತರದ ಶಿವಲಿಂಗ ಇದು, ಎಲ್ಲಿದೆ ಗೊತ್ತಾ?

ಕರ್ಮಂಗ್ಹಾಟ್ ಹೆಸರುಬಂದಿದ್ದು

ಕರ್ಮಂಗ್ಹಾಟ್ ಹೆಸರುಬಂದಿದ್ದು

"ನೀವು ಈ ದೇವಸ್ಥಾನಕ್ಕೆ ಪ್ರವೇಶಿಸಲು ಬಯಸಿದರೆ, ನಿಮ್ಮ ಹೃದಯವನ್ನು ಗಟ್ಟಿ ಮಾಡಿ(ಕರೋ-ಮನ್-ಘಾಟ್)" ಎಂದು ಹೇಳುವ ಅಶರೀರವಾಣಿಯೊಂದು ಕೇಳಿಸುತ್ತದೆ. ಔರಂಗಜೇಬ್ ಅದರ ಪ್ರಾಮಾಣಿಕತೆಯನ್ನು ಸಾಬೀತುಪಡಿಸುವಂತೆ ಕೇಳುತ್ತಾನೆ. ಆಗ ಸುತ್ತಲೂ ದೀಪಗಳು ಉರಿಯುತ್ತಾ ದೇವರ ರೂಪ ಕಾಣಿಸಿಕೊಳ್ಳುತ್ತದೆ ಹಾಗಾಗಿ ಈ ಸ್ಥಳವನ್ನು ಕರ್ಮಂಗ್ಹಾಟ್ ಎಂದು ಕರೆಯಲಾಗುತ್ತಿತ್ತು.

ಶ್ರೀ ರಾಮ್ ನಾಮಸ್ಮರಣೆ

ಶ್ರೀ ರಾಮ್ ನಾಮಸ್ಮರಣೆ

ಒಮ್ಮೆ ಕಾಕತೀಯ ರಾಜ ಪ್ರತಾಪರುದ್ರ II ಬೇಟೆಗಾಗಿ ಹೋದಾಗ, ಅವನು ದಣಿದು ಲಕ್ಷ್ಮಿಪುರಂ ಎಂಬ ಸ್ಥಳಕ್ಕೆ ಬಂದನು. ಅವನಿಗೆ ಹುಲಿಯ ಘರ್ಜನೆ ಕೇಳಿಸುತ್ತದೆ ಅದನ್ನು ಬೇಟೆಯಾಡುವ ಬಗ್ಗೆ ಯೋಚಿಸುತ್ತಾನೆ. ಆದರೆ ಅವರು ಹುಲಿಯನ್ನು ಹುಡುಕಲಾಗಲಿಲ್ಲ . ನಂತರ ಮತ್ತೆ ಘರ್ಜನೆ ಕೇಳಿಸುತ್ತದೆ . ಅದೇ ದಿಕ್ಕಿನಲ್ಲಿ ಹೋಗುತ್ತಾನೆ. ಸ್ವಲ್ಪ ಸಮಯದ ನಂತರ, ಅಲ್ಲಿಂದ "ಶ್ರೀ ರಾಮ್" ಎಂಬ ಧ್ವನಿ ಕೇಳಿಬರುತ್ತದೆ. ಅವನು ತನ್ನ ಶಸ್ತ್ರಾಸ್ತ್ರಗಳನ್ನು ಆ ಕಡೆ ಎಸೆದು ಆ ದಿಕ್ಕಿನಲ್ಲಿ ಹೋದನು.

ಶಿವನಸಮುದ್ರಕ್ಕೆ ಒಂದು ದಿನದ ಪ್ರವಾಸ ಕೈಗೊಂಡು ನೋಡಿಶಿವನಸಮುದ್ರಕ್ಕೆ ಒಂದು ದಿನದ ಪ್ರವಾಸ ಕೈಗೊಂಡು ನೋಡಿ

ಹನುಮಾನ್ ಪ್ರತಿಮೆ

ಹನುಮಾನ್ ಪ್ರತಿಮೆ

ಅಲ್ಲಿದ್ದ ಎಲ್ಲಾ ಎಲೆಗಳನ್ನು ಕತ್ತರಿಸಿದಾಗ ಅಲ್ಲೊಂದು ಹನುಮಾನ್ ಪ್ರತಿಮೆ ಕಾಣಿಸುತ್ತದೆ. ಅವನು ಪ್ರತಿಮೆಯನ್ನು ಹಿಡಿದು ತನ್ನ ಕೋಟೆಗೆ ಹಿಂತಿರುಗಿದನು. ಆ ರಾತ್ರಿ, ದೇವರು ಕನಸಿನಲ್ಲಿ ಬಂದು ಆ ಸ್ಥಳದಲ್ಲಿ ಒಂದು ದೇವಸ್ಥಾನವನ್ನು ನಿರ್ಮಿಸಲು ಕೇಳಿಕೊಂಡನು. ಮರುದಿನ ರಾಜನು ದೇವಾಲಯಕ್ಕೆ ಅಡಿಪಾಯ ಹಾಕಿದನು ಮತ್ತು ದೇವಾಲಯದ ನಿರ್ಮಾಣ ಮಾಡಿದನು.

ಇತರ ದೇವರು

ಇತರ ದೇವರು

PC: Arjunpc

ಈ ದೇವಾಲಯವು ಕಾಕತೀಯ ರಾಜರ ನಿಯಂತ್ರಣದಲ್ಲಿತ್ತು. ಅವರು ಆವರಣದಲ್ಲಿಯೇ ಸಣ್ಣ ದೇವಾಲಯಗಳನ್ನು ಸೇರಿಸಲಾರಂಭಿಸಿದರು. ರಾಮ, ವಿಗ್ನೇಶ್ವರ, ನಾಗೇಶ್ವರ, ಬ್ರಹ್ಮರಾಬಾ ಸಮಾತೆ ಸ್ಪಾಟಿಕ ಲಿಂಗೇಶ್ವರ, ದುರ್ಗಾ ಮಾತಾ, ಸರಸ್ವತಿ ಮಾತಾ, ಜಗನ್ನಾಥ ವೇಣುಗೋಪಾಲಾ ಸ್ವಾಮಿ, ನವಗ್ರಹಗಳು ಇವೆ. ಜಗತ್ತಿನಲ್ಲಿ ನಡೆಯುವ ಘಟನೆಗಳಿಗೆ ನವಗ್ರಹ ದೇವರುಗಳೇ ಕಾರಣವೆಂದು ಪರಿಗಣಿಸಲಾಗಿದೆ.

ಕುದಿಯುವ ಪಾಯಸಕ್ಕೆ ಕೈ ಹಾಕಿ ಹುಲಿಗೆಮ್ಮನಿಗೆ ನೈವೇದ್ಯ ಕೋಡ್ತಾರೆ ಕುದಿಯುವ ಪಾಯಸಕ್ಕೆ ಕೈ ಹಾಕಿ ಹುಲಿಗೆಮ್ಮನಿಗೆ ನೈವೇದ್ಯ ಕೋಡ್ತಾರೆ

ದುರ್ಗಾ ದೇವಿ ದರ್ಶನ

ದುರ್ಗಾ ದೇವಿ ದರ್ಶನ

PC: Adityamadhav83

ಭಕ್ತರು ದುರ್ಗಾ ದೇವಿಯ ದರ್ಶನವನ್ನು ಬಹಳ ಮಂಗಳಕರವೆಂದು ಪರಿಗಣಿಸುತ್ತಾರೆ, ಏಕೆಂದರೆ ಅವರು ಬ್ರಹ್ಮಾಂಡದ ತಾಯಿಯೆಂದು ಪರಿಗಣಿಸಲಾಗುತ್ತದೆ. ಆಂಜನೇಯನನ್ನು ಇಲ್ಲಿ ಧ್ಯಾನ ಆಂಜನೇಯ ಎಂದು ಕರೆಯಲಾಗುತ್ತದೆ. ಭಕ್ತರು ಪವಿತ್ರ ಸ್ನಾನ ಮಾಡಲು ಈ ದೇವಾಲಯದಲ್ಲಿ ಒಂದು ಕೊಳವಿದೆ. ಅವರು ಧ್ವಜ ಸ್ತಂಭವನ್ನು ಸುತ್ತಿ ತಮ್ಮ ಪ್ರಾರ್ಥನೆಗಳನ್ನು ಸಲ್ಲಿಸುತ್ತಾರೆ. ನಂತರ ಭಕ್ತರು ಗರ್ಭಾಲಯಂಗೆ ಪ್ರವೇಶಿಸಿ ಧ್ಯಾನ ಆಂಜನೇಯ ಸ್ವಾಮಿ ಅವರ ಪ್ರಾರ್ಥನೆಗಳನ್ನು ಸಲ್ಲಿಸುತ್ತಾರೆ. ನಂತರ ಅವರು ದೇವಾಲಯದ ಇತರ ದೇವರುಗಳು ಮತ್ತು ದೇವತೆಗಳಿಗೆ ಪ್ರಾರ್ಥಿಸುತ್ತಾರೆ.

ಉತ್ಸವಗಳು

ಉತ್ಸವಗಳು

PC: Arjunpc

ಯುಗಾದಿ, ಶ್ರೀ ರಾಮನವಮಿ, ವಾಲ್ಮೀಕಿ ಜಯಂತಿ, ಕೃಷ್ಣಾಸ್ವಾಮಿ, ಹನುಮಾನ್ ಜಯಂತಿ, ದಸರಾ, ನಾಗಪಂಚಮಿ, ಕಾರ್ತಿಕಾ ಪೌರ್ಣಮಿ, ಶಿವರಾತ್ರಿ ಮುಂತಾದ ಹಬ್ಬಗಳನ್ನು ದೇವಾಲಯದಲ್ಲಿ ಸಾಕಷ್ಟು ವೈಭವದಿಂದ ಆಚರಿಸಿಕೊಳ್ಳುತ್ತವೆ. ಜನರು ಇಲ್ಲಿ ದೇವರನ್ನು ನಂಬುತ್ತಾರೆ. ಮಹಿಳೆಯರಿಗೆ ಧ್ಯಾನ ಆಂಜನೇಯನನ್ನು 40 ದಿನಗಳ ಕಾಲ ನಿಯಮಿತವಾಗಿ ಆರಾಧಿಸಿದರೆ, ಅವರು ಆರೋಗ್ಯಕರವಾಗಿರುತ್ತಾರೆ. ಸಂತಾನ ಪ್ರಾಪ್ತಿಯಾಗುತ್ತದೆ. 40 ದಿನಗಳ ಕಾಲ ಭಗವಂತನನ್ನು ಆರಾಧಿಸಿದರೆ ರೋಗಗಳೆಲ್ಲವೂ ಗುಣಮುಖವಾಗುತ್ತದೆ.

3 ದಿನದ ರಜೆಯಲ್ಲಿ ಚಿಕ್ಕಮಗಳೂರಿನಲ್ಲಿ ಏಲ್ಲೆಲ್ಲಾ ತಿರುಗಾಡಬಹುದು 3 ದಿನದ ರಜೆಯಲ್ಲಿ ಚಿಕ್ಕಮಗಳೂರಿನಲ್ಲಿ ಏಲ್ಲೆಲ್ಲಾ ತಿರುಗಾಡಬಹುದು

ತಲುಪುವುದು ಹೇಗೆ?

ತಲುಪುವುದು ಹೇಗೆ?

PC: Adbh266

ಕರ್ಮಂಗ್ಹಾಟ್ ಹನುಮಾನ್ ದೇವಾಲಯವು ಮಹಾತ್ಮಾ ಗಾಂಧಿ ಬಸ್ ನಿಲ್ದಾಣದಿಂದ 10.2 ಕಿಮೀ ದೂರದಲ್ಲಿದೆ. ಸಿಕಂದರಾಬಾದ್ ರೈಲು ನಿಲ್ದಾಣದಿಂದ 16.4 ಕಿಮೀ ದೂರದಲ್ಲಿದೆ. ಕರ್ಮಂಗ್ಹಾಟ್ ದೇವಸ್ಥಾನವು ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸುಮಾರು 21 ಕಿಮೀ ದೂರದಲ್ಲಿದೆ.

ಇತರ ಆಕರ್ಷಣೀಯ ತಾಣಗಳು

ಇತರ ಆಕರ್ಷಣೀಯ ತಾಣಗಳು

ಕರ್ಮಂಗ್ಹಾಟ್ ಹನುಮಾನ್ ದೇವಾಲಯವಿರುವ ಹೈದರಾಬಾದ್‌ನಲ್ಲಿ ಸಾಕಷ್ಟು ಪ್ರೇಕ್ಷಣೀಯ ತಾಣಗಳಿವೆ. ಮುತ್ತಿನ ನಗರಿ ಎಂದೇ ಕರೆಯಲಾಗುವ ಹೈದರಾಬಾದ್ ಮುತ್ತುಗಳಿಗೆ ಫೇಮಸ್. ಇಲ್ಲಿ ಹುಸೇನ್‌ ಸಾಗರ್, ಗೋಲ್ಕಂಡ ಫೋರ್ಟ್, ಸಲಾರ್‌ಜಂಗ್ ಮ್ಯೂಸಿಯಂ, ಎನ್‌ಟಿಆರ್‌ ಪಾರ್ಕ್, ಲುಂಬಿನಿ ಪಾರ್ಕ್‌, ಯಾದಗಿರಿಗುಟ್ಟದಂತಹ ಅನೇಕ ತಾಣಗಳಿವೆ.

ಆಧಾರ್‌ ಲಿಂಕ್ ಮಾಡಿದ್ರೆ ತಿಂಗಳಲ್ಲಿ 12 ಟಿಕೇಟ್ ಬುಕ್ ಮಾಡಬಹುದಂತೆಆಧಾರ್‌ ಲಿಂಕ್ ಮಾಡಿದ್ರೆ ತಿಂಗಳಲ್ಲಿ 12 ಟಿಕೇಟ್ ಬುಕ್ ಮಾಡಬಹುದಂತೆ

ಯಾದಗಿರಿ ಗುಟ್ಟ

ಯಾದಗಿರಿ ಗುಟ್ಟ

PC: Randhir

ಶ್ರೀ ಲಕ್ಷ್ಮಿನಾರಸಿಂಹ ಸ್ವಾಮಿ ದೇವಸ್ಥಾನ ಅಥವಾ ಯಾದಗಿರಿಗುಟ್ಟ ದೇವಸ್ಥಾನವು ವಿಷ್ಣುವಿನ ಅವತಾರವಾದ ಶ್ರೀ ನರಸಿಂಹ ಸ್ವಾಮಿಯ ಜನಪ್ರಿಯ ಹಿಂದೂ ದೇವಾಲಯವಾಗಿದೆ. ಋಷ್ಯಶೃಂಗ ಮತ್ತು ಸಂತ ದೇವಿಯ ಮಗನಾದ ಯಾದರಿಶಿ ಎಂಬ ಹೆಸರಿನ ಒಬ್ಬ ಋಷಿ ಇಲ್ಲಿ ತಪಸ್ಸು ಮಾಡುತ್ತಿದ್ದರು. ವಿಷ್ಣುವಿನ ಅವತಾರವಾದ ನರಸಿಂಹನು ಜ್ವಾಲಾ, ಯೋಗಾನಂದ, ಗಾಂಧಭುಂಡ, ಉಗ್ರ ಮತ್ತು ಲಕ್ಷ್ಮಿ ನರಸಿಂಹ ಎಂಬ ಐದು ವಿವಿಧ ರೂಪಗಳಲ್ಲಿ ಕಾಣಿಸಿಕೊಂಡನು. ಆ ನಂತರ ಅದನ್ನು ಪಂಚ ನರಸಿಂಹ ಕ್ಷೇತ್ರವೆಂದು ಪೂಜಿಸಲಾಯಿತು.

ಕುಲ್ಪಾಕ್ಜಿ ದೇವಾಲಯ

ಕುಲ್ಪಾಕ್ಜಿ ದೇವಾಲಯ

PC: Devadaskrishnan

ಕುಲ್ಪಾಕ್ಜಿ ದೇವಾಲಯವು 2000 ವರ್ಷಗಳಿಗಿಂತಲೂ ಹೆಚ್ಚು ಹಳೆಯದಾಗಿರುವ ಹಿಂದೂ ದೇವಾಲಯವಾಗಿದೆ. ಈ ದೇವಸ್ಥಾನವು ತೆಲಂಗಾಣ ರಾಜ್ಯದ ನಲ್ಗೊಂಡ ಜಿಲ್ಲೆಯ ಕೋಲನುಪಾಕದಲ್ಲಿರುವ ಕುಲ್ಪಾಕ್‌ನಲ್ಲಿದೆ. ಮುಖ್ಯ ಪೂಜಾ ಸ್ಥಳದಲ್ಲಿ ಭಗವಾನ್ ಆದಿಶ್ವರನ ಕಪ್ಪು ಬಣ್ಣದ ವಿಗ್ರಹವು ಅರೆ ಪದ್ಮಾಸನ ಭಂಗಿನಲ್ಲಿದೆ. ಕುಲ್ಪಪಾಜಿ ಜೈನ ದೇವಾಲಯವು ಮೂರು ವಿಗ್ರಹಗಳನ್ನು ಹೊಂದಿದೆ. ಇದು ಋಷಭನಾಥ, ನೆಮಿನಾಥ ಮತ್ತು ಮಹಾವೀರವನ್ನು ಚಿತ್ರಿಸುತ್ತದೆ.

ಸಾಂಘಿ ದೇವಸ್ಥಾನ

ಸಾಂಘಿ ದೇವಸ್ಥಾನ

PC: Naidugari Jayanna

ಹೈದರಾಬಾದ್ ನಗರದಲ್ಲಿ ಈ ಸಾಂಘಿ ದೇವಸ್ಥಾನ ಇದೆ. ಇದು ಹಲವು ರಾಜಾಗಫಪುರವನ್ನು ಹೊಂದಿದೆ. ಇದು ಹೈದರಾಬಾದ್‌ನ ರಾಮೋಜಿ ಫೀಲಂ ಸಿಟಿಯ ಸಮೀಪದಲ್ಲಿದೆ. ದೇವಸ್ಥಾನದ ಮೆಟ್ಟಿಲಿನ ಬಳಿಯಲ್ಲಿ ಕಲ್ಲಿನ ಆನೆಯು ಗೋಚರಿಸುತ್ತದೆ. ಮೂರು ಗೋಪುರಗಳು ಇಲ್ಲಿ ಕಾಣಸಿಗುತ್ತವೆ. ಅವು ಬೆಟ್ಟದ ಮೇಲಿದ್ದು , ಸ್ವರ್ಗವನ್ನು ಮುಟ್ಟುತ್ತಿರುವಂತೆ ಕಾಣಿಸುತ್ತದೆ. ಈ ದೇವಸ್ಥಾನಕ್ಕೆ ನೀವು ಭೇಟಿ ನೀಡಿದರೆ ಅಲ್ಲಿ ಸಾಕಷ್ಟು ಕೋತಿಗಳನ್ನು ಕಾಣಬಹುದು.

Read more about: hyderabad telangana temple
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X