Search
  • Follow NativePlanet
Share
» »ಶಿವನು ಬ್ರಹ್ಮನ ತಲೆ ತುಂಡರಿಸಿದ ಸ್ಥಳದಲ್ಲಿರುವ ದೇವಾಲಯದ ಬಗ್ಗೆ ಗೊತ್ತಾ?

ಶಿವನು ಬ್ರಹ್ಮನ ತಲೆ ತುಂಡರಿಸಿದ ಸ್ಥಳದಲ್ಲಿರುವ ದೇವಾಲಯದ ಬಗ್ಗೆ ಗೊತ್ತಾ?

ಶಿವನು ಬ್ರಹ್ಮನ ತಲೆಯನ್ನು ಕತ್ತರಿಸಿದ ಸ್ಥಳದಲ್ಲಿ ಈ ದೇವಸ್ಥಾನ ಇದೆ ಎಂದು ನಂಬಲಾಗಿದೆ. ಶ್ರೀ ಕಂಡಿಯೂರ್ ಎಂಬ ಹೆಸರು ಈ ಕಥೆಯಿಂದ ಬಂದಿದೆ.

ಕಂಡಿಯೂರ್ ಇದನ್ನು ಸಂಸ್ಕೃತದಲ್ಲಿ ಕಂಡೀಪುರಂ ಎನ್ನುತ್ತಾರೆ. ಮಹಾದೇವ ದೇವಸ್ಥಾನವು ಕೇರಳದ ಅಲಪುಳ ಜಿಲ್ಲೆಯ ಮಾವೆಲಿಕ್ಕರದಿಂದ 2 ಕಿ.ಮೀ ದೂರದಲ್ಲಿದೆ. ಈ ದೇವಸ್ಥಾನವನ್ನು ದಕ್ಷಿಣ ಕಾಶಿ ಎಂದೂ ಕರೆಯುತ್ತಾರೆ. ಈ ದೇವಾಲಯದೊಂದಿಗೆ ಸಂಬಂಧಿಸಿದ ಹಲವಾರು ದಂತಕಥೆಗಳು ಇವೆ. ಇದು ಭಗವಾನ್ ಪರಶುರಾಮನಿಂದ ನಿರ್ಮಿಸಲ್ಪಟ್ಟ ಪ್ರಾಚೀನ ಕೇರಳದ 108 ಶಿವನ ದೇವಾಲಯಗಳಲ್ಲಿ ಒಂದಾಗಿದೆ ಎನ್ನಲಾಗುತ್ತದೆ.

ಶಿವನು ಬ್ರಹ್ಮನ ತಲೆ ಕತ್ತರಿಸಿದ ಸ್ಥಳ ಇದು

ಶಿವನು ಬ್ರಹ್ಮನ ತಲೆ ಕತ್ತರಿಸಿದ ಸ್ಥಳ ಇದು

ಶಿವನು ಬ್ರಹ್ಮನ ತಲೆಯನ್ನು ಕತ್ತರಿಸಿದ ಸ್ಥಳದಲ್ಲಿ ಈ ದೇವಸ್ಥಾನ ಇದೆ ಎಂದು ನಂಬಲಾಗಿದೆ. ಶ್ರೀ ಕಂಡಿಯೂರ್ ಎಂಬ ಹೆಸರು ಈ ಕಥೆಯಿಂದ ಬಂದಿದೆ, ಶ್ರೀಕಂಠನಿಂದ ಈ ಹೆಸರು ಬಂದಿತು. ನಂತರ ಭಗವಾನ್ ಪರಶುರಾಮ ಈ ದೇವಸ್ಥಾನವನ್ನು ನವೀಕರಿಸಿದರು ಮತ್ತು ತಾರನಲ್ಲಲ್ಲೂರ್ ಕುಟುಂಬಕ್ಕೆ ತಾಂತ್ರಿಕ ಹಕ್ಕುಗಳನ್ನು ನೀಡಿದರು ಎಂದು ನಂಬಲಾಗಿದೆ.

ವ್ಯಾಸ ಋಷಿಗಳು ಸ್ನಾನ ಮಾಡುತ್ತಿದ್ದ ಪವಿತ್ರ ಸರೋವರ ಇದುವ್ಯಾಸ ಋಷಿಗಳು ಸ್ನಾನ ಮಾಡುತ್ತಿದ್ದ ಪವಿತ್ರ ಸರೋವರ ಇದು

ರಾಜಶೇಖರ ವರ್ಮನ್ ಕಂಡಿಯೂರ್ ಸ್ಥಾಪಿಸಿದ ದೇವಾಲಯ

ರಾಜಶೇಖರ ವರ್ಮನ್ ಕಂಡಿಯೂರ್ ಸ್ಥಾಪಿಸಿದ ದೇವಾಲಯ

PC: RajeshUnuppally

ಕ್ರಿ.ಶ. 805-824 ರಲ್ಲಿ ಚೆರಮಾನ್ ಪೆರುಮಾಳ್ ನಾಯನಾರ್ ರಾಜಶೇಖರ ವರ್ಮನ್ ಕಂಡಿಯೂರ್ ಮಹಾದೇವ ದೇವಸ್ಥಾನವನ್ನು ನಿರ್ಮಿಸಿದರು. ಈ ದೇವಾಲಯದ ನಿರ್ಮಾಣ ಕಂಡಿಯೂರ್ ಅಬ್ದಾಮ್ ಹೊಸ ಯುಗದ ಆರಂಭವನ್ನು ಗುರುತಿಸಿತು. ಕಂಡಿಯೂರ್ ಆರಂಭಿಕ ರಾಜಧಾನಿಯಾಗಿತ್ತು ಕಂಡಿಯೂರು ಎಂದರೆ ಬಿದಿರು ಭೂಮಿ ಎಂದರ್ಥ. ನಂತರ ದೇವಾಲಯವು ಕಯಂಕುಲಂ ಸಾಮ್ರಾಜ್ಯದ ಭಾಗವಾಯಿತು. ಕಂಡಿಯೂರ್‌ನಲ್ಲಿ ಟ್ರಾವಂಕೂರ್ ಮಹಾರಾಜ ಮಾರ್ತಾಂಡ ವರ್ಮಾ ಕಯಂಕುಲಂ ರಾಜಾ ಮೇಲೆ ನಿರ್ಣಾಯಕ ವಿಜಯವನ್ನು ಪಡೆದರು.

ದೀರ್ಘಾವಧಿ ವಾರ್ಷಿಕ ಉತ್ಸವ

ದೀರ್ಘಾವಧಿ ವಾರ್ಷಿಕ ಉತ್ಸವ

PC:RajeshUnuppally

ಈ ದೇವಾಲಯದಲ್ಲಿ ಶಿವ ಪೂರ್ವಕ್ಕೆ ಮುಖ ಮಾಡಿರುವ ಮುಖ್ಯ ದೇವತೆಯಾಗಿದ್ದಾನೆ. 10 ದಿನಗಳ ದೀರ್ಘಾವಧಿ ವಾರ್ಷಿಕ ಉತ್ಸವವು ಧನು ಮಾಸದಲ್ಲಿ ಅಂದರೆ ಡಿಸೆಂಬರ್ / ಜನವರಿ ತಿಂಗಳಲ್ಲಿ ನಡೆಯುತ್ತದೆ.

ಮಲ್ಲಂ ದೇವಸ್ಥಾನದಲ್ಲಿ ಪ್ರಾರ್ಥಿಸಿದ್ರೆ ಕಂಕಣ ಭಾಗ್ಯ ಕೂಡಿಬರುತ್ತಂತೆಮಲ್ಲಂ ದೇವಸ್ಥಾನದಲ್ಲಿ ಪ್ರಾರ್ಥಿಸಿದ್ರೆ ಕಂಕಣ ಭಾಗ್ಯ ಕೂಡಿಬರುತ್ತಂತೆ

ವಾಸ್ತುಶಿಲ್ಪಕ್ಕೆ ಹೆಸರುವಾಸಿ ಈ ದೇವಾಲಯ

ವಾಸ್ತುಶಿಲ್ಪಕ್ಕೆ ಹೆಸರುವಾಸಿ ಈ ದೇವಾಲಯ

ಕಂಡಿಯೂರ್ ದೇವಾಲಯವು ತನ್ನ ಪ್ರಭಾವಶಾಲಿ ವಾಸ್ತುಶಿಲ್ಪಕ್ಕೆ ಹೆಸರುವಾಸಿಯಾಗಿದೆ, ಇಟ್ಟಿಗೆ ಮತ್ತು ಮರದ ಕೆಲಸಕ್ಕೆ ವಿರುದ್ಧವಾಗಿ ಕಲ್ಲಿನ ಮಿಷನರಿಗೆ ಒತ್ತು ನೀಡಲಾಗಿದೆ. ಪುರಾತತ್ತ್ವ ಶಾಸ್ತ್ರದ ಪ್ರಾಮುಖ್ಯತೆಯ ಪುರಾತನ ಶಾಸನಗಳು ಇವೆ. ಈ ದೇವಸ್ಥಾನವು ಕಲ್ಲಿನ ಶಿಲ್ಪಗಳಿಗೆ ಹೆಸರುವಾಸಿಯಾಗಿದೆ. ಕೆಲವು ಕಲ್ಲಿನ ಬರಹಗಳು ಕ್ರಿ.ಶ. 946 ರಲ್ಲಿವೆ. ಈ ದೇವಾಲಯದ ಬಗ್ಗೆ ವಿವರಣೆಗಳು ಯುನೂನೆಲಿ ಸಂದೇಸಮ್, ದಾವಧರ ಚಕ್ಯಾರ್ ಮತ್ತು ಸುಕಾ ಸಂದೇಶಂ ಬರೆದ ಶಿವವಿಲಸಂ ನಂತಹ ಸಾಹಿತ್ಯ ಕೃತಿಗಳಲ್ಲಿ ಕಾಣಬಹುದು.

ದೇವದಾಸಿಯರ ಆಡಳಿತದಲ್ಲಿದ್ದ ದೇವಾಲಯ

ದೇವದಾಸಿಯರ ಆಡಳಿತದಲ್ಲಿದ್ದ ದೇವಾಲಯ

PC: wikipedia
ದೇವದಾಸಿಯರು ಆಡಳಿತ ನಡೆಸಿದ ದೇವಾಲಯ ಇದು ಎಂಬ ಒಂದು ಅಪೂರ್ವವಾದ ಸಂಗತಿ ಕೂಡ ಕಂಡಿಯೂರ್‌ಗಿದೆ. ದೇವದಾಸಿಯಾಗಿದ್ದ ಚೆರಕುರ ಕುಟ್ಟಿತಿಯನ್ನು ಆಗಿನ ಕಂಡಿಯೂರ್ ರಾಜನು ಮದುವೆಯಾದ ನಂತರದಿಂದ ಈ ದೇವಾಲಯ ದೇವದಾಸರಿಸಿಯರ ಆಳ್ವಿಕೆಗೆ ಬರುತ್ತದೆ. ಕೆಲವು ದೇವದಾಸಿಯರು ಈ ದೇವಾಲಯದ ಆಡಳಿತ ನಡೆಸುತ್ತಿದ್ದರು ಎನ್ನುವುದು 14 ನೇ ಶತಮಾನದಲ್ಲಿ ರಚಿಸಿದ ಶಿವವಿಲ್ಲಾಸಮ್ ಎಂಬ ಸಂಸ್ಕೃತ ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ.

ಶಿವಮೊಗ್ಗದಲ್ಲಿ ನಾಲ್ಕು ದಿನ ಕಳೆದ್ರೆ ಇಲ್ಲೆಲ್ಲಾ ಸುತ್ತಾಡಿಶಿವಮೊಗ್ಗದಲ್ಲಿ ನಾಲ್ಕು ದಿನ ಕಳೆದ್ರೆ ಇಲ್ಲೆಲ್ಲಾ ಸುತ್ತಾಡಿ

ಒಂದೇ ರಾತ್ರಿಯಲ್ಲಿ ನಿರ್ಮಿಸಲಾದ ಗೋಡೆ

ಒಂದೇ ರಾತ್ರಿಯಲ್ಲಿ ನಿರ್ಮಿಸಲಾದ ಗೋಡೆ

PC:RajeshUnuppally

ಗಜಪ್ರಸ್ತ ಶಿಲೆಯ ಅಸಾಧಾರಣ ಸಂಯುಕ್ತ ಗೋಡೆಯು ಸುಮಾರು 10 ಅಡಿ ಎತ್ತರವಾಗಿದ್ದು, ಒಂದೇ ರಾತ್ರಿಯಲ್ಲಿ ಶಿವನ ಭೂತ ಗಣಗಳು ನಿರ್ಮಿಸಿದವೆಂದು ನಂಬಲಾಗಿದೆ. ಈ ಪುರಾಣದ ಪ್ರಕಾರ, ಚೆಂಗಣ್ಣೂರ್ ಮಹಾದೇವ ದೇವಸ್ಥಾನ ಮತ್ತು ಮನ್ನಾರ್ ಕುರಟ್ಟಿ ಮಹಾದೇವ ದೇವಸ್ಥಾನದ ಸಮೀಪದ ಗೋಡೆಗಳನ್ನು ಇದೇ ರೀತಿಯಲ್ಲಿ ನಿರ್ಮಿಸಲಾಗಿದೆ.

ಇಲ್ಲಿರುವ ಉಪ ದೇವತೆಗಳು

ಇಲ್ಲಿರುವ ಉಪ ದೇವತೆಗಳು

PC:RajeshUnuppally

ಪ್ರಮುಖ ಕೇರಳ ದೇವಸ್ಥಾನದಲ್ಲಿ ಇರುವಂತೆ ಇಲ್ಲೂ 11 ಉಪ-ಮಂದಿರಗಳು ಇವೆ. ಉಪ ದೇವತೆಗಳೆಂದರೆ ವಿಷ್ಣು, ಪಾರ್ವತೀಶ, ನಾಗರಾಜ ಮತ್ತು ನಾಗಯಕ್ಷಿ, ಗೋಶಾಲ ಕೃಷ್ಣನ್, ಶಾಸ್ತ್ರ, ಶಂಕರನ್, ಶ್ರೀಕಾಂಡನ್, ವಡಕ್ಕುಂಠಾಥನ್, ಅನ್ನಪೂರ್ಣೇಶ್ವರಿ, ಗಣಪತಿ, ಸುಬ್ರಹ್ಮಣ್ಯ, ಮೂಲಾ ಗಣಪತಿ ಮತ್ತು ಬ್ರಹ್ಮ ರಕ್ಷಾ. ಈ ದೇವಸ್ಥಾನದಲ್ಲಿ ಆರು ಶಿವಲಿಂಗಗಳಿವೆ. ಮುಖ್ಯ ಲಿಂಗವನ್ನು ಕಂಡೀಪೂರ್ಶ್ವರನ್ ಅಥವಾ ಮಹಾದೇವ ಎಂದು ಕರೆಯಲಾಗುತ್ತದೆ.

40 ದಿನ ಇಲ್ಲಿನ ಆಂಜನೇಯನ ಪೂಜೆ ಮಾಡಿದ್ರೆ ಸಂತಾನಪ್ರಾಪ್ತಿಯಾಗುತ್ತಂತೆ!40 ದಿನ ಇಲ್ಲಿನ ಆಂಜನೇಯನ ಪೂಜೆ ಮಾಡಿದ್ರೆ ಸಂತಾನಪ್ರಾಪ್ತಿಯಾಗುತ್ತಂತೆ!

ಇಲ್ಲಿ ನಡೆಯುವ ಸೇವೆಗಳು

ಇಲ್ಲಿ ನಡೆಯುವ ಸೇವೆಗಳು

ಜಲಧಾರ, ರುದ್ರಾಭಿಷೇಕಂ, ಕ್ಷೀರಧಾರ, ಗಣಪತಿ ಹೋಮ, ಭಗವತಿ ಸೇವಾ, ಕರುಕಾ ಹೋಮ, ನಿರಾಪರಾ, ಸ್ವಯಂವರಾರ್ಚನೆ, ಶಂಗಾಭಿಷೇಕಂ, ರೇಖಾ ಪುಷ್ಪಾಂಜಲಿ, ಮುಸುಕಪ್ಪ, ಮೃಥ್ಯುಂಜಯ ಹೋಮ, ಸಹಸ್ರನಾಮಾರ್ಚನೆ, ನೀರಂಜನಮ್, ಕಲ್ಭಭೀಶೇಕಂ, ಅಭಿಷೇಕ, ಮಾಳ ಚರ್ಥು, ಆದಿತ್ಯ ನಮಸ್ಕಾರಂ ತುಲಾಭಾರ , ಉದಯದಾ ಛರ್ಥು, ವಿದ್ಯಾರಂಭಂ ಇಲ್ಲಿ ನಡೆಯುವ ಸೇವೆಗಳಾಗಿವೆ.

ತಲುಪುವುದು ಹೇಗೆ?

ತಲುಪುವುದು ಹೇಗೆ?

ಕಂಡಿಯೂರ್ ದೇವಸ್ಥಾನವು ಮಾವೆಕಿಕರ ಪಟ್ಟಣದ ಪಶ್ಚಿಮಕ್ಕೆ ಕೇವಲ 1 ಕಿ.ಮೀ ಮತ್ತು ಕಯಮಕುಲಂ-ತಿರುವವಲ್ಲಾ ರಾಜ್ಯ ಹೆದ್ದಾರಿಯಲ್ಲಿ ಮಾವೆಲಿಕಾರ ರೈಲು ನಿಲ್ದಾಣದಿಂದ 3 ಕಿ.ಮೀ ದೂರದಲ್ಲಿದೆ. ಇದು NH47 ನಿಂದ 8 ಕಿ.ಮೀ. ದೂರದಲ್ಲಿದೆ. ಹರಿಪಾಡ್ ಬಳಿ ಇರುವ ನಂಗರುಕುಂಗರದಿಂದ ಅಥವಾ ಕಯಾಕುಲಂನಿಂದ 9 ಕಿ.ಮೀ ದೂರದಲ್ಲಿದೆ. ಎಂಸಿ ರಸ್ತೆ ಮೂಲಕ ತಿರುವವ, ಚೆಂಗಣ್ಣೂರ್, ಪಾಂಡಲಂ ಮತ್ತು ಅಡೂರ್ನಿಂದ ಸುಮಾರು 20 ಕಿ.ಮೀ. ದೂರದಲ್ಲಿದೆ.

ಸಮೀಪದಲ್ಲಿರುವ ಇತರ ದೇವಾಲಯಗಳು

ಸಮೀಪದಲ್ಲಿರುವ ಇತರ ದೇವಾಲಯಗಳು

ಮಾವೆಲಿಕ್ಕರ ಶ್ರೀ ಕೃಷ್ಣ ಸ್ವಾಮಿ ದೇವಸ್ಥಾನ, ಚೆಟ್ಟಿಕುಲಂಗರ ದೇವಿ ದೇವಾಲಯ, ಕೊಪ್ಪಳ್ಳಿ ಕಳಜ್ಮಾ ದೇವಿ ದೇವಾಲಯ, ಮಾವೆಲಿಕ್ಕರ ಹೊಸಕಾವ ಭಗವತಿ ದೇವಸ್ಥಾನ, ಪ್ರೇಯಕ್ಕರ ಧನ್ವಂಥರಿ ದೇವಸ್ಥಾನ, ಥ್ರೀಪುರುಂಧುರಾ ಮಹಾದೇವ ದೇವಸ್ಥಾನ, ನಂಗ್ಯರ್ಕುಲಂಗರ ಶ್ರೀಕೃಷ್ಣ ದೇವಸ್ಥಾನ, ತಟ್ಟಂಬಂಬಲಂ ಸರಸ್ವತಿ ದೇವಸ್ಥಾನ, ಮಾವೆಲಿಕ್ಕರ ಗಣಪತಿ ದೇವಾಲಯ, ಎವೂರು ಶ್ರೀಕೃಷ್ಣ ದೇವಸ್ಥಾನ, ಹರಿಪಾದ್ ಸುಬ್ರಹ್ಮಣ್ಯ ದೇವಸ್ಥಾನ, ಮನ್ನರಸಳ ನಾಗರಾಜ ದೇವಸ್ಥಾನ, ವೆಟ್ಟಿಕಾಟ್ಟು ನಾಗರಾಜ ದೇವಸ್ಥಾನ, ಅಂಬಲಪುಳ ಶ್ರೀ ಕೃಷ್ಣ ದೇವಾಲಯ ಸಮೀಪದಲ್ಲಿ ಇರುವ ಇತರ ದೇವಾಲಯಗಳಾಗಿವೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X