ಬಣ್ಣ ಬದಲಾಯಿಸುವ ಶಿವನ ಬಗ್ಗೆ ಕೇಳಿದ್ದೀರಾ? ಹೌದು ದಿನಕ್ಕೆ ಮೂರು ಬಾರಿ ಈ ಪುಣ್ಯಕ್ಷೇತ್ರದ ಶಿವಲಿಂಗ ಬಣ್ಣ ಬದಲಾಯಿಸುತ್ತಂತೆ. ಆ ಪುಣ್ಯ ಕ್ಷೇತ್ರ ಯಾವುದು, ಅದು ಎಲ್ಲಿದೆ ಎನ್ನುವುದನ್ನು ಇಂದು ತಿಳಿಯೋಣ.
ಎಲ್ಲಿದೆ ಈ ದೇವಾಲಯ?
PC: youtube
ಶಿವಲಿಂಗ ಬಣ್ಣ ಬದಲಾಯಿಸುವ ಕ್ಷೇತ್ರವೇ ಕಾಂತೇಶ್ವರ ದೇವಾಲಯ. ಇದು ಉಡುಪಿಯಿಂದ 40 ಕಿ.ಮೀ ದೂರದಲ್ಲಿದೆ ಇದು ಪಡುಬಿದ್ರೆಯಿಂದ ಕಾರ್ಕಳಕ್ಕೆ ಹೋಗುವ ರಸ್ತೆಯಲ್ಲಿ ಬೆಳವಾಯಿಯಿಂದ ಸ್ವಲ್ಪವೇ ದೂರದಲ್ಲಿದೆ ಕಾಂತಾವರ.
ಈಗ ಬರೀ 10 ರೂ. ಯಲ್ಲಿ ರೈಲಿನಲ್ಲಿ ಓಡಾಡಬಹದು, ಎಲ್ಲಿಗೆಲ್ಲಾ ಗೊತ್ತಾ?
ಹೆಸರು ಬಂದಿದ್ದು ಹೇಗೆ?
PC: youtube
ಈ ಕ್ಷೇತ್ರವು ಹಿಂದೆ ಅರಣ್ಯದಿಂದ ಕೂಡಿತ್ತು. ಕಾಂತಾರ ಎಂದರೆ ಅರಣ್ಯ ಅಲ್ಲಿನ ಪ್ರಕೃತಿಯಿಂದಾಗಿ ಕಾಂತಾವರ ಎಂಬ ಹೆಸರು ಬಂದಿದ್ದು ಎನ್ನಲಾಗುತ್ತದೆ. ಹಾಗೆಯೇ ಇಲ್ಲಿ ಶಿವನು ಪಾರ್ವತಿ ಸಮೇತನಾಗಿ ನೆಲೆಸಿರುವುದರಿಂದ ಇಲ್ಲಿಗೆ ಕಾಂತೇಶ್ವರ ಎನ್ನುವ ಹೆಸರು ಬಂದಿದೆ ಎನ್ನಲಾಗುತ್ತದೆ.
7ನೇ ಶತಮಾನಕ್ಕೆ ಸೇರಿದ್ದು
PC: youtube
ಇದನ್ನು 7ನೇ ಶತಮಾನಕ್ಕೆ ಸೇರಿದ್ದು ಎನ್ನಲಾಗುತ್ತದೆ. ಇಲ್ಲಿನ ಮೂಲದೈವ ಕಾಂತೇಶ್ವರ. ಇಲ್ಲಿ ಗಣೇಶ, ಅಣ್ಣಪ್ಪ ಹಾಗೂ ಅರ್ಧನಾರೀಶ್ವರ ಗುಡಿಯೂ ಇದೆ.
ಶಿವಮೊಗ್ಗದಲ್ಲಿರುವ ವರದಾಮೂಲಕ್ಕೆ ಹೋಗಿದ್ದೀರಾ?
ಪುರಾಣ ಕಥೆ
PC: youtube
ಜಂಜವಾತ ಎನ್ನುವ ಅಸುರನ ಕುಟುಂಬ ಇಲ್ಲಿ ನೆಲೆಸಿದ್ದರಂತೆ. ಅವರ ಕುಟುಂಬ ಇಲ್ಲಿ ತಪಸ್ಸು ಮಾಡುತ್ತಿದ್ದ ಮುನಿಗಳಿಗೆ ಕಾಟ ನೀಡುತ್ತಿದ್ದರಂತೆ. ಅವುಗಳಲ್ಲಿ ಅಂಬರೀಶ ಮುನಿ ಆ ರಾಕ್ಷಸರ ಸಂಹಾರಕ್ಕಾಗಿ ಶಿವನನ್ನು ತಪಸ್ಸು ಮಾಡುತ್ತಾನಂತೆ . ಹಾಗಾಗಿ ಶಿವನು ಇಲ್ಲಿ ನೆಲೆಸಿದ್ದಾನೆ ಎನ್ನಲಾಗುತ್ತದೆ.
ಮೂರು ಬಣ್ಣದಲ್ಲಿ ಕಾಣಿಸುವ ಶಿವ
PC: youtube
ಇಲ್ಲಿನ ವಿಶೇಷವೆಂದರೆ ಶಿವನು ದಿನದಲ್ಲಿ ಮೂರು ಬಣ್ಣದಲ್ಲಿ ಕಾಣಿಸಿಕೊಳ್ಳುತ್ತಾನೆ. ಬೆಳಗ್ಗೆ ಬೆಳ್ಳಿ ಬಣ್ಣದಲ್ಲಿ, ಮಧ್ಯಾಹ್ನ ತಾಮ್ರದ ಬಣ್ಣ ಸಂಜೆ ಬಂಗಾರದ ಬಣ್ಣದಲ್ಲಿ ಶಿವನು ಕಂಗೊಳಿಸುತ್ತಾನೆ. ಇದಕ್ಕೆ ಯಾವುದೇ ಕವಚಗಳನ್ನು ಹಾಕಲಾಗಿಲ್ಲ. ಬರೀ ಶಿಲೆಯ ಲಿಂಗವಿದು. ಇದನ್ನು ವಜ್ರಶಿಲೆ ಎನ್ನಲಾಗುತ್ತದೆ.
ಕಮಲಶಿಲೆಯಲ್ಲಿ ಲಿಂಗರೂಪದಲ್ಲಿ ನೆಲೆನಿಂತಿದ್ದಾಳೆ ದುರ್ಗಾಪರಮೇಶ್ವರಿ
ಭಕ್ತರ ಬೇಡಿಕೆ ಈಡೇರುತ್ತದೆ
PC: youtube
ವ್ಯಾಪಾರ ದೋಷ ನಿವಾರಣೆ, ಸಂತಾನ ಪ್ರಾಪ್ತಿ, ಕುಟುಂಬ ಕಲಹ ನಿವಾರಣೆಗೆಯಾಗುತ್ತದೆ ಎನ್ನುವುದು ಇಲ್ಲಿನ ಭಕ್ತರ ನಂಬಿಕೆ. ಇಲ್ಲಿಗೆ ಬಂದ ಭಕ್ತರು ಯಾವತ್ತೂ ಬರೀ ಕೈಯಲ್ಲಿ ಹೋಗೋದಿಲ್ಲ ಎನ್ನುತ್ತಾರೆ.
ಶಿವಲಿಂಗಕ್ಕೆ ಕಡಗ
PC: youtube
ಅಂಬರೀಶ ಮುನಿಗೆ ಪಾರ್ವತಿ ದೇವಿಯು ಕಡಗವನ್ನು ನೀಡಿದ್ದಳಂತೆ. ಶಿವಲಿಂಗಕ್ಕೆ ಕಡಗ ತೊಡಿಸಿ ಪೂಜಿಸುವಂತೆ ಹೇಳಿದ್ದಳಂತೆ. ಆ ಕಡಗವನ್ನು ಇಂದಿಗೂ ಇಲ್ಲಿ ಕಾಣಬಹುದು. ಇಲ್ಲಿನ ನಂದಿಯೂ ಬಹಳ ದೊಡ್ಡದಾಗಿದೆ.
ಬರೀ 5,000 ರೂ. ಇದ್ರೆ ಸಾಕು ಇಲ್ಲಿಗೆ ಹೋಗಿ ಬರಬಹುದು.
ತೃಂಭಕ ಪರ್ವತ
PC: youtube
ಕಾಂತೇಶ್ವರನ ಸನ್ನಿಧಾನದಿಂದ ಮೂರು ಕಿ.ಮೀ ದೂರ ಸಾಗಿದರೆ ಅಂಬರೀಶ ಮುನಿ ತಪಸ್ಸು ಮಾಡಿದ ಗುಹೆ ಇದೆ. ಅಲ್ಲೇ ಶಿವನು ದರ್ಶನ ನೀಡಿದನು ಎನ್ನಲಾಗುತ್ತದೆ.
ತಲುಪುವುದು ಹೇಗೆ?
PC: youtube
ಬೆಂಗಳೂರಿನಿಂದ, ಮಂಗಳೂರಿನಿಂದ ಉಡುಪಿಗೆ ಸಾಕಷ್ಟು ಬಸ್ಗಳಿವೆ. ಉಡುಪಿಯಿಂದ ೪೦ ಕಿ.ಮೀ ದೂರದಲ್ಲಿ ಈ ಕ್ಷೇತ್ರವಿದೆ.
ಇನ್ನು ರೈಲು ಮೂಲಕ ಹೋಗುವುದಾದರೆ ಸಮೀಪದ ರೈಲು ನಿಲ್ದಾಣವೆಂದರೆ ಉಡುಪಿ ರೈಲುನಿಲ್ದಾಣ.
ವಿಮಾನದ ಮೂಲಕ ಹೊಗುವುದಾದರೆ ಸಮೀಪದ ವಿಮಾನ ನಿಲ್ದಾಣವೆಂದರೆ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ.