ಗುಜರಾತ್ನಲ್ಲಿರುವ ಮಹಾಕಾಳಿ ಮಂದಿರವು ಪೌರಾಣಿಕ, ಐತಿಹಾಸಿಕ ಹಾಗೂ ಧಾರ್ಮಿಕ ದೃಷ್ಠಿಯಿಂದ ಮಹತ್ವದ್ದಾಗಿದೆ. ಇಲ್ಲಿರುವ ವಿಶೇಷತೆ ಎಂದರೆ ಈ ಮಂದಿರದಲ್ಲಿರುವುದು ದಕ್ಷಿಣ ಮುಖಿ ಕಾಳಿ ದೇವಿಯ ಮೂರ್ತಿ. ಈ ಮಂದಿರದಲ್ಲಿ ಅನೇಕ ಧಾರ್ಮಿಕ ರಹಸ್ಯಗಳಡಗಿವೆ. ಅವು ಈ ಮಂದಿರವನ್ನು ಇನ್ನಷ್ಟು ವಿಶೇಷವಾಗಿಸುತ್ತದೆ. ಕೆಲವು ರಾಮನ ಪುತ್ರರಾದ ಲವ ಕುಶರಿಗೆ ಸಂಬಂಧಿಸಿದ್ದಾದರೆ ಇನ್ನೂ ಕೆಲವು ವಿಷ್ಯ ಋಷಿ ವಿಶ್ವಾಮಿತ್ರರಿಗೆ ಸಂಬಂಧಿಸಿದ್ದಾಗಿದೆ.
ಮೈಸೂರಿಗೆ ಹೋದಾಗ ಏನ್ ಖರೀದಿಸೋದು ಗೊತ್ತಾಗ್ತಿಲ್ವಾ?
ವಾವಗಡ ಎನ್ನುವ ಹೆಸರು ಯಾಕೆ ಬಂದಿತು?
PC:Gashwin Gomes
ಒಂದಾನೊಂದು ಕಾಲದಲ್ಲಿ ಈ ಬೆಟ್ಟವನ್ನು ಹತ್ತುವುದು ಅಸಂಭವವಿತ್ತು. ಅಲ್ಲದೆ ಈ ಬೆಟ್ಟದಲ್ಲಿ ಗಾಳಿಯು ಎಲ್ಲಾ ಕಡೆಯಿಂದಲೂ ಬರುತ್ತಿತ್ತು. ಅದಕ್ಕಾಗಿ ಈ ಬೆಟ್ಟಕ್ಕೆ ಪಾವಗಡ ಎನ್ನುವ ಹೆಸರಿಡಲಾಗಿದೆ. ಪಾವಗಡ ಎಂದರೆ ಯಾವಾಗಲೂ ಗಾಳಿಯಿಂದ ಕೂಡಿರುವ ಪ್ರದೇಶ. ಈ ಮಂದಿರ ಬೆಟ್ಟದ ಮೇಲಿದೆ ಇದನ್ನು ತಲುಪಬೇಕಾದರೆ ಸುಮಾರು 250 ಮೆಟ್ಟಿಲುಗಳನ್ನು ಹತ್ತಬೇಕು.
ಲವ-ಕುಶ ಸೇರಿದಂತೆ ಅನೇಕ ಖುಷಿಗಳು ಇಲ್ಲೇ ಮೋಕ್ಷ ಕಂಡುಕೊಂಡಿದ್ದು
PC:Arian Zwegers
ಈ ಮಂದಿರ ಶ್ರೀರಾಮನ ಕಾಲದ್ದು ಎನ್ನುತ್ತದೆ ಇಲ್ಲಿನ ಇತಿಹಾಸ. ಶ್ರೀರಾಮನ ಮಕ್ಕಳಾದ ಲವ-ಕುಶರು ಹಾಗೂ ಅನೇಕ ಋಷಿ ಮುನಿಗಳು, ಬೌದ್ಧ ಭಿಕ್ಷುಗಳು ಇಲ್ಲೇ ಮೋಕ್ಷ ಪ್ರಡೆದಿದ್ದರು ಎನ್ನಲಾಗುತ್ತದೆ.
ವಿಶ್ವಾಮಿತ್ರರು ಪ್ರತಿಷ್ಠಾಪಿಸಿದ ಕಾಳಿ ಮೂರ್ತಿ
PC:Hardik D.Trivedi
ಋಷಿ ವಿಶ್ವಾಮಿತ್ರರು ಇಲ್ಲಿ ಕಾಳಿ ದೇವಿಯ ಮೂರ್ತಿಯನ್ನು ಪ್ರತಿಷ್ಠಾಪಿಸಿದರು ಹಾಗಾಗಿ ಇಲ್ಲಿ ಹರಿಯುವ ನದಿಯ ಹೆಸರು ಕೂಡಾ ವಿಶ್ವಾಮಿತ್ರ ಎಂದು ಇಡಲಾಗಿದೆ.
ಹಿಂದೂಗಳಿಗೆ ಮಾತ್ರವಲ್ಲ ಮುಸಲ್ಮಾನರಿಗೂ ಮಹತ್ವದ್ದು ಈ ದೇವಾಲಯ
PC: ashesh shah
ಮಂದಿರದ ಮಹಡಿ ಮೇಲೆ ಮುಸಲ್ಮಾನರ ಪವಿತ್ರ ಸ್ಥಳವಿದೆ. ಸದನ್ ಶಾಹ್ ಪಿರ್ ದರ್ಗಾವಿದೆ. ಹಾಗಾಗಿ ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮುಸಲ್ಮಾನರರೂ ಕೂಡಾ ಭೇಟಿ ನೀಡುತ್ತಾರೆ. ಹಾಗಾಗಿ ಇದು ಹಿಂದೂ ಹಾಗೂ ಮುಸಲ್ಮಾನರಿಗೂ ಮಹತ್ವದ್ದಾಗಿದೆ.
ತಲುಪುವುದು ಹೇಗೆ?
PC:Tridatt
ಪಾವಗಡದಿಂದ ಸುಮಾರು 50 ಕಿ.ಮೀ ದೂರದಲ್ಲಿ ಗುಜರಾತ್ನಿಂದ ವಡೋದರದಲ್ಲಿ ಬಂದು ಅಲ್ಲಿಂದ ಪಾವಗಡಕ್ಕೆ ಬೇಕಾದಷ್ಟು ಬಸ್, ವಾಹನಗಳು ಸಿಗುತ್ತದೆ.